
Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
February 21, 2025 at 10:16 AM
ಭಾನುಮತಿ:-
ಮಹಾಭಾರತದಲ್ಲಿ ಬರುವ ಒಂದು ಪಾತ್ರ. ಎಲ್ಲರಿಗೂ ದುರ್ಯೋಧನನ ಪಾತ್ರ ಎದ್ದು ಕಾಣುತ್ತದೆ. ಆದರೆ ಈತನ ಪತ್ನಿ ಭಾನುಮತಿ ಕುರಿತು ಪ್ರಸ್ತಾಪಗಳು ಕಾಣಬರುವುದಿಲ್ಲ. ಬೆರಳೆಣಿಕೆಯ ಕೆಲವರಿಗೆ ಮಾತ್ರ ಇವಳ ಪಾತ್ರದ ಕುರಿತು ತಿಳಿದಿದೆ. ಅದರಲ್ಲಿ ಮೊದಲು 'ಸ್ತ್ರೀ' ಪರ್ವದಲ್ಲಿ , ಗಾಂಧಾರಿ ತನ್ನ ಸೊಸೆಯ ಭಾನುಮತಿಯ ಕುರಿತು, ಕೃಷ್ಣನಿಗೆ ಹೇಳು ತ್ತಾಳೆ, ಕೃಷ್ಣ ನನ್ನ ಮಗನಿಗಿಂತ, ಅವನಿಗಾಗಿ ಕಣ್ಣೀರು ಹಾಕು ತ್ತಿರುವ ಸೊಸೆಯ ಬಗ್ಗೆ ನನಗೆ ಹೆಚ್ಚು ನೋವಾಗುತ್ತಿದೆ. ನನ್ನ ಮಗ ಪ್ರಪಂಚದಲ್ಲಿಯೇ, ಅತಿಯಾಗಿ ಪ್ರೀತಿಸಿದ್ದು , ಅವನ ಸಿಂಹಾಸನ ಹಾಗೂಪತ್ನಿ ಭಾನುಮತಿ, ಮತ್ತು ಅವನ ಮಿತ್ರ ಕರ್ಣ, ಈ ಮೂರನ್ನು ಮಾತ್ರ ಅತಿ ಹೆಚ್ಚು ಇಷ್ಟಪಟ್ಟಿದ್ದನು. ಈಗ ನೀನು ಆ ಮೂರನ್ನು ಅವನಿಂದ ದೂರ ಮಾಡಿಸಿದೆ.
ನನ್ನ ಸೊಸೆ ಯಾವಾಗಲೂ ಗಂಡನ ತೋಳ್ತೆಕ್ಕೆಯಲ್ಲಿ ಇರಲು ಇಷ್ಟಪಡುತ್ತಿದ್ದಳು. ನನ್ನ ಮಗ ಮತ್ತು ಮೊಮ್ಮಗನನ್ನು ಕೊಂದಾಗ ನನ್ನ ಹೃದಯ ಒಡೆದು ಚೂರು- ಚೂರಾಗ ಬೇಕಿ ತ್ತು ಆದರೆ ಆಗಲಿಲ್ಲ. ನನ್ನ ಸೊಸೆಗೆ ಕರುಳು ಕಿತ್ತು ಹೋಗು ವಂಥ ಸಂಕಟ ಬಂದಿದೆ. ಒಂದು ಕಡೆ ಪತಿ ಇನ್ನೊಂದು ಕಡೆ ಮಗ. ಅವಳ ನೋವನ್ನು ನೋಡು ಕೃಷ್ಣ, ಕಮಲದಂತೆ ಸುಂದರವಾದ ಮುಖವುಳ್ಳ ನನ್ನ ಸೊಸೆ ಯಾವ ರೀತಿ ರೋದಿಸುತ್ತಿದ್ದಾಳೆ. ಈಗ ನಿನಗೆ ಸಮಾಧಾನವಾಯಿತೇ? ಎಂದು ಕೇಳುವ ಪ್ರಸಂಗ.
ಎರಡನೆಯದಾಗಿ, ದುರ್ಯೋಧನ ಮತ್ತು ಭಾನುಮತಿಯ ಮದುವೆ ಪ್ರಸ್ತಾಪ. ಕಳಿಂಗ ರಾಜ್ಯದ ರಾಜನಾದ ಚಿತ್ರಾಂಗ ದನ ಮಗಳ ಸ್ವಯಂವರದಲ್ಲಿ ದುರ್ಯೋಧನನಿಗೆ ಆಹ್ವಾನ ವಿದ್ದು ದುರ್ಯೋಧನ ಹಾಗೂ ಕರ್ಣ ಸ್ವಯಂವರಕ್ಕೆ ಬಂದಿ ರುತ್ತಾರೆ. ಹಾಗೆ ಸ್ವಯಂವರಕ್ಕೆ ಶಿಶುಪಾಲ,ಜರಾಸಂಧ, ಭೀಷ್ಮಕ, ರುಕ್ಮಿ, ಶೃಂಗಿ, ವಕ್ರ, ಮೊದಲಾದ ಪರಾಕ್ರಮಿಗಳು ಬಂದಿರುತ್ತಾರೆ. ಸ್ವಯಂವರ ಶುರುವಾದ ಕೂಡಲೇ ಸಾಲಂಕೃ ತವಾಗಿ ಅಲಂಕಾರಗೊಂಡ ರಾಜಕುಮಾರಿ ಹೂವಿನ ಹಾರ ದೊಂದಿಗೆ, ಸಭೆಯ ಮಧ್ಯೆ ನಡೆದು ಬರುತ್ತಾಳೆ. ಅವಳ ಎಡಬಲಗಳಲ್ಲಿ ಅನೇಕ ಸೈನಿಕರು, ಸಖಿಯರು ಇದ್ದು,ಎಲ್ಲಾ ರಾಜರುಗಳ ಹೆಸರುಗಳನ್ನು ಅವರ ಶೌರ್ಯ, ಪರಾಕ್ರಮ ಗಳನ್ನು ವಿವರಿಸುತ್ತಾ ಹೋಗುತ್ತಾರೆ. ಹಾಗೆ ಬರುತ್ತಿದ್ದಾಗ, ದುರ್ಯೋಧನನ ಹತ್ತಿರ ಬಂದಾಗ ಎಲ್ಲಾ ವಿವರ ಕೇಳಿ, ದುರ್ಯೋಧನನಿಂದ ಮುಂದೆ ಸಾಗುತ್ತಾಳೆ.
ಮೊದಲೇ ಅವಳ ಸೌಂದರ್ಯಕ್ಕೆ ಮನಸೋತು ಒಳಗೆ ಪ್ರೀತಿಸುತ್ತಿದ್ದ, ದುರ್ಯೋಧನಗೆ ಅವಳ ತಿರಸ್ಕಾರ ಹಿಡಿಸಲಿಲ್ಲ. ಕೂಡಲೇ ಮುಂದೆ ನುಗ್ಗಿ ಅವಳ ಕೈಹಿಡಿದು ಒಯ್ದು ರಥದಲ್ಲಿ ಕೂರಿಸಿ, ಯಾರಿಗಾದರೂ ದೈರ್ಯವಿದ್ದರೆ, ನನ್ನನ್ನು ನನ್ನ ಸ್ನೇಹಿತ ಕರ್ಣನನ್ನು ಜಯಿಸಿ, ಯುವರಾಣಿ ಭಾನುಮತಿಯನ್ನು ಕರೆದೊಯ್ಯಿರಿ ಎಂದನು. ಯಾವ ರಾಜ ರಿಗೂ ಕರ್ಣನನ್ನು ಎದುರಿಸಲು ಸಾಧ್ಯವಾಗದೆ ಹಿಂತಿರುಗಿ ದರು. ಅಲ್ಲಿಂದ ಭಾನುಮತಿ ಯೊಂದಿಗೆ ಹಸ್ತಿನಾಪುರಕ್ಕೆ ಬಂದಾಗ ಭೀಷ್ಮರು ಅವನನ್ನು ತಡೆದು ನಿಲ್ಲಿಸಿ, ಹೆಣ್ಣನ್ನು ಅಪಹರಿಸುವುದು ತಪ್ಪು ಅವಳಿಗೆ ಈ ಮದುವೆ ಇಷ್ಟವಿಲ್ಲ ಎಂದಾಗ, ದುರ್ಯೋಧನನು, ನಾನು ಮಾಡಿದ್ದು ತಪ್ಪು ಎನ್ನುವುದಾದರೆ ಅಂದು ನೀವು ನಿಮ್ಮ ಸಹೋದರ ವಿಚಿತ್ರ ವೀರ್ಯರ ಮದುವೆಯನ್ನು ಅಪಹರಿಸಿಕೊಂಡು ಬಂದ ಕುಮಾರಿಯರೊಂದಿಗೆ ಮಾಡಿಲ್ಲವೇ? ನಾನು ನಿಮ್ಮನ್ನು ನೋಡಿ ಬೆಳೆದವನು. ಈಗ ಅದನ್ನೇ ಮಾಡಿದ್ದೇನೆ ಎಂದನು.
ನಾನು ಇವಳನ್ನು ಮನಸಾರೆ ಪ್ರೀತಿಸುತ್ತೇನೆ. ನನ್ನ ಪ್ರಾಣ ಹೋದರೂ ಇವಳಿಗೆ ದ್ರೋಹ ಮಾಡುವುದಿಲ್ಲ. ನಾನು ಬದುಕಿರುವವರೆಗೂ ಇವಳಿಗೆ ಇದೇ ಮೊದಲ ಮತ್ತು ಕಡೆ ಯ ಕಣ್ಣೀರು ಎಂದು ಹೇಳುತ್ತಾನೆ. ಹೇಳಿದಂತೆ, ಭಾನುಮತಿ ಯನ್ನು ಅತ್ಯಂತ ಪ್ರೀತಿಯಿಂದ, ಗೌರವದಿಂದ, ಕಂಡ್ರೆಪ್ಪೆ ಯಂತೆ ನಡೆಸಿಕೊಳ್ಳುತ್ತಾನೆ. ಅವಳ ಮೇಲಿನ ಅತಿ ಮೋಹ ದಿಂದ ಅವನು ಎರಡನೇ ವಿವಾಹವನ್ನು ಮಾಡಿಕೊಳ್ಳಲಿಲ್ಲ ಹಾಗೆ ದುರ್ಯೋಧನ ಬದುಕಿರುವವರೆಗೂ, ಭಾನುಮತಿ ಅದೇ ಕೊನೆ ಬಾರಿ ಕಣ್ಣೀರು ಹಾಕಿದ್ದು. ಅಲ್ಲದೆ, "ನಾನು ಸತ್ತರೆ ನೀನು ' ಸಹಗಮನ' ಆಗುವಂತಿಲ್ಲ. ಇನ್ನೊಬ್ಬರನ್ನು ಮದುವೆ ಆಗು" ಎಂದು ದುರ್ಯೋಧನ ತಿಳಿಸಿದ್ದ. ಆದರೆ ಭಾನುಮತಿ ದುರ್ಯೋಧನನನ್ನು ನೆನೆಸಿಕೊಂಡು ಜೀವನವ ನ್ನು ಕಳೆದಳು.'ಭಾನುಮತಿ' ಕುರಿತು ಸ್ತ್ರೀ ಪರ್ವ,ಕೆಲ ಮಹಾ ಭಾರತ, ಕಥೆಗಳಲ್ಲಿ ಸಿಗುತ್ತದೆ.
ಇನ್ನೊಂದು ಇಂಥದೇ 'ಭಾನುಮತಿ' ಪ್ರಸಂಗವಿದೆ. ಇದು ಸಿನಿಮಾಗಳಲ್ಲಿ, ಹಾಗೂ ಇತ್ತೀಚಿನ ಮಹಾಭಾರತ ಪುಸ್ತಕ ಗಳಲ್ಲಿ, ಕಂಡುಬರುತ್ತದೆ. ಆ ಪ್ರಸಂಗ ಭಾನುಮತಿ ಮತ್ತು ಕರ್ಣ, ಇವರಿಬ್ಬರು ಒಟ್ಟಿಗೆ ಪಗಡೆ ಆಟ ಆಡುವ ವಿಷಯ.
ಒಂದು ದಿನ ದುರ್ಯೋಧನ, ಕೆಲಸದ ನಿಮಿತ್ತ, ಈ ದಿನ ತುಂಬಾ ಕೆಲಸವಿರುವ ಕಾರಣ ನಾನು ಬೆಳಿಗ್ಗೆಯೇ ಹೊರಗೆ ಹೊರಡಬೇಕಾಗಿದೆ ಬರುವುದು ತಡವಾಗುತ್ತದೆ ಆದ್ದರಿಂದ ದಿನ ಪೂರ್ತಿ ಬಾನುಮತಿಗೆ ಬೇಸರವಾಗದಂತೆ ನೀನು ನೋಡಿಕೊಳ್ಳಬೇಕು ಎಂದು ಗೆಳೆಯ ಕರ್ಣನಿಗೆ ಹೇಳಿ ಹೊರಗೆ ಹೊರಟನು. ಕರ್ಣ ದಿನವಿಡೀ ಭಾನುಮತಿ ಜೊತೆ ಹೇಗೆ ಕಳೆಯುವುದೆಂದು ಯೋಚಿಸಿ, ಪಗಡೆ ಆಡುವು ದೆಂದು ತೀರ್ಮಾನಿಸಿ, ಅವರಿಬ್ಬರೂ ಪಗಡೆ ಆಟ ಆಡಲು ಕುಳಿತರು.
ಆಟ ಚೆನ್ನಾಗಿ ಸಾಗುತ್ತಿತ್ತು. ಇಬ್ಬರು ಪಗಡೆಯಾಟದಲ್ಲಿ ತಲ್ಲೀನರಾಗಿದ್ದರು. ಕರ್ಣನು ಗೆಲ್ಲುವ ಹಂತಕ್ಕೆ ಬಂದಿದ್ದ, ಇನ್ನೇನು ಸ್ವಲ್ಪ ಆಡಿದರೆ ಮುಗಿದೇ ಬಿಡುತ್ತಿತ್ತು. ಆದರೆ ದುರ್ಯೋಧನ ಅಂದು ಹೇಳಿದ ಸಮಯಕ್ಕಿಂತ ಬೇಗನೆ ಹೊರಟಿದ್ದ. ಗಂಡ ಬರುತ್ತಿರುವುದನ್ನು ಗಮನಿಸಿದ ಭಾನು ಮತಿ, ಇದ್ದಕ್ಕಿದ್ದಂತೆ ಆಟದಿಂದ ಎದ್ದುನಿಂತಳು. ಕರ್ಣ ಬಾಗಿಲಿಗೆ ಬೆನ್ನು ಮಾಡಿ ಕುಳಿತಿದ್ದರಿಂದ ದುರ್ಯೋಧನ ಬರುತ್ತಿರುವುದು ಗೊತ್ತಾಗಲಿಲ್ಲ. ಹೀಗಾಗಿ ಅವನು ಭಾನು ಮತಿ ಎದ್ದು ನಿಂತಿದ್ದನ್ನು ಕಂಡು, ತಾನು ಸೋಲುತ್ತೇನೆ ಎಂದು ಹೆದರಿ ಎದ್ದುಬಿಟ್ಟಳು ಎಂದುಕೊಂಡು, ಅವಳು ಕುಳಿತುಕೊಳ್ಳುವಂತೆ ಅವಳು ಹೊದ್ದಿದ್ದ ವೇಲ್ ಹೊದಿಕೆ ಯನ್ನು ಎಳೆದುಬಿಟ್ಟ, ಕೂದಲಿನಿಂದ ಸೊಂಟದ ತನಕ ಅಲಂಕರಿಸಿಕೊಂಡಿದ್ದ ಭಾನುಮತಿಯ ಮುತ್ತಿನಹಾರಗಳು ತುಂಡಾಗಿ ಮುತ್ತೆಲ್ಲಾ ಕೆಳಗೆ ಬಿದ್ದು ಚೆಲ್ಲಾಪಿಲ್ಲಿಯಾಗಿ ಹರಡಿತು. ಇದರಿಂದಾಗಿ ಭಾನುಮತಿ ಅರೆನಗ್ನಳಾದಳು.
ದುರ್ಯೋಧನ ಎದುರಿಗೆ ನಿಂತಿದ್ದಾನೆ, ಕರ್ಣ ಮಾಡಿದ ಅಚಾತುರ್ಯದಿಂದ. ಭಾನುಮತಿ ಬೆದರಿದ ಹರಿಣಿ
ಯಂತಾದಳು. ಭಾನುಮತಿಯ ಹೆದರಿಕೆಯ ನೋಟ ಕಂಡು ಕರ್ಣನು ತಿರುಗಿ ನೋಡಿದನು. ದುರ್ಯೋಧನ ಬಾಗಿಲ ಹತ್ತಿರವೇ ನಿಂತಿದ್ದ. ಇದನ್ನು ನೋಡಿ ಕರ್ಣನಿಗೆ ತಾನು ಮಾಡಿದ್ದು ತಪ್ಪು ಎಂದು ಅರಿವಾಯಿತು. ದುರ್ಯೋಧನ ತಪ್ಪಿತಸ್ಥರಿಗೆ ಎಂಥ ಶಿಕ್ಷೆ ಕೊಡುತ್ತಾನೆ ಎಂದು ಅರಿವಿದ್ದ ಕರ್ಣ ತನ್ನ ತಪ್ಪಿಗೆ ಯಾವುದೇ ಶಿಕ್ಷೆ ಎದುರಿಸಲು , ಸಿದ್ಧ ನಾದಂತೆ ತಲೆತಗ್ಗಿಸಿ ನಿಂತನು. ದುರ್ಯೋಧನ ಜೋರಾಗಿ ನಗುತ್ತಾ, "ಬಾನು ಕೆಳಗೆ ಬಿದ್ದ ಮುತ್ತುಗಳನ್ನು ಆರಿಸಿ ಕೊಟ್ಟ ರೆ ಸಾಕೋ, ಅಥವಾ ಹಾರವನ್ನು ಪೊಣಿಸಿ ಕೊಡಬೇಕೋ ಎಂದು ಕೇಳಿದ. ಭಾನುಮತಿ ಮತ್ತು ಕರ್ಣನಿಗೆ ದುರ್ಯೋಧ ನನ ಕುರಿತು ತಪ್ಪು ಭಾವಿಸಿದ್ದಕ್ಕೆ ಇಬ್ಬರು ನಾಚಿಕೆಯಿಂದ ತಲೆ ತಲೆತಗ್ಗಿಸಿದರು.
ದುರ್ಯೋಧನನಿಗೆ, ಪತ್ನಿ ಹಾಗೂ ಸ್ನೇಹಿತನ ಮೇಲೆ ಅಷ್ಟೊಂದು ನಂಬಿಕೆ ,ಪ್ರೀತಿ, ವಿಶ್ವಾಸವಿತ್ತು. ಆದಾಗ್ಯೂ ಕರ್ಣ ದುರ್ಯೋಧನನಲ್ಲಿ ಕ್ಷಮೆಯಾಚಿಸಿದ. ಆಗ ಕರ್ಣನಿಗೆ "ನೀನು ನನ್ನ ಸಹೋದರನಿದ್ದಂತೆ, ನೀನು ನನಗೆ ದ್ರೋಹ ಮಾಡಲು ಹೇಗೆ ಸಾಧ್ಯ, ನಿನ್ನ ಮೇಲೆ ನನಗೆ ನಂಬಿಕೆ ಇಲ್ಲದಿದ್ದರೆ ನನ್ನ ಜೀವದ ಗೆಳತಿ ಭಾನುಮತಿಯ ಜೊತೆ ನಿನ್ನನ್ನು ಬಿಟ್ಟು ಹೋಗಲು ಸಾಧ್ಯವೇ? ನೀವಿಬ್ಬರೂ ನನ್ನ ಎರಡು ಕಣ್ಣುಗಳಿದ್ದಂತೆ. ಈ ಪ್ರಪಂಚದಲ್ಲಿ ನಿಮ್ಮಿಬ್ಬರ ನ್ನು ಬಿಟ್ಟು ಬೇರೆ ಯಾರನ್ನು ನಾನು ಪ್ರೀತಿಸಲಿ. ಹೀಗಿರು ವಾಗ ನಿಮ್ಮಿಬ್ಬರನ್ನು ನಾನು ನಂಬದಿರಲು ಹೇಗೆ ಸಾಧ್ಯ? ಎಂದು ಹೇಳಿ, ಕೆಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮುತ್ತುಗ ಳನ್ನು ಆರಿಸಿಕೊಡುತ್ತಾನೆ. ಈ ಕಥೆ ಹಳೆಯ ಮಹಾಭಾರತದ ಗ್ರಂಥಗಳಲ್ಲಿ ಇಲ್ಲದಿದ್ದರೂ, ದುರ್ಯೋಧನ ಮತ್ತು ಕರ್ಣರ ಸ್ನೇಹ ಹೀಗಿತ್ತೆಂದು ನಿರೂಪಿಸಲು ಹೆಣೆಯಲಾಗಿರಬಹುದು.
"ಓ ಗೆಳೆಯ ಜೀವದ್ಗೆಳೆಯ ನಿಂಗೆ ಶಾನೆ ಕ್ವಾಪ ಕಣೋ,
ಕ್ವಾಪಕೂ ಒಂದು ಕೈ ಪ್ರೀತಿ ಜಾಸ್ತಿ ಕಣೋ"
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.