
ಶ್ರೀ ದತ್ತ ಪ್ರಸಾರ
June 4, 2025 at 12:50 PM
*ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಅವರ ದಿವ್ಯ ಚರಿತ್ರೆ - ಐವತ್ತಾರು ದಿನ – ಸ್ವಾಮಿಯವರ ಜಟಾಜೂಟ ಲೀಲೆ– ದ್ವಿತೀಯ ಭಾಗ*
ಓದುಗರೆ ನಮಸ್ಕಾರ, ಹಿಂದಿನ ಭಾಗದಲ್ಲಿ ನಾವು ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಯವರು, ತಮ್ಮ ಸಾಧನೆಗೆ ಸ್ವಲ್ಪ ಅಡ್ಡಿಯಾಗಿದ್ದ ಜಟಾಜೂಟವನ್ನು, ಚೌರಿ ಕನ ಸಹಾಯದಿಂದ ತೆಗೆಸಿದ್ದು, ಆ ಜಟೆಯ ಬಗ್ಗೆ ನಿರ್ಮಾಲಾ ಪ್ರಭಾವತಿ ವಿಚಾರಿಸಿದಾಗ, ಅದನ್ನು ಚೌರಿಕನಿಗೆ ನೀಡಿದ್ದು, ಆ ಮಾತುಗಳನ್ನು ಕೇಳಿ ನಿರಾಶರಾದ ನಿರ್ಮಾಲಾ ಪ್ರಭಾವತಿ ಅವರಿಗೆ, ಅದು ಅವರ ಕೈಗೆ ತಲುಪುತ್ತದೆ ಎಂದು ಶ್ರೀ ಸ್ವಾಮಿಯವರು ಭರವಸೆ ನೀಡಿದರೆಂದು ನಾವು ಓದಿದ್ದೇವೆ.
ಈ ಭಾಗದಲ್ಲಿ, ಆಶ್ರಮದಿಂದ ಹಿಂತಿರುಗಿದ ನಿರ್ಮಾಲಾ ಪ್ರಭಾವತಿ, ಶ್ರೀ ಸ್ವಾಮಿಯವರ ಜಟೆಯನ್ನು ಹೇಗಾದರೂ ಪಡೆದುಕೊಳ್ಳಬೇಕೆಂದು ಸಂಕಲ್ಪಿಸಿದರು. ಮೊದಲಿಗೆ ಆ ಕ್ಷೌರಿಕನನ್ನು ಹುಡುಕಲು ಆರಂಭಿಸಿದರು, ಆದರೆ ಆ ಚೌರಿಕಾನು ಮೊಗಿಲಿಚೆರ್ಲ ಗ್ರಾಮದಲ್ಲೇ ಇದ್ದ ಒಬ್ಬ ಮಹಿಳೆಗೆ ಆ ಜಟೆಯನ್ನು ಸವರವನ್ನು ಮಾಡಿ ಮಾರಾಟ ಮಾಡಿ, ಪಕ್ಕದ ಊರಿಗೆ ಹೋಗಿದ್ದಾನೆ ಎಂದು ತಿಳಿದುಕೊಂಡರು.
ನಂತರ, ನಿರ್ಮಾಲಾ ಪ್ರಭಾವತಿ ಆ ಸವರವನ್ನು ಕೊಂಡ ಮಹಿಳೆಯನ್ನು ಕರೆಸಿಕೊಂಡರು. ಆ ಮಹಿಳೆ ಬಂದು, ಪ್ರಭಾವತಿ ಅವರು ಆ ಜಟೆಯ ಮಹಿಮೆಯನ್ನು ವಿವರಿಸಿ, ಅದನ್ನು ತಾವು ಕೊಂಡುಕೊಳ್ಳಲು ಕೇಳಿದರು, ಆದರೆ ಆ ಮಹಿಳೆ, "ಅಷ್ಟು ಮಹಿಮೆಯಿರುವ ಜಟೆಯನ್ನು ನಾನು ಏಕೆ ಮಾರಬೇಕು?" ಎಂದು ತೀವ್ರವಾಗಿ ತಿರಸ್ಕರಿಸಿದರು. ಪ್ರಭಾವತಿ ಅವರೂ ಬಿಟ್ಟುಬಿಡದೇ, ಆ ಮಹಿಳೆಗೆ ಕ್ಷೌರಿಕನಿಗೆ ನೀಡಿದ ಹಣಕ್ಕಿಂತ, ಅನೇಕ ಪಟ್ಟು ಹಣ ನೀಡುತ್ತೇನೆ ಎಂದು ಹೇಳಿ ಒಪ್ಪಿಸಲು ಪ್ರಯತ್ನಿಸಿದರು. ಆದರೆ, ಆ ಮಹಿಳೆ ಯಾವುದೇ ಕಾರಣಕ್ಕೂ ಒಪ್ಪಲಿಲ್ಲ.
ಇದರಿಂದ, ಪ್ರಭಾವತಿ ಅವರೇನೂ ಮಾಡಲಾಗದೆ ಶಾಂತಿಯಾಗಿ ಇದ್ದರು. ಅದೇ ದಿನ ಸಂಜೆ, ಶ್ರೀ ಸ್ವಾಮಿಯವರು ಶ್ರೀಧರರಾವ್ ಅವರ ಜೊತೆ ಮಾತನಾಡಲು ಕರೆಸಿಕೊಂಡರು. ಶ್ರೀಧರರಾವ್ ಅವರ ಜೊತೆಗೆ ಪ್ರಭಾವತಿ ಅವರು ಕೂಡ ತಲುಪಿದರು, ಮತ್ತು ಶ್ರೀ ಸ್ವಾಮಿಯವರ ಜಟೆಯ ಬಗ್ಗೆ ನಡೆದ ಎಲ್ಲಾ ಘಟನೆಗಳನ್ನು ಬೇಸರದಿಂದ ಹಂಚಿಕೊಂಡರು. ಅದಕ್ಕೆ ಶ್ರೀ ಸ್ವಾಮಿಯವರು, "ಅಮ್ಮ, ಅದು ನಿನಗೆ ಎಂದು ಬರೆದಿಟ್ಟಾಗಿದೆ ಎಂದಾದರೆ ಅದು ನಿನಗೆ ತಲುಪುತ್ತದೆ. ಚಿಂತಿಸಬೇಡ" ಎಂದು ಆಶೀರ್ವದಿಸಿ ತಿರುಗಿ ಕಳುಹಿಸಿದರು.
ಮರುದಿನ ಬೆಳಿಗ್ಗೆ, ಪ್ರಭಾವತಿ ಅವರು ತಮ್ಮದಿನಚರಿ ಕೆಲಸಗಳನ್ನು ಮಾಡುತ್ತಿರುವಾಗ, ಶ್ರೀ ಸ್ವಾಮಿಯವರ ಜಟೆಯನ್ನು ಸುವರಗೊಳಿಸಿ ಕೊಂಡ ಮಹಿಳೆ ಬಂದು, ಪ್ರಭಾವತಿ ಅವರೊಡನೆ, "ಅಮ್ಮಾ! ಮೊದಲು ಇದು ತೆಗೆದುಕೋ" ಎಂದು ಒಂದು ಪುಟ್ಟಣ್ಣ ತೋರಿಸಿದರು. ಆ ಪಟ್ಟಣಯನ್ನು ತೆರೆದು ನೋಡಿದಾಗ, ಶ್ರೀ ಸ್ವಾಮಿಯವರ ಜಟೆಯಿಂದ ಮಾಡಿದ ಕಪ್ಪು ಬಣ್ಣದ ಸುವರವಿತ್ತು. ಅದನ್ನು ನೋಡಿದ ಪ್ರಭಾವತಿ ಅವರಿಗೆ ಏನೂ ಅರ್ಥವಾಗಲಿಲ್ಲ, ವಿಷಯವನ್ನು ಅರಿಯಲು ಆ ಮಹಿಳೆಯನ್ನು, "ಏಕೆ ಹಿಂತಿರುಗಿಸುತ್ತಿರುವೆ?" ಎಂದು ಕೇಳಿದರು. ಆಗ ಆ ಮಹಿಳೆ, "ನನಗೆ ಅಷ್ಟು ಶಕ್ತಿ ಇಲ್ಲ, ರಾತ್ರಿ ಎಲ್ಲಾ ಪರ್ವತ ಮೇಲೆ ಬಿದ್ದಂತಹ ಅನುಭವ ಆ ಭಾರವನ್ನು ನಾನು ನಿಭಾಯಿಸಲಾರೆ" ಎಂದು ಹೇಳಿ ತಿರುಗಿ ಹೋದರು. ತಕ್ಷಣ, ಪ್ರಭಾವತಿ ಒಂದು ತೆಂಗಿನಕಾಯಿ ಒಡೆದು, ಆ ಮಹಿಮಾನ್ವಿತ ಶ್ರೀ ಸ್ವಾಮಿಯವರ ಜಟಾಜೂಟವನ್ನು ತಮ್ಮ ಪೂಜಾ ಕೋಣೆಯಲ್ಲಿ ಇಟ್ಟುಕೊಂಡರು.
ಓದುಗರೇ, ನಂತರ ನಡೆದ ವಿವರಗಳನ್ನು ಮುಂದಿನ ಭಾಗದಲ್ಲಿ ತಿಳಿಸುತ್ತೇನೆ. ಇಂತಹ ಮಹಾಯೋಗಿಯಾದ ನಮ್ಮ ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಯವರ ಮಂದಿರವನ್ನು ನೀವು ಎಲ್ಲಾ ಕಣ್ಣು ತುಂಬಿ ನೋಡಬೇಕು ಎಂದು ನನ್ನ ವೈಯಕ್ತಿಕ ವಿನಂತಿ.
ಸರ್ವಂ,
ಶ್ರೀ ದತ್ತ ಕೃಪ,
ಪವನಿ ಶ್ರೀ ವಿಷ್ಣು ಕೌಶಿಕ್,
ರಚನೆಗೆ ಸಹಕಾರ ನೀಡಿದವರು: ಶ್ರೀ ಪವನಿ ನಾಗೇಂದ್ರ ಪ್ರಸಾದ್ ಮತ್ತು ಶ್ರೀ ಪವನಿ ನಿರ್ಮಲ ಪ್ರಭಾವತಿ,
ಕನ್ನಡ ಅನುವಾದ ಸಹಕಾರ:ಶ್ರೀಮತಿ ಶ್ವೇತ ಡಿ.
-----
(ಮಂದಿರ ವಿವರಗಳಿಗಾಗಿ: ಪವನಿ ಶ್ರೀ ವಿಷ್ಣು ಕೌಶಿಕ್..ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರ.. ಮೊಗಿಲಿಚೆರ್ಲ ಗ್ರಾಮ.. ಲಿಂಗಸಮುದ್ರ ಮಂಡಲ.. SPSR ನೆಲ್ಲೂರು ಜಿಲ್ಲೆ.. ಪಿನ್: 523114.. ಸೆಲ್: 9182882632)
