
ಶ್ರೀ ದತ್ತ ಪ್ರಸಾರ
May 15, 2025 at 02:03 AM
**ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರ ದಿವ್ಯ ಚರಿತ್ರೆ - ನಲವತ್ತನೇ ದಿನ – ಮಹಾವೃಕ್ಷದ ಕೆಳಗೆ ತಿರುಮಂತ್ರ ಉಪದೇಶ**
ಓದುಗರೆ ನಮಸ್ಕಾರ, ಹಿಂದಿನ ಭಾಗದಲ್ಲಿ ನಾವು ನಮ್ಮ ಮೊಗಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರು ಆ ಪರಮಾತ್ಮ ಆಜ್ಞೆಯಂತೆ ಅವರ ಆಶ್ರಮ ನಿರ್ಮಾಣವನ್ನು ಅವರು ಸ್ವತಃ ನೋಡಿಕೊಳ್ಳಲು ಮಾಲಕೊಂಡದಿಂದ ಶ್ರೀಧರರಾವ್ ದಂಪತಿಗಳ ಜೊತೆ ಇಷ್ಟು ದಿನಗಳು ಸಾಧನೆ ಮಾಡಿದ ಆ ಮಾಲ್ಯಾದ್ರಿಯ ಮೇಲೆನಿಂದ ಕೆಳಗಿಳಿಯುವುದರ ತನಕ ಮಾತನಾಡಿದ್ದೇವೆ. ಈಗ ಈ ಭಾಗಕ್ಕೆ ಬಂದರೆ, ಶ್ರೀ ಸ್ವಾಮಿ ಮತ್ತು ಶ್ರೀಧರರಾವ್ ದಂಪತಿಗಳು ಮೆಟ್ಟಿಲುಗಳನ್ನು ಇಳಿದಾಗ, ಶ್ರೀ ಸ್ವಾಮಿ ಅವರು ಆ ಮಾರ್ಗದಲ್ಲಿ ಇದ್ದ ಒಂದು ಮರದ ಕೆಳಗೆ ನಿಂತು ಪ್ರಭಾವತಿ ಅವರೊಂದಿಗೆ, "ಅಮ್ಮಾ! ನಿನಗೆ ವೈಷ್ಣವ ಮಂತ್ರವನ್ನು ಉಪದೇಶಿಸಲು ಇದು ಸರಿಯಾದ ಸಮಯ, ನೀವು ಇಬ್ಬರೂ ನಾನು ಈಗ ಹೇಳಲಿರುವ ಮಂತ್ರವನ್ನು ನನ್ನ ಬೆಂಬಲಿಸಿರಿ. ಇನ್ನು ಈ ಮಂತ್ರದ ಸಕಲ ಅಂಗ ಉಪಾಂಗಗಳಲ್ಲಿ ಇರುವ ಅರ್ಥವನ್ನು, ಜಪ ವಿಧಾನವನ್ನು ಮತ್ತೊಂದು ಬಾರಿ ನಿನಗೆ ವಿವರಿಸುತ್ತೇನೆ" ಎಂದು ಹೇಳಿ ಆ ಮಹಾವೃಕ್ಷದ ಕೆಳಗೆ ಕೂತು ಸುಮಾರು 5 ನಿಮಿಷಗಳಲ್ಲಿ ಸಮಾಧಿ ನಿಷ್ಠೆಗೆ ಹೋಗಿ. ಹೀಗೆ ಹೋಗಿ ಮತ್ತೊಂದು 5 ನಿಮಿಷಗಳಲ್ಲಿ ಶ್ರೀ ಸ್ವಾಮಿ ಅವರು ತಿರುಮಂತ್ರವನ್ನು ಉಪದೇಶಿಸಲು ಆರಂಭಿಸಿದರು. ನಿಜವಾಗಿಯೂ ಆ ದಂಪತಿಗಳು ಎಷ್ಟು ಅದೃಷ್ಟವಂತರು, ಶ್ರೀ ಸ್ವಾಮಿ ಅವರ ಮಧುರ ಸ್ವರ, ಮತ್ತು ಆ ಸ್ವರದೊಂದಿಗೆ ಶಾಸ್ತ್ರದಲ್ಲಿ ತಿಳಿಸಿದಂತೆ ಛಂದೋಬದ್ಧವಾಗಿ ತಿರುಮಂತ್ರವನ್ನು ಸಾಕ್ಷಾತ್ ಗುರು ಸ್ವರೂಪವೇ ಗುರುಸ್ಥಾನದಲ್ಲಿ ಇದ್ದು ಉಪದೇಶಿಸುತ್ತಿದ್ದಾಗ ಆ ದಂಪತಿಗಳು ಪುನಃ ಹೇಳುತ್ತಿದ್ದರು ಎಂಬುದು ಎಷ್ಟು ಮಹತ್ಭಾಗ್ಯವದು.
ಹೀಗೆ ಶ್ರೀ ಸ್ವಾಮಿ ಅವರು ಎಷ್ಟು ಸಲ ಆ ಮಂತ್ರವನ್ನು ಹೇಳುತ್ತಿದ್ದರು, ಆ ದಂಪತಿಗಳು ಕೂಡ ಮೈ ಮರೆತು ಅಷ್ಟು ಸಲ ತಮ್ಮ ಸುತ್ತಲಿರುವ ಜಗತ್ತನ್ನು, ನಿರ್ವಿರಾಮವಾಗಿ ಸಾಗುತ್ತಿದ್ದ ಕಾಲವನ್ನು ಸಹ ಮರೆತು ಹೇಳತೊಡಗಿದರು. ಆ ತನ್ಮಯತೆಯಲ್ಲಿ ತೇಲುತ್ತಿರುವ ಆ ದಂಪತಿಗಳನ್ನು ಅವರ ಎತ್ತು ಬಂಡಿ ಹೊಡೆಯುವ ಮನುಷ್ಯ ಕರೆದು ಪುನಃ ಅವರನ್ನು ಸಾಮಾನ್ಯ ಜಗತ್ತಿಗೆ ತಂದನು. ಬಂಡಿ ಹೊಡೆಯುವ ಮನುಷ್ಯ "ಅಯ್ಯಾ! ಸಂಜೆ ಆಗುತ್ತಿದೆ, ಬೆಳಕು ಕಡಿಮೆ ಆಗುವ ಮುಂಚೆ ನಾವು ಊರಿಗೆ ತಲುಪಬೇಕು, ಇತ್ತೀಚೆಗೆ ಚಿರತೆ ಕೂಡಾ ತಿರುಗುತ್ತಿದೆ ಅಂತಾರೆ" ಎಂದು ಹೇಳಿದನು. ಆ ಮಾತು ಕೇಳಿದ ಶ್ರೀ ಸ್ವಾಮಿ ಅವರು "ಹೌದು, ಈಗಲೇ ಹೊರಡೋಣ" ಎಂದು ಮುಂದಕ್ಕೆ ಸಾಗಿದರು. ನಂತರ ಶ್ರೀಧರರಾವ್ ದಂಪತಿಗಳು ಮತ್ತು ಶ್ರೀ ಸ್ವಾಮಿ ಅವರು ಎಲ್ಲರೂ ಎತ್ತು ಬಂಡಿಯಲ್ಲಿ ಪ್ರಯಾಣಿಸಿ ಮೊಗಿಲಿಚೆರ್ಲದಲ್ಲಿರುವ ಶ್ರೀಧರರಾವ್ ಅವರ ಮನೆಗೆ ತಲುಪಿದಾಗ ಸಂಜೆ ಆಗಿತ್ತು. ಶ್ರೀಧರರಾವ್ ದಂಪತಿಗಳು ಶ್ರೀ ಸ್ವಾಮಿ ಅವರಿಗಾಗಿ, ಅವರ ಮನೆಯಿಂದ 10 ಅಡಿ ದೂರದಲ್ಲಿ ಅವರ ಕಂಪೌಂಡ್ ಒಳಗೇ ಇರುವ ಹೊಸ ಮನೆಯಲ್ಲಿ ಶ್ರೀ ಸ್ವಾಮಿ ಅವರು ವಾಸಿಸಲು ಒಂದು ಹಾಸಿಗೆ ಮತ್ತು ಚಾಪೆಯನ್ನು ಹಾಸಿದರು. ನಂತರ ಆ ದಿನಕ್ಕೆ ಎಲ್ಲರೂ ವಿಶ್ರಮಿಸಿದರು.
ಸಮಯ ಬೆಳಗಿನ ಜಾವ 3.30 ಗಂಟೆ, ಅಷ್ಟರಲ್ಲಿ ಎಲ್ಲರಿಗೂ ಒಂದು ಮಧುರ ಸ್ವರದಲ್ಲಿ ಭಜನೆ ಹಾಡು ಕೇಳಿಸಿತು. ಕುತೂಹಲದಿಂದ ಎಲ್ಲರೂ ನೋಡಿದಾಗ ಶ್ರೀ ಸ್ವಾಮಿ ಅವರು, ತುಂಬಾ ಉತ್ಸಾಹದಿಂದ, ಅವರ ಆಜಾನುಬಾಹು ರೂಪದಲ್ಲಿ ದಿಗಂಬರವಾಗಿ ಸುಮಾರು ಎಕರೆ ವಿಸ್ತೀರ್ಣ ಹೊಂದಿದ ಶ್ರೀಧರರಾವ್ ಅವರ ಮನೆಯಲ್ಲಿ ಹಾಯಾಗಿ ತಿರುಗಾಡುತ್ತಿದ್ದರು. ಶ್ರೀ ಸ್ವಾಮಿ ಅವರು ಎಲ್ಲರಿಗೂ ತಮ್ಮ ಕಣ್ಣುಗಳಿಂದ ಮಾತನಾಡುತ್ತಾ, ಹಾಡು ಹಾಡುತ್ತಾ ಶ್ರೀಧರರಾವ್ ಅವರ ಮನೆಯ ಆವರಣದಲ್ಲಿ ತಿರುಗಾಡತೊಡಗಿದರು. ನೋಡುತ್ತಿದ್ದ ಶ್ರೀಧರರಾವ್ ದಂಪತಿಗಳಿಗೆ, ಅವರ ಮಗ ನಾಗೇಂದ್ರ ಪ್ರಸಾದ್ ಅವರಿಗೂ ಮತ್ತು ಶ್ರೀಧರರಾವ್ ಅವರ ತಾಯಿಯಾದ ಸತ್ಯನಾರಾಯಣಮ್ಮ ಅವರಿಗೂ ಆ ಹೊಗೆಯ ಮುಸುಕು ಹಚ್ಚಿದ ಪ್ರಕೃತಿ, ಅದರಲ್ಲಿ ಇಚ್ಛೆಗಳೊಂದಿಗೆ ಸ್ತುತಿಸುತ್ತಿದ್ದ ಭಕ್ತನಿಗೆ ಸಾಕ್ಷಾತ್ಕಾರವನ್ನು ಹೊಂದಿದಂತೆ, ಸಾಕ್ಷಾತ್ಕಾರವನ್ನು ಹೊಂದದ ಪರಮಾತ್ಮನಂತೆ ಶ್ರೀ ಸ್ವಾಮಿ ಅವರು ಕೆಲವು ಕ್ಷಣಗಳು ಕಾಣಿಸಿಕೊಂಡು ಪುನಃ ಕಾಣಿಸದೆ ಹೋಗಿ, ಶ್ರೀಕೃಷ್ಣನ ವೇಣುಗಾನದಂತಹ ಮೋಹಕ ಸ್ವರ ಕೇಳಿಸುತ್ತಿದ್ದ ಆ ಕ್ಷಣವು ಅವರ ಮನಸ್ಸಿನಲ್ಲಿ ಅಳಿಯದ ಒಂದು ಸುಂದರ ಮುದ್ರೆಯನ್ನು ಹಾಕಿತ್ತು.
ಮತ್ತೆ ಆಗಿರುವ ಘಟನೆಯನ್ನು ಮತ್ತೊಂದು ದೃಷ್ಟಿಕೋನದಲ್ಲಿ ತಿಳಿದುಕೊಳ್ಳೋಣ. ಇಷ್ಟು ಸುಂದರನಾದ ಶ್ರೀ ಸ್ವಾಮಿ ಅವರ ಮಂದಿರವನ್ನು ನೀವು ಎಲ್ಲರೂ ಪ್ರತ್ಯಕ್ಷವಾಗಿ ದರ್ಶಿಸಿ ಸಂತೋಷಪಡಿ ಎಂಬುದು ನನ್ನ ವಿನಂತಿ.
ಸರ್ವಂ,
ಶ್ರೀ ದತ್ತ ಕೃಪ,
ಪವನಿ ಶ್ರೀ ವಿಷ್ಣು ಕೌಶಿಕ್,
ರಚನೆಗೆ ಸಹಕಾರ ನೀಡಿದವರು: ಶ್ರೀ ಪವನಿ ನಾಗೇಂದ್ರ ಪ್ರಸಾದ್ ಮತ್ತು ಶ್ರೀ ಪವನಿ ನಿರ್ಮಲ ಪ್ರಭಾವತಿ,
ಕನ್ನಡ ಅನುವಾದ ಸಹಕಾರ:ಶ್ರೀಮತಿ ಶ್ವೇತ ಡಿ.
-----
(ಮಂದಿರ ವಿವರಗಳಿಗಾಗಿ: ಪವನಿ ಶ್ರೀ ವಿಷ್ಣು ಕೌಶಿಕ್..ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರ.. ಮೊಗಿಲಿಚೆರ್ಲ ಗ್ರಾಮ.. ಲಿಂಗಸಮುದ್ರ ಮಂಡಲ.. SPSR ನೆಲ್ಲೂರು ಜಿಲ್ಲೆ.. ಪಿನ್: 523114.. ಸೆಲ್: 9182882632)
