ಶ್ರೀ ದತ್ತ ಪ್ರಸಾರ
ಶ್ರೀ ದತ್ತ ಪ್ರಸಾರ
February 6, 2025 at 02:23 AM
*ಶ್ರೀ ದತ್ತ ಪ್ರಸಾದ – 47 -ಮೊಗಿಲಿಚೆರ್ಲಾ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರದಲ್ಲಿ ಭಕ್ತರ ಅನುಭವಗಳು - ಒಳ್ಳೆಯ ಪಾಠ* 2011ನೇ ವರ್ಷದಲ್ಲಿ ಒಂದು ಶುಕ್ರವಾರ ಸಂಜೆ.. ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಯವರ ಮಂದಿರದಲ್ಲಿ ನಾನು ಮತ್ತು ನಮ್ಮ ಸಿಬ್ಬಂದಿ ಮಂದಿರದ ವ್ಯವಹಾರಗಳ ಬಗ್ಗೆ ಚರ್ಚೆ ಮಾಡುತ್ತಾ ಕುಳಿತಿದ್ದೇವೆ.. "ಅಯ್ಯಾ.. ನಾಳೆ ಶನಿವಾರ.. ಮರುದಿನ ಭಾನುವಾರ.. ಈ ಎರಡು ದಿನಗಳಲ್ಲಿ ನಾವು ಅನ್ನದಾನ ಮಾಡಬೇಕಲ್ಲ.. ನೀವು ದಾನಿಗಳ ಹೆಸರುಗಳನ್ನ ಹೇಳಿಲ್ಲ.. ದಾನಿಗಳ ಹೆಸರುಗಳನ್ನು ನೀವು ಬರೆದು ಕೊಟ್ಟರೆ.. ನಾಳೆ ಬೆಳಗ್ಗೆ ಬೋರ್ಡ್ ಮೇಲೆ ಬರೆಯುತ್ತೇವೆ.." ಎಂದರು.. ಆಗ ಆ ಎರಡು ದಿನಗಳ ಅನ್ನದಾನಕ್ಕೆ ಯಾರೂ ದಾನಿಗಳು ಮುಂದೆ ಬಂದಿರಲಿಲ್ಲ.. ನಾನು ನಮ್ಮ ಸಿಬ್ಬಂದಿಗೆ ಹೇಳಿದೆ, "ನಾವು ಮಂದಿರದ ಹಣವನ್ನು ಬಳಸೋಣ.. ಸಾಮಾನುಗಳನ್ನು ತರುವಂತೆ ಹೇಳಿ".. ಒಪ್ಪಿಕೊಂಡರು.."ಈ ಎರಡು ದಿನಗಳ ಅನ್ನದಾನಕ್ಕೆ ಎಷ್ಟು ವೆಚ್ಚವಾಗಬಹುದು?" ಎಂದು ಅವರನ್ನು ಕೇಳಿದೆ.. ಸ್ವಲ್ಪ ಸಮಯ ಲೆಕ್ಕ ಹಾಕಿ, "ಒಟ್ಟು ಹನ್ನೊಂದು ಸಾವಿರ ಐದು ನೂರು ವೆಚ್ಚವಾಗಬಹುದು.. ಎಲ್ಲಾ ಸೇರಿ" ಎಂದು ಹೇಳಿದರು.. (ಆ ದಿನಗಳಲ್ಲಿ ಆ ಲೆಕ್ಕ.. ಈಗ ಸಾಮಾನ್ಯ ದಿನಗಳಲ್ಲಿ ಒಂದು ಹೊತ್ತಿಗೆ ಅದಕ್ಕಿಂತ ಹೆಚ್ಚಾಗಿದೆ).."ಸರಿ ಲೆಕ್ಕ ಬರೆದು ಇಡಿ.. ನಮ್ಮ ಸ್ವಾಮಿಯವರ ಅನ್ನದಾನ ಬಗ್ಗೆ ನಾವು ಚಿಂತಿಸಬೇಕಾಗಿಲ್ಲ.. ಎಲ್ಲವನ್ನೂ ಅವರು ನೋಡಿಕೊಳ್ಳುತ್ತಾರೆ.. ನಮಗೆ ಒಪ್ಪಿಸಿದ ಕೆಲಸವನ್ನು ನಾವು ಮಾಡೋಣ" ಎಂದೆ.. ಅಷ್ಟರಲ್ಲೇ ಆ ಸಂಭಾಷಣೆ ಮುಗಿದು, ಎಲ್ಲರೂ ತಮ್ಮ ಕೆಲಸಗಳಲ್ಲಿ ತೊಡಗಿದರು. ಮರುದಿನ ಶನಿವಾರ ಬೆಳಗ್ಗೆ ಒಂದು ಹೆಣ್ಣುಮಗುವನ್ನು ಎತ್ತಿಕೊಂಡು ದಂಪತಿಗಳು ಮಂದಿರಕ್ಕೆ ಬಂದರು.. ಅವರನ್ನು ನೋಡಿದಾಗ ಬಡವರಂತೆ ತೋರಿದರು.. ಅವರು ಕೂಡಾ ಸ್ವಾಮಿಯವರ ಮಂದಿರದ ಸುತ್ತ ಮೂರು ಪರಿಕ್ರಮೆ ಮಾಡಿದರು.. ಸರ್ವದರ್ಶನ ಸಾಲಿನಲ್ಲಿ ಬಂದು, ಸ್ವಾಮಿಯವರ ಸಮಾಧಿಗೆ ನಮಸ್ಕಾರ ಮಾಡಿ, ಮಂದಿರದ ಒಂದು ಬದಿ ಕುಳಿತುಕೊಂಡರು.. ಅವರು ತಮ್ಮಲ್ಲಿಯೇ ಏನೋ ಮಾತಾಡುತ್ತಾ, ಮಧ್ಯ ಮಧ್ಯದಲ್ಲಿ ನಮ್ಮ ಸಿಬ್ಬಂದಿಯ ಕಡೆ ನೋಡುತ್ತಾ, ಏನೋ ತಳಮಳ ಪಡುತ್ತಿದ್ದರು.. ಇನ್ನೂ ಹತ್ತು ನಿಮಿಷಗಳ ಬಳಿಕ, ಇಬ್ಬರೂ ಎದ್ದು, ನಮ್ಮ ಸಿಬ್ಬಂದಿ ಕುಳಿತಿದ್ದ ಸ್ಥಳಕ್ಕೆ ಹೋದೆ.. ಇನ್ನೂ ಹತ್ತು ನಿಮಿಷಗಳ ಬಳಿಕ ನಮ್ಮವರು ಅವರನ್ನು ನನ್ನ ಬಳಿ ಕರೆದುಕೊಂಡು ಬಂದರು.. "ಏನಾಗಿದೆ?" ಎಂದು ಕೇಳಿದೆ.. "ಅಯ್ಯಾ.. ಇವರದು ಕಟ್ಟುಕೆಳಪಳ್ಳೆ.. ಇವರ ಕುಟುಂಬದವರು ಯಾನಾದಿ ಜಾತಿಗೆ ಸೇರಿದ್ದಾರೆ.. ನಾಲ್ಕು ವರ್ಷಗಳ ಹಿಂದೆ ನಮ್ಮ ಮಂದಿರದಲ್ಲಿಯೇ ಮದುವೆ ಮಾಡಿಕೊಂಡಿದ್ದಾರೆ.. ಮದುವೆಯಾದ ಎರಡು ತಿಂಗಳ ನಂತರ ಮತ್ತೆ ಇಲ್ಲಿಗೆ ಬಂದು, ಸ್ವಾಮಿಗೆ ಪ್ರಾರ್ಥನೆ ಮಾಡಿಕೊಂಡಿದ್ದಾರೆ.. ನಾವು ಕೆಲಸ ಸಿಕ್ಕಿದರೆ, ಸ್ವಾಮಿಗೆ ಕಾಣಿಕೆ ಕಟ್ಟಿ ಕೊಡುತ್ತೇವೆ ಎಂದು.." ಪಕ್ಕದ ತಿಂಗಳಲ್ಲಿ, ನೆಲ್ಲೂರು ಬಳಿ ಇರುವ ಒಬ್ಬ ಉದ್ಯೋಗದಾರ ತನ್ನ ಜಮೀನನ್ನು ನೋಡಿಕೊಳ್ಳಲು ಕಾರ್ಮಿಕರನ್ನು ಹುಡುಕುತ್ತಿದ್ದಾಗ, ಇವರಿಗೆ ಪರಿಚಯವಾಯಿತು.. ಅವರು ಆ ಜಮೀನಿನಲ್ಲಿ ಕೆಲಸ ಮಾಡಲು ಸೇರಿದರು.. ಆ ದಿನದಿಂದ, ತಮ್ಮ ಕೂಲಿ ಹಣದಿಂದ ಸ್ವಲ್ಪ ಸ್ವಲ್ಪವಾಗಿ ಸ್ವಾಮಿಯವರಿಗಾಗಿ ಒಂದು ಮಣ್ಣಿನ ಬಟ್ಟಲಿನಲ್ಲಿ ಹಣವನ್ನು ಸೇರಿಸಿದ್ದಾರೆ.. ಅದನ್ನು ತೆಗೆದುಕೊಂಡು ಬಂದಿದ್ದಾರೆ.. ಅದು ಹೇಗೆ ನೀಡಬೇಕು ಎಂದು ಅಲೋಚಿಸುತ್ತಿದ್ದರು.. ನಮ್ಮವರನ್ನು ಬಂದು ಕೇಳಿದ್ದಾರೆ.." ಎಂದರು. "ನೀವು ಸೇರಿಸಿದ ಹಣವನ್ನು ಯಾವುದಕ್ಕೆ ಬಳಸಬೇಕೆಂದುಕೊಂಡಿದ್ದೀರ?" ಎಂದು ಆ ದಂಪತಿಯನ್ನು ಕೇಳಿದೆ.. ನಿಜಕ್ಕೂ ನನಗೆ ಅಷ್ಟು ಆಸಕ್ತಿ ಇರಲಿಲ್ಲ.. ಏಕೆಂದರೆ ಅವರು ಬಡವರು.. ಎಷ್ಟು ಹಣ ಕೂಡಿಟ್ಟಿರಬಹುದು? ಅಂದಾಜು ಐದು, ಆರು ನೂರು ರೂಪಾಯಿಗಳು ಇರಬಹುದು ಎಂದುಕೊಂಡು ಕೇಳಿದೆ.."ನಾಲ್ಕು ಜನರಿಗೆ ಅನ್ನ ಕೊಡಿಸು ಸ್ವಾಮಿ.. ನಾವು ಬಡವರು.. ಅದರಲ್ಲಿ ಎಷ್ಟು ಇದ್ದರೂ, ಅದನ್ನೆಲ್ಲ ತೆಗೆದುಕೊಂಡು ಅನ್ನ ಕೊಡಿಸು ಸ್ವಾಮಿ.." ಎಂದರು.. " ಆ ಬಟ್ಟಲಿನಲ್ಲಿದ್ದ ಹಣವನ್ನು ಲೆಕ್ಕ ಹಾಕಿ, ಅವರ ಹೆಸರಿನಲ್ಲಿ ರಶೀದಿ ನೀಡಿ.." ಎಂದೆ.. ಅವರು ಒಪ್ಪಿಕೊಂಡು, ದಂಪತಿಯನ್ನು ಕೂಡಿಕೊಂಡು ಮಂದಿರಕ್ಕೆ ಹೋದರು.. ಅಲ್ಲೆ ಒಂದು ಹಾಸು ಹಾಸಿ, ಆ ಹಾಸಿನಲ್ಲಿ ಬಟ್ಟಲಿನಲ್ಲಿದ್ದ ಚಿಲ್ಲರೆಯನ್ನು ಹಾಕಿದರು.. ನಮ್ಮ ಸಿಬ್ಬಂದಿಯಲ್ಲಿ ಮೂವರು ಕುಳಿತು, ಅರ್ಧ ಗಂಟೆ ಹೊತ್ತು ಲೆಕ್ಕ ಹಾಕಿದರು.. ಅವರು ಮತ್ತೆ ನನ್ನ ಬಳಿಗೆ ಬಂದು, ಆ ಬಟ್ಟಲಿನಲ್ಲಿದ್ದ ಹಣವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದರು.."ಸಾರ್.. ಒಟ್ಟು ಹನ್ನೊಂದು ಸಾವಿರ ಆರು ನೂರು ಹದಿನಾರು ರೂಪಾಯಿಗಳು ಇದ್ದವೆ.." ಎಂದರು.. ಒಂದು ಕ್ಷಣ ನನಗೆ ಅರ್ಥವಾಗಲಿಲ್ಲ.."ಎಷ್ಟು ಇದ್ದವೆ?" ಎಂದು ಕೇಳಿದೆ.."ಹನ್ನೊಂದು ಸಾವಿರ ಆರು ನೂರು ಹದಿನಾರು ರೂಪಾಯಿಗಳು.." ಮತ್ತೆ ಹೇಳಿದರು.. ಶನಿ ಮತ್ತು ಭಾನುವಾರ ಎರಡು ದಿನಗಳಲ್ಲಿ ಬರುವ ಭಕ್ತರ ಅನ್ನದಾನಕ್ಕೆ ಮೊನ್ನೆ ನಾವು ಲೆಕ್ಕ ಹಾಕಿದ ಹಣ ಹನ್ನೊಂದು ಸಾವಿರ ಐದು ನೂರು ರೂಪಾಯಿಗಳು.. ಅದಕ್ಕಿಂತ ಇನ್ನೂ ನೂರಿನೂರು ರೂಪಾಯಿಗಳು ಹೆಚ್ಚಿದೆ.. ನಾನು ಎಷ್ಟು ಕಿನ್ನತೆ ಇದ್ದೆನೆ?.. ನನ್ನಲ್ಲಿದ್ದ ಆ ಕಿನ್ನತೆ ಭಾವನೆಗೆ ಸ್ವಾಮಿಯವರು ಎಷ್ಟು ಸೂಕ್ಷ್ಮವಾಗಿ ದರ್ಶನ ಮಾಡಿಸಿದರು ಎಂದು ಅರ್ಥವಾಯಿತು. "ನೀವು ಕೂಡಿಸಿದ ಹಣ ಈಷ್ಟಿದೆ.. ಈ ಹಣವನ್ನು ಏನು ಮಾಡಬೇಕು?" ಎಂದು ಅವರನ್ನು ಮತ್ತೆ ಕೇಳಿದೆ.."ಸ್ವಾಮಿ.. ಆ ಹಣ ನಮಗಲ್ಲ.. ಅದೇ ಸ್ವಾಮಿಯದು.. ಅದರಿಂದ ಅನ್ನ ಕೊಡಿಸು.." ಎಂದರು ಭಕ್ತಿಯಿಂದ.. ಅವರು ಇಬ್ಬರೂ ಭಕ್ತಿಯಿಂದ ಆಗಲಿ ಎಂದರು, ಆ ಭಕ್ತಿಯನ್ನು ನಾನು ಆಗಾಗಲೂ ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೆ.. ಸ್ವಾಮಿಯವರ ಸಮಾಧಿ ಕೋಣೆಯ ಮುಂದೆ ನಿಂತು, ಮನಸಾರೆ ಕ್ಷಮೆ ಕೇಳಿಕೊಂಡೆ.. ಆ ದಂಪತಿಗಳು ಮಾತ್ರ ತಮ್ಮ ಮೇಲೆ ಏನೂ ಸಂಬಂಧವಿಲ್ಲದಂತೆ ಇದ್ದರು.. ಆ ದಿನ ರಾತ್ರಿ ಮಲಗಿದ ನಂತರ, ಪ್ರತ್ಯೇಕ ದಿನದಲ್ಲಿ ಸ್ವಾಮಿಯವರ ಸಮಾಧಿ ದರ್ಶನ ಮಾಡಿ ಹೋದರು.. ಯಾರನ್ನೂ ಕಿನ್ನತೆಯ ಭಾವನೆಯಿಂದ ನೋಡುವುದು ತಪ್ಪು ಎಂದು ಸ್ವಾಮಿಯವರು ಸಮಾಧಿಯಲ್ಲಿ ಕುಳಿತು ನಮಗೆ ಒಂದು ಒಳ್ಳೆಯ ಪಾಠವನ್ನು ಕಲಿಸಿದರು. ಸರ್ವಂ, ಶ್ರೀ ದತ್ತಕೃಪ! ರಚನೆ: ಶ್ರೀ ಪವನಿ ನಾಗೇಂದ್ರ ಪ್ರಸಾದ್ ಕನ್ನಡ ಅನುವಾದ ಸಹಕಾರ:ಶ್ರೀಮತಿ ಶ್ವೇತ ಡಿ. ----- (ಮಂದಿರ ವಿವರಗಳಿಗಾಗಿ: ಪವನಿ ಶ್ರೀ ವಿಷ್ಣು ಕೌಶಿಕ್.. ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರ.. ಮೊಗಿಲಿಚೆರ್ಲ ಗ್ರಾಮ.. ಲಿಂಗಸಮುದ್ರ ಮಂಡಲ.. SPSR ನೆಲ್ಲೂರು ಜಿಲ್ಲೆ.. ಪಿನ್: 523114.. ಸೆಲ್: 9652429852)

Comments