SDPI Karnataka
SDPI Karnataka
June 3, 2025 at 03:55 PM
*ಸಂತಾಪ ಸಂದೇಶ* ಮಂಗಳೂರು ಮೂಲದ ಸಾಮಾಜಿಕ ನಾಯಕ, ವಿದ್ಯಾಭ್ಯಾಸ ಕ್ಷೆತ್ರ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಶ್ರೀ ಕೆ.ಎಂ. ಶರೀಫ್ (85) ಅವರ ಅಗಲಿಕೆಗೆ SDPI ಪಕ್ಷ ಪರವಾಗಿ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಸನ್ಮಾರ್ಗ ವಾರಪತ್ರಿಕೆಯ ಸ್ಥಾಪಕರಲ್ಲಿ ಒಬ್ಬರಾಗಿದ್ದು, ಪತ್ರಿಕೆಯ ಬೆಳವಣಿಗೆಗೆ ಶ್ರಮಿಸಿದ ಅವರು, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕದ ಅಧ್ಯಕ್ಷರಾಗಿ 20 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಅವರು ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್‌ನ ಪ್ರಥಮ ಚೇರ್ಮನ್ ಆಗಿ ನೇತೃತ್ವ ವಹಿಸಿದ್ದರು. ಅವರ ದೂರದೃಷ್ಟಿ, ಸಂಘಟನಾ ಚಾತುರ್ಯ ಹಾಗೂ ಸಮಾಜ ಸೇವೆಯ ನಿಷ್ಠೆ ಜನಮನದಲ್ಲಿ ಆಳವಾದ ಪ್ರಭಾವ ಬೀರಿದವು. ಹಿರಾ ಸಮೂಹ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಅವರ ಮಾರ್ಗದರ್ಶನದಲ್ಲಿ ಬೆಳೆದಿದೆ. ಅವರ ಕಾರ್ಯ ಶೈಲಿ, ಕೊಡುಗೈ ಮನೋಭಾವ ಹಾಗೂ ಕುರ್‌ಆನ್‌ ಹಾಗೂ ಹದೀಸ್‌ಗಳ ಆಳ ಜ್ಞಾನ ಸಮಾಜದ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ. ಅವರ ಅಗಲಿಕೆಯಿಂದಾಗಿ ಸಮಾಜವು ಉಜ್ವಲ ವ್ಯಕ್ತಿತ್ವವೊಂದನ್ನು ಕಳೆದುಕೊಂಡಿದೆ. ಅವರ ಪತ್ನಿ, ಮಕ್ಕಳಿಗೆ ಹಾಗೂ ಕುಟುಂಬಸ್ಥರಿಗೆ ನಮ್ಮ ಸಹಾನುಭೂತಿ. ಅಲ್ಲಾಹ್ ಅವರಿಗೆ ಕ್ಷಮೆಯನ್ನು ನೀಡಿ, ಜನ್ನತುಲ್ ಫಿರ್ದೌಸ್ ನಲ್ಲಿ ಉನ್ನತ ಸ್ಥಾನ ನೀಡಲಿ. ಕುಟುಂಬಸ್ಥರಿಗೆ ಈ ದುಃಖವನ್ನು ತಾಳಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ. *ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, SDPI, ಕರ್ನಾಟಕ.*
👍 5

Comments