
CHO Channel Karnataka✅️
February 25, 2025 at 06:15 AM
ಗೆ,
ಮಾನ್ಯ ಅಭಿಯಾನ ನಿರ್ದೇಶಕರು,
ರಾಷ್ಟ್ರೀಯ ಆರೋಗ್ಯ ಅಭಿಯಾನ,
ಆರೋಗ್ಯ ಸೌಧ ಮಾಗಡಿ ರಸ್ತೆ ಬೆಂಗಳೂರು.
ಮಾನ್ಯರೆ,
ವಿಷಯ :-ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಪರ್ಯಾಯವಾಗಿ ಶುಶ್ರೂಷಾಧಿಕಾರಿಗಳ ಕರ್ತವ್ಯಗಳಿಗೆ ನಿಯೋಜನೆ ಮಾಡುತ್ತಿರುವ ಕುರಿತು ಆಕ್ಷೇಪಣೆ ಪತ್ರ.
********
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಆಯುಷ್ಮಾನ್ - ಭಾರತ್ ಆರೋಗ್ಯ-ಕರ್ನಾಟಕ CPHC-UHC ಕಾರ್ಯಕ್ರಮದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ರಾಜ್ಯದ ಪ್ರತಿ ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಸೂಕ್ತ ಆರೋಗ್ಯ ಸೇವೆಯನ್ನು ಒದಗಿಸಲು ಉಪಕೇಂದ್ರಗಳನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನಾಗಿ ಮೇಲ್ದರ್ಜೇಗೇರಿಸಿ, ಸಮುದಾಯ ಆರೋಗ್ಯ ಅಧಿಕಾರಿಗಳನ್ನು (CHO) ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯನ್ವಯ ಸಮುದಾಯ ಮಟ್ಟದಲ್ಲಿ ಲಭ್ಯವಿದ್ದು ವಿಸ್ತ್ರತ 12 ಪ್ರಾಥಮಿಕ ಸಮಗ್ರ ಆರೋಗ್ಯ ಸೇವೆಗಳ ಪ್ಯಾಕೇಜ್ ಗಳ ಸೇವೆಯನ್ನು ನೀಡಲು ನೇಮಿಸಲಾಗಿರುತ್ತದೆ.
ಸಮುದಾಯ ಆರೋಗ್ಯ ಅಧಿಕಾರಿಗಳು ಆಯುಷ್ಮನ ಆರೋಗ್ಯ ಮಂದಿರಗಳಲ್ಲಿ ಈ ಮೂರು ಸ್ವರೂಪದ ಮೂಲ ಕರ್ತವ್ಯ ಆಗಿರುತ್ತದೆ.
1. Clinical functions to provide ambulatory
(out-patient) care and management.
2. Public health functions for health promotion,
prevention and disease surveillance.
3. Managerial functions for efficient functioning
of the Aayushman Arogya Mandir.
ಮುಂದುವರೆಯುತ್ತಾ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ Nursing Officers ಮುಷ್ಕರದಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಇವರುಗಳ ಸ್ಥಳದಲ್ಲಿ ಪರ್ಯಾಯವಾಗಿ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ನಿಯೋಜನೆ ಮಾಡಿ ಶುಶ್ರಾಷಣಾಧಿಕಾರಿಯವರ ಕರ್ತವ್ಯ ನಿರ್ವಹಿಸಿಕೊಂಡು ಹೋಗಲು ಮಾನ್ಯ DHO, THO ಹಾಗೂ AMO ರವರು ಆದೇಶವನ್ನು ಹೊರಡಿಸಿರುತ್ತಾರೆ,
1. ಇದರಿಂದ ಆಯುಷ್ಮನ ಆರೋಗ್ಯ ಮಂದಿರಗಳಲ್ಲಿ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ವ್ಯತ್ಯಾಯ ಆಗುವುದಿಲ್ಲವೇ?
2. ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರೋತ್ಸಾಹ ಧನ ಆಧಾರಿತ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಇದರ ಪರ್ಯಾಯ ವ್ಯವಸ್ಥೆ ಏನು?
3. ಸಮುದಾಯ ಆರೋಗ್ಯ ಅಧಿಕಾರಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವುದರಿಂದ ಸರ್ಕಾರಿ ನೌಕರರಿಗೆ ಸಿಗುವಂತ ಸೌಲಭ್ಯಗಳಾದ TA/ DA allowance ect.. ಗುತ್ತಿಗೆ ನೌಕರರಿಗು ಸಹ ಒದಗಿಸುತ್ತೀರಾ?
ಮುಂದುವರೆಯುತ್ತಾ, CPHC-UHC ಕಾರ್ಯಕ್ರಮದ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿಯಮಾನುಸಾರ ಸಮುದಾಯ ಆರೋಗ್ಯ ಅಧಿಕಾರಿಗಳು ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿದ್ದು ಸೇವೆಗಳನ್ನು ನೀಡಬೇಕಾಗಿರುತ್ತದೆ ಆದರೆ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಪರ್ಯಾಯವಾಗಿ ಶುಶ್ರೂಷಾಧಿಕಾರಿಗಳ ಕರ್ತವ್ಯಕ್ಕೆ ನಿಯೋಜನೆ ಮಾಡುವುದರಿಂದ ಆಯುಷ್ಮಾನ್ ಆರೋಗ್ಯ ಮಂದಿರದ ಕಾರ್ಯ ವ್ಯಾಪ್ತಿಯಲ್ಲಿದ್ದು ಪ್ರಾಥಮಿಕ ಸಮಗ್ರ 12 ಆರೋಗ್ಯ ಸೇವೆಗಳನ್ನು ಗ್ರಾಮೀಣ ಮಟ್ಟದ ಹಳ್ಳಿ ಜನರಿಗೆ ಸಮರ್ಪಕವಾಗಿ ಅರೋಗ್ಯ ಸೇವೆ ಒದಗಿಸಲು ಸಾಧ್ಯವಾಗದೇ ಸಿ.ಪಿ.ಹೆಚ್.ಸಿ-ಯು.ಹೆಚ್.ಸಿ. ಕಾರ್ಯಕ್ರಮದ ಪ್ರಗತಿ ಕುಂಠಿತಗೊಳ್ಳುವ ಸಾಧ್ಯತೆ ಇರುತ್ತದೆ ಹಾಗೂ ನಮಗೆ ನೀಡುವ ಪ್ರೋತ್ಸಾಹ ಧನ ನೀಡಲು ಇರುವ ಮಾಡದಂಡಗಳ ಸೂಚ್ಯಂಕಗಳು ತಲುಪಲು ಸಾಧ್ಯವಾಗದೇ ಇರಬಹುದು ಆದ್ದರಿಂದ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕರ್ತವ್ಯಗಳಿಗೆ ನೀಯೋಜನೆಯನ್ನು ಕೈ ಬಿಟ್ಟು, ಸಾರ್ವಜನಿಕರ ಸೇವೆ ನೀಡುವುದರಲ್ಲಿ ಯಾವುದೇ ಹಿನ್ನಡೆಯ ಆಗದ ಹಾಗೆ ನಮ್ಮ ಮೂಲ ಆಯುಷ್ಮನ್ ಆರೋಗ್ಯ ಮಂದಿರಗಳಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಹೋಗಲು ಅನುಕೂಲ ಮಾಡಿ ಕೊಡಬೇಕೆಂದು ಈ ಮೂಲಕ ಕೋರಲಾಗುತ್ತಿದೆ.
*ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಶುಶ್ರೂಷಾಧಿಕಾರಿಗಳಾಗಿ ಬಿಂಬಿಸುತ್ತಿರುವುದು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.*
*ಮಾನ್ಯರೆ ಮೇಲೆ ತೋರಿಸಲಾದ ವಿಷಯಗಳನ್ನು ಕೂಡಲೇ ಗಮನಹರಿಸಿ ಸಮುದಾಯ ಆರೋಗ್ಯ ಅಧಿಕಾರಿಗಳು ನಿಯೋಜನನ್ನು ತಡೆಹಿಡಿಯಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ.*
ವಂದನೆಗಳೊಂದಿಗೆ.
🙏
👍
10