
ಶ್ರೀ ದತ್ತ ಪ್ರಸಾರ
February 28, 2025 at 01:29 AM
*ಶ್ರೀ ದತ್ತ ಪ್ರಸಾದ – 66 -ಮೊಗಿಲಿಚೆರ್ಲಾ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರದಲ್ಲಿ ಭಕ್ತರ ಅನುಭವಗಳು - ಶಾರದ ಅವರ ನಂಬಿಕೆ..*
"ನಾವು ಅಮೆರಿಕದಲ್ಲಿ ವಾಸಿಸುತ್ತಿದ್ದೇವೆ ಅಯ್ಯಾ..ಮುಂದಿನ ಜನವರಿ ತಿಂಗಳಲ್ಲಿ ಕೇರಳಕ್ಕೆ ಬರುವುದು. ಅಲ್ಲಿ ನನ್ನ ಪತಿಗೆ ಆಯುರ್ವೇದ ಚಿಕಿತ್ಸೆ ಮಾಡಿಸಬೇಕೆಂದು ಯೋಚಿಸಿದ್ದೇವೆ..ಅದಾದಮೇಲೆ ಮೊಗಲಿಚೆರ್ಲಕ್ಕೆ ಬಂದು ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಯ ದರ್ಶನ ಪಡೆಯಲು ಉದ್ದೇಶಿಸಿದ್ದೇವೆ..ಆಗಿದರೆ ಕೆಲವು ದಿನಗಳವರೆಗೆ ಅಲ್ಲಿಯೇ ಉಳಿಯಲು ಕೂಡ ಆಲೋಚಿಸುತ್ತಿದ್ದೇವೆ..ನಮಗೆ ಅಲ್ಲಿಗೆ ವಾಸತಿ ಸಿಗುತ್ತದೆಯಾ?" ಎಂದು ಆಕೆಯು ನನ್ನನ್ನು ಕೇಳಿದರು. "ತಾಯಿ..ನೀವು ಸ್ವಾಮಿಯ ದರ್ಶನಕ್ಕಾಗಿ ಬಂದು ಹೋಗಲು ಯಾವುದೇ ತೊಂದರೆಯಿಲ್ಲ..ಆದರೆ ಕೆಲವು ದಿನಗಳವರೆಗೆ ಇಲ್ಲಿಯೇ ಉಳಿಯಲು ಬಯಸಿದರೆ, ನಮ್ಮಲ್ಲಿರುವ ಕೊಠಡಿಗಳಲ್ಲಿ ನೀವು ಹೊಂದಿಸಿಕೊಳ್ಳಬೇಕು..ನೀವು ಒಂದು ದಿನ ಇಲ್ಲಿ ಬಂದು ವಾಸಿಸಿ ನೋಡಿ..ನಿಮಗೆ ಇಷ್ಟವಾದರೆ, ಇನ್ನೂ ಕೆಲವು ದಿನಗಳವರೆಗೆ ಇರಬಹುದು..ಆಲೋಚಿಸಿ ಹೇಳಿ.." ಎಂದೆನು.
ಈ ಸಂಭಾಷಣೆ ಎರಡು ವರ್ಷಗಳ ಹಿಂದೆ ನಡೆದಿತ್ತು..ನನ್ನೊಂದಿಗೆ ಮಾತನಾಡಿದವರು ಶಾರದ ಅವರು..ಅವರ ಕುಟುಂಬದವರು ಎಲ್ಲರೂ ಅಮೆರಿಕದಲ್ಲಿ ನೆಲೆಸಿದ್ದಾರೆ..ಅವರ ಮಕ್ಕಳು ಕೂಡ ಅಲ್ಲಿಯೇ ಜನಿಸಿ ಬೆಳೆದಿದ್ದಾರೆ..ಶಾರದ ಅವರ ಪತಿ ನರಗಳ ದೌರ್ಬಲ್ಯದ ಸಮಸ್ಯೆಯಿಂದ ಚಕ್ರದ ಕುರ್ಚಿಗೆ ಮಾತ್ರ ಸೀಮಿತರಾಗಿದ್ದಾರೆ..ಇಬ್ಬರು ವ್ಯಕ್ತಿಗಳ ಸಹಾಯವಿಲ್ಲದೆ ಏಳಲು ಸಾಧ್ಯವಿಲ್ಲ. ಕೇರಳದಲ್ಲಿ ಆಯುರ್ವೇದ ಚಿಕಿತ್ಸೆಯಿಂದ ಫಲಿತಾಂಶ ಸಿಗಬಹುದು ಎಂದು ಕೇಳಿ ಅಲ್ಲಿಗೆ ಹೋಗುವುದಾಗಿ ನಿರ್ಧರಿಸಿದರು. ಆ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೊಗಲಿಚೆರ್ಲದ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಯು ಮತ್ತು ಅವರ ಭಕ್ತರ ಅನುಭವಗಳನ್ನು ಓದಿ, ಮೊಗಲಿಚೆರ್ಲದಲ್ಲಿ ಸ್ವಾಮಿಯ ಸಾನಿಧ್ಯದಲ್ಲಿ ಕೆಲವು ದಿನಗಳು ಇದ್ದರೆ ತಮ್ಮ ಪತಿಗೆ ಸಹಾಯವಾಗಬಹುದು ಎಂಬ ಭಾವನೆ ಶಾರದ ಅವರಿಗೆ ಬಂದಿತು..ಅವರು ನನ್ನನ್ನು ಸಂಪರ್ಕಿಸಿದರು..ಕಳೆದ ಕೆಲವು ದಶಕಗಳಿಂದ ಅಮೆರಿಕದಲ್ಲಿ ಇದ್ದರು..ಇಲ್ಲಿ ತಾವು ಹೊಂದಿಸಿಕೊಳ್ಳಬಲ್ಲರೆಂದು ನನಗೆ ಅನುಮಾನವಿತ್ತು..ಆದರೆ ಶಾರದ ಅವರಿಗೆ ಮಾತ್ರ ಒಂದು ಮಾತು.. "ಪ್ರಸಾದ್ ಅವರೇ, ಈ ಸ್ವಾಮಿಯ ಬಗ್ಗೆ ನೀವು ಬರೆದ ಚರಿತ್ರೆ, ಅವರ ಮಹಿಮೆಗಳನ್ನು ಓದಿದ್ದೇನೆ..ಕೆಲವು ದಿನಗಳವರೆಗೆ ಇಲ್ಲಿ ಇರುತ್ತೇವೆ..ನಮಗೆ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆ ನನಗಿದೆ..ನಾವು ಕೇರಳದಿಂದ ನೇರವಾಗಿ ಮೊಗಲಿಚೆರ್ಲಕ್ಕೆ ಬರುತ್ತಿದ್ದೇವೆ..ಇಲ್ಲಿ ಉಳಿಯುವುದರಲ್ಲಿ ಎರಡನೇ ಮಾತೇ ಇಲ್ಲ" ಎಂದು ಹೇಳಿದರು..ಅವರಿಗೆ ಅಷ್ಟು ನಂಬಿಕೆ ಇದ್ದಾಗ ನಾನು ವಿರೋಧಿಸಲು ಯಾರು?
ಯೋಚಿಸಿದಂತೆಯೇ ಶಾರದ ಅವರು ತಮ್ಮ ಪತಿಯೊಂದಿಗೆ ಮೊಗಲಿಚೆರ್ಲದ ಶ್ರೀ ಸ್ವಾಮಿಯ ಮಂದಿರಕ್ಕೆ ಬಂದು ಇಳಿದರು. ಅವರಿಗೆ ಒಂದು ಕೊಠಡಿಯನ್ನು ನೀಡಿದೆವು..ಆ ದಿನದ ಸಂಜೆ ಶಾರದ ಅವರು ತಮ್ಮ ಪತಿಯನ್ನು ಚಕ್ರದ ಕುರ್ಚಿಯಲ್ಲಿ ಕೂರಿಸಿ, ಸ್ವಾಮಿಯ ಮಂದಿರದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಮಾಡಿಸಿದರು..ಸ್ವಾಮಿಯ ಸಮಾಧಿಗೆ ದರ್ಶನ ನೀಡಿಕೊಂಡು, ನಮಸ್ಕಾರ ಮಾಡಿದರು. ತಮ್ಮ ಪತಿಯನ್ನು ಚಕ್ರದ ಕುರ್ಚಿಯಲ್ಲಿ ಕೂರಿಸಿ ಪ್ರದಕ್ಷಿಣೆ ಮಾಡಿಸಿದರು.. ನನ್ನ ಬಳಿಗೆ ಬಂದು "ಪ್ರಸಾದ್ ಅವರೇ, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾಗಿದೆ..ಆದರೆ ನಾವು ನಾಲ್ವತ್ತು ದಿನಗಳ ಕಾಲ ಇಲ್ಲಿಯೇ ಇರುತ್ತೇವೆ ಎಂದು ನಿರ್ಧರಿಸಿದ್ದೇವೆ..ನೀವೂ ಸಹಕರಿಸಬೇಕು.." ಎಂದರು.. "ನಿಮ್ಮ ಇಚ್ಛೆ ತಾಯಿ." ಎಂದೆನು..
ಒಂದು ವಾರ ಕಳೆದಿತು..ಶಾರದ ಅವರ ಪತಿ ಒಬ್ಬ ವ್ಯಕ್ತಿಯ ಸಹಾಯದಿಂದ ಏಳಲು ಯತ್ನಿಸಿದರು..ಚಕ್ರದ ಕುರ್ಚಿಗೆ ಸೀಮಿತವಾಗದೇ ನಿಧಾನವಾಗಿ ಹೆಜ್ಜೆ ಹಾಕಲು ಪ್ರಾರಂಭಿಸಿದರು..ಪ್ರತಿ ದಿನ ತಾವು ನಡೆಯುವ ಮುನ್ನದಲೂ ಬದಲಾವಣೆ ಕಾಣಿಸಿಕೊಂಡಿತು.. "ಪ್ರಸಾದ್ ಅವರೇ, ನನ್ನ ಪತಿಯಲ್ಲಿ ಬದಲಾವಣೆ ಕಾಣಿಸುತ್ತಿದೆ" ಎಂದು ಶಾರದ ಅವರು ಹೇಳುತ್ತಿದ್ದರು..ನಾಲ್ವತ್ತು ದಿನಗಳೆಲ್ಲಾ ಮುಗಿಯುತ್ತಿದ್ದಂತೆ, ಕೇವಲ ಆಸರೆಯೊಂದಿಗೆ, ಶಾರದ ಅವರ ಪತಿ ಸ್ವಲ್ಪ ದೂರದಲ್ಲಿ ಸ್ವತಂತ್ರವಾಗಿ ನಡೆಯಲು ಪ್ರಾರಂಭಿಸಿದರು..ನಾಲ್ವತ್ತೊಂಬತ್ತನೆಯ ದಿನ ಶಾರದ ಅವರು ನನ್ನ ಬಳಿಗೆ ಬಂದು "ಇಂದು ನಾವು ಹಿಂತಿರುಗುತ್ತೇವೆ ಅಯ್ಯಾ..ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಬದಲಾವಣೆ ನಮಗೆ ಬಂದಿದೆ..ಇದು ಸ್ವಾಮಿಯ ಕರುಣೆ ಎಂದು ನಂಬಿದ್ದೇವೆ..ನೀವು ಈ ನಾಲ್ವತ್ತು ದಿನಗಳಲ್ಲಿ ನಮಗೆ ಬಹಳ ಸಹಾಯ ಮಾಡಿದ್ದೀರಿ..ಎರಡು ಶನಿವಾರ ಮತ್ತು ಭಾನುವಾರಗಳಲ್ಲಿ ಇಲ್ಲಿಗೆ ಬರುವ ಭಕ್ತರಿಗೆ ಅನ್ನದಾನ ಮಾಡಲು ನಾನು ವೆಚ್ಚವನ್ನು ಮಾಡುತ್ತೇನೆ..ನೀವು ವಿರೋಧಿಸಬೇಡಿ..ಹಾಗೆಯೇ, ಇಲ್ಲಿರುವ ತ್ರಿಮೂರ್ತಿ ಸ್ವರೂಪ ದತ್ತಾತ್ರೇಯನ ದೇವಸ್ಥಾನವನ್ನು ಕಟ್ಟಬೇಕೆಂಬ ಆಶಯವಿದ್ದಂತೆ, ಅದಕ್ಕೆ ಅಗತ್ಯ ವೆಚ್ಚದಲ್ಲಿ ನಾನೂ ವಹಿಸಿಕೊಂಡು ಸಹಾಯ ಮಾಡುತ್ತೇನೆ..ಸ್ವಾಮಿಯು ನಮಗೆ ಬಹಳ ಕರುಣೆ ತೋರಿದ್ದಾರೆ" ಎಂದು ದುಖಿಸುತ್ತ ಹೇಳಿದರು.
ಶಾರದ ಅವರು ತಮ್ಮ ಪತಿಯೊಂದಿಗೆ ಅಮೆರಿಕಗೆ ಹಿಂತಿರುಗಿದರು..ಅವರು ಅಲ್ಲಿಗೆ ಹೋದ ಮೇಲೆ ಕೂಡಾ ದತ್ತದೀಕ್ಷೆ ಸಮಯದಲ್ಲಿ ಅನ್ನದಾನಕ್ಕೆ ಸಹಾಯ ಮಾಡುತ್ತಿದ್ದರು. "ಪ್ರಸಾದ್ ಅವರೇ, ಈ ಬಾರಿ ಇಲ್ಲಿ ಬಂದಾಗ ಸ್ವಾಮಿಯ ದರ್ಶನ ಮಾಡುತ್ತೇವೆ" ಎಂದು ಹೇಳುತ್ತಾರೆ.
ಸ್ವಾಮಿಯ ಇನ್ನೊಂದು ಲೀಲೆಯನ್ನು ಕಣ್ತುಂಬ ನೋಡಿ, ನಿಮ್ಮಂಥ ಪುಣ್ಯಾತ್ಮರಾದ ದತ್ತಭಕ್ತರೊಡನೆ ಆ ಲೀಲೆಯನ್ನು ಹಂಚಿಕೊಳ್ಳುವ ಅವಕಾಶವನ್ನೂ ಮೊಗಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಕೊಟ್ಟಿದ್ದಾರೆ.
ಸರ್ವಂ,
ಶ್ರೀ ದತ್ತಕೃಪ!
ರಚನೆ: ಶ್ರೀ ಪವನಿ ನಾಗೇಂದ್ರ ಪ್ರಸಾದ್
ಕನ್ನಡ ಅನುವಾದ ಸಹಕಾರ:ಶ್ರೀಮತಿ ಶ್ವೇತ ಡಿ.
-----
(ಮಂದಿರ ವಿವರಗಳಿಗಾಗಿ: ಪವನಿ ಶ್ರೀ ವಿಷ್ಣು ಕೌಶಿಕ್.. ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರ.. ಮೊಗಿಲಿಚೆರ್ಲ ಗ್ರಾಮ.. ಲಿಂಗಸಮುದ್ರ ಮಂಡಲ.. SPSR ನೆಲ್ಲೂರು ಜಿಲ್ಲೆ.. ಪಿನ್: 523114.. ಸೆಲ್: 9652429852)
