Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
March 1, 2025 at 12:59 AM
'ಸೀತಾಳ ದಂಡೆ” ಹೂವು :- ರಾಮಾಯಣಕ್ಕೂ ಈ ಹೂವಿಗೂ ನಂಟಿದೆ. ರಾಮ- ಸೀತೆ- ಲಕ್ಷ್ಮಣ ವನವಾಸಕ್ಕೆ ಹೋದಾಗ, ಕಾಡಿನ ಹೂಗಳಿದ್ದರೂ ಅವುಗಳನ್ನು ಬಿಡಿಸಿ ತಂದು ಕಟ್ಟಿ ಮುಡಿಯಲು ಅಲ್ಲಿ ಸಲಕರಣೆಗಳು ಇರಲಿಲ್ಲ. ಹೂವುಗಳನ್ನು ತಂದು ಸೀತೆಗೆ ಮುಡಿಸುವ ಆಸೆ ರಾಮನದು. ಹೀಗಾಗಿ ಈ ದಂಡೆಯಂತ ಹೂವನ್ನು ತರಲು ರಾಮ ಕಾಡಿನ ಸುತ್ತ ಓಡಾಡಿ ಹುಡುಕಿ ನಿತ್ಯವೂ ಹೂವು ತಂದು ಸೀತೆಗೆ ಮುಡಿಸುತ್ತಿದ್ದನು. ರಾಮ ಇಷ್ಟಪಟ್ಟು ಪ್ರೀತಿಯಿಂದ ಹೂವನ್ನು ತಂದು ಸೀತೆಗೆ ಮುಡಿಸಿ ದಾಗ ಅವಳ ಮುಖ ಸುಂದರವಾದ ಕಮಲದಂತೆ ಅರಳಿದ ಮುಖವನ್ನು ನೋಡಿ ರಾಮ ಸಂತೋಷ ಪಡುತ್ತಿದ್ದ. ಹೀಗಾಗಿ ಈ ಹೂವು ರಾಮಾ ಸೀತೆಗೆ ಬಹಳ ಪ್ರಿಯವಾದ ಹೂವು ಆದ್ದರಿಂದ 'ಸೀತಾಳದಂಡೆ' ಎಂಬ ಹೆಸರು ಬಂದಿತು. ಇದಕ್ಕೆ 'ದ್ರೌಪದಿ ಮಾಲೆ' ಎಂದೂ ಸಹ ಕರೆಯುತ್ತಾರೆ. ದ್ವಾಪರ ಯುಗದಲ್ಲಿ ಪಾಂಡವರು ವನವಾಸಕ್ಕೆ ಹೋದಾಗ ಭೀಮ ಸೀತಾಳದಂಡೆ ಹೂವನ್ನು ತಂದು ದ್ರೌಪದಿಗೆ ಮುಡಿ ಸುತ್ತಿದ್ದನಂತೆ. ದ್ರೌಪದಿಗೆ ಭೀಮನ ಬಲದ ಮೇಲೆ ಬಹಳ ವಿಶ್ವಾಸ. ದ್ರೌಪದಿ ತನಗೆ ಯಾವುದೇ ಕೆಲಸವಾಗಬೇಕಿದ್ದರೂ ಭೀಮನಿಗೆ ಮೊದಲು ಹೇಳುತ್ತಿದ್ದಳು.‘ಕೀಚಕ’ ಕೊಡುತ್ತಿದ್ದ ಕಿರುಕುಳ ಹಾಗೆ ಸಿಂಧು ನರೇಶ ಜಯದ್ರತ ಪೀಡಿಸಿದ್ದು ಮೊದಲು ಭೀಮನಿಗೆ ಹೇಳಿದ್ದಳಂತೆ. ಭೀಮ ದ್ರೌಪದಿಯ ಎಲ್ಲಾ ಅಪೇಕ್ಷೆಗಳನ್ನು ಪೂರೈಸುತ್ತಿದ್ದ. ಹೀಗಾಗಿ ದ್ರೌಪದಿಗೆ ಅರ್ಜುನ ಮತ್ತು ಭೀಮನ ಮೇಲೆ ಒಂದು ತೂಕ ಹೆಚ್ಚು ಪ್ರೀತಿ ಇತ್ತು. ಜೂನ್ ಜುಲೈ ತಿಂಗಳಿನಲ್ಲಿ ಮಲೆನಾಡಿನಲ್ಲಿ ಕಂಡುಬರುವ ಅತ್ಯಂತ ಸುಂದರವಾದ ಹೂವು 'ಸೀತಾಳದಂಡೆ' ಇದು ಬಳ್ಳಿಯಾಗಿದ್ದು ಮರಗಳಿಗೆ ಹಬ್ಬಿದ ಬಳ್ಳಿಗಳಲ್ಲಿ ಹೂವುಗಳು ಕಟ್ಟಿದ ದಂಡೆಯಂತೆ ಬಿಡುತ್ತದೆ.ಈ ಹೂ ಗಳನ್ನು ಬಿಡಿಸಿ, ಪೋಣಿಸಿ ಅಥವಾ ಕಟ್ಟಿ ದಂಡೆ ಮಾಡಬೇಕಿಲ್ಲ. ಕಿತ್ತ ಕೂಡ ಲೇ ಜಡೆಗೆ ಉದ್ದಕ್ಕೆ ಸಿಗಿಸಿ ಹೇರ್ ಪಿನ್ ಹಾಕಬಹುದು ಅಥವಾ ಕೂದಲು ಸುತ್ತಿ ತುರುಬಿನ ಸುತ್ತ ಸುತ್ತಿದರೆ ಬಹಳ ಚೆನ್ನಾಗಿ ಕಾಣುತ್ತದೆ. ಹಿಂದಿನ ಮಹಿಳೆಯರು ಮುಂಜಾನೆ ಮೈ ತೊಳೆದು ಮಡಿ ನೀರು ತರಲು ಬಾವಿಗೆ ಹೋದಾಗ ಬಾವಿಕಟ್ಟೆಯ ಅಕ್ಕ- ಪಕ್ಕ ಅಥವಾ ಎದುರಿಗೆ ಮರದಲ್ಲಿ ಈ ಹೂವು ಕಂಡರೆ, ಕಿತ್ತು ತುರುಬಿನ ಸುತ್ತ ಸುತ್ತಿಕೊಳ್ಳುತ್ತಿದ್ದ ರು. ತಿಳಿ ನೇರಳೆ, ಬಿಳಿ, ಗಾಡ ನೇರಳೆ ಬಣ್ಣ ಹೀಗೆ ಎರಡು ಮೂರು ಬಣ್ಣಗಳಲ್ಲಿ ಈ ಹೂವು ಬಿಡುತ್ತದೆ. ಇದು ಪರಾವಲಂಬಿ ಸಸ್ಯ ಹಲಸು- ಮಾವು ಅಥವಾ ರಂಜ ಯಾವುದೇ ಮರಗಳಿಗೆ ಬಳ್ಳಿಯಂತೆ ಸುತ್ತಿ ತಬ್ಬಿ ಕೊಂಡಿರು ತ್ತದೆ. ಗಿಡಗಳ ತುಂಬಾ ಮುತ್ತಿ ನಂತೆ ಪೋಣಿಸಿಟ್ಟ ಅರಳಿರು ವ ಹೂ ಮಾಲೆ ಕಣ್ಣು ಸೆಳೆಯುತ್ತದೆ. 'ಸೀತಾ' ಅಂದರೆ 'ಬಿಳಿ, - 'ಅಳಿ' ಎಂದರೆ 'ದುಂಬಿ'. ಬಿಳಿ ದುಂಬಿಗಳ ಸಾಲು ಜೋಡಿಸಿಟ್ಟಂತೆ ಕಾಣುವ ಕಾರಣ ಇದಕ್ಕೆ ಸೀತಾಳ ದಂಡೆ ಎಂಬ ಹೆಸರು. ಹೂಗಳ ಮೇಲೆ ಬಿಳಿ ಮತ್ತು ತಿಳಿ ನೇರಳೆ ಬಣ್ಣದ ಚುಕ್ಕಿಗಳಿದ್ದು ಹೂವಿನ ಅಂದ ಮತ್ತಷ್ಟು ಹೆಚ್ಚಿಸುತ್ತದೆ. ಸೀತಾಳ ದಂಡೆ ಬಳ್ಳಿ ಬೇಸಿಗೆ ಬಂದಾಗ ಮರದಲ್ಲೇ ಒಣಗಿದ್ದು ಮಳೆಗಾಲ ಬಂದಾಗ ಮತ್ತೆ ಚಿಗುರೊಡೆದು ಹೂ ದಂಡೆ ಗಳಿಂದ ತುಂಬುತ್ತದೆ. ಈ ಸಸಿ ಯಿಂದ ಮರಕ್ಕೆ ಯಾವುದೇ ಹಾನಿ ಇಲ್ಲ. ಹಾಗೆ ಮರದ ಯಾವುದೇ ಸಾರವನ್ನು ಇದು ಹೀರಿಕೊಳ್ಳುವುದಿಲ್ಲ ( ಬಂದಣಿಕೆ ಎಂಬ ಬಳ್ಳಿ ಮರದ ಸಾರವನ್ನೆಲ್ಲ ಹೀರಿಕೊಳ್ಳುತ್ತದೆ ಈ ಬಳ್ಳಿ ಜಾಸ್ತಿ ಬಿಲ್ವಪತ್ರೆ ಮರದಲ್ಲಿ ಬರುತ್ತದೆ) ಸೀತಾಳ ತಂದೆ ಬಳ್ಳಿಯ ಎಲೆಗಳು ಸಣ್ಣ ಪುಟ್ಟ ಬಿದ್ದ ಪೆಟ್ಟಿನ ಗಾಯ, ತರಚು ಹಾಗೂ ಸುಟ್ಟ ಗಾಯ, ಚರ್ಮ ವ್ಯಾದಿಗಳಿಗೆ ಇದರ ಸೊಪ್ಪಿನ ರಸವನ್ನು ಹಚ್ಚಿದರೆ ಗುಣಮುಖವಾಗುತ್ತದೆ.‌ ಇದರ ಹೂವು- ಎಲೆ - ಬಳ್ಳಿ ಎಲ್ಲವೂ ಹಲವಾರು ಬಗೆಯ ಮನೆ ಮದ್ದು ಹಾಗೂ ಆಯುರ್ವೇದ ಬಳಕೆಗೆ ಚೆನ್ನಾಗಿದೆ ಉಪಯುಕ್ತ ಸಸ್ಯವಾಗಿದೆ. ಅಯೋದ್ಯಾ ಪುರ ನೇತಾರಮ್ , ಮಿಥಿಲಾಪುರ ನಾಯಿಕಾಂ ರಾಘವಾನಾಂ ಅಲಂಕಾರಂ, ವೈದೇಹಾನಾಂ ಅಲಂಕ್ರಿಯಾಂ ! ರಘೋಣಾಮ್ ಕುಲ ದೀಪಂ ಚ, ನಿಮೀನಾಂ ಕುಲ ದೀಪಿಕಾಂ ಸೂರ್ಯವಂಶ ಸಮುಧ್ಭೂತಂ, ಸೋಮ ವಂಶ ಸಮುಧ್ಭವಾಂ !! ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ

Comments