Karnataka Varthe
February 22, 2025 at 07:25 AM
ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮ ಪ್ರಕಟಣೆ
ವಿಜಯನಗರ ಜಿಲ್ಲೆಯ ಹೊಸಪೇಟೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಸಮರ್ಪಕವಾಗಿ ಅಕ್ಕಿ ಪೂರೈಕೆಯಾಗದಿದ್ದು, ಪ್ರಾಥಮಿಕ ಶಾಲಾ ಮಕ್ಕಳ ಅಕ್ಕಿಯನ್ನು ಬಳಸುತ್ತಿರುವುದಾಗಿ ಮಾಧ್ಯಮದಲ್ಲಿ ವರದಿಯಾಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
ಸದರಿ ಶಾಲಾ ಮಕ್ಕಳಿಗೆ ಈ ಹಿಂದೆ ಇಲಾಖೆಯಿಂದ ಜುಲೈ ತಿಂಗಳವರೆಗಿನ ಅಕ್ಕಿಯನ್ನು ಒದಗಿಸಲಾಗಿದ್ದು, ಆ ಅಕ್ಕಿಯನ್ನು ಅಕ್ಟೋಬರ್ ತಿಂಗಳವರೆಗೆ ಬಳಸಲಾಗಿರುತ್ತದೆ. ನವೆಂಬರ್ನಿಂದ ಅಕ್ಕಿ ಪೂರೈಕೆಯು ವಿಳಂಬವಾದ ಕಾರಣ ಪ್ರಾಥಮಿಕ ವಿಭಾಗದಿಂದ ಉಳಿಕೆಯಾದ ಅಕ್ಕಿಯನ್ನು ತೆಗೆದುಕೊಳ್ಳಲಾಗಿರುತ್ತದೆ. ಇದನ್ನು ಗಮನಿಸಿ ಪ್ರೌಢಶಾಲಾ ಮಕ್ಕಳಿಗೆ ಅಕ್ಕಿಯನ್ನು ಖರೀದಿಸಲು ಅವಕಾಶ ನೀಡಲಾಗಿದ್ದು, ಪ್ರಾಥಮಿಕ ವಿಭಾಗದಿಂದ ಬಳಕೆಯಾದ ಅಕ್ಕಿಯನ್ನು ಹಿಂದಿರುಗಿಸಲಾಗುವುದು. ಉಳಿದಂತೆ ಪಡಿತರ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗಿರುವುದಿಲ್ಲ ಎಂದು ವಿಜಯನಗರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

❤️
👍
🙏
3