Dinesh Gundu Rao
January 27, 2025 at 12:50 PM
ಇಂದು ಮೈಸೂರು ಜಿಲ್ಲೆಯ ಶ್ರೀ ಸುತ್ತೂರು ಮಹಾ ಸಂಸ್ಥಾನಕ್ಕೆ ಭೇಟಿ ನೀಡಿ, ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದೆ.
ಇದೇ ಸಮಯದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಚಾಲನೆ ನೀಡಿ ಮಾತನಾಡಿದೆ. ನಮ್ಮ ನೆಲಮೂಲದ ಪಾರಂಪರಿಕ ಕ್ರೀಡೆಗಳನ್ನು ಉಳಿಸಿಕೊಳ್ಳುತ್ತಾ, ಇಂದಿನ ಪೀಳಿಗೆಗೆ ಅವುಗಳನ್ನು ತಲುಪಿಸುವ ಕೆಲಸ ಇಂತಹ ಗ್ರಾಮಿಣ ಕೀಡಾ ಉತ್ಸವಗಳಿಂದ ಸಾಧ್ಯವಾಗುತ್ತದೆ.
ಇದರೊಂದಿಗೆ ಇಂದು ನಾವುಗಳು ಆಧ್ಯಾತ್ಮಿಕ ಮತ್ತು ವೈಜ್ಞಾನಿಕತೆಗಳ ನಡುವಿನ ಹೊಂದಾಣಿಕೆಯಲ್ಲಿ ನಡೆಯಬೇಕಾಗಿದೆ. ನಮ್ಮ ಪರಂಪರೆಯನ್ನು ಕಾಪಾಡಿಕೊಳ್ಳುತ್ತಾ ಆಧ್ಯಾತ್ಮಿಕತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಮಠಗಳಲ್ಲಿ ಸುತ್ತೂರು ಮಠ ಸದಾ ಮುಂದಿದೆ.
🙏
🖕
4