ಶ್ರೀ ದತ್ತ ಪ್ರಸಾರ
ಶ್ರೀ ದತ್ತ ಪ್ರಸಾರ
May 19, 2025 at 01:45 AM
*ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರ ದಿವ್ಯ ಚರಿತ್ರೆ - ನಲವತ್ತು ನಾಲಕ್ಕು ದಿನ - ಮನಸ್ಸಿನಲ್ಲಿನ ಮುಸುಕಿನ ನಿವಾರಣೆ* ಓದುಗರೆ ನಮಸ್ಕಾರ, ಹಿಂದಿನ ಭಾಗದಲ್ಲಿ ನಾವು ನಮ್ಮ ಮೊಗಲಿಚರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರು ಶ್ರೀಧರರಾವ್ ಅವರ ಮನೆಯಲ್ಲಿ ದಂಪತಿಗಳಿಗೆ ಇರುವ ಕೋರಿಕೆಗಳ ಬಗ್ಗೆ ಮೊದಲ ಸಲ ಕೇಳುವುದು. ಅದಕ್ಕೆ ನಿರ್ಮಲ ಪ್ರಭಾವತಿ ಅವರು ಹೇಳಬೇಕೆನ್ನುವಾಗ ಶ್ರೀಧರ್ ರಾವ್ ಅವರು ಸುಮ್ಮನಿರು ಎಂದು ಹೇಳುವುದು. ಮತ್ತು ಎರಡನೇ ಬಾರಿ ಶ್ರೀ ಸ್ವಾಮಿಯವರು ಪ್ರಭಾವತಿಯವರಿಗೆ ನೇರವಾಗಿ ಕೇಳುವವರೆಗೆ ಓದಿದ್ದೇವೆ ಇನ್ನು ಈಗ ಈ ಭಾಗಕ್ಕೆ ಬಂದರೆ ಶ್ರೀ ಸ್ವಾಮಿಯವರು ಎರಡನೇ ಬಾರಿ ಕೋರಿಕೆಗಳ ಬಗ್ಗೆ ಕೇಳಿದಾಗ ,ನಿರ್ಮಲ ಪ್ರಭಾವತಿ ಅವರು ಉತ್ತರವಾಗಿ, "ಪುತ್ರ, ನಾವು ಗೃಹಸ್ಥರು, ದಿನನಿತ್ಯ ನಮ್ಮ ಜವಾಬ್ದಾರಿಗಳಿಗೆ ಕೈಯಲ್ಲಿ ಹಣ ಇರದಿದ್ದರೆ, ಆ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸಲು ಸಾಧ್ಯವಿಲ್ಲ. ಆದ್ದರಿಂದ, ಹಣವನ್ನು ಕೇಳುವುದು ತಪ್ಪೇನೂ ಇಲ್ಲ," ಎಂದು ಹೇಳಿದರು. ಅದಕ್ಕೆ ಶ್ರೀಸ್ವಾಮಿ ಅವರು ನಗುತ್ತಾ, "ಹೌದು ಅಮ್ಮ, ಹಣದ ಅಗತ್ಯವಿದೆ ಆದರೆ ಪ್ರಲೋಭನೆಯಲ್ಲ. ಒಮ್ಮೆ ನೀನು ಈಗಿರೋ ಪರಿಸರವನ್ನು ಗಮನಿಸು, ನಿತ್ಯವೂ ಅತಿಥಿ ದೇವತೆಗಳೊಂದಿಗೆ ಕಡೆಯಿಂದ ತುಂಬಿದ ವಾತಾವರಣ ಹೊಲಗದ್ದೆ ಇರುವ ಭತ್ತ ಸುತ್ತಲೂ ನೀವು ನೀರು ಹಾಕಿ ಪೋಷಿಸುತ್ತಿರುವ ಈ ಪಾರಿಜಾತ, ಹೌದುಂಬರದಂತಹ ಮರಗಳು ಇವುಗಳ ವಾಸ ಸ್ಥಳ ಮಾಡಿ ಕೊಂಡೆ ಹಾಯಾಗಿ ವಾಸಿಸುತ್ತಿರುವ ಪಕ್ಷಿಗಳು ಅವುಗಳ ಕಲರವ .ಇವುಗಳೆಲ್ಲಾ ಐಶ್ವರ್ಯ ಅಲ್ಲ ಅಂತೀರಾ ಅಮ್ಮ? ಹೀಗಾಗಿ, ಅಷ್ಟೈಶ್ವರ್ಯವೆಂದರೆ ಏನು ಅಮ್ಮ?" ಎಂದು ಪ್ರಭಾವತಿ ಅವರಿಗೆ ಕೇಳಿದರು. ಅದಕ್ಕೆ ಉತ್ತರವಾಗಿ ಪ್ರಭಾವತಿ ಅವರು, "ಹಣ, ಧಾನ್ಯ, ಹೊಲಗದ್ದೆ, ಬೆಳೆ, ಇತ್ಯಾದಿ ಪುತ್ರ ಎಂದು ಹೇಳಿದರು," . ಆಗ ಶ್ರೀಸ್ವಾಮಿ ಅವರು, "ಅದು ಸತ್ಯ, ಆದರೆ ಈ ಇತ್ಯಾದಿ ಪದದ ಅರ್ಥವನ್ನು ನಾನು ವಿವರಿಸುತ್ತೇನೆ, ಕೇಳು" ಎಂದು ಒಂದು ಅಲೌಕಿಕ ದೃಷ್ಟಿಯಿಂದ "ಅಮ್ಮಾ, ಉನ್ನತ ಕುಲದಲ್ಲಿ ಉತ್ತಮ ತಾಯಿಯೊಂದಿಗೆ ಹುಟ್ಟುವುದು, ಪಾಂಡಿತ್ಯವನ್ನು ತಲುಪುವ ಶಕ್ತಿಯುಳ್ಳ ವಿದ್ಯೆ ಪಡೆಯುವುದು, ನಮ್ಮನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿ ಜೀವಿತ ಸಂಗಾತಿಯಾಗಿ ಬರುವುದು, ಗುಣ ಮತ್ತು ರೂಪದಲ್ಲಿ ಉತ್ತಮ ಮಕ್ಕಳನ್ನು ಹೊಂದುವುದು, ನಿತ್ಯವೂ ಅತಿಥಿಗಳನ್ನು ಸಂತೋಷದಿಂದ ಸೇವಿಸುವ ಶಕ್ತಿ ಹೊಂದಿರುವುದು, ಇವೆಲ್ಲವೂ ಐಶ್ವರ್ಯಗಳಲ್ಲವೇ? ಈ ಸೃಷ್ಟಿಯ ಶಕ್ತಿಯು ನಿನಗೆ ದೊರಕಿದ್ದು, ಇವುಗಳನ್ನು ಮೀರಿಸುವ ಐಶ್ವರ್ಯವೇನು ಇರುತ್ತದೆ? ನಿನ್ನ ಅಧ್ಯಾತ್ಮದಲ್ಲಿ ಕೆಲವು ಹಂತಗಳನ್ನು ನಿನ್ನದ್ದಾಗಿರದ ಕಾರಣ, ಅಸುರರ ಬಗ್ಗೆ ನೀನು ತಿಳಿಯುವುದು. ಅವರು ಬಯಸಿದ ಶಕ್ತಿ ಪಡೆದುಕೊಂಡು ದೇವರು ಪ್ರತ್ಯಕ್ಷವಾಗಿ ಬರುತ್ತಾರೆ ಆದರೆ ಸ್ವಾರ್ಥದ ದಾಹದಿಂದ ಆ ಶಕ್ತಿ ನಾಶವಾಗುತ್ತದೆ. ಒಂದೇ ವಿಷಯವನ್ನು ಹೇಳುತ್ತೇನೆ, ಸಾಧನೆಯಲ್ಲಿ ಒಂದು ಹಂತವನ್ನು ಮುಗಿಸಿದ ನಂತರ ಎಲ್ಲರಿಗೂ ಶಕ್ತಿ ಸಿಗುತ್ತದೆ ಆದರೆ ಕೆಲವರು ಆ ಶಕ್ತಿಯನ್ನು ಸಾಧನೆಗೆ ಮಾತ್ರ ಬಳಸಿಕೊಂಡು ಜೀವನಮುಗೀಯುತ್ತದೆ ಅಥವಾ ದೇವರಲ್ಲಿ ಲೀನರಾಗುತ್ತಾರೆ. ಆದರೆ ಆ ಶಕ್ತಿಯನ್ನು ವಿಘಾತಕ ಕಾರ್ಯಗಳಿಗೆ ಬಳಸಿದರೆ, ಅದು ಶಕ್ತಿಯನ್ನು ಕುಗ್ಗಿಸುತ್ತದೆ. ಆದರೆ ಒಳ್ಳೆಯದು, ನನ್ನ ಸಾಧನೆಯಲ್ಲಿ ನೀವು ಸಹಾಯ ಮಾಡಿದ ಕಾರಣ, ನಾನು ನಿಮ್ಮಿಂದ ಒಂದು ಇಚ್ಛೆಯನ್ನು ಕೇಳುತ್ತಿದ್ದೇನೆ, ನೀವು ಜೀವಿತಕ್ಕೆ ಪೂರಕವಾದಷ್ಟು ಐಶ್ವರ್ಯವನ್ನು ಕೇಳುತ್ತಿದ್ದೀರಿ. ಆದರೆ ನಾನು ಅಷ್ಟೊಂದು ಐಶ್ವರ್ಯ ನೀಡಬೇಕಾದರೆ, ನೀವು ಈಗ ನಾನು ಹೇಳಿದ ಐಶ್ವರ್ಯಗಳಲ್ಲಿ ಯಾವುದಾದರೂ ಒಂದನ್ನು ತ್ಯಾಗ ಮಾಡಬೇಕಾಗುತ್ತದೆ. ಹೇಳು ಅಮ್ಮಾ, ನೀವು ಯಾವುದು ನೀಡ ತೀರಿ?" ಎಂದು ಕೇಳಿದರು. ಆ ಉತ್ತರವನ್ನು ಕೇಳಿದ ಪ್ರಭಾವತಿ ಅವರು, "ಈಗ ನನಗೆ ಅರ್ಥವಾಗಿದೆ, ಪುತ್ರ, ನಾನು ದೇವರಿಂದ ದೊರಕಿದ ಜೀವನದಿಂದ ತೃಪ್ತಿಯಾಗಿ ಇರುತ್ತೇನೆ. ಇದುವರೆಗೆ ನನಗೆ ಸಂತೋಷವಾಗಿದೆ, ಇನ್ನೂ ಯಾವುದೇ ಉಡುಗೊರೆಯ ಅಗತ್ಯವಿಲ್ಲ. ಈ ಪಯಣದಲ್ಲಿ ಕಷ್ಟಗಳನ್ನು ಎದುರಿಸಿದರೂ, ಅವುಗಳು ದೇವರಿಂದ ನೀಡಿದ ಉಪಕಾರವೆಂದು ನಾನು ಅನುಭವಿಸುತ್ತೇನೆ," ಎಂದು ಹೇಳಿದರು. ನಂತರ ಶ್ರೀಸ್ವಾಮಿ ಅವರು ಮತ್ತೊಮ್ಮೆ ನಗುತ್ತಾ, "ಇನ್ನೊಂದು ವಿಷಯ ತಾಯಿ .ಆನಂದ ಎನ್ನುವುದು ಎಲ್ಲಾ ಬೇಕೆನ್ನುವ ಅತಿ ಆಸೆ ಎಲ್ಲಿಯೂ ಅಥವಾ ಏನು ಬೇಡ ಎಂದು ನಿರುತ್ಸಹದಲ್ಲಿಯೂ ಇಲ್ಲ.ಇದು ಸಾಕು ಇದಕ್ಕೆ ನಾನು ಕೃತಜ್ಞತೆಗಳನ್ನು ಹೇಳುತ್ತಿದ್ದೇನೆ ಎನ್ನುವ ತೃಪ್ತಿಯಲ್ಲಿರುತ್ತದೆ. ಎಂದು ತಮ್ಮ ಉಪದೇಶವನ್ನು ಮುಗಿಸಿದರು. ಶ್ರೀ ಸ್ವಾಮಿಯವರು ನಿರ್ಮಲ ಪ್ರಭಾವತಿ ಅವರಿಗೆ ಇರುವ ಅಷ್ಟರಲ್ಲಿ ತೃಪ್ತಿಯಿಂದ ಇರಬೇಕು.ಎಂದು ಹೇಳುವುದರ ಮುಂಚಿತವಾಗಿಯೇ. ಆದಂಪತಿಗಳೊಂದಿಗೆ ನನ್ನ ಸಾಧನೆಗೆ ನೀವು ಸಹಾಯ ಮಾಡಿದ್ದೀರಿ. ನಿಮ್ಮ ಕೋರಿಕೆಗಳನ್ನು ತೀರಿಸುತ್ತೇನೆ ಎಂದು ಭಾವಿಸಬೇಡಿ. ಇರುವುದರಲ್ಲಿ ತೃಪ್ತಿಯಿಂದ ಇರಿ. ಎಂದು ಹೇಳಬಹುದು ಅಲ್ಲವಾ. ಎನ್ನುವ ಪ್ರಶ್ನೆ ನನ್ನಲ್ಲಿ ಕಾಡಿದಾಗಲೆಲ್ಲ. ನನಗೆ ಬರುವ ಸಮಾಧಾನ .ಶ್ರೀ ರಾಮಾಯಣ ಬರಬೇಕಾದರೆ ರಾವಣ ಸಂಹಾರವಾಗಬೇಕು. ಅದೇ ರೀತಿ ಜೀವನದಲ್ಲಿ ತೃಪ್ತಿ ಬರಬೇಕಾದರೆ ನಮ್ಮ ಮನಸ್ಸಿನಲ್ಲಿ ಇರುವಂತಹ ಕಲ್ಮಶದ ಕುಳಕನ್ನು ನಿರ್ಮೂಲನೆ ಮಾಡುವ ಉಪದೇಶವಾಗಬೇಕು. ಇನ್ನು ಪ್ರಸಾದನೆ." ಅಂತಿಮವಾಗಿ, ಇಂತಹ ಜ್ಞಾನಬೋಧನೆಯನ್ನು ನೀಡಿದ ಶ್ರೀಸ್ವಾಮಿ ಅವರ ಮಂದಿರವನ್ನು ನೀವು ನೇರವಾಗಿ ವೀಕ್ಷಿಸಿ ಹೋಗಬೇಕೆಂದು ನನ್ನ ವೈಯಕ್ತಿಕ ವಿನಂತಿ. ಸರ್ವಂ, ಶ್ರೀ ದತ್ತ ಕೃಪ, ಪವನಿ ಶ್ರೀ ವಿಷ್ಣು ಕೌಶಿಕ್, ರಚನೆಗೆ ಸಹಕಾರ ನೀಡಿದವರು: ಶ್ರೀ ಪವನಿ ನಾಗೇಂದ್ರ ಪ್ರಸಾದ್ ಮತ್ತು ಶ್ರೀ ಪವನಿ ನಿರ್ಮಲ ಪ್ರಭಾವತಿ, ಕನ್ನಡ ಅನುವಾದ ಸಹಕಾರ:ಶ್ರೀಮತಿ ಶ್ವೇತ ಡಿ. ----- (ಮಂದಿರ ವಿವರಗಳಿಗಾಗಿ: ಪವನಿ ಶ್ರೀ ವಿಷ್ಣು ಕೌಶಿಕ್..ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರ.. ಮೊಗಿಲಿಚೆರ್ಲ ಗ್ರಾಮ.. ಲಿಂಗಸಮುದ್ರ ಮಂಡಲ.. SPSR ನೆಲ್ಲೂರು ಜಿಲ್ಲೆ.. ಪಿನ್: 523114.. ಸೆಲ್: 9182882632)
Image from ಶ್ರೀ ದತ್ತ ಪ್ರಸಾರ: *ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರ ದಿವ್ಯ ಚರಿತ್ರೆ - ನಲವತ್ತು ...

Comments