
ಶ್ರೀ ದತ್ತ ಪ್ರಸಾರ
May 13, 2025 at 01:10 AM
*ಬೃಂದಾವನಾರ್ಚನೆ ಸೇವೆ ಆಹ್ವಾನ*
ಓಂ ಶ್ರೀ ಗುರುಭ್ಯೋ ನಮಃ
ನಮ್ಮ ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಗಳ ಕ್ಷೇತ್ರದ ಶಕ್ತಿಕೇಂದ್ರವಾದ ಬೃಂದಾವನವನ್ನು ನಿಮ್ಮ ಸ್ವಹಸ್ತಗಳಿಂದ ಅಭಿಷೇಕ ಮಾಡುವ ಅದ್ಭುತ ಅವಕಾಶ ಇದು. ಇದನ್ನು ಸದುಪಯೋಗಪಡಿಸಿಕೊಳ್ಳಿ ಮತ್ತು ಧನ್ಯರಾಗಿರಿ.
ಗಮನಿಕೆ:
* ಈ ಸೇವೆಯಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕವಿಲ್ಲ, ಇದು ಸಂಪೂರ್ಣ ಉಚಿತ ಸೇವೆ.
* ಶ್ರೀ ಸ್ವಾಮಿಗಳು ನೈಷ್ಟಿಕ ಬ್ರಹ್ಮಚಾರಿ ಆಗಿರುವುದರಿಂದ ಬೃಂದಾವನ ಅಭಿಷೇಕವನ್ನು ಕೇವಲ ಪುರುಷರಿಗೆ ಮಾತ್ರ ಅನುಮತಿ.
* ಮಹಿಳೆಯರಿಗೆ ಮಂದಿರದ ನಿತ್ಯ ಪೂಜಾಕೈಂಕರ್ಯಗಳಲ್ಲಿ ಬಳಸುವ ವಸ್ತುಗಳನ್ನು ಶುದ್ಧೀಕರಿಸುವ ಅವಕಾಶವನ್ನು ನೀಡಲಾಗುತ್ತದೆ.
ಸರ್ವಂ,
ಶ್ರೀ ದತ್ತ ಕೃಪೆ
ಧನ್ಯೋಸ್ಮಿ
-----
