ಶ್ರೀ ದತ್ತ ಪ್ರಸಾರ
ಶ್ರೀ ದತ್ತ ಪ್ರಸಾರ
February 3, 2025 at 02:18 AM
*ಶ್ರೀ ದತ್ತ ಪ್ರಸಾದ – 45 -ಮೊಗಿಲಿಚೆರ್ಲಾ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರದಲ್ಲಿ ಭಕ್ತರ ಅನುಭವಗಳು - ಸಣ್ಣ ಬೆಳ್ಳಿ ಚೇಂಬು..* "ಸ್ವಾಮಿಯವರ ಅಭಿಷೇಕಕ್ಕೆ ಎಲ್ಲಾ ಸಾಮಾಗ್ರಿಗಳು ಸಿದ್ದವಾಗಿದೆಯೇ?" ಎಂದು ನಮ್ಮ ಅರ್ಚಕಸ್ವಾಮಿಗಳು ಅವರಲ್ಲೇ ಮಾತನಾಡಿಕೊಳ್ಳುತ್ತಿದ್ದರು. ಪ್ರತಿ ಭಾನುವಾರದ ಬೆಳಿಗ್ಗೆ ಐದು ಗಂಟೆಗೆ ಮೋಗಿಲಿಚೇರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಯವರ ಮಂದಿರದ ಬಾಗಿಲುಗಳನ್ನು ಅರ್ಚಕಸ್ವಾಮಿಗಳು ತೆರೆಯುತ್ತಾರೆ. ನಂತರ ಸ್ವಾಮಿಯವರ ಸಮಾಧಿಮಂದಿರವನ್ನು ಶುದ್ಧ ಮಾಡುತ್ತಾರೆ. ಸ್ವಾಮಿಯವರ ಉತ್ಸವವಿಗ್ರಹದ ಪಕ್ಕದಲ್ಲೇ ತಟ್ಟೆಯಲ್ಲಿ ಇರುವ ಗಣಪತಿಗೆ ಮೊದಲ ಪೂಜೆ ಮಾಡಿ, ಅಲ್ಲೇ ಇರುವ ಶಿವಲಿಂಗಕ್ಕೆ ಏಕರುದ್ರನೊಂದಿಗೆ ಅಭಿಷೇಕವನ್ನು ನಡೆಸುತ್ತಾರೆ. ನಂತರ ಸ್ವಾಮಿಯವರ ಪಾದುಕೆಯನ್ನು ತಲೆಯ ಮೇಲೆ ಇಟ್ಟು, ಮಂದಿರದ ಸುತ್ತ ಮೂರು ಪ್ರದಕ್ಷಿಣೆ ಮಾಡಿ, ಆ ಪಾದುಕೆಯನ್ನು ಯಥಾಸ್ಥಾನಕ್ಕೆ ಇಟ್ಟು, ನಂತರ ಸ್ವಾಮಿಯವರ ಸಮಾಧಿಗೆ ಅಭಿಷೇಕವನ್ನು ಮಾಡುತ್ತಾರೆ. ಅಭಿಷೇಕದ ಕ್ರಮದಲ್ಲಿ ಸ್ವಾಮಿಯವರ ಸಮಾಧಿಗೆ ಹಾಲಿನಿಂದಲೂ ಅಭಿಷೇಕ ಮಾಡುವುದು ಆಚಾರವಾಗಿದೆ. ಅಭಿಷೇಕಕ್ಕೆ ಬಳಸುವ ಹಾಲಿಗಾಗಿ ಇತಾಳೆ ಯಿಂದ ಮಾಡಿದ ಸಣ್ಣ ಚೇಂಬನ್ನು ಬಳಸುತ್ತಿದ್ದರು. ಎರಡು ವಾರಗಳ ಹಿಂದೆ ಭಾನುವಾರದ ಬೆಳಿಗ್ಗೆ ಸ್ವಾಮಿಯವರ ಸಮಾಧಿಗೆ ಅಭಿಷೇಕ ಮಾಡಲು ಅರ್ಚಕಸ್ವಾಮಿಗಳು ಸಿದ್ಧರಾಗಿದ್ದಾಗ, "ಸ್ವಾಮಿಯವರ ಅಭಿಷೇಕಕ್ಕೆ ಬಳಸುವ ಹಾಲಿನ ಚೇಂಬನ್ನು ಬೆಳ್ಳಿಯಿಂದ ತಯಾರಿಸಿ ಇಡೋಣ. ಈ ಇತಾಳೆಯ ಚೇಂಬು ಹಳೆಯದು. ಹಾಗೆಯೇ ನೀರಿನ ಬಿಂಡೆ, ಸಮಾಧಿಗೆ ಅಭಿಷೇಕ ಮಾಡಿದ ನೀರನ್ನು ಸಂಗ್ರಹಿಸುವ ಇತಾಳೆಯ ತಟ್ಟೆ—ಎಲ್ಲವನ್ನೂ ಬೆಳ್ಳಿಯವು ಮಾಡಿಸೋಣ" ಎಂದು ನಾನು ಹೇಳಿದೆ. "ಹೌದು ಸರ್, ನಮಗೂ ಆ ಯೋಚನೆ ಬಂತು. ಆದರೆ ನಿಮಗೆ ಹೇಳಲು ಹಿಂಜರಿಯುತ್ತಿದ್ದೆವು. ಮೊದಲು ಈ ಹಾಲಿನ ಚೇಂಬನ್ನು ಬದಲಾಯಿಸೋಣ" ಎಂದು ಅವರು ಹೇಳಿದರು. ಹೌದು ಎಂದೆನ್ನಲು, ಆ ನಂತರದ ಕಾರ್ಯಗಳಲ್ಲಿ ತೊಡಗಿಕೊಂಡೆವು. ಆ ದಿನ ಮಧ್ಯಾಹ್ನದ ನಂತರ, ಮತ್ತೆ ಹಾಲಿನ ಚೇಂಬು ಬಗ್ಗೆ ನನ್ನ ಮನಸ್ಸಿನಲ್ಲಿ ತಳಮಳವಾಯಿತು. ನಿಜವಾಗಿ, ಸ್ವಾಮಿಯವರ ಬಳಿಗೆ ಬರುವ ಭಕ್ತರಲ್ಲಿ ಯಾರನ್ನಾದರೂ ಕೇಳಿದರೆ ಅವರು ತಂದುಕೊಡುತ್ತಾರೆ. ಏನೋ ಎಂದು ನಾನು ಯಾರನ್ನೂ ಕೇಳಲಿಲ್ಲ. ಮನಸ್ಸಿನಲ್ಲಿ ಎರಡು ಮೂರು ಬಾರಿ ಯೋಚಿಸಿದೆ. ಆ ದಿನ ಸಂಜೆ ನಾನು ಮತ್ತು ನನ್ನ ಪತ್ನಿ ಸ್ವಾಮಿಯವರ ಸಮಾಧಿಗೆ ನಮಸ್ಕಾರ ಮಾಡಿ ಹೊರಬಂದ ಮೇಲೆ, ಮತ್ತೆ ಆ ಹಾಲಿನ ಚೇಂಬು ನೆನಪಿಗೆ ಬಂತು. "ಮುನ್ನೆ ವಾರದಲ್ಲಿ ನಮ್ಮ ಹತ್ತಿರ ಇರುವ ಅರ್ಚಕ ರಾಮಬ್ರಹ್ಮಾಚಾರಿಗೆ ಹೇಳೋಣ. ಆಮೇಲೆ ಅವನು ತಯಾರಿಸಿ ತರುತ್ತಾನೆ" ಎಂದು ನನ್ನ ಪತ್ನಿ ಹೇಳಿದಳು. ನಿಜವೇ, ರಾಮಬ್ರಹ್ಮಾಚಾರಿ ಸ್ವರ್ಣಕಾರನಾದ್ದರಿಂದ, ತಯಾರಿಸಿ ತರುತ್ತಾನೆ ಎಂದು ನಾನು ಮನಸ್ಸಿಗೆ ಸಮಾಧಾನ ಮಾಡಿಕೊಂಡೆ. ಮೊನ್ನೆ ಶನಿವಾರ ಸಂಜೆ ಸ್ವಾಮಿಯವರ ಪಲ್ಲಕಿ ಸೇವೆ ಸಿದ್ಧಪಡಿಸುತ್ತಿದ್ದಾಗ, ದೂರದ ಗ್ರಾಮಗಳಿಂದ ಬಂದ ಕೆಲವು ಭಕ್ತರೊಂದಿಗೆ ಮಾತನಾಡುತ್ತಿದ್ದೆ. ಅವರ ಹಿಂದೆ ಒಬ್ಬ ಯುವಕ, ಆತನ ಪತ್ನಿ, ತಾಯಿ, ತಂದೆ ನಿಂತುಕೊಂಡಿದ್ದರು. ಅವನು ನನಗೆ ಪರಿಚಿತ, ಹೈದ್ರಾಬಾದಿನಲ್ಲಿ ಮೇಸ್ತ್ರಿಯಾಗಿ ಮನೆ ಕಟ್ಟುವ ಕೆಲಸ ಮಾಡುತ್ತಿದ್ದನು. ಪ್ರತೀ ವರ್ಷ ಸ್ವಾಮಿಯವರ ದರ್ಶನಕ್ಕೆ ಬರುತ್ತಿದ್ದ. ಅವನು ನನಗೆ ಏನೋ ಹೇಳಬೇಕೆಂದು ನಿಂತಿದ್ದನು. ಆತನ ಹೆಸರು ಮಂದಯ್ಯ, ಗುಡ್ಲೂರು ಮಂಡಲದ ತೆಟ್ಟು ಗ್ರಾಮದ ನಿವಾಸಿ. ನಾನು ಅವನನ್ನು ಹತ್ತಿರಕ್ಕೆ ಬನ್ನಿ ಎಂದೆ. "ಸರ್, ನಿಮಗೆ ಒಂದು ವಿಷಯ ಹೇಳಬೇಕಿತ್ತು," ಎಂದನು. ಆತನ ಕಣ್ಣುಗಳು ನೀರಿನಿಂದ ತುಂಬಿದ್ದವು. ಸ್ವಾಮಿ ನನಗೆ ಕನಸಿನಲ್ಲಿ ಬಂದು ಕಾಣಿಸಿಕೊಂಡರು, ಸತ್ಯವಾಗಿ ಹೇಳುತ್ತಿದ್ದೇನೆ ಸರ್. ಸ್ವಾಮಿಯವರು ಕನಸಿನಲ್ಲಿ ಕಾಣಿಸಿಕೊಂಡು, 'ಬೆಳ್ಳಿ ಚೇಂಬು' ತಂದು ನನ್ನ ಬಳಿ ಬಾ' ಎಂದು ಹೇಳಿದರು. ಆಮೇಲೆ ಎಚ್ಚರವಾಯಿತು. ಸ್ವಾಮಿಯವರು ಸ್ವತಃ ಹೇಳಿದ ಮೇಲೆ ತಡಮಾಡಲು ಬಿಡಲೇ ಇಲ್ಲ. ನಿನ್ನೆ ಬಜಾರಿಗೆ ಹೋಗಿ ಸಣ್ಣ ಬೆಳ್ಳಿ ಚೇಂಬನ್ನು ಕೊಂಡೆ. ನಮ್ಮ ದಂಪತಿಗಳು ಸ್ವಾಮಿಯವರಿಗೆ ಕಾಣಿಕೆ ಕಟ್ಟಿಕೊಂಡಿದ್ದೇವೆ ಸರ್. ಅದರಲ್ಲಿ ಹತ್ತಿರ ಹತ್ತಿರ ಹದಿನೇಳು ಸಾವಿರ ರೂಪಾಯಿ ಖರ್ಚಾಯಿತು. ಬಜಾರಿನಲ್ಲಿ ಚೇಂಬಿನ ಬೆಲೆ ವಿಚಾರಿಸಿದಾಗ, ಸರಿ ಸುಮಾರು ಹದಿನೇಳು ಸಾವಿರ ಎಂದರು ಸರ್. ಒಂದು ಪೈಸೆಯೂ ಹೆಚ್ಚು ಕಡಿಮೆ ಆಗಲಿಲ್ಲ. ಸ್ವಾಮಿಗೆ ಸಲ್ಲಿಸುವ ಭಕ್ತಿಯಿಂದಲೇ ಕೂಡಿದುದೆಂದು ಭಾಸವಾಗಿತ್ತು," ಎಂದು ಹೇಳಿದರು. ಮತ್ತೆ ಅವರು ಚೇಂಬನ್ನು ಬೇಟೆಯಲ್ಲಿ ನನ್ನ ಮುಂದೆ ಇಟ್ಟರು. ನಾವು ಕಲ್ಪಿಸಿದಷ್ಟೇದರಲ್ಲಿ ಆ ಚೇಂಬು ಇದ್ದಿತ್ತು. ಆ ಬೆಳ್ಳಿ ಚೇಂಬಿಗಾಗಿ ನಾವು ಇನ್ನೂ ಒಂದು ವಾರ ಕಾಯಬೇಕೆಂದುಕೊಂಡಿದ್ದೇವೆ. ಆದರೆ ಸ್ವಾಮಿಯವರು ಕಾದಿಲ್ಲ. ಆ ಸಣ್ಣ ಬೆಳ್ಳಿ ಚೇಂಬನ್ನು ಮತ್ತೊಬ್ಬ ಶ್ರೀಮಂತ ಭಕ್ತನಿಂದ ತರುವದೋ ಅಥವಾ ನಮ್ಮಿಂದಲೇ ತಯಾರಿಸುವುದೋ ದೊಡ್ಡ ವಿಷಯವೇನೂ ಅಲ್ಲ. ಆದರೆ, ಅವನನ್ನು ನಂಬಿದ್ದ ಭಕ್ತನಿಗೆ ಸ್ವಾಮಿಯವರು ಸ್ವತಃ ಅವಕಾಶ ನೀಡಿದರು. ಅವನು ತನ್ನ ಬಾಳಿನ ದುಡ್ಡಿನಿಂದಲೇ ಸ್ವಾಮಿಯವರಿಗೆ ಬೇಕಾದ ವಸ್ತುವನ್ನು ತಂದುಕೊಟ್ಟನು. ಆದುದರಿಂದಲೇ ಮುಂಜಾನೆ, ಸ್ವಾಮಿಯವರ ಸಮಾಧಿಗೆ ಬೆಳ್ಳಿ ಚೇಂಬಿನಿಂದ ಹಾಲಿನ ಅಭಿಷೇಕ ಮಾಡಿದರು. ಮಂದಯ್ಯನಿಗೆ ಸ್ವಾಮಿಯವರ ಶೀರ್ಷಣೆಯನ್ನು ಸಮರ್ಪಿಸಿ, ಆತನ ಪತ್ನಿ ಮತ್ತು ಮಕ್ಕಳೊಂದಿಗೆ ಪೂಜೆಯನ್ನು ಕೈಗೊಂಡನು. "ನೀನು ತಂದ ಚೇಂಬಿನಿಂದಲೇ ಸ್ವಾಮಿಯವರ ಅಭಿಷೇಕ ಮಾಡಿದೆವು," ಎಂದು ಅರ್ಚಕ ಸ್ವಾಮಿಗಳು ಆತನಿಗೆ ತಿಳಿಸಿದರು. ಸಣ್ಣ ಬೆಳ್ಳಿ ಚೇಂಬು ನಮಗೆ ದೊಡ್ಡ ಪಾಠವನ್ನು ಕಲಿಸಿದೆ. ಸ್ವಾಮಿಯವರ ಸೇವೆ ಮಾಡುವುದಾದರೆ ನಮ್ಮದು ಕೇವಲ ಕೆಲಸವಷ್ಟೆ, ಅದು ಕೂಡ ಪ್ರತಿಕ್ಷಣ "ನಾನು ಮಾಡುವವನಲ್ಲ" ಎಂಬ ಚಿಂತನೆ ಇಟ್ಟುಕೊಂಡು ಮಾಡಬೇಕು. ಅಹಂಕಾರವನ್ನು ಸ್ವಲ್ಪವೂ ಮಾಡಿಕೊಂಡರೆ, ಸ್ವಾಮಿಯವರು ಅದನ್ನು ಸಣ್ಣದಾಗಿ ಪಾಠ ಮಾಡಿ ಕಲಿಸುತ್ತಾರೆ. ಸರ್ವಂ, ಶ್ರೀ ದತ್ತಕೃಪ! ರಚನೆ: ಶ್ರೀ ಪವನಿ ನಾಗೇಂದ್ರ ಪ್ರಸಾದ್ ಕನ್ನಡ ಅನುವಾದ ಸಹಕಾರ:ಶ್ರೀಮತಿ ಶ್ವೇತ ಡಿ. ----- (ಮಂದಿರ ವಿವರಗಳಿಗಾಗಿ: ಪವನಿ ಶ್ರೀ ವಿಷ್ಣು ಕೌಶಿಕ್.. ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರ.. ಮೊಗಿಲಿಚೆರ್ಲ ಗ್ರಾಮ.. ಲಿಂಗಸಮುದ್ರ ಮಂಡಲ.. SPSR ನೆಲ್ಲೂರು ಜಿಲ್ಲೆ.. ಪಿನ್: 523114.. ಸೆಲ್: 9652429852)
Image from ಶ್ರೀ ದತ್ತ ಪ್ರಸಾರ: *ಶ್ರೀ ದತ್ತ ಪ್ರಸಾದ – 45 -ಮೊಗಿಲಿಚೆರ್ಲಾ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಮಂದಿ...

Comments