ಶ್ರೀ ದತ್ತ ಪ್ರಸಾರ
ಶ್ರೀ ದತ್ತ ಪ್ರಸಾರ
May 14, 2025 at 01:50 AM
*ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರ ದಿವ್ಯ ಚರಿತ್ರೆ - ಮೂವತ್ತೊಂಬತ್ತು ದಿನ – ಮಾಲಕೊಂಡ ದಿಂದ ಕೆಳಗಿಳಿದ ತಪೊ ಶಿಖರ* ಓದುಗರಿಗೆ ನಮಸ್ಕಾರ, ಹಿಂದಿನ ಭಾಗದಲ್ಲಿ ನಾವು ನಮ್ಮ ಮೊಗಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರು ತಮ್ಮ ಮುಂದಿನ ಸಾಧನೆಯಿಗಾಗಿ ಆಯ್ದ ಸ್ಥಳದಲ್ಲಿ ಆಶ್ರಮ ನಿರ್ಮಾಣದಲ್ಲಿ ನಡೆದ ಪ್ರಗತಿಯನ್ನು, ನಂತರ ಶ್ರೀ ಸ್ವಾಮಿ ಅವರ ಸಾಧನೆಯನ್ನು ನಿಸ್ವಾರ್ಥವಾಗಿ ಸಹಾಯ ಮಾಡಿದ ವಿಶೇಷ ಜನರ ಬಗ್ಗೆ ಮಾತನಾಡಿದ್ದೇವೆ. ಈಗ ಈ ಭಾಗಕ್ಕೆ ಬಂದರೆ, ಆಶ್ರಮ ನಿರ್ಮಾಣಕ್ಕಾಗಿ ಭೂಮಿ ಸಮತಲಗೊಂಡು ಪುನಾದಿಗೆ ಪ್ರಾರಂಭವಾದಾಗ, ಶ್ರೀಧರರಾವ್ ದಂಪತಿಗಳನ್ನು ಒಮ್ಮೆ ಮಾಲಕೊಂಡದ ಮೇಲೆ ಇರುವ ಪಾರ್ವತೀ ದೇವಿ ಮಠಕ್ಕೆ ಬರುವಂತೆ ಶ್ರೀ ಸ್ವಾಮಿ ಅವರು ಒಬ್ಬ ವ್ಯಕ್ತಿ ಮೂಲಕ ಸಂದೇಶ ಕಳುಹಿಸಿದರು. ಆ ಸಂದೇಶ ತಲುಪಿದ ಕೂಡಲೇ ಶ್ರೀಧರರಾವ್ ದಂಪತಿಗಳು ತಕ್ಷಣ ಮನೆಯಲ್ಲಿ ಇದ್ದ ಶ್ರೀಧರರಾವ್ ಅವರ ತಾಯಿಗೆ ಮತ್ತು ರಜೆಯ ಮೇಲೆ ಬಂದಿದ್ದ ತಮ್ಮ ಎರಡನೇ ಮಗ ನಾಗೇಂದ್ರ ಪ್ರಸಾದ್ ಅವರಿಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿ,ಮಾಲಕೊಂಡದ ಮೇಲೆ ತಲುಪಿದರು. ಅವರು ಪಾರ್ವತೀ ದೇವಿ ಮಠ ತಲುಪಿದಾಗ ಶ್ರೀ ಸ್ವಾಮಿ ಅವರು ನಗು ಮುಖದೊಂದಿಗೆ ಪದ್ಮಸನದಲ್ಲಿ ಕುಳಿತು ಈ ದಂಪತಿಗಳನ್ನು ಎದುರು ನೋಡುತ್ತಿದ್ದರು. ನಂತರ ಶ್ರೀಧರರಾವ್ ದಂಪತಿಗಳನ್ನು ವಿಶ್ರಾಂತಿ ಪಡೆಯಲು ಹೇಳಿ, "ಆಶ್ರಮ ನಿರ್ಮಾಣದ ಕೆಲಸ ಎಷ್ಟು ದೂರ ಬಂದಿವೆ" ಎಂದು ಕೇಳಿದರು. ಅದು ಕೇಳಿದ ಶ್ರೀಧರರಾವ್ ದಂಪತಿಗಳು, ಆಶ್ರಮ ನಿರ್ಮಾಣದ ಪ್ರಗತಿಯನ್ನು ಸಂಪೂರ್ಣವಾಗಿ ಶ್ರೀ ಸ್ವಾಮಿ ಅವರಿಗೆ ವಿವರಿಸಿದರು. ಆ ವಿವರವನ್ನು ಕೇಳಿದ ನಂತರ ಶ್ರೀ ಸ್ವಾಮಿ ಅವರು ಎದ್ದು ನಿಂತು ಆ ಜಗನ್ಮಾತೆಗೆ ಒಮ್ಮೆ ನಮಸ್ಕರಿಸಿ, ಈ ದಂಪತಿಗಳನ್ನು ಉದ್ದೇಶಿಸಿ "ಆಶ್ರಮ ನಿರ್ಮಾಣವು ಮುನ್ನಡೆುತ್ತಿದೆ ಎಂಬ ಮಾತು, ಸರಿಯಾಗಿದೆ. ಈಗ ನಾನು ನಿಮ್ಮ ಜೊತೆಗೆ ನಿಮ್ಮ ಮನೆಗೆ ಬಂದು, ಆಶ್ರಮ ನಿರ್ಮಾಣವನ್ನು ಸ್ವತಃ ಮಾಡುತ್ತೇನೆ" ಎಂದು ಅವರ ಸರಂಜಾಮವನ್ನು ತೆಗೆದುಕೊಂಡು, ಹಿಂದೆ ಒಂದು ಅಂಗವಸ್ತ್ರವನ್ನು ಹೊತ್ತು ಮುಂದಾದರು. ಅಷ್ಟೇ, ಆ ಮಾತುಗಳನ್ನು ಕೇಳಿದ ಶ್ರೀಧರರಾವ್ ದಂಪತಿಗಳು ತಕ್ಷಣವೇ ಭಯಪಟ್ಟರು. ಇನ್ನೂ ಆಶ್ರಮ ನಿರ್ಮಾಣವನ್ನು ಪೂರ್ಣಗೊಳ್ಳಲು ಸುಮಾರು 5 ತಿಂಗಳು ಬೇಕು, ಅಷ್ಟು ಸಮಯ ಈ ಮಹಾಯೋಗಿಯನ್ನು ಸಹಿಸುವ ಶಕ್ತಿ ನಮಗಿಲ್ಲ ಎಂದು ಆತಂಕ ಪಟ್ಟರು. ಅದೇ ಮಾತು ಶ್ರೀ ಸ್ವಾಮಿ ಅವರಿಗೆ ಹೇಳಿ, ಬೇಕಾದರೆ ಮಾಲಕೊಂಡದಲ್ಲಿಯೇ ಶ್ರೀ ಸ್ವಾಮಿ ಅವರಿಗೆ ವಾಸಸ್ಥಳವನ್ನು ಒದಗಿಸುತ್ತೇವೆ ಎಂದು ಶತವಿಧಾ ಮನವೊಲಿಸಲು ಪ್ರಯತ್ನಿಸಿದರು. ಅದಕ್ಕೆ ಪ್ರತಿಯಾಗಿ ಶ್ರೀ ಸ್ವಾಮಿ ಅವರು "ನೋಡಿ, ನಿಮ್ಮ ಎಲ್ಲಾ ಆಲೋಚನೆಗಳು ಈ ಜಗತ್ತಿಗೆ ಸಂಬಂಧಿಸಿದವು, ಆದರೆ ನನಗೆ ಬಂದದ್ದು ದೈವ ನಿರ್ಧಾರ, ನಿಮಗೆ ಅದು ಅರ್ಥವಾಗದು, ಬಾಲೋನ್ಮತ್ತ ಮಹಾಮುನಿಹಿ ಎಂದು ನೀವು ಕೇಳಿ ಇರುವಿರಿ, ಹಾಗೆಯೇ ಮಹಾಮುನಿಗಳ ನಿರ್ಧಾರಗಳನ್ನು ನೀವು ಹಿಡುದುಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿ ಕೆಳಗಿಳಿದರು. ಇನ್ನು ಮಾಡಲು ಏನೂ ಇಲ್ಲದೇ ಆ ಲಕ್ಷ್ಮೀ ನಾರಸಿಂಹನಿಗೆ "ತಂದೆ, ಈಗಿನ ಹೊಣೆ ನಿಂದೇ" ಎಂದುಕೊಂಡು, ಶ್ರೀ ಸ್ವಾಮಿ ಅವರ ಹಿಂದೆ ಕೆಳಗಿಳಿದರು. ಇನ್ನು ಶ್ರೀ ಸ್ವಾಮಿ ಅವರು ಕೆಳಗಿಳಿದ ಮೆಟ್ಟಿಲು ಮಾರ್ಗದಲ್ಲಿ ಕೊನೆಯ ಮೆಟ್ಟಿಲು ಹಾದು, ತಮ್ಮ ಪೂಜ್ಯ ಪಾದಗಳಿಂದ ನೆಲವನ್ನು ಸ್ಪರ್ಶಿಸಿದರು. ಅಷ್ಟೇ, ಮೋಕ್ಷ ಪ್ರಾಪ್ತಿಗಾಗಿ ಅಂದೇ ವಿದ್ಯಾಭ್ಯಾಸ ಮುಗಿಸಿ ತನ್ನ ಸಾಧನೆಯಲ್ಲಿ ಕೌಮಾರ ದಶೆಯಲ್ಲಿ ಈ ಮಾಲಕೊಂಡದ ಮೇಲೆ ಬಂದ ಒಂದು ಸಾಮಾನ್ಯ ಯುವಕನು, ಆ ಲಕ್ಷ್ಮೀನಾರಸಿಂಹನಾತಿಥ್ಯದಲ್ಲಿ, ಶಿವಪಾರ್ವತಿಗಳ ಆಲಂಬನದಿಂದ ಒಂದು ತಪೋ ಶಿಖರವಾಗಿ ಬೆಳಿದು ಆ ಬೆಟ್ದದ ಮೇಲೆನಿಂದ ಕೆಳಗಿಳಿದರು. ಮಾಲಕೊಂಡದ ಮೇಲೆ ಪ್ರಕೃತಿ ಎಷ್ಟು ಅವಾಂತರಗಳನ್ನು ಸೃಷ್ಟಿಸಿದರೂ, ಕ್ರೂರಮೃಗಗಳು ಎಷ್ಟು ಭಯಪಡಿಸಲು ಪ್ರಯತ್ನಿಸಿದರೂ ಸ್ವಲ್ಪವೂ ಅಲ್ಲಾಡದೆ, ನಂಬಿದ ಪರಮಾತ್ಮನ ಸಹಾಯ ದಿಂದ ಇದ್ದರೂ, ಆ ಪರಮಾತ್ಮನಲ್ಲಿ ಲೀನವಾಗುವ ಆಕಾಂಕ್ಷೆಯಿಂದ ತನ್ನ ಸಾಧನೆಯನ್ನು ನಿರ್ವಿರಾಮವಾಗಿ ಮುಂದುವರೆದ ನಮ್ಮ ಮೊಗಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರು ಆ ಮಾಲ್ಯಾದ್ರಿಯ ಮೇಲೆನಿಂದ ಕೆಳಗಿಳಿದರು. ಹಲವಾರು ಯೋಗಿಪುಂಗವಗಳಿಗೆ ವಾಸಸ್ಥಳ ನೀಡಿ, ಹಲವಾರು ಜನರನ್ನು ಮಹನೀಯರಾಗಿ ಮಾಡಿಸಿದ್ದ ಆ ಮಾಲಕೊಂಡ ನಮ್ಮ ಶ್ರೀ ಸ್ವಾಮಿ ಅವರಿಗ ಧ್ಯಾನ ಮಾಡಲು ಎಲ್ಲಾ ರೀತಿಯ ಅವಾಂತರ ಬಾರದಂತೆ, ವಾಸಸ್ಥಳ ಕೊಟ್ಟಿತು. ಅಲ್ಲದೆ, ಶ್ರೀ ಸ್ವಾಮಿ ಅವರಿಗೆ ಯಾವುದೂ ಅಡ್ಡಿ ಬಾರದಂತೆ, ಬೇಕಾದ ಸಮಯಕ್ಕೆ ಎಲ್ಲ ವ್ಯವಸ್ಥೆಗಳನ್ನು ಒದಗಿಸಿ ಒಂದು ಸಂಗಾತಿಯಂತೆ ಹತ್ತಿರದಲ್ಲಿಯೇ ಇದ್ದು ನೋಡಿಕೊಂಡಿತು. ಏನೋ, ನಮ್ಮ ಮೊಗಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರು ಹೀಗೆ ಕೆಳಗಿಳಿಯುತ್ತಿದ್ದಾರೆ, ಇಷ್ಟು ಕಾಲ ಪುಟ್ಟ ಮಗುವಿನಂತೆ ರಾತ್ರಿ ಹಗಲು ಎಂದುಕೊಂಡು ಆ ಪರಮಾತ್ಮನನ್ನು ಪ್ರತಿದಿನ ಸ್ಮರಿಸುತ್ತಿದ್ದ ತಮ್ಮ ಬಳಿ ಇದ್ದ ಶ್ರೀ ಸ್ವಾಮಿ ಅವರು ಮತ್ತೆ ಈ ಕ್ಷೇತ್ರದ ಮೇಲೆ ಪಾದಾರ್ಪಣೆ ಮಾಡುವುದಿಲ್ಲ ಎಂದು ತಿಳಿದು ಜಗನ್ಮಾತ, ಲಕ್ಷ್ಮೀ ದೇವಿ ವಿದಾಯ ಹೇಳುತ್ತಾ ದುಃಖಿಸುತ್ತಿದ್ದಾಗ ಇಬ್ಬರು ಸ್ವಾಮಿಯವರು ಇಬ್ಬರು "ದುಃಖಿಸಬೇಡಿ, ನಮ್ಮಗೆ ಇನ್ನೂ ಹತ್ತಿರವಾಗುವಂತೆ ಅವನು ದೂರ ಹೋಗುತ್ತಿದ್ದಾನೆ, ಇನ್ನು ಕೆಲವು ಸಮಯವನ್ನು ತಾಳಿದರೆ ಈಗ ನಮ್ಮ ಜೊತೆಯಲ್ಲಿಯೇ ಇರುತ್ತಾನೆ" ಎಂದು ಮನವೊಲಿಸುತ್ತಿದ್ದರು ಎಂದುಕೊಳ್ಳುವುದು ಅತಿಶಯೋಕ್ತಿಯಲ್ಲ. ಹಾಗಾಗಿ ಆ ದೇವದೇವನನ್ನು ಇಷ್ಟು ಸಂತೋಷಪಡಿಸಿದ ಶ್ರೀ ಸ್ವಾಮಿ ಅವರ ಮಂದಿರವನ್ನು ನೀವು ಎಲ್ಲರೂ ಪ್ರತ್ಯಕ್ಷವಾಗಿ ದರ್ಶಿಸಿ ಸಂತೋಷಪಡಿ ಎಂಬದು ನನ್ನ ವಿನಂತಿ. ಸರ್ವಂ, ಶ್ರೀ ದತ್ತ ಕೃಪ, ಪವನಿ ಶ್ರೀ ವಿಷ್ಣು ಕೌಶಿಕ್, ರಚನೆಗೆ ಸಹಕಾರ ನೀಡಿದವರು: ಶ್ರೀ ಪವನಿ ನಾಗೇಂದ್ರ ಪ್ರಸಾದ್ ಮತ್ತು ಶ್ರೀ ಪವನಿ ನಿರ್ಮಲ ಪ್ರಭಾವತಿ, ಕನ್ನಡ ಅನುವಾದ ಸಹಕಾರ:ಶ್ರೀಮತಿ ಶ್ವೇತ ಡಿ. ----- (ಮಂದಿರ ವಿವರಗಳಿಗಾಗಿ: ಪವನಿ ಶ್ರೀ ವಿಷ್ಣು ಕೌಶಿಕ್..ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರ.. ಮೊಗಿಲಿಚೆರ್ಲ ಗ್ರಾಮ.. ಲಿಂಗಸಮುದ್ರ ಮಂಡಲ.. SPSR ನೆಲ್ಲೂರು ಜಿಲ್ಲೆ.. ಪಿನ್: 523114.. ಸೆಲ್: 9182882632)
Image from ಶ್ರೀ ದತ್ತ ಪ್ರಸಾರ: *ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರ ದಿವ್ಯ ಚರಿತ್ರೆ - ಮೂವತ್ತೊಂ...

Comments