Sode Sri Vadiraja Matha.
June 16, 2025 at 09:30 AM
*ವೃಂದಾವನ ಯಾತ್ರೆ*
*ಪಂಚಾಹಜ್ಞಾನ ಪರಿಕ್ರಮ*
ಅಧ್ಯಾತ್ಮಬಂಧುಗಳೇ ,!
ವಿಶ್ವಾವಸು ಸಂವತ್ಸರದ ಭಾದ್ರಪದ ಮಾಸ ಕೃಷ್ಣಪಕ್ಷ ಚತುರ್ಥಿಯಿಂದ ನವಮಿಯ ತನಕ *2025 ಸೆಪ್ಟೆಂಬರ್ 11 ರಿಂದ 15 ರವರೆಗೆ* ಐದು ದಿವಸಗಳ ಕಾಲ ಶ್ರೀಕೃಷ್ಣನ ಪಾದಸ್ಪರ್ಶದಿಂದ ಪವಿತ್ರವಾದ ವೃಂದಾವನ, ಮಥುರಾ, ಗೋಕುಲ, ಗೋವರ್ಧನ, ಯಮುನೆಯ ಪರಿಸರದಲ್ಲಿ *ಸೋದೆ ಶ್ರೀವಾದಿರಾಜ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು* ಶ್ರೀವಿಷ್ಣುತೀರ್ಥಾಚಾರ್ಯ ಪರಂಪರೆಯ ಸಂಸ್ಥಾನದ ಜೊತೆಗೆ ಪರಿಕ್ರಮ ಯಾತ್ರೆಯನ್ನು ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸಿಂಹ ಮಾಸವು ಇರುವುದರಿಂದ *ಸೌರ ಶ್ರೀಕೃಷ್ಣ ಜನ್ಮಾಷ್ಟಮಿ* ಕೃಷ್ಣನ ಜನ್ಮಭೂಮಿಯಲ್ಲಿಯೇ ಆಚರಿಸುವ ಸದವಕಾಶವು ದೊರಕಿರುವುದು ಶ್ರೀಕೃಷ್ಣನ ಅನುಗ್ರಹವೇ ಸರಿ. ಕೃಷ್ಣಜನ್ಮಾಷ್ಟಮೀ ಉತ್ಸವ ವಿಟ್ಲಪಿಂಡಿ ಉತ್ಸವವನ್ನು ವೃಂದಾವನದ ಪವಿತ್ರ ಪರಿಸರದಲ್ಲಿ ಆಚರಿಸುವ ಸಂಕಲ್ಪವನ್ನು ಮಾಡಲಾಗಿದೆ. ಜೊತೆಗೆ ಭಾವಿಸಮೀರ ಶ್ರೀಗುರುರಾಜರು ವರ್ಣಿಸಿದ ವಿಶ್ರಾಂತಿ ತೀರ್ಥ, ವೃಂದಾವನ, ಗೋವರ್ಧನಗಿರಿ ಮುಂತಾದ ಪರಿಸರದಲ್ಲಿ ಜ್ಞಾನ ಯಜ್ಞದ ಜೊತೆಗೆ ಪಿತೃ ಯಜ್ಞ, ದ್ರವ್ಯಯಜ್ಞ, ಕ್ರಿಯಾಯಜ್ಞ, ವೈಶ್ವಾನರಯಜ್ಞ ಎಂಬ ಐದು ಯಜ್ಞಗಳನ್ನೂ ಹಮ್ಮಿಕೊಳ್ಳಲಾಗಿದೆ.
*ಶ್ರೀಹರಿ ಗುರುರಾಜರ ಭಕ್ತರಿಗೆ ಈ ಪಂಚಾಹ ಜ್ಞಾನ ಪರಿಕ್ರಮದಲ್ಲಿ ಭಾಗವಹಿಸುವ ಸುವರ್ಣಾವಕಾಶವಿದೆ.!!*
ಶ್ರೀಹರಿ ಗುರುರಾಜರ ಅನನ್ಯ ಭಕ್ತರು ಏಕೋ ಭಾವದಿಂದ ಈ ಯಾತ್ರೆಯಲ್ಲಿ ಭಾಗವಹಿಸಿ ಶ್ರೀಹರಿವಾಯುಗಳ,ಭಾವಿಸಮೀರ ವಾದಿರಾಜ ಗುರುಗಳ,ಭೂತರಾಜರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅಪೇಕ್ಷಿಸುತ್ತೇವೆ.
ದಿವಾನರು
ಸೋದೆವಾದಿರಾಜ ಮಠ ,
*ಸೂಚನೆಗಳು*
🔸ಯಾತ್ರೆಗೆ ಆಗಮಿಸುವವರು ನಾವು ಸೂಚಿಸುವ ಸ್ಥಳಕ್ಕೆ Sep 10 ರಾತ್ರಿ ಅಥವಾ 11ನೇ ತಾರೀಕು ಬೆಳಿಗ್ಗೆ 10 ರ ಒಳಗೆ ನಿಮ್ಮದೇ ವ್ಯವಸ್ಥೆಯಲ್ಲಿ ಆಗಮಿಸಬೇಕು. ಅಲ್ಲಿಗೆ ಬಂದ ನಂತರ ವಸತಿ, ಮೂರು ಹೊತ್ತಿನ ಊಟೋಪಚಾರ , ಕ್ಷೇತ್ರ ಪರ್ಯಟನೆಗೆ ವಾಹನ ವ್ಯವಸ್ಥೆ ನಮ್ಮದೇ ಆಗಿರುತ್ತದೆ.
🔸ಪ್ರತಿದಿನವೂ ಸಂಕಲ್ಪಪೂರ್ವಕ ಯಮುನಾ ನದಿಯಲ್ಲಿ ಸಾಮೂಹಿಕ ಸ್ನಾನ , ಅರ್ಘ್ಯ ಪ್ರದಾನಗಳು ಇರುತ್ತವೆ.
🔸ಭೋಜನ ಪೂರ್ವದಲ್ಲಿ ಪ್ರತಿದಿನವೂ ಲೋಕಕಲ್ಯಾಣಕ್ಕಾಗಿ ಸಾಮೂಹಿಕ ಕೃಷ್ಣ ನಾಮಜಪವು ಗುರುಗಳ ಸಾನಿಧ್ಯದಲ್ಲಿ ನಡೆಯಲಿದೆ.
🔸ಕೃಷ್ಣನ ಲೀಲಾ ಕ್ಷೇತ್ರವಾದ ವೃಂದಾವನಕ್ಕೆ ಆಗಮಿಸುವ ಸಾಧಕರು ಮನೆಯಿಂದಲೇ ಕೃಷ್ಣ ಜಪದ ಆರಂಭವನ್ನು ಮಾಡಿ ಆ ಕ್ಷೇತ್ರದಲ್ಲಿ ಸಮರ್ಪಣೆ ಮಾಡಬಹುದು. *ಶ್ರೀ ಕೃಷ್ಣಾಯ ನಮಃ*. ಅಥವಾ *ಹರೇ ರಾಮ ಹರೇ ರಾಮ* ಎಂಬ ನಾಮಜಪವನ್ನು ಇಂದಿನಿಂದಲೇ ಆರಂಭಿಸಬಹುದು.
🔸ಮಧ್ಯಾಹ್ನ ಕಾಲದಲ್ಲಿ ನಡೆಯುವ ಅನ್ನಸಂರ್ಪಣೆಯ ಸೇವೆಯಲ್ಲಿಯೂ ಭಾಗವಹಿಸಬಹುದು.
🔸ಮಧ್ಯಾಹ್ನದ ನಂತರ ಕ್ಷೇತ್ರಪರ್ಯಟನೆ ಪ್ರತಿದಿನವೂ ಇರುತ್ತದೆ.
🔸ಹವಾನಿಯಂತ್ರಿತ ಕೊಠಡಿಗಳನ್ನು (3 sharing) ಕಾದಿರಿಸಲಾಗಿದೆ.
🔸ವೃಂದಾವನದ ಸಮೀಪದಲ್ಲಿರುವ ಯಮುನಾತೀರದಲ್ಲಿನ *ಗೋಪೀನಾಥ ಭವನದಲ್ಲಿ* ಸಂಸ್ಥಾನದ ಪೂಜೆಯು ನೆರವೇರಲಿದೆ. ತೀರ್ಥಪ್ರಸಾದ ವಿನಿಯೋಗವು ಇಲ್ಲಿಯೇ ನಡೆಯುತ್ತದೆ. ಈ ಮಂದಿರದ ಎಲ್ಲ ನಿಯಮಗಳನ್ನು ಅಲ್ಲಿಯ ಮೇಲ್ವಿಚಾರಕರು ತಿಳಿಸಿದಂತೆ ಅನುಷ್ಠಾನಮಾಡತಕ್ಕದ್ದು.
🔸ಆಯಾ ಕ್ಷೇತ್ರಗಳ ಸಂಚಾರದಲ್ಲಿ *ಪರಮಪೂಜ್ಯ ಶ್ರೀಪಾದರ ಅನುಗ್ರಹ ಸಂದೇಶವು* ಇರುತ್ತದೆ. ವಿದ್ವಾಂಸರ ಪ್ರವಚನಗಳು ಇರುತ್ತವೆ.
🔸ಐದು ದಿವಸಗಳ ಕಾಲ ವಾಹನ ವಸತಿ ಭೋಜನ ಇವುಗಳಿಗೆ *Rs.10,000* ಕಾಣಿಕೆಯನ್ನು ನಿಗದಿಪಡಿಸಲಾಗಿದೆ.
🔸ಐದೂ ದಿವಸ ಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
🔸ಪರಿಕ್ರಮ ಯಾತ್ರೆಯಲ್ಲಿ ಭಾಗವಹಿಸುವ ಇಚ್ಛೆ ಉಳ್ಳವರು ನಿಮ್ಮ ಹೆಸರು ದೂರವಾಣಿ , ಭಾಗವಹಿಸುವ ಪ್ರತಿ ವ್ಯಕ್ತಿಗಳ ಆಧಾರ್ ಕಾರ್ಡ್ ಫೋಟೋ ವನ್ನು ಕೆಳಗಿನ *Google Form* ನಲ್ಲಿ ತುಂಬಿಸಬೇಕು.
🔸ಮೊದಲು ಬಂದ Google Form ಅನುಸಾರವಾಗಿ ನಿಮ್ಮ ಸೀಟನ್ನು ಕಾಯ್ದಿರಿಸಲಾಗುತ್ತದೆ. ಯಾತ್ರೆಗೆ ಬರುವ ವ್ಯಕ್ತಿಗಳನ್ನು ಈ ಯಾತ್ರೆಗಾಗಿಯೇ ಮಾಡಿರುವ ವಾಟ್ಸಾಪ್ ಗ್ರೂಪ್ ಗೆ ಸೇರಿಸಲಾಗುತ್ತದೆ. ಇದಕ್ಕಾಗಿ ಯಾರೂ ದೂರವಾಣಿ ಕರೆ ಮಾಡಬಾರದಾಗಿ ವಿನಂತಿ. ಹೆಚ್ಚಿನ ವಿವರಣೆಗಳನ್ನು ವಾಟ್ಸಪ್ ಗ್ರೂಪಿನಲ್ಲಿ ತಿಳಿದುಕೊಳ್ಳಬಹುದು.
*Google Form:* https://tinyurl.com/vrindavanayathre
🙏
❤
❤️
🖕
👍
😂
😢
45