ಶ್ರೀ ದತ್ತ ಪ್ರಸಾರ
ಶ್ರೀ ದತ್ತ ಪ್ರಸಾರ
May 17, 2025 at 01:54 AM
*ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರ ದಿವ್ಯ ಚರಿತ್ರೆ - ನಲವತ್ತೆರಡನೇ ದಿನ – ಶ್ರೀ ರಾಮನಾಮವು* ಓದುಗರೇ ನಮಸ್ಕಾರ, ಹೋದ ಭಾಗದಲ್ಲಿ ನಾವು ನಮ್ಮ ಮೊಗಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರು ಆಶ್ರಮದ ನಿರ್ಮಾಣವನ್ನು ನೇರವಾಗಿ ಮೇಲ್ವಿಚಾರಣೆ ಮಾಡಲು ಶ್ರೀಧರರಾವ್ ದಂಪತಿಗಳ ಮನೆಗೆ ಬಂದದ್ದು. ಶ್ರೀ ಸ್ವಾಮಿ ಅವರು ಆ ಮೊಟ್ಟ ಮೊದಲ ದಿನಗಳಲ್ಲಿ ಮೊಗಲಿಚರ್ಲ ಗ್ರಾಮದ ಜನರು ಮತ್ತು ಶ್ರೀಧರರಾವ್ ದಂಪತಿಗಳ ಸಂಬಂಧಿಗಳು ಪ್ರತಿಕ್ರಿಯಿಸಿದ ರೀತಿಯ ಬಗ್ಗೆ ಓದಿದ್ದೇವೆ. ಶ್ರೀ ಸ್ವಾಮಿ ಅವರ ತಪಸ್ಸಿನ ತೀವ್ರತೆಗೆ ಪ್ರಕೃತಿ ಪ್ರತಿಕ್ರಿಯಿಸಿದ ಬಗ್ಗೆ ನೋಡಿದ್ದೇವೆ. ಈ ಭಾಗದಲ್ಲಿ, ಶ್ರೀ ಸ್ವಾಮಿ ಅವರನ್ನು ಕಂಡು ಹಾಸ್ಯಮಾಡಿದವರು, ಸ್ವಾಮಿ ಅವರ ತಪಸ್ಸಿನ ಶಕ್ತಿಯನ್ನು ಮತ್ತು ಅವರ ಮನಸ್ಸಿನ ಸ್ಥೈರ್ಯವನ್ನು ಅರಿತು, ಕೈಗಳನ್ನು ಜೋಡಿಸಿ ನಮಸ್ಕಾರ ಮಾಡಲು ಪ್ರಾರಂಭಿಸಿದರು. ಕೆಲವರು ಶ್ರೀ ಸ್ವಾಮಿ ಅವರನ್ನು ಶಿವಸ್ವರೂಪ ಎಂದು ಭಾವಿಸಿದರೆ, ಇತರರಿಗೆ ಅವರು ವೀರಬ್ರಹ್ಮೇಂದ್ರಸ್ವಾಮಿ ಅವರಂತೆ ಕಾಣಿಸಿದರು. ಇದು ಸತ್ಯವೇ, ದೈವರೂಪವನ್ನು ಯದ್ಭಾವಂ ತದ್ಭವತಿ. ಶ್ರೀ ಸ್ವಾಮಿ ಅವರು ಮೂರು ದಿನಗಳ ಕಠಿಣ ಸಾಧನೆಯ ನಂತರ, ಬೆಳಿಗ್ಗೆ ಲಕ್ಶ್ಮೀ ಸಹಸ್ರನಾಮವನ್ನು ಗುಟ್ಟಾಗಿ ಪಠಿಸುತ್ತಾ, ಶ್ರೀಧರರಾವ್ ಅವರ ಮನೆ ಆವರಣದಲ್ಲಿ ತಿರುಗುತ್ತಿದ್ದರು. ಆ ಮನೋಹರ ಗಾತ್ರದಿಂದ ಹೊರಬಂದ ಅದ್ಭುತ ಸಹಸ್ರನಾಮವನ್ನು ನೇರವಾಗಿ ಕೇಳಿದ ನಾಗೇಂದ್ರ ಪ್ರಸಾದ್ ಅವರು, ಇಂದಿಗೂ ಅದನ್ನು ಸಂತೋಷದಿಂದ ವಿವರಿಸುತ್ತಾರೆ. ಶ್ರೀ ಸ್ವಾಮಿ ಅವರನ್ನು ನೋಡಲು ಮೊಗಲಿಚೆರ್ಲ ಗ್ರಾಮಸ್ಥರಲ್ಲಿ 20 ಮಂದಿ ಶ್ರೀಧರರಾವ್ ಅವರ ಮನೆ ಆವರಣದಲ್ಲಿ ಕೂತಿದ್ದರು. ಆ ಸಮಯದಲ್ಲಿ ನಿರ್ಮಲ ಪ್ರಭಾವತಿ ಅವರು, ಶ್ರೀ ಸ್ವಾಮಿ ಅವರು ಸಮಾಧಿಯಲ್ಲಿ ಇರುವಾಗ, ದಂಪತಿಗಳಿಗೆ ಎದುರಾದ ಅನುಭವಗಳ ಬಗ್ಗೆ ಮಾತನಾಡಿದ್ದರು. ಅದೇ ಸಮಯದಲ್ಲಿ, ಮಹಾಸರ್ಪದ ಕುರಿತು ಚರ್ಚೆಗೆ ಬಂತು. ತಕ್ಷಣ ಶ್ರೀ ಸ್ವಾಮಿ ಅವರು "ಅದು ದಿವ್ಯ ಸರ್ಪ, ನಾನು ಮಾಲ್ಯಾದ್ರಿಯಲ್ಲಿ ತಪಸ್ಸು 4 ಅದು ತಿರುಗುತ್ತಿತ್ತು. ನೀವು ಭಯಪಡಬೇಡಿ, ಅದು ಯಾವುದೇ ಹಾನಿ ಮಾಡುವುದಿಲ್ಲ, ನೀವು ಕೂಡ ಅದನ್ನು ಏನು ಮಾಡಬೇಡಿ" ಎಂದು ಹೇಳಿದರು. ಒಂದು ಹಾನಿಕರ ಪ್ರಾಣಿ, ಜನರಿಗೆ ಹಾನಿ ಮಾಡುವುದಿಲ್ಲ ಎಂದು ಶ್ರೀ ಸ್ವಾಮಿ ಅವರು ಭರವಸೆ ನೀಡಿದರೆ, ಅದು ಸಾಕ್ಷಿ. ಶ್ರೀ ಸ್ವಾಮಿ ಅವರು ಸಮಸ್ತ ಜೀವಕೋಟಿಯೊಂದಿಗೆ ಸಂಭಾಷಿಸಬಲ್ಲರು. ನಂತರ ಶ್ರೀ ಸ್ವಾಮಿ ಅವರು ಪರಬ್ರಹ್ಮ ಸ್ವರೂಪದ ಬಗ್ಗೆ ನಿರಂತರವಾಗಿ ವಿವರಿಸಲು ಪ್ರಾರಂಭಿಸಿದರು. ಆ ಕಂಠಸ್ವರದಲ್ಲಿ ಹೊರಬಂದ ಜ್ಞಾನಬೋಧವನ್ನು ಎಲ್ಲರೂ ಶಾಂತವಾಗಿ ಕೇಳಲು ಪ್ರಾರಂಭಿಸಿದರು. ನಿರ್ಮಲ ಪ್ರಭಾವತಿ ಅವರು ತಮ್ಮ ಮನೆಯ ಕೆಲಸಗಳನ್ನು ಮಾಡಿಕೊಂಡು ಕೇಳುತ್ತಿದ್ದರು. ನಿರ್ಮಲ ಪ್ರಭಾವತಿ ಅವರು ಹೇಳುವುದನ್ನು ಕೇಳುತ್ತಿರುವುದನ್ನು ನೋಡಿದ ಶ್ರೀ ಸ್ವಾಮಿ ಅವರು, "ಅಮ್ಮಾ, ಜಾಗ್ರತ್ತಾಗಿ ಕೇಳುತ್ತಿದ್ದೀಯಾ? ಕೇಳು ತಾಯಿ, ಏಕೆಂದರೆ ಮತ್ತೆ ನಾನು ಹೇಳಲು ಇರುವುದಿಲ್ಲ, ನಿನಗೆ ಹೇಳುವವರು ಕೂಡ ಇಲ್ಲ" ಎಂದು ಗದ್ದರಿಸಿದರು. ತಕ್ಷಣ, ನಿರ್ಮಲ ಪ್ರಭಾವತಿ ಅವರು ತಮ್ಮ ಕೆಲಸಗಳನ್ನು ಬಿಟ್ಟು, ಶ್ರದ್ಧೆಯಿಂದ ಕೇಳತೊಡಗಿದರು. ನಿಜವಾಗಿಯೂ, ಅವ್ಯಾಜ ಕರುಣೆ ಎಂದರೆ ಇದು! ಸತ್ಯತೆಯ ಸ್ವಾಮಿಯೆ ಪರಮಾತ್ಮನ ಕುರಿತು ವಿವರಿಸುವುದು! ಮತ್ತು ಶಿಷ್ಯರನ್ನು ಗುರುವಾಗಿ ಕೇಳಲು ಪ್ರೇರೇಪಿಸುವುದು! ದಯಾಮಯ ಸ್ವಾಮಿಯೇ ನಮ್ಮ ದತ್ತಾತ್ರೇಯ. ಆ ನಂತರ ಆ ಪ್ರಸಂಗವು ರಾಮನಾಮ ಮಹಿಮೆಯನ್ನು ವಿವರಿಸಲು ಆರಂಭಿಸಿತು. ನಿರ್ಮಲ ಪ್ರಭಾವತಿ ಅವರು, ಆ ಸಮಯದಲ್ಲಿ ಶ್ರೀ ಸ್ವಾಮಿ ಅವರಿಗೆ "ಪುತ್ರ! ರಾಮಕೋಟಿ ಬರೆಯುವುದರಲ್ಲಿ, ಯಾವುದಾದರೂ ಕಷ್ಟಗಳು ಬರುತ್ತವೆ ಅಂತಾರೆ, ನನ್ನ ಅಕ್ಕನ ಮಾವನಾದ ಶ್ಯಾಮಲ ಅವರ ಮಗ ರಾಮನವಮಿಯಂದು ನಿಧನರಾದರು. ಹಾಗೆ ನನಗೂ ರಾಮಕೋಟಿ ಬರೆಯುತ್ತಿದ್ದಾಗ ಕಷ್ಟಗಳು ಬಂದವು, ಅದರಿಂದ ಭಯದಿಂದ ಮತ್ತೆ ಬರೆಯಲಿಲ್ಲ" ಎಂದು ತಮ್ಮ ಅನುಭವವನ್ನು ವಿವರಿಸಿದರು. ಆ ವಿವರವನ್ನು ಶ್ರೀ ಸ್ವಾಮಿ ಅವರು ಕೇಳಿ, ತಮ್ಮ ಗಂಭೀರ ಸ್ವರದಲ್ಲಿ "ರಾಮನಾಮ ಎಂದರೆ ಏನೆಂದು ಅಂದುಕೊಂಡೆಯಾ ತಾಯಿ, ಅದು ಅಗ್ನಿ, ತಾಯಿ, ಅಗ್ನಿ. ಆ ನಾಮವನ್ನು ಹಿಡಿದವರಿಗೆ ಅದು ಆಧ್ಯಾತ್ಮಿಕ ಹಸಿವನ್ನು ತೀರಿಸುವ ಭುಕ್ತಿದಾಯಿನಿ, ಅವರ ಪಾಪಗಳನ್ನು ತೊಡೆದುಹಾಕುವ ಮುಕ್ತಿದಾಯಿನಿ, ಅವರನ್ನು ಸನ್ಮಾರ್ಗಕ್ಕೆ ನಡಿಸುವ ಶಕ್ತಿದಾಯಿನಿ. ಆ ಪರಮಾತ್ಮನನ್ನು ಎಲ್ಲರೂ ತಲುಪಲಾರರು, ಆದ್ದರಿಂದ, ಸ್ವತಃ ಆ ಪರಮಾತ್ಮನು ಮಾನವರ ರೂಪದಲ್ಲಿ ಬಂದು, ದೇವರನ್ನು ಸ್ಮರಿಸುವಂತೆ ಒಂದು ರೂಪ, ನಾಮವನ್ನು ಕೊಟ್ಟಿದ್ದಾರೆ. ನೀನು ಹೇಳಿದ ಮಗನಿಗೆ ಚಿಕ್ಕವಯಸ್ಸಿನಿಂದ ಪ್ರಾಣಾಂತಕ ಜ್ವರವಿತ್ತು, ಆದ್ದರಿಂದ ಆ ರಾಮನು ಅವನನ್ನು ತನ್ನ ಬಳಿಗೆ ಕರೆದೊಯ್ದು, ಆ ತಾಯಿ ಮತ್ತು ಮಗನನ್ನು ದುಃಖದಿಂದ ಬಿಡುಗಡೆ ಮಾಡಿದರು. ರಾಮನಾಮದಿಂದ ಕಷ್ಟವೇ? ಅದು ಕಷ್ಟವಲ್ಲ, ತಾಯಿ, ಆ ರಾಮನ ಮೇಲೆ ಇರುವ ನಂಬಿಕೆಯನ್ನು ಪರೀಕ್ಷಿಸೋದು. ಬೇಡ ತಾಯಿ, ಅಪ್ರಯೋಜಕ ಅನುಮಾನಗಳಿಗೆ ಹೋಗಬೇಡಿ, ರಾಮಕೋಟಿಯನ್ನು ಪೂರ್ಣಗೊಳಿಸು" ಎಂದು ಬೋಧನೆ ಕೊಟ್ಟರು. ಆ ಒಂದು ವೇಳೆ ದೇವರು ಮೋಡದ ರೂಪದಲ್ಲಿ ಬಂದು, ತನ್ನ ಬೋಧನೆ ಮಳೆಯಂತೆ ಸುರಿಸಿ, ಬೋಧನೆ ಕೊಟ್ಟ ಪ್ರತ್ಯಕ್ಷ ಅನುಭವವನ್ನು ಅಲ್ಲಿದ್ದ ಜನರು ಹೊಂದಿದರು. ಆ ಜ್ಞಾನ ಸ್ವರೂಪ ಶ್ರೀ ಸ್ವಾಮಿ ಅವರ ಮಂದಿರವನ್ನು ನೀವು ಎಲ್ಲರೂ ಭೇಟಿ ಮಾಡಿ ಅನುಭವಿಸಿರಿ ಎಂಬುದು ನನ್ನ ವಿನಂತಿ. ಸರ್ವಂ, ಶ್ರೀ ದತ್ತ ಕೃಪ, ಪವನಿ ಶ್ರೀ ವಿಷ್ಣು ಕೌಶಿಕ್, ರಚನೆಗೆ ಸಹಕಾರ ನೀಡಿದವರು: ಶ್ರೀ ಪವನಿ ನಾಗೇಂದ್ರ ಪ್ರಸಾದ್ ಮತ್ತು ಶ್ರೀ ಪವನಿ ನಿರ್ಮಲ ಪ್ರಭಾವತಿ, ಕನ್ನಡ ಅನುವಾದ ಸಹಕಾರ:ಶ್ರೀಮತಿ ಶ್ವೇತ ಡಿ. ----- (ಮಂದಿರ ವಿವರಗಳಿಗಾಗಿ: ಪವನಿ ಶ್ರೀ ವಿಷ್ಣು ಕೌಶಿಕ್..ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರ.. ಮೊಗಿಲಿಚೆರ್ಲ ಗ್ರಾಮ.. ಲಿಂಗಸಮುದ್ರ ಮಂಡಲ.. SPSR ನೆಲ್ಲೂರು ಜಿಲ್ಲೆ.. ಪಿನ್: 523114.. ಸೆಲ್: 9182882632)
Image from ಶ್ರೀ ದತ್ತ ಪ್ರಸಾರ: *ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರ ದಿವ್ಯ ಚರಿತ್ರೆ - ನಲವತ್ತೆರ...

Comments