ಶ್ರೀ ದತ್ತ ಪ್ರಸಾರ
ಶ್ರೀ ದತ್ತ ಪ್ರಸಾರ
February 14, 2025 at 01:59 AM
*ಶ್ರೀ ದತ್ತ ಪ್ರಸಾದ – 53 -ಮೊಗಿಲಿಚೆರ್ಲಾ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರದಲ್ಲಿ ಭಕ್ತರ ಅನುಭವಗಳು - ಶ್ರೀಪಾದ ಶ್ರೀವಲ್ಲಭ ಮಂದಿರ..1ನೇ ಭಾಗ..* "ಶ್ರೀಪಾದ ಶ್ರೀವಲ್ಲಭ ಸ್ವಾಮಿವರ ಮಂದಿರ ನಿರ್ಮಾಣವು ಪೂರ್ಣವಾಗುತ್ತಿದೆ ಅಲ್ಲವೇ.. ಹಾಗಾದರೆ, ಪ್ರತಿಷ್ಠೆ ಯಾವಾಗ ಇಡಲು ಉದ್ದೇಶಿಸಿದ್ದಾರೆ?" ಎಂದು ನಿನ್ನೆ ಬೆಳಿಗ್ಗೆ ಆ ಭಕ್ತರು ಕೇಳಿದರು. "ಈ ತಿಂಗಳ 11, 12, 13ನೇ ತಾರೀಖುಗಳಂದು ನಿರ್ಧರಿಸಿದ್ದೇವೆ.. 13ನೇ ತಾರೀಖು ಪ್ರತಿಷ್ಠೆ ಇರಲಿದೆ," ಎಂದೆನು. "ಆ ದಿನ ನಾವು ಇಲ್ಲಿ ಬಂದು, ಆ ಕಾರ್ಯಕ್ರಮವನ್ನು ಕಣ್ಣು ತುಂಬಿಕೊಂಡು ನೋಡಬಹುದಾ?" ಎಂದರು. "ಯಾವ ತೊಂದರೆಯೂ ಇಲ್ಲ ಅಯ್ಯಾ.. ನಿಮಗೆ ಅವಕಾಶ ಇದ್ದರೆ ಆ ಮೂರು ದಿನಗಳೂ ಇಲ್ಲಿ ಉಳಿಯಿರಿ. ಎಲ್ಲಾ ಭಕ್ತರಿಗೂ ಮಧ್ಯಾಹ್ನ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದೇವೆ.. ಇಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿವರ ಮಂದಿರದ ಮಂಟಪದಲ್ಲಿಯೇ ಇರಿ," ಎಂದೆನು. "ತುಂಬ ಸಂತೋಷ, ನಾನು ಜೊತೆಗೆ ಮತ್ತೊಬ್ಬ ಹತ್ತೂ ಜನವನ್ನು ಕರೆತರುತ್ತೇನೆ. ಆ ಮೂರು ದಿನಗಳೂ ಗುರುಚರಿತ್ರಾ ಪಾರಾಯಣವನ್ನು ಇಲ್ಲಿ ಮಾಡುತ್ತೇವೆ," ಎಂದರು. ಮೊಗಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಗಳು ಸಿದ್ಧಿಹೊಂದಿದ ಹದಿನೈದು ವರ್ಷಗಳ ನಂತರ, ಆ ಮಂದಿರದ ಆವರಣದಲ್ಲೇ ನೈರುತ್ಯ ದಿಕ್ಕಿನಲ್ಲಿ ಶ್ರೀ ಸಾಯಿಬಾಬಾ ಮಂದಿರ ನಿರ್ಮಾಣವಾಯಿತು. ಆ ನಂತರ ಹಲವು ವರ್ಷಗಳ ನಂತರ, ತ್ರಿಮೂರ್ತಿ ಸ್ವರೂಪ ದತ್ತಾತ್ರೇಯನಿಗೆ ಮಂದಿರ ನಿರ್ಮಾಣವಾಯಿತು. ಈಗ ಶ್ರೀಪಾದ ಶ್ರೀವಲ್ಲಭನವರ ಮಂದಿರವೂ ಆ ಆವರಣದಲ್ಲಿಯೇ ಕಟ್ಟಲಾಗುತ್ತಿದೆ. ಮೊಗಲಿಚೆರ್ಲ ಗ್ರಾಮದ ಗಡಿಯಲ್ಲಿ ಇರುವ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಯ ಮಂದಿರವು ಭವಿಷ್ಯದಲ್ಲಿ ಪೂರ್ಣ ದತ್ತಕ್ಷೇತ್ರವಾಗಿ ರೂಪುಗೊಳ್ಳಲಿದೆ ಎಂದು ಶ್ರೀ ಸ್ವಾಮಿಗಳು ಅಂದೇ ಹೇಳಿದ್ದರು. ಅವರು ಹೇಳಿದರು ಎಂಬ ಮಾತುಗಳು ಒಂದರ ಬಳಿಕ ಇನ್ನೊಂದು ಸತ್ಯವಾಗುತ್ತಿವೆ. ಶ್ರೀಪಾದ ಶ್ರೀವಲ್ಲಭ ಸ್ವಾಮಿಗೆ ಒಂದು ಸಣ್ಣ ಮಂದಿರ ಕಟ್ಟಬೇಕೆಂದು ನಮ್ಮ ಮನಸ್ಸು ಮಾಡಿದೆವು. ಆ ವಿಷಯದಲ್ಲಿ ನಾನು ಮತ್ತು ನಮ್ಮ ಸಿಬ್ಬಂದಿ ತರ್ಕ ಮಾಡುತ್ತಿದ್ದುದು. ನಿರ್ಧಾರ ಮಾಡಿದೆವು, ಆದರೆ ಮಂದಿರ ನಿರ್ಮಾಣಕ್ಕೆ ನಿಧಿಗಳು ಬೇಕು. ಸ್ವಾಮಿಯ ಸಮಾಧಿಗೆ ಹೋಗಿ, ಮನದಾಳದಿಂದ ಸ್ವಾಮಿಯನ್ನು ನಾವು ಬೇಡಿದೆವು, "ಸ್ವಾಮೀ, ಈ ಮಂದಿರದ ಆವರಣದಲ್ಲಿ ಶ್ರೀಪಾದ ಶ್ರೀವಲ್ಲಭ ಸ್ವಾಮಿಗೆ ಒಂದು ಮಂದಿರ ಕಟ್ಟಬೇಕೆಂದು ಉದ್ದೇಶಿಸಿದೆವು.. ಅದಕ್ಕಾಗಿ ನಿಮ್ಮ ಆಶೀರ್ವಾದ ಬೇಕಾಗಿದೆ ಎಂದು. ಸ್ವಾಮಿಯ ಮೇಲೆ ಜವಾಬ್ದಾರಿಯನ್ನು ಇಟ್ಟೆವು, ಹಾಗಾಗಿ ಮಂದಿರದ ನಿರ್ಮಾಣದ ಬಗ್ಗೆ ಹೆಚ್ಚಿನ ಆಲೋಚನೆ ಬೇಡವೆಂದು ಭಾವಿಸಿದೆವು. ಅದೇ ಮುಂದಿನ ದಿನ, ಹೈದರಾಬಾದ್ ನಿವಾಸಿಯಾದ ಶ್ರೀ ದುವ್ವೂರಿ ಭಾಸ್ಕರರಾವ್ ಅವರು ನನ್ನ ಬಳಿ ವಾಟ್ಸಪ್‌ನಲ್ಲಿ ಸಂದೇಶ ಕಳುಹಿಸಿದರು. ತಮ್ಮ ಬಳಿ ಶ್ರೀಪಾದ ಶ್ರೀವಲ್ಲಭ ಸ್ವಾಮಿಯ ಪ್ರತಿಮೆ ಇದೆಂದು, ನೀವು ಒಂದು ಮಂದಿರ ನಿರ್ಮಿಸಿದರೆ, ಅವರು ಆ ಪ್ರತಿಮೆಯನ್ನು ತರಿಸಿ ಪ್ರತಿಷ್ಠೆ ಮಾಡಿಸುತ್ತಾರೆ ಎಂದು ತಿಳಿಸಿದರು. ಮೊಗಲಿಚೆರ್ಲ ದತ್ತಾತ್ರೇಯ ಸ್ವಾಮಿಯ ಲೀಲೆಯು ತಕ್ಷಣವೇ ಗೋಚರಿಸಿತು. ತಕ್ಷಣ ಸ್ವಾಮಿಯ ಸಮಾಧಿಗೆ ತೆರಳಿ ನಮಸ್ಕಾರ ಮಾಡಿ ಬಂದು, ಸ್ವಾಮಿಯ ಅನುಮತಿ ದೊರೆತೆಯೆಂದು ಅರ್ಥವಾಯಿತು. ಶ್ರೀ ಭಾಸ್ಕರರಾವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಮೊಗಲಿಚೆರ್ಲಕ್ಕೆ ಬರುವಂತೆ ಆಹ್ವಾನಿಸದೆನು. ಶ್ರೀ ಭಾಸ್ಕರರಾವ್ ತಮ್ಮ ಸ್ನೇಹಿತನೊಂದಿಗೆ ಮೊಗಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಯ ಮಂದಿರಕ್ಕೆ ಬಂದರು. ಶ್ರೀ ಭಾಸ್ಕರರಾವರು ತಮ್ಮೊಂದಿಗೆ ಶ್ರೀಪಾದ ಶ್ರೀವಲ್ಲಭ ಸ್ವಾಮಿಯ ಪ್ರತಿಮೆಯನ್ನು ಸಹ ತಂದುಕೊಂಡು ಬಂದರು. ಆ ದಿನವೇ ಯಾವ ಅಳತೆಯಲ್ಲಿ ಮಂದಿರವನ್ನು ನಿರ್ಮಿಸಬೇಕು ಎಂದು ತೀರ್ಮಾನಿಸಲಾಯಿತು. ಶಂಖುಸ್ಥಾಪನೆಗೆ ಶುಭಮಹೂರ್ತವನ್ನೂ ನಿಗದಿಪಡಿಸಲಾಯಿತು. ಆ ದಿನಕ್ಕೆ ಶ್ರೀ ಭಾಸ್ಕರರಾವರು ತಮ್ಮ ಪತ್ನಿಯೊಂದಿಗೆ ಬಂದು, ಶಂಖುಸ್ಥಾಪನೆ ಕಾರ್ಯವನ್ನು ನೆರವೇರಿಸಿದರು. ಎಲ್ಲವೂ ಸುಗಮವಾಗಿ ನಡೆಯಿತು. ಶ್ರೀಪಾದ ಶ್ರೀವಲ್ಲಭನವರ ಮಂದಿರ ನಿರ್ಮಾಣದ ಬಗ್ಗೆ ಇನ್ನಷ್ಟು ವಿವರಗಳನ್ನು ಮುಂದಿನ ಭಾಗದಲ್ಲಿ ಓದೋಣ. ಸರ್ವಂ, ಶ್ರೀ ದತ್ತಕೃಪ! ರಚನೆ: ಶ್ರೀ ಪವನಿ ನಾಗೇಂದ್ರ ಪ್ರಸಾದ್ ಕನ್ನಡ ಅನುವಾದ ಸಹಕಾರ:ಶ್ರೀಮತಿ ಶ್ವೇತ ಡಿ. ----- (ಮಂದಿರ ವಿವರಗಳಿಗಾಗಿ: ಪವನಿ ಶ್ರೀ ವಿಷ್ಣು ಕೌಶಿಕ್.. ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರ.. ಮೊಗಿಲಿಚೆರ್ಲ ಗ್ರಾಮ.. ಲಿಂಗಸಮುದ್ರ ಮಂಡಲ.. SPSR ನೆಲ್ಲೂರು ಜಿಲ್ಲೆ.. ಪಿನ್: 523114.. ಸೆಲ್: 9652429852)
Image from ಶ್ರೀ ದತ್ತ ಪ್ರಸಾರ: *ಶ್ರೀ ದತ್ತ ಪ್ರಸಾದ – 53 -ಮೊಗಿಲಿಚೆರ್ಲಾ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಮಂದಿ...

Comments