ಶ್ರೀ ದತ್ತ ಪ್ರಸಾರ
ಶ್ರೀ ದತ್ತ ಪ್ರಸಾರ
May 11, 2025 at 02:21 AM
*ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರ ದಿವ್ಯ ಚರಿತ್ರೆ - ಮೂವತ್ತೆಂಟನೇ ದಿನ – ಪ್ರಾರಂಭವಾದ ಶ್ರೀ ದತ್ತಾತ್ರೇಯ ಸ್ವಾಮಿ ಅವರ ಆಶ್ರಮ ನಿರ್ಮಾಣ* ಪಾಠಕರಿಗೆ ನಮಸ್ಕಾರ, ಹಿಂದಿನ ಭಾಗದಲ್ಲಿ ನಾವು ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರು ತಮ್ಮ ಮುಂದಿನ ಸಾಧನೆಗಾಗಿ ನಿಶ್ಚಯಿಸಿದ ಫಕೀರಮಾನ್ಯದಲ್ಲಿ ಬಾವಿ ತೋಡಲು ಸಂಭವಿಸಿದ ಅಡಚಣಗಳನ್ನು ಶ್ರೀಧರರಾವ್ ದಂಪತಿಗಳು ಹೇಗೆ ಪರಿಹರಿಸಿದರು ಎಂದು ಓದಿದ್ದೇವೆ. ಈ ಭಾಗಕ್ಕೆ ಬಂದರೆ, ಫಕೀರಮಾನ್ಯದಲ್ಲಿ ಬಾವಿಯಲ್ಲಿ ನೀರು ಬಂದಾಗಲೆ ಅತೀ ಆನಂದಗೊಂಡ ಶ್ರೀಧರರಾವ್ ದಂಪತಿಗಳು ಆ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದರು. ಮೊದಲನೆಯದಾಗಿ ಮರುದಿನ ಬೆಳಿಗ್ಗೆ ಮಾಲಕೊಂಡಾದಲ್ಲಿ ಶ್ರೀ ಸ್ವಾಮಿ ಅವರಿಗೆ ಆ ಘಟನೆಗಳನ್ನೆಲ್ಲಾ ತುಂಬಾ ಉದ್ವೇಗದಿಂದ ವಿವರಿಸಿದರು. ಅದನ್ನು ಕೇಳಿದ ನಿರ್ವಿಕಾರ ಶ್ರೀ ಸ್ವಾಮಿ ಅವರು ಪ್ರಸನ್ನ ಮುಖದಿಂದ ಆ ದಂಪತಿಗಳನ್ನು ಆಶೀರ್ವದಿಸಿದರು. ಅಲ್ಲದೇ, ಗೋಟ್ಟಿಗುಂಡದಲ್ಲಿನ ಆಶ್ರಮದ ಕರ್ತರಾದ ಮೀರಾಶೆಟ್ಟಿ ಅವರಿಗೆ ಒಂದು ವ್ಯಕ್ತಿಯ ಮೂಲಕ ಈ ಸುದ್ದಿಯನ್ನು ಕಳುಹಿಸಿದರು. ಅದನ್ನು ಕೇಳಿದ ಮೀರಾಶೆಟ್ಟಿ ಅವರು ಬಹಳ ಸಂತೋಷಪಟ್ಟು, ತಮ್ಮ ಕರ್ತವ್ಯವಾದ ಆಶ್ರಮ ನಿರ್ಮಾಣದ ಕೆಲಸಗಳ ಮೇಲೆ ಸಂಪೂರ್ಣ ಗಮನವನ್ನೇ ಹರಿಸಿದರು. ಆ ಭಾಗವಾಗಿ ಮೀರಾಶೆಟ್ಟಿ ತಮ್ಮ ಸಹಧರ್ಮಚಾರಿಣಿ ವೆಂಕಟರತ್ನಮ್ಮನೊಂದಿಗೆ ಶ್ರೀಧರರಾವ್ ದಂಪತಿಗಳ ಮನೆಗೆ ಭೇಟಿ ನೀಡಿ, ಪುನಾ ದಿಯಾ ಕಾರ್ಯಕ್ರಮಕ್ಕಾಗಿ ಬೇಕಾದ ವ್ಯವಸ್ಥೆಗಳ ಬಗ್ಗೆ ಚರ್ಚಿಸಿದರು. ಶ್ರೀ ಸ್ವಾಮಿಯವರು ಸೂಚಿಸಿದ ದಿನದಲ್ಲಿ, ಶ್ರೀಧರರಾವ್ ದಂಪತಿಗಳು, ಚೆಕ್ಕಕೇಶವ ಅವರು ದಂಪತಿಗಳು, ಮೀರಾಶೆಟ್ಟಿ ದಂಪತಿಗಳು ಹಾಗೂ ಅವರ ಆಪ್ತ ಬಂಧುಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಪುನಾದಿ ಕೆಲಸಗಳನ್ನು ಪ್ರಾರಂಭಿಸಿದರು. ಅಂದಿನವರೆಗೂ ಶಾಪಗ್ರಸ್ತವಾಗಿ ಬಂಡೆಯಂತಿದ್ದ ಅಹಲ್ಯೆಯಂತೆ, ಈಗ ಮಣ್ಣಿನಿಂದ ತುಂಬಿದ ಆ ಸ್ಥಳವು, ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಯ ಪಾದಸ್ಪರ್ಶದಿಂದ ಕೆಲವು ದಿನಗಳಲ್ಲಿ ಹೊಳೆಯಲು, ಜೀವವನ್ನು ಪಡೆದು ಸಜ್ಜಾಗತೊಡಗಿತು. ಮೀರಾಶೆಟ್ಟಿ ದಂಪತಿಗಳು ತಾವು ಸ್ವತಹ ಆಶ್ರಮ ನಿರ್ಮಾಣ ಕಾರ್ಯಗಳನ್ನು ನೇರವಾಗಿ ನೋಡುತ್ತೇನೆ ಎಂದು ಎಲ್ಲರಿಗೂ ಭರವಸೆ ನೀಡಿದರು. ಭರವಸೆ ನೀಡುವುದು ಮಾತ್ರವಲ್ಲ, ವಾರದಲ್ಲಿ ಎರಡು ಬಾರಿ 50 ವರ್ಷಗಳ ವಯಸ್ಸು ಮೀರಿದ ಆ ದಂಪತಿಗಳು ತಾವು ವಾಸಿಸುವ ಗೋಟ್ಟಿಗುಂಡದಿಂದ ಸುಮಾರು 15 ಕಿ.ಮೀ. ದೂರವನ್ನು ಕಾಲಿನಡಿಗೆಯಲ್ಲಿ ತಲುಪಿಕೊಂಡು ಆಶ್ರಮ ನಿರ್ಮಾಣವನ್ನು ನೇರವಾಗಿ ಪರಿಶೀಲಿಸುತ್ತಿದ್ದರು. ಶ್ರೀ ಮೀರಾಶೆಟ್ಟಿ ದಂಪತಿಗಳಿಗೆ ಸಂತಾನವಾಗಿಲ್ಲ, ಅವರು ಶ್ರೀ ಸ್ವಾಮಿಯನ್ನು ಮೊದಲಿಗೆ ಭೇಟಿಯಾದಾಗಲೆ ಅವರಿಗೆ ಸಂತಾನಯೋಗವಿಲ್ಲ ಎಂದು ಶ್ರೀ ಸ್ವಾಮಿಯವರು ಹೇಳಿದ್ದರು. ಆದರೂ, ಆ ದಂಪತಿಗಳಿಗೆ ಶ್ರೀ ಸ್ವಾಮಿಯವರ ಬಗ್ಗೆ ಭಕ್ತಿ ಸ್ವಲ್ಪಮಾತ್ರವೂ ಕಡಿಮೆಯಾಗಿರಲಿಲ್ಲ. ಆಶ್ರಮ ನಿರ್ಮಾಣದ ಕೆಲಸಗಳು ವೇಗ ಪಡೆದುಕೊಂಡವು, ಶ್ರೀಧರರಾವ್ ದಂಪತಿಗಳು ಆಶ್ರಮ ನಿರ್ಮಾಣದ ಪ್ರಗತಿಯನ್ನು ಆಗಾಗ್ಗೆ ಶ್ರೀ ಸ್ವಾಮಿಯವರಿಗೆ ತಿಳಿಸುತ್ತಿದ್ದರು. ಶ್ರೀ ಸ್ವಾಮಿಯವರು ನಿಶ್ಚಯಿಸಿದ ಕ್ಷೇತ್ರದಲ್ಲಿ ನೆಲ ಸಮತಟ್ಟಾಗಿದ್ದು, ಕಂಬಗಳನ್ನು ಕಟ್ಟಲು ಪುನಾದಿ ತೋಡಲು ಪ್ರಾರಂಭಿಸಿದರು. ಇಲ್ಲಿ ಒಂದು ಬಾರಿ ನಿಂತು, ನಾವು ಪರಿಚಯಿಸಿದವರು ಯಾರು ಎಂಬುದನ್ನು ತಿಳಿಸೋಣ. ಅವರು, ಶ್ರೀಧರರಾವ್ ದಂಪತಿಗಳು ಮತ್ತು ಅವರ ಚಿಕ್ಕಮಗ ಪುಣ್ಯ ನಾಗೇಂದ್ರ ಪ್ರಸಾದ್, ಚೆಕ್ಕಕೇಶವಲು ದಂಪತಿಗಳು, ಮೀರಾಶೆಟ್ಟಿ ದಂಪತಿಗಳು ಮತ್ತು ಪದ್ಮಯ್ಯನಾಯ್ಡು. ಇವರು ಅಷ್ಟದಿಕ್ಪಾಲಕರಂತೆ ಶ್ರೀ ಸ್ವಾಮಿಯವರ ಸುತ್ತಾ ಸೇರಿ, ಶ್ರೀ ಸ್ವಾಮಿಯವರ ಸಾಧನೆಯ ಸ್ಥಿತಿ ಮತ್ತು ಲಯಕ್ಕೆ ತಮ್ಮ ಪಾಲಿನ ಸಹಕಾರವನ್ನು ನೀಡಿದ ಮಹನೀಯರು. ಈ ಸಮಯದಲ್ಲಿ ಎಲ್ಲರನ್ನೂ ಮತ್ತೆ ಸ್ಮರಿಸಿದ್ದೇನೆ ಎಂದರೆ, ನಾವು ಶ್ರೀ ಸ್ವಾಮಿಯವರ ಜೀವನದಲ್ಲಿ ಮತ್ತೊಂದು ಅಧ್ಯಾಯಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಆ ಅಧ್ಯಾಯದಲ್ಲಿ ಶ್ರೀ ಸ್ವಾಮಿಯವರ ಸಾಧನೆ ಎಲ್ಲರ ನಡುವೆ ಸಾಗುತ್ತಿತ್ತು. ಆ ಅಧ್ಯಾಯವನ್ನು ಮುಂದಿನ ಭಾಗದಲ್ಲಿ ಪ್ರಾರಂಭಿಸೋಣ. ಇಷ್ಟು ಮಂದಿ ನಿಸ್ವಾರ್ಥ ಸೇವೆಯಿಂದ ತನ್ನ ಸಾಧನೆಗೆ ಕಾರಣನಾದ ಶ್ರೀ ಸ್ವಾಮಿಯವರ ಮಂದಿರವನ್ನು ನೀವು ನೇರವಾಗಿ ಭೇಟಿಯಾಗಿ ಭಕ್ತಿಯಿಂದ ನೋಡಬೇಕು ಎಂದು ನನ್ನ ವಿನಂತಿ. ಸರ್ವಂ, ಶ್ರೀ ದತ್ತ ಕೃಪ, ಪವನಿ ಶ್ರೀ ವಿಷ್ಣು ಕೌಶಿಕ್, ರಚನೆಗೆ ಸಹಕಾರ ನೀಡಿದವರು: ಶ್ರೀ ಪವನಿ ನಾಗೇಂದ್ರ ಪ್ರಸಾದ್ ಮತ್ತು ಶ್ರೀ ಪವನಿ ನಿರ್ಮಲ ಪ್ರಭಾವತಿ, ಕನ್ನಡ ಅನುವಾದ ಸಹಕಾರ:ಶ್ರೀಮತಿ ಶ್ವೇತ ಡಿ. ----- (ಮಂದಿರ ವಿವರಗಳಿಗಾಗಿ: ಪವನಿ ಶ್ರೀ ವಿಷ್ಣು ಕೌಶಿಕ್..ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರ.. ಮೊಗಿಲಿಚೆರ್ಲ ಗ್ರಾಮ.. ಲಿಂಗಸಮುದ್ರ ಮಂಡಲ.. SPSR ನೆಲ್ಲೂರು ಜಿಲ್ಲೆ.. ಪಿನ್: 523114.. ಸೆಲ್: 9182882632)
Image from ಶ್ರೀ ದತ್ತ ಪ್ರಸಾರ: *ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರ ದಿವ್ಯ ಚರಿತ್ರೆ - ಮೂವತ್ತೆಂ...

Comments