
Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
February 26, 2025 at 05:45 AM
ಶಿವ ‘ರಾತ್ರಿ’ ಯ ಅಪರೂಪದ ಕಥೆ:-
ಶಿವರಾತ್ರಿ ಹಬ್ಬದ ಕುರಿತಾಗಿ ಹಲವು ಕಥೆಗಳಿವೆ. ಆದರೆ ಶಿವರಾತ್ರಿ ಯ ‘ರಾತ್ರಿ’ ಕುರಿತಾಗಿ ಅಪರೂಪದ ಕಥೆ. ಪ್ರತಿ ತಿಂಗಳು ಮಾಸ ಶಿವ ರಾತ್ರಿ ಬರುತ್ತದೆ. ಹಾಗೆ ಪ್ರತಿ ವರ್ಷ ಮಾಘ ಮಾಸದಲ್ಲಿ ಬರುವ ಮಾಸ ಶಿವ ‘ರಾತ್ರಿ’ ಯಾಮ ಪೂಜೆ ಜಾಗರಣೆ ಮಾಡಲು ಇದಕ್ಕೊಂದು ಹಿನ್ನೆಲೆ ಇದೆ
ಕೃತಯುಗದಲ್ಲಿ ಕಶ್ಯಪ ಮುನಿಗಳಿಗೆ ದಿತಿ- ಅದಿತಿ ಇಬ್ಬರು ಪತ್ನಿಯರು. ಇವರು ಗರ್ಭಿಣಿಯರಾಗಿ ಅದಿತಿ ದೇವಪುತ್ರರಿಗೆ, ದಿತಿಯು ರಾಕ್ಷಸರಿಗೆ ಜನ್ಮ ನೀಡಿದರು. ಆ ಸಮಯದಲ್ಲಿ ಹುಟ್ಟು- ಸಾವು ವಿಚಾರವಾಗಿ ಚರ್ಚೆ ಮಾಡುತ್ತಾ, ಏನು ಪರಿಹಾರ ಎಂದು ಚಿಂತೆ ಮಾಡುತ್ತಿದ್ದರು. ಈ ವಿಷಯ ಶ್ರೀಮನ್ನಾರಾಯಣನಿಗೆ ತಿಳಿಯಿತು. ಮಹಾವಿಷ್ಣು ಅದಿತಿಯ ದೇವಪುತ್ರರನ್ನು, ದಿತಿಯ ರಾಕ್ಷಸ ಪುತ್ರರನ್ನು ಕರೆಸಿದನು.
ಇದಕ್ಕೆ ಪರಿಹಾರವಾಗಿ ಹೇಳಿದನು. ಭೂಮಿಯಲ್ಲಿರುವ ಅತಿ ಎತ್ತರವಾದ ಮಂದರ ಪರ್ವತವನ್ನು ಕಿತ್ತು ಏಳು ಸಮುದ್ರಗಳಾಚೆ ಕೆಂಪು ಕಡಲಲ್ಲಿ ಮುಳುಗಿಸಿ ಕಡೆದರೆ
‘ಅಮೃತ’ ಸಿಗುತ್ತದೆ ಅಂತ ಅಮೃತ ಕುಡಿದರೆ ಹುಟ್ಟು ಸಾವುಗಳ ಸಮಸ್ಯೆಗಳಿಲ್ಲದೆ ನೆಮ್ಮದಿಯಿಂದ ಬಾಳಬಹುದು ಎಂದು ಸಲಹೆ ಕೊಟ್ಟನು. ಇದನ್ನು ಕೇಳಿ ಹರ್ಷ ಗೊಂಡ ದಿತಿಯ ದೇವ ಮಕ್ಕಳು, ಅದಿತಿಯ ರಾಕ್ಷಸ ಮಕ್ಕಳು, ಮಂದರ ಪರ್ವತವ ನ್ನು (ಕಡಗೋಲಿಗೆ) ಸಮುದ್ರದಲ್ಲಿ ಮುಳುಗಿಸಿ ದೈತ್ಯಾಕಾರದ ಸರ್ಪ ವಾಸುಕಿಯ ನ್ನು ಹಗ್ಗವನ್ನಾಗಿಸಿ ಹಾಲುಗಡಲನ್ನು ಕಡೆದರು.
ಹೀಗೆ ಕಡೆದಾಗ ಮೊದಲು ಬಂದಿದ್ದು ಹಾಲಾಹಲ ವಿಷ. ಈ ವಿಷ ಸೇವಿಸಿ ಬೇರೆ ಯಾರು ಸಾಯಬಾರದೆಂದು, ದಯಾಮಯನಾದ ಪರಮೇಶ್ವರನೇ ವಿಷವನ್ನು ಆಪೋಷನ ಮಾಡಿದನು. ಕುಡಿದ ವಿಷ ಗಂಟಲೊಳಗೆ ಇಳಿಯದಂತೆ ಪಾರ್ವತಿ ಶಿವನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಶಿವನ ಕುತ್ತಿಗೆಯಲ್ಲಿ ನಿಂತು ನೀಲಿಯಾ ಯಿತು. ಆದ್ದರಿಂದ ಶಿವನು ‘ನೀಲಕಂಠ’ ಆದನು. ನಂಜಿನಂತ ವಿಷ ಸೇವಿಸಿದ್ದರಿಂದ ‘ನಂಜುಂಡೇಶ್ವರ’ ನಾದನು. ಹಾಲಾಹಲವನ್ನ ‘ಶ್ರೀ’ ಎಂದು ಕರೆಯುತ್ತಾರೆ. ಆದ್ದರಿಂದ ‘ಶ್ರೀಕಂಠ’ ನಾದನು. ಆದರೆ ವಿಷವನ್ನು ಕುಡಿದ ಶಿವನ ಬಗ್ಗೆ ದೇವತೆಗಳು ಆತಂಕ ಗೊಂಡರು. ಪಾರ್ವತಿ ಗಂಟಲನ್ನು ಒತ್ತಿ ಹಿಡಿದಿದ್ದರೂ ಒಂದು ಹನಿ ವಿಷ ಶಿವನ ಹೊಟ್ಟೆ ಸೇರಿರ ಬಹುದು. ಇದರಿಂದ ಶಿವನ ಜೀವಕ್ಕೆ ಅಪಾಯವಿದೆ. ಆಗ
ದೇವತೆಗಳು ಅಮೃತ ಕುಡಿದಿರಲಿಲ್ಲ. ದೇವತೆಯ ಕಡೆಗೂ ಸಾವು ಇತ್ತು. ಈಗ ಶಿವನನ್ನು ಉಳಿಸಿಕೊಳ್ಳಬೇಕು ಎಂದರೆ ರಾತ್ರಿ ಹೊತ್ತು ವಿಷ ಏರದಂತೆ ಅವನ ನಿದ್ರೆ ತಡೆಯಬೇಕು ಎಂದು ದೇವತೆಗಳೆಲ್ಲರೂ ಸೇರಿ ಶಿವನು ನಿದ್ರೆ ಹೋಗದಂತೆ ಎಚ್ಚರ ವಾಗಿರಲೆಂದು ಶಿವನನ್ನು ಪ್ರಶಂಸೆ ಮಾಡುವ ಭಜನೆ, ಸಂಗೀತ, ತಾಳ, ಮೃದಂಗ, ನೃತ್ಯ, ಹರಿಕಥೆ ಪುರಾಣ ಕಥೆ, ಈ ಮೂಲಕ ಅಹೋ ರಾತ್ರಿ( ಇಡೀ ರಾತ್ರಿ) ದೇವತೆಗಳೆಲ್ಲ ಜಾಗರಣೆಮಾಡಿ ಶಿವ ನಿದ್ರಿಸ ದಂತೆ ನೋಡಿಕೊಂಡು ಶಿವನನ್ನು ಉಳಿಸಿಕೊಂಡರು.
ಈ ಕಾರಣದಿಂದ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾತ್ರಿ ಜಾಗರಣೆ ಮಾಡಿ, ಆ ಸಮಯದಲ್ಲಿ ಭಜನೆ ಸ್ತೋತ್ರ ಪಠಣ ಪುರಾಣ ಕಥೆ ಮಾಡುವುದು ರೂಡಿಗೆ ಬಂದಿತು. ಒಂದೊಂದು ಯಾಮಕ್ಕೂ ಶಿವನಿಗೆ ತಣ್ಣನೆ ಹಾಲು ನೀರಿನ ಅಭಿಷೇಕ, ಕಬ್ಬಿನ ಹಾಲು, ಎಳ ನೀರು, ರುದ್ರಾಭಿಷೇಕ ಮಾಡುತ್ತಾರೆ. ನಾನಾ ಥರದ ಪುಷ್ಪಗಳಿಂದ ಅರ್ಚನೆ ಮಾಡುತ್ತಾರೆ. ಪುರೋಹಿತರು ಹಾಗೂ ಬ್ರಾಹ್ಮಣರು ಸೇರಿ ಶ್ರೀ ಶುಕ್ತ, ಪುರುಷ ಸೂಕ್ತ , ರುದ್ರ, ಚಮಕ, ರುದ್ರ ತ್ರಿಶತಿ ಮಂತ್ರಗಳು ಎಲ್ಲೆಡೆಯೂ ಕೇಳುವಂತೆ ಘಂಟಾಘೋಷ ವಾಗಿ ಹೇಳುತ್ತಾರೆ. ಶಿವರಾತ್ರಿ ಜಾಗರಣೆ ಮಾಡಲು ಇದು ಒಂದು ಕಾರಣ ವಾಗಿದೆ. ಹಾಗೆ ವೈದ್ಯಕೀಯದಲ್ಲೂ ಹಾವು ಕಚ್ಚಿದ ವ್ಯಕ್ತಿ ನಿದ್ರೆ ಮಾಡದಂತೆ ನೋಡಿ ಕೊಳ್ಳಿ ಎಂದು ಹೇಳುತ್ತಾರೆ.
ಎಲ್ಲರಿಗೂ ‘ ಮಹಾ ಶಿವರಾತ್ರಿ’ ಹಬ್ಬದ ಹಾರ್ದಿಕ ಶುಭಾಶಯಗಳು.
ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ ಲಘು ಸ್ತೋತ್ರಂ |
ಸೌರಾಷ್ಟ್ರ ಸೋಮನಾಥಂ ಚ
ಶ್ರೀಶೈಲೇ ಮಲ್ಲಿಕಾರ್ಜುನಂ |
ಉಜ್ಜಯಿನ್ಯಾಂ ಮಹಾಕಾಲಂ
ಓಂಕಾರಂ ಅಮಲೇಶ್ವರಂ ||೧||
ಪರಲ್ಯಾಂ ವೈದ್ಯನಾಥಂ ಚ
ಡಾಕಿನ್ಯಾಂ ಭೀಮಶಂಕರಂ |
ಸೇತುಬಂಧೇ ತು ರಾಮೇಶಂ
ನಾಗೇಶಂ ದಾರುಕಾವನೇ ||೨||
ವಾರಣಸ್ಯಾಂ ತು ವಿಶ್ವೇಶಂ
ತ್ರ್ಯಂಬಕಂ ಗೌತಮೀತಟೇ |
ಹಿಮಾಲಯೇ ತು ಕೇದಾರಂ
ಘೃಷ್ಣೇಶಂ ಶಿವಾಲಯೇ ॥೩॥
ಏತಾನಿ ಜ್ಯೋತಿರ್ಲಿಂಗಾನಿ
ಸಾಯಂ ಪ್ರಾತಃ ಪಠೇನ್ನರಃ |
ಸಪ್ತಜನ್ಮಕೃತಂ ಪಾಪಂ
ಸ್ಮರಣೇನ ವಿನಶ್ಯತಿ ||೪||
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.
🙏
3