ದಿನಕ್ಕೊಂದು ಪೌರಾಣಿಕ ಕಥೆ 𝗙𝗼𝗹𝗹𝗼𝘄
3.0K subscribers
About ದಿನಕ್ಕೊಂದು ಪೌರಾಣಿಕ ಕಥೆ 𝗙𝗼𝗹𝗹𝗼𝘄
ಪ್ರತಿದಿನ ಕಥೆ ಓದಲು channel follow ಮಾಡಿ..... 👇👇👇👇👇
Similar Channels
Swipe to see more
Posts
ನಾಲ್ಕು ಬಗೆಯ ಮೂರ್ಖರು :- ಕೈಲಾಸದಲ್ಲಿದ್ದ ಒಬ್ಬ ಶಿವಭಕ್ತನಿಗೆ ಮೂರ್ಖತನ ಎಂದರೆ ಏನು? ಯಾರು ಯಾರಿಗೆ ಮಾಡುತ್ತಾರೆ? ಇಂಥ ಪ್ರಶ್ನೆ ಉದ್ಭವಿಸಿತು. ಆತ ನೇರವಾಗಿ ಶಿವನ ಬಳಿ ಹೋಗಿ ಕೇಳಿದ ಮುಗುಳ್ನಕ್ಕ ಶಿವನು, ಭಕ್ತ ಕೇಳು “ಅಧ್ಯಯನದ ಜ್ಞಾನಕ್ಕಿಂತ ಅನುಭವ ಜ್ಞಾನ ದೊಡ್ಡದು” ಆದ್ದರಿಂದ ಇದರ ಅರ್ಥವನ್ನು ಅನುಭವದ ಮೂಲಕವೇ ತಿಳಿದುಕೋ ಎಂದು ಶಿವನು ತನ್ನ ಭಕ್ತನನ್ನು ಒಂದು ಪಾರಿವಾಳ ವನ್ನಾಗಿ ಮಾಡಿದ. ಆಶ್ಚರ್ಯಗೊಂಡ ಭಕ್ತನಿಗೆ ಬೇಸರವಾಗಿ ನಾನು ಕೇಳಬಾರದ ಪ್ರಶ್ನೆ ಏನು ಕೇಳಿದೆ ಪ್ರಭು ಎಂದು ಕೇಳಿದ. ಶಿವ ಹೇಳಿದ ನೀನು ಕೇಳಿದ್ದು ಒಳ್ಳೆಯ ಪ್ರಶ್ನೆ ನೀನು ಬೋಲೋಕಕ್ಕೆ ಹೋಗಿ ನಿನ್ನ ಪ್ರಶ್ನೆಗೆ ಉತ್ತರವನ್ನು ಅನುಭವದಿಂದ ತಿಳಿದುಕೋ ಮತ್ತೆ ಇಲ್ಲಿಗೆ ಕರೆಸಿಕೊಳ್ಳುವೆ ಎಂದನು. ಶಿವಭಕ್ತ ನಾದ ಪಾರಿವಾಳ ಬೋಲೋಗಕ್ಕೆ ಬಂದು ದೊಡ್ಡ ಅರಣ್ಯದ ಒಂದು ಮರದಲ್ಲಿ ನೆಲೆಯೂರಿತು. ಹಣ್ಣು ಹಂಪಲು ತಿಂದುಕೊಂಡು ಕಾಡೆಲ್ಲ ಅಡ್ಡಾಡಿ ಕೊಂಡು ಹಾಯಾಗಿಯೇ ಕೆಲ ದಿನ ಕಳೆಯಿತು. ಹೀಗಿರುವಾಗ ಒಮ್ಮೆ ಬೇಟೆಗಾರ ಕಾಡಿಗೆ ಬಂದ. ಆತನ ಕಣ್ಣಿಗೆ ಈ ಚಂದದ ಪಾರಿವಾಳ ಬಿದ್ದಿತು. ನೋಡುತ್ತಾನೆ. ಅದೆಂಥ ಚಮತ್ಕಾರ, ಏಕೆಂದರೆ ಆ ಪಾರಿವಾಳದ ಬಾಯಿಂದ ಎಂಜಲು ತೊಟ್ಟಿಕ್ಕಿ ಅದು ಚಿನ್ನವಾಗುದನ್ನು ನೋಡಿದ. ಚಿನ್ನ ಎಂದರೆ ಯಾರಿಗೆ ಆಸೆ ಇಲ್ಲ ಸಹಜವಾಗಿ ಆ ಪಾರಿವಾಳವನ್ನು ಹಿಡಿಯಬೇಕೆಂದು, ಬೇಡ ಒಂದು ಜಾಲವನ್ನು ಬಿಸಿ ಅದರ ಮೇಲೆ ಕಾಡಿನಲ್ಲಿ ನಾನಾ ತರದ ಹಣ್ಣುಗಳನ್ನೆಲ್ಲ ತಂದು ಅದರಲ್ಲಿಟ್ಟು ಮುದ್ದು ಮುದ್ದಾಗಿ, ಏ ಪಾರಿವಾಳ ಆವ್ ಫೇಲ್ ಕಾವೋ, ಆವೋ ಜಲ್ದಿ ಆವೋ ಹಣ್ಣು ತಿನ್ನು ಎಂದು ಕರೆದ. ಪಾರಿವಾಳಕ್ಕೂ ಹೊಸದು, ಪಾಪ ಎಷ್ಟು ಒಳ್ಳೆಯವನು ಹಣ್ಣು ಕೊಡುತ್ತಿದ್ದಾನೆ ಎಂದು ಹಾರಿ ಬಂದು ಬಲೆಯಲ್ಲಿ ಸಿಕ್ಕಿಬಿದ್ದಿತು. ಬೇಡ ಪಾರಿವಾಳವನ್ನು ಮನೆಗೆ ಒಯ್ದು ಒಂದು ಪಂಜರದಲ್ಲಿಟ್ಟು, ಹಣ್ಣು ಹಂಪಲು ಕೊಟ್ಟು ಸಾಕುತ್ತಿದ್ದನು. ಪಾರಿವಾಳದ ಎಂಜಲಿಂದ ನಿತ್ಯವೂ ಸಾಕಷ್ಟು ಬಂಗಾರ ಸಿಗುತ್ತಿತ್ತು. ಬೇಟೆಗಾರ ಬಂಗಾರ ಮಾಡಿ ತನಗೆ ಬೇಕಾದಂತ ಮನೆ, ಕಾರು, ಆಸ್ತಿ ಮಾಡಿ ಕೊಂಡನು. ಕೆಲವೇ ದಿನಗಳಲ್ಲಿ ಊರಿಗೆ ಶ್ರೀಮಂತನಾದ. ಇದ್ದಕ್ಕಿದ್ದಂತೆ ಬೇಡನಿಗೆ ಯೋಚನೆ ಬಂದಿತು. ನನ್ನ ಸ್ಥಿತಿ ಹೇಗಿತ್ತು? ಈಗ ಹೇಗಾಗಿದ್ದೇನೆ. ಈಗಾ ಗಲೇ ಎಷ್ಟೋ ಜನಕ್ಕೆ ಅನುಮಾನ ಬಂದಿದೆ. ಎಲ್ಲಾ ಸೇರಿ ರಾಜನಿಗೆ ದೂರು ಕೊಟ್ಟ ರೆ ರಾಜನ ನನ್ನನ್ನು ಕರೆಸಿ ತನಿಕೆ ಮಾಡಿ ವಿಷಯ ತಿಳಿದ ಮೇಲೆ ನನಗೆ ಕಠಿಣ ಶಿಕ್ಷೆಗೆ ಒಳಪಡಿಸುತ್ತಾನೆ ಎಂದು ಹೆದರಿದ. ಎರಡು ದಿನ ಯೋಚಿಸಿ, ಮೂರನೇ ದಿನ ಹೀಗೆ ಯೋಚಿಸಿದ ಊರಿನ ಜನರೆಲ್ಲ ದೂರು ಕೊಡುವ ಮೊದಲೇ ನಾನೇ ರಾಜನ ಬಳಿ ಹೋಗಿ ಇರುವ ಸಂಗತಿ ಹೇಳಿ ಈ ಪಾರಿವಾಳವನ್ನು ರಾಜರಿಗೆ ಉಡುಗೊರೆ ಕೊಡುತ್ತೇನೆ ರಾಜನಿಗೆ ಖುಷಿಯಾಗಿ ಸನ್ಮಾನ ಮಾಡಿ ಕೊಡುಗೆಗಳನ್ನು ಕೊಡುತ್ತಾನೆ ಮರುದಿನ ಪಂಜರದ ಸಮೇತ ಪಾರಿವಾಳದ, ಅರಮನೆಯ ಸಭೆಗೆ ಬಂದನು. ರಾಜನಿಗೆ ಹೇಳಿದ, ಪ್ರಭು ನೆನ್ನೆ ಬೇಟೆಯಾಡಲು ಹೋದಾಗ ನನಗೆ ಈ ಪಾರಿವಾಳ ಸಿಕ್ಕಿತು. ಇದು ಎಂಜಲು ಉಗಿದರೆ ಅದು ಚಿನ್ನವಾಗುತ್ತದೆ ಇಂಥ ಅಪರೂಪದ ವಸ್ತು ಅರಮನೆಯಲ್ಲಿ ಇರುವುದೇ ಕ್ಷೇಮ ಎಂದು ನಿಮಗೆ ಉಡುಗೊರೆ ಕೊಡಲು ಬಂದಿದ್ದೇನೆ ಎಂದನು. ಸಭಿಕರಿಗೆ ಮತ್ತು ರಾಜನಿಗೆ ಬೇಡನ ಮಾತನ್ನು ಕೇಳಿ ಅವನ ಕೈಯಲ್ಲಿದ್ದ ಪಂಜರ ಮತ್ತು ಪಾರಿವಾಳವನ್ನು ನೋಡಿ ಆಶ್ಚರ್ಯವಾಯಿತು. ರಾಜ ನಂತೂ ಖುಷಿಯಿಂದ ಪಂಜರವನ್ನು ತೆಗೆದುಕೊಳ್ಳಲು ಬೇಡನ ಬಳಿ ಬಂದನು. ಆ ಹೊತ್ತಿಗೆ ಬುದ್ಧಿವಂತ ಮಂತ್ರಿ ಹೇಳಿದ. ಪ್ರಭು ಪಂಜರವನ್ನು ಮುಟ್ಟಬೇಡಿ ಈ ಬೇಡನು ಅಜ್ಞಾನಿ. ನಿಮ್ಮನ್ನು ಆಕರ್ಷಿಸಲು ಹೀಗೆ ತಂತ್ರ ಹೊಡಿದ್ದಾನೆ. ಮೊದಲು ಆ ಪಂಜರದಲ್ಲಿರುವ ಪಕ್ಷಿಯನ್ನು ಬಿಡುಗಡೆಗೊಳಿಸಿ ಎಂದನು. ಪಾರಿವಾಳ ತೆಗೆದುಕೊಳ್ಳಲು ಮುಂದೆ ಬಂದ ರಾಜ ಹಿಂದೆ ಸರಿದು, ಏಯ್ ಬೇಡನೆ ನನ್ನನ್ನೇ ಮೂರ್ಖನನ್ನಾಗಿ ಮಾಡುವೆಯಾ? ಎಂದು ಸಿಡಿ ಮಿಡಿ ಗುಟ್ಟಿ ಆ ಪಂಜರ ವನ್ನು ತೆಗೆದುಕೊಂಡು ಪಕ್ಷಿಯನ್ನು ಬಿಡುಗಡೆ ಮಾಡುವಂತೆ ಮಂತ್ರಿಗಳಿಗೆ ಹೇಳಿದ. ಕೂಡಲೇ ಮಂತ್ರಿಗಳು ಬೇಡನಿಂದ ಪಂಜರ ತೆಗೆದುಕೊಂಡು ಅದರ ಬಾಗಿಲು ತೆಗೆದು ಪಾರಿವಾಳವನ್ನು ಹಾರಿಬಿಟ್ಟನು. ಪಾರಿವಾಳ ಹಾರುವಾಗ ಎರಡು ಹನಿ ಎಂಜಲನ್ನು ರಾಜನ ಸಮೀಪ ಹಾಕಿ ಹಾರಿ ಹೋಯಿತು. ಅವರೆಲ್ಲರೂ ನೋಡುತ್ತಿ ದ್ದಂತೆ ಆ ಎಂಜಲು ಬಂಗಾರವಾಯಿತು. ಇದನ್ನು ಕಂಡು ಸಭಿಕರಿಗೆ ಆಶ್ಚರ್ಯ ವಾಯಿತು. ರಾಜನಿಗೆ ಆತಂಕವಾಯಿತು. ಮಂತ್ರಿಯು ಬೆಪ್ಪನಾದ, ಬೇಡನು ನಿರಾಸೆಗೊಂಡನು. ಬಿಡುಗಡೆ ಹೊಂದಿದ ಪಾರಿವಾಳ ಹಾರಿ ಕೈಲಾಸಕ್ಕೆ ಹೋಗಿ ಶಿವನ ಬಳಿ ನಿಂತಿತು. ಶಿವನಿಗೆ ಎಲ್ಲವೂ ಅರ್ಥವಾಗಿತ್ತು. ಪಾರಿವಾಳವನ್ನು ಹಿಂದಿನಂತೆ ಶಿವಭಕ್ತನನ್ನಾಗಿ ಪರಿವರ್ತಿಸಿದನು. ಶಿವನು ಈ ವಿಚಾರ ಎಲ್ಲರಿಗೂ ತಿಳಿಯಲೆಂದು, ಮೂರ್ಖತನ ಎಂದರೇನು? ಯಾರೆಲ್ಲ ಮೂರ್ಖರು ಎಂಬುದು ನಿನಗೆ ತಿಳಿಯಿತೇ ಎಲ್ಲವನ್ನು ಹೇಳು ಎಂದನು. ಶಿವ ಭಕ್ತ ಹೇಳಿದ ಪ್ರಭು ಭೂಲೋಕದಲ್ಲಿ ನಾನು ನಾಲ್ಕು ಜನ ಮೂರ್ಖರನ್ನು ಕಂಡೆನು. ನಮ್ಮ ಎದುರಿಗೆ ಪ್ರೀತಿಯಿಂದ ಮಾತಡಿ ಕರುಣೆಯಿಂದ ನೋಡಿ, ನಮ್ಮನ್ನು ಕಂಡರೆ ಇಷ್ಟಪಡುತ್ತಾರೆ ನಮಗೆ ಒಳ್ಳೆಯದನ್ನೇ ಬಯಸುತ್ತಾರೆ ಅಂತ ನಂಬಿ ಹೋಗುವವರು ಮೂರ್ಖರು. ಅ ಮೂರ್ಖ ನಾನಾಗಿದ್ದು ಬೇಟೆಗಾರ ಪ್ರೀತಿಯಿಂದ ಹಣ್ಣು ಕೊಡುತ್ತಿದ್ದಾನೆ ಎಂದು ತಿನ್ನಲು ಹೋಗಿ ಬಲೆಯಲ್ಲಿ ಸಿಕ್ಕಿಬಿದ್ದೆ. ಎರಡನೆಯ ಮೂರ್ಖ ಬೇಟೆಗಾರ’ ಅನಗತ್ಯವಾಗಿ ಭಯಪಟ್ಟುಕೊಂಡು, ತನಗೆ ದೊರಕಿದ ಸಂಪತ್ತನ್ನು ಕಳೆದುಕೊಂಡ. ಮೂರನೆಯವನು ಮಂತ್ರಿ ತಮ್ಮನ್ನು ತಾವೇ ಬುದ್ಧಿವಂತ ತನಗೆ ಎಲ್ಲಾ ಗೊತ್ತು, ಅವಿದ್ಯಾವಂತನಿಗೆ ಏನು ಗೊತ್ತಿರುವುದಿಲ್ಲ ಅಂತ ತಿಳಿದುಕೊಂಡಿದ್ದು ಮಂತ್ರಿಯ ಮೂರ್ಖತನ. ನಾಲ್ಕನೇದಾಗಿ ಸ್ವತಃ ರಾಜನೆ ಆಗಿದ್ದ. ಮಂತ್ರಿ ಹೇಳಿದ ಮಾತನ್ನು ಪರಿಶೀಲಿಸದೆ, ವಿಚಾರಣೆ ಮಾಡದೆ, ಸಭಿಕರ ಜೊತೆ ಸಮಾಲೋಚಿಸದೆ, ತಾನು ಯೋಚಿಸದೆ ಹಾಗೂ ಈ ಸ್ವಲ್ಪವೂ ಅವಕಾಶ ಕೊಡದೆ, ಮಂತ್ರಿ ಹೇಳಿದ ಮಾತನ್ನು ಪರಿಶೀಲಿಸದೆ, ಸಭಿಕರನ್ನು ಕೇಳದೆ, ಬೇಡನನ್ನು ಸರಿಯಾಗಿ ವಿಚಾರಣೆ ಮಾಡದೆ ಪಂಜರದ ಬಾಗಿಲನ್ನು ತೆಗೆದು ಪಕ್ಷಿಯನ್ನು ಹೊರಗೆ ಬಿಡಲು ಅವಕಾಶ ಮಾಡಿಕೊಟ್ಟ ರಾಜನು ಮೂರ್ಖ. ಭಗವಂತ ಮೂರ್ಖತನದ ಪ್ರಶ್ನೆ ಕೇಳಿ ನಿನ್ನಿಂದ ದೊಡ್ಡ ಪಾಠ ಕಲಿತೆ. ಮೂರ್ಖ ಜನರ ಜೊತೆ ಏಗುವುದಕ್ಕಿಂತ ಲೋಕದ ಉಸಾಬರಿ ಬಿಟ್ಟು, ಶಿವನಾಮ ಸ್ಮರಣೆ ಮಾಡುತ್ತಾ ನಿನ್ನ ಸಾನಿಧ್ಯದಲ್ಲಿರುವ ಸೌಭಾಗ್ಯಕ್ಕಿಂತ ಶ್ರೇಷ್ಠವಾದ್ದು ಯಾವುದು ಇಲ್ಲ ಎಂದ ಶಿವಭಕ್ತನು ಭಕ್ತಿಯಿಂದ ಕೈ ಮುಗಿದು ಪ್ರಾರ್ಥಿಸಿ ಶಿವನಿಗೆ ನಮಸ್ಕರಿಸಿದನು. ಶಿವಂ ಶಾಂತಂ ಜಗನ್ನಾಥಂ ಲೋಕಾನು ಗ್ರಹಕಾರಕಂ ! ಶಿವ ಮೇಕಪದಂ ನಿತ್ಯಂ ಶಿಖಾರಾಯ ನಮೋ ನಮಃ ಬರಹ:- ಆಶಾ ನಾಗಭೂಷಣ.
ಸಗರ ಚಕ್ರವರ್ತಿ ಪೂರ್ವದಲ್ಲಿ ಅಯೋಧ್ಯಾನಗರಿಯನ್ನು ಸಗರನೆಂಬ ಚಕ್ರವರ್ತಿ ಆಳುತ್ತಿದ್ದ. ಅವನಿಗೆ ಇಬ್ಬರು ಹೆಂಡತಿಯರು. ಹಿರಿಯಳಾದ ಕೇಶಿನಿ ಧರ್ಮಿಷ್ಠೆ. ಕಿರಿಯವಳಾದ ಸುಮತಿಗೆ ಆಸೆ ಹೆಚ್ಚು. ಸಗರ ತನ್ನ ಪತ್ನಿಯರೊಂದಿಗೆ ಸಂತಾನಾಪೇಕ್ಷಿಯಾಗಿ ತಪಸ್ಸು ಮಾಡಿದ. ಭೃಗುಮುನಿಗಳು ತೃಪ್ತರಾಗಿ ಹೀಗೆ ವರ ನೀಡಿದರು- ರಾಜಾ ನಿನ್ನ ಪತ್ನಿಯರಲ್ಲಿ ಒಬ್ಬಳಿಗೆ ವಂಶವನ್ನು ನಡೆಸುವ ಒಬ್ಬ ಮಗನಾಗುತ್ತಾನೆ, ಇನ್ನೊಬ್ಬಳಿಗೆ ಅರವತ್ತು ಸಾವಿರ ಪುತ್ರರು ಹುಟ್ಟುತ್ತಾರೆ ಎಂದರು. ಕೇಶಿನಿ ಒಬ್ಬ ಮಗ ಸಾಕು ಎಂದಳು, ಸುಮತಿ ಅರವತ್ತು ಸಾವಿರ ಮಕ್ಕಳನ್ನು ಬೇಡಿದಳು. ಕೇಶಿನಿಗೆ ಅಸಮಂಜ ಎಂಬ ಮಗ ಹುಟ್ಟಿದ. ಆತ ವಿಕ್ಷಿಪ್ತ ಸ್ವಭಾವದವನು, ವಿಘ್ನಸಂತೋಷಿ. ಬೇರೆಯವರ ನೋವನ್ನು ನೋಡಿ ಸಂತೋಷಪಡುವವನು. ಆತ ಅಯೋಧ್ಯೆಯ ಪುಟ್ಟ ಮಕ್ಕಳನ್ನು ಸರಯೂ ನದಿಗೆ ಎಸೆದು, ಅವರು ಮುಳುಗುತ್ತಾ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿ ಅಳುವಾಗ ಸಂತೋಷ ಪಡುತ್ತಿದ್ದನಂತೆ. ಈ ಅಸಮಂಜನಿಗೆ ಅಂಶುಮಂತನೆಂಬ ಮಗ ಜನಿಸಿದ. ಅವನು ವೀರ, ವಿನಯಿ ಮತ್ತು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಸಗರನ ಇನ್ನೊಬ್ಬ ಪತ್ನಿ ಸುಮತಿ ಸೋರೆಕಾಯಿಯಂಥ ಪಿಂಡವನ್ನು ಹಡೆದಳು. ಆ ಪಿಂಡ ಒಡೆದು ಅರವತ್ತು ಸಾವಿರ ಶಿಶುಗಳು ಬಂದವು. ಸಗರ ಒಮ್ನೆ ಅಶ್ವಮೇಧ ಯಾಗ ಮಾಡಬೇಕೆಂದು ನಿಶ್ಚಯಿಸಿ ಗುರುಗಳೊಂದಿಗೆ ಚರ್ಚಿಸಿ ಯೋಜನೆ ಮಾಡಿದ. ಯಜ್ಞ ಪ್ರಾರಂಭವಾಯಿತು. ಯಜ್ಞದ ಕುದುರೆಯನ್ನು ಅಂಶುಮಂತ ರಕ್ಷಿಸಿಕೊಂಡು ನಡೆದ. ಆಗ ಇಂದ್ರ ಮಾಯೆಯಿಂದ ರಾಕ್ಷಸ ಶರೀರವನ್ನು ಧರಿಸಿ ಯಜ್ಞದ ಕುದುರೆಯನ್ನು ಅಪಹರಿಸಿಕೊಂಡು ಹೋದ. ಋತ್ವಿಜರು, ರಾಜಾ, ಯಜ್ಞಾಶ್ವವನ್ನು ಯಾರೋ ಅಪಹರಿಸಿದ್ದಾರೆ. ಅದನ್ನು ಬೇಗನೇ ತರಿಸು. ಯಜ್ಞದ ಕುದುರೆ ದೊರಕದಿದ್ದರೆ ಯಜ್ಞಭಂಗವಾಗಿ ನಮ್ಮೆಲ್ಲರಿಗೂ ಕೇಡಾಗುತ್ತದೆ ಎಂದು ಒತ್ತಾಯಿಸಿದರು. ಸಗರ ಚಕ್ರವರ್ತಿ ತನ್ನ ಅರವತ್ತು ಸಾವಿರ ಮಕ್ಕಳಿಗೆ ಹೇಳಿದ, ಪುತ್ರರೇ, ಇಂಥ ಪವಿತ್ರವಾದ ಯಜ್ಞಕ್ಕೆ ಅಡ್ಡವಾಗಿ ರಾಕ್ಷಸರು ಹೇಗೆ ಬಂದರೋ ತಿಳಿಯದು. ನೀವು ಹೋಗಿ ಆ ಯಜ್ಞಾಶ್ವವನ್ನು ಹುಡುಕಿ ತನ್ನಿ. ಆ ಕಾರ್ಯಕ್ಕೆ ಏನು ಬೇಕೋ ಅದನ್ನು ಮಾಡಿ. ಬೇಕಾದರೆ ನೆಲವನ್ನು ಸೀಳಿ, ಸಮುದ್ರವನ್ನು ಬರಿದು ಮಾಡಿ ಎಂದ. ತಂದೆಯ ಆಜ್ಞೆಯಂತೆ ಈ ಮಕ್ಕಳು ಭೂಮಿಯ ಅಂಗುಲ ಅಂಗುಲ ಶೋಧಿಸತೊಡಗಿದರು. ಹರಿತವಾದ ಆಯುಧಗಳಿಂದ, ಶೂಲಗಳಿಂದ ನೆಲವನ್ನು ಭೇದಿಸತೊಡಗಿದರು. ದೇವತೆಗಳು ಭೀತರಾಗಿ ಬ್ರಹ್ಮನ ಬಳಿಗೆ ತೆರಳಿ, `ಸಗರ ಪುತ್ರರು ಒಂದೇ ಸಮನೆ ಭೂಮಿಯನ್ನು ಅಗೆಯುತ್ತಿದ್ದಾರೆ. ಇದರಿಂದ ಭೂಮಿಗೆ ಮುಂದೆಂದೂ ತುಂಬಿಕೊಳ್ಳಲಾಗದ ನಷ್ಟವಾಗುತ್ತದೆ. ಇದನ್ನು ತಡೆಯಬೇಕು ಎಂದರು. ಆಗ ಬ್ರಹ್ಮ ಹೇಳಿದ ಮಾತು ಇದು. ಪಥಿವ್ಯಾಶ್ಚಾಪಿ ನಿರ್ಭೇದೋ ದಷ್ಟ ಏವ ಸನಾತನಃ ಸಗರಸ್ಯ ಚ ಪುತ್ರಾಣಾಂ ವಿನಾಶೋ ದೀರ್ಘಜೀವಿನಾಮ್ (ವಾಲ್ಮೀಕಿ ರಾಮಾಯಣ, ಸರ್ಗ 40, ಶ್ಲೋಕ 4) ಭೂಮಿಯ ಛೇದನ ಕಾರ್ಯ ಪ್ರತಿ ಕಲ್ಪದಲ್ಲೂ ನಡೆಯುತ್ತಲೇ ಇದೆ. ಇದರಿಂದ ಅಲ್ಪಾಯುಗಳಾದ ಸಗರ ಪುತ್ರರ ವಿನಾಶವೂ ಆಗುತ್ತದೆ. ಅಹಂಕಾರಿಗಳಾದ ಸಗರ ಪುತ್ರರು ಕುದುರೆಯನ್ನು ಹುಡುಕುವುದಕ್ಕಾಗಿ ಭೂಮಿಯನ್ನು ಬಗೆದು ಪಾತಾಳ ಕ್ಕೆ ಹೋಗಿ ಅಲ್ಲಿ ತಪಸ್ಸು ಮಾಡುತ್ತಿದ್ದ ಕಪಿಲ ಮುನಿಯನ್ನು ಕಂಡರು. ಅವನ ಪಕ್ಕದಲ್ಲೆ ಯಜ್ಞಾಶ್ವ ಮೇಯುತ್ತಿತ್ತು. ಅವನೇ ಕುದುರೆಯ ಕಳ್ಳನಿರಬೇಕೆಂದು ಅವನ ಮೇಲೆ ಆಕ್ರಮಣ ಮಾಡಲು ಹೋದಾಗ ಆ ಋಷಿಗೆ ಕೋಪ ಬಂದು ಒಮ್ಮೆ ಹೂಂಕಾರ ಮಾಡಿದ. ಆಗ ಉಂಟಾದ ಜ್ಞಾಲೆಯಲ್ಲಿ ಸಗರನ ಅರವತ್ತು ಸಾವಿರ ಮಕ್ಕಳು ಸುಟ್ಟು ಬೂದಿಯಾಗಿ ಹೋದರು. ಕೊನೆಗೆ ಸಗರನ ವಂಶದವನೇ ಆದ ಭಗೀರಥನೆಂಬಾತ ( ಸಗರನ ಮಗ ಅಸಮಂಜನ ಮಗ ಅಂಶುಮಂತ, ಅಂಶುಮಂತನ ಮಗ ದಿಲೀಪ, ದೀಪನ ಮಗ ಭಗೀರಥ) ದೇವಲೋಕದಿಂದ ಗಂಗೆಯನ್ನು ತಂದು ಬೂದಿಯ ರಾಶಿ ಮೇಲೆ ಹರಿಸಿದಾಗ ಅವರಿಗೆಲ್ಲಾ ಸದ್ಗತಿ ಲಭಿಸಿತು. ( ಈ ಕಥೆ ಎಷ್ಟು ಧ್ವನಿಪೂರ್ಣವಾಗಿದೆಯಲ್ಲವೇ. ತಮ್ಮ ಸ್ವಂತ ಲಾಭಕ್ಕಾಗಿ, ಪರರಿಗೆ ಆಗುವ ತೊಂದರೆ ಗಮನಿಸದೇ ನೆಲವನ್ನು ಸೀಳುವವರು ಹಿಂದಿನಂತೆ ಈಗಲೂ ಇದ್ದಾರಲ್ಲವೇ? ಉದಾ: ಅಕ್ರಮ ಗಣಿಗಾರಿಕೆ ಮಾಡುವವರು. ಹೀಗೆ ಭೂಮಿ ಛೇದನ ಮಾಡುವವರು ಅಲ್ಪಾಯುಷಿಗಳಾಗಿ ವಿನಾಶ ಹೊಂದುತ್ತಾರೆ ಎಂದು ಬ್ರಹ್ಮ ಅಂದು ಹೇಳಿದ ಮಾತು ಈಗಲಾದರೂ ಅಂಥವರ ಗಮನಕ್ಕೆ ಬರುವುದು ಒಳ್ಳೆಯದು. ಇವು ಬರೀ ಕಥೆಗಳಾಗಿರದೇ ಸಾಂಕೇತಿಕವಾದ ಶಾಶ್ವತ ಸತ್ಯಗಳಾಗಿವೆ ಎನ್ನಿಸುತ್ತದೆ.)
ಕೂರ್ಮ ಅವತಾರ ಒಂದು ಬಾರಿ ದೇವೇಂದ್ರನ ಒಡ್ಡೋಲಗಕ್ಕೆ ಕೋಪಕ್ಕೆ ಹೆಸರುವಾಸಿಯಾದ ದೂರ್ವಾಸ ಮುನಿಗಳು ಬಂದರು. ದೇವೇಂದ್ರ ಮೊದಲಿನಿಂದಲೂ ತನ್ನತನದ ಬಗ್ಗೆ ಜಂಬಪಟ್ಟುಕೊಳ್ಳುತ್ತಿದ್ದವನು. ಅವರು ಬಂದುದನ್ನು ಕಂಡರೂ ಸಹ, ಅಸಡ್ಡೆಯಿಂದ ಅತ್ತ ತಿರುಗಿಯೂ ನೋಡದೆ ಸಿಂಹಾಸನದ ಮೇಲೆ ಕುಳಿತಿರುವುದನ್ನು ಕಂಡು, ದೂರ್ವಾಸರಿಗೆ ತಡೆಯಲಾರದಷ್ಟು ಕೋಪ ಬಂತು. “ನೀನು ಯಾವ ಸಿರಿಮದದಿಂದ ಗರ್ವಿಷ್ಟನಾಗಿರುವೆಯೋ ಆ ಸಿರಿ ಸಂಪದ ಎಲ್ಲವೂ ನಾಶವಾಗಿ ಹೋಗಲಿ” ಎಂದು ಶಪಿಸಿ ಹೊರಟುಹೋದರು. ತನ್ನ ಸಕಲ ಸಿರಿಸಂಪದವನ್ನೂ ಕಳೆದುಕೊಂಡ ದೇವೇಂದ್ರ ಹಾಗೂ ಅವನ ಪ್ರಜೆಗಳು, ದೇವತೆಗಳು ಭಿಕಾರಿಗಳಂತಾದರು. ದೇವೇಂದ್ರ ಈಗ ತನ್ನ ಅವಿವೇಕಕ್ಕಾಗಿ ಪರಿತಪಿಸುತ್ತಾ, ತನ್ನ ಬಳಗದವರೊಂದಿಗೆ ಸೃಷ್ಟಿಕರ್ತನಾದ ಬ್ರಹ್ಮನ ಬಳಿಗೆ ಬಂದು, ತಮ್ಮ ದುರವಸ್ಥೆಯ ಬಗ್ಗೆ ದೀನಾವಸ್ಥೆಯಲ್ಲಿ ಹೇಳಿಕೊಂಡ. ಮತ್ತೆ ಸಂಪತ್ತನ್ನು ಪಡೆಯುವ ಪರಿಯನ್ನು ತಿಳಿಸಲು ಕೇಳಿಕೊಂಡ. ಬ್ರಹ್ಮನಿಗೂ ಸಮಸ್ಯೆ ಬಗೆಹರಿಯದಂತಾಯಿತು. ಅವನು ಸರ್ವರ ರಕ್ಷಣೆಯ ಹೊರೆ ಹೊತ್ತಿರುವ ವಿಷ್ಣುವಿನ ಬಳಿ ಮೊರೆ ಹೋಗಲು ಸೂಚಿಸಿದ. ಅವನ ಸೂಚನೆಯಂತೆ ಎಲ್ಲರೂ ವಿಷ್ಣುವಿನ ನಿವಾಸ ಸ್ಥಳವಾದ ವೈಕುಂಠಕ್ಕೆ ಬಂದರು. ಕ್ಷೀರಸಾಗರದಲ್ಲಿ ಆದಿಶೇಷನನ್ನೇ ಹಾಸಿಗೆಯನ್ನಾಗಿ ಮಾಡಿಕೊಂಡು ಮಲಗಿದ್ದ ವಿಷ್ಣು ಹಾಗೂ ಶ್ರೀದೇವಿಯನ್ನು ಭಕ್ತಿಯಿಂದ ವಂದಿಸುತ್ತಾ ತಮಗೆ ಒದಗಿರುವ ಆಪತ್ತಿನಿಂದ ಪಾರು ಮಾಡಲು ಪ್ರಾರ್ಥಿಸಿದರು. ವಿಷ್ಣು ಅವರ ಪ್ರಾರ್ಥನೆಗೆ ಮನ್ನಣೆ ನೀಡುತ್ತಾ ಸಲಹೆ ನೀಡಿದ. “ದೂರ್ವಾಸರು ಕೋಪಿಷ್ಠರೆಂಬುದನ್ನು ಅರಿತಿದ್ದೂ ಸಹ, ನೀವು ನಡೆದು ಕೊಂಡಿರುವ ರೀತಿ ಅಕ್ಷಮ್ಯಕರ. ಈಗ ನಿಮ್ಮ ಮೇಲೆ ಸುಲಭವಾಗಿ ದಾನವರು ದಾಳಿ ಮಾಡಿ, ನಿಮ್ಮೆಲ್ಲರನ್ನೂ ಧ್ವಂಸ ಮಾಡದೆ ಬಿಡರು. ಈ ಮೊದಲೇ ನೀವು ಅವರೊಂದಿಗೆ ಸಮಯ ಸಿಂಧುವಿನಂತೆ ವರ್ತಿಸಿ, ಅವರ ಸ್ನೇಹ ಸಂಪಾದಿಸಿಕೊಳ್ಳಿ. ಇದಕ್ಕೊಂದು ಉಪಾಯ ನನಗೆ ಹೊಳೆಯುತ್ತಿದೆ....” ವಿಷ್ಣು ತನ್ನ ಮಾತನ್ನು ಮುಂದುವರಿಸುವ ಮೊದಲೇ ದೇವೇಂದ್ರ ಆತುರದಲ್ಲಿ ಪ್ರಶ್ನಿಸಿದ: “ಅದೇನು? ಆ ಉಪಾಯವನ್ನು ಬೇಗ ನಮಗೆ ತಿಳಿಸಿ.” ವಿಷ್ಣು ಮಾತು ಮುಂದುವರಿಸಿದ: “ನೀವು ಹಾಗೂ ದಾನವರು ಮಂದಾರ ಪರ್ವತವನ್ನು ಕಡೆಗೋಲನ್ನಾಗಿ ಮಾಡಿಕೊಳ್ಳಿ.” ಸರ್ಪರಾಜನಾದ ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕ್ಷೀರಸಾಗರವನ್ನು ಕಡೆಯಿರಿ. ಆಗ ಅಮೃತದ ಕಲಶ ಹೊರಬರುವುದು. ಕಲಶದಲ್ಲಿರುವ ಅಮೃತವೆಲ್ಲವೂ ನಿಮಗೇ ದಕ್ಕುವ ಮಾರ್ಗವನ್ನು ನಾನು ತೋರಿಸುತ್ತೇನೆ.” ದೇವೇಂದ್ರನು ವಿಷ್ಣುವಿನ ಸಲಹೆಯಂತೆ ದೈತ್ಯರಾಜನಾದ ವೈರೋಚನಿಯ ಬಳಿಗೆ ಬಂದ. ಅವನೊಂದಿಗೆ ಸಮಯೋಚಿತ ರೀತಿಯಲ್ಲಿ ಮಾತಾಡಿದ: “ದೈತ್ಯರಾಜ, ವೃಥಾ ದೇವದಾನವರು ಕಾದಾಡಿ, ಪ್ರಾಣಗಳನ್ನು ಕಳೆದುಕೊಳ್ಳುವ ಬದಲು ಅನ್ಯೋನ್ಯವಾಗಿರಲು ನಾವೇಕೆ ಯಾವುದಾದರೊಂದು ಮಾರ್ಗವನ್ನು ಹುಡುಕಬಾರದು? ಇದಕ್ಕಾಗಿ ವಿಷ್ಣು ಪರಮಾತ್ಮ ನಮ್ಮೀರ್ವರಿಗೂ ಒಂದು ಸಲಹೆ ನೀಡಿದ್ದಾನೆ.” “ಅದೇನು? ಆ ಸಲಹೆಯ ವಿಚಾರವನ್ನು ಬೇಗ ತಿಳಿಸು. ಸರಿ ತೋರಿದರೆ ನಾವೂ ಸಮ್ಮತಿಸುತ್ತೇವೆ.” ದೇವೇಂದ್ರ ಹೇಳಿದ: “ನಾವಿಬ್ಬರೂ ಮಂದಾರ ಪರ್ವತವನ್ನು ಕಡೆಗೋಲು, ವಾಸುಕಿಯನ್ನು ಹಗ್ಗ ಮಾಡಿಕೊಂಡು ಕ್ಷೀರಸಾಗರವನ್ನು ಕಡೆದರೆ, ಹಲವಾರು ಅಮೂಲ್ಯ ವಸ್ತುಗಳು ದೊರೆಯುವುವು. ಅಮೃತ ಕಲಶ ಹೊರಬರುವುದು. ಅಮೃತ ಪಾನದಿಂದ ನಾವೆಲ್ಲರೂ ಅಮರರಾಗಬಹುದು.” ವೈರೋಚನನಿಗೂ ಸಲಹೆ ಸೂಕ್ತ ಎನಿಸಿತು. ಅವನು ಹೇಳಿದನು. “ಏನೇ ಪಡೆದರೂ ನಮಗೆ ಸಮಪಾಲು ದೊರಕಿಸಿಕೊಡುವಿ ತಾನೇ?” ದೇವೇಂದ್ರ ಸಂತೋಷದಿಂದ ಸಮ್ಮತಿಸಿದ. ಎರಡೂ ಗುಂಪಿನವರೂ ಮಂದರಾಚಲ ಪರ್ವತವನ್ನು ಹೊತ್ತು ಕ್ಷೀರಸಾಗರದವರೆಗೆ ಬರುವುದರಲ್ಲಿ ಸುಸ್ತೋ ಸುಸ್ತಾದರು. ಕಡೆಗೆ ವಿಷ್ಣುವೇ ಅವರಿಗೆ ಈ ಕಾರ್ಯದಲ್ಲಿ ಸಹಾಯ ಮಾಡಬೇಕಾಗಿ ಬಂತು. ಕ್ಷೀರಸಾಗರದಲ್ಲಿ ಅದನ್ನು ನಿಲ್ಲಿಸಿ ವಾಸುಕಿಯನ್ನು ಹಗ್ಗವನ್ನಾಗಿ ಅದಕ್ಕೆ ಸುತ್ತಿದರು. ಹೆಡೆಯ ಭಾಗವನ್ನು ದಾನವರೂ ಬಾಲದ ಭಾಗವನ್ನು ದೇವತೆಗಳೂ ಭದ್ರವಾಗಿ ಹಿಡಿದುಕೊಂಡು ರಭಸದಿಂದ ಸಾಗರವನ್ನು ಕಡೆಯತೊಡಗಿದರು. ಮಾಸಗಟ್ಟಲೆ ಕಡೆಯುತ್ತಲೇ ಬಂದರು. ಅಮೃತ ಕಲಶ ಕಾಣಿಸಲಿಲ್ಲ. ಬದಲಾಗಿ ಪರ್ವತ ಅಲುಗಾಡುತ್ತಾ, ಸಾಗರದಲ್ಲಿ ಕುಸಿದು ಮುಳುಗಲಾರಂಭಿಸಿತು. ಭಯ-ಭೀತಿಯಿಂದ ದೇವ ದಾನವರೀರ್ವರೂ ಕೂಗಿಡತೊಡಗಿದರು. ಮಹಾವಿಷ್ಣುವೇ ಆಗ ಕೂರ್ಮ ಅಂದರೆ ದೊಡ್ಡ ಆಮೆಯ ರೂಪ ತಾಳಿದ. ಕುಸಿತದಿಂದ ಮುಳುಗುತ್ತಿದ್ದ ಪರ್ವತವನ್ನು ಮೇಲೆತ್ತಿ ನಿಲ್ಲಿಸಿದ. ಮತ್ತೆ ಕ್ಷೀರಸಾಗರವನ್ನು ಮಥಿಸಲು ದೇವದಾನವರು ಪ್ರಾರಂಭಿಸಿದರು. ಈ ರೀತಿಯ ಮಂಥನದ ಸಮಯದಲ್ಲಿ ಹಗ್ಗವಾಗಿ ಮಂದಾರಪರ್ವತಕ್ಕೆ ಬಿಗಿದಿದ್ದ ಸರ್ಪ, ವಾಸುಕಿಗೆ ತುಂಬಾ ಘಾಸಿ ಆಯಿತು. ಅದರ ಘಾಸಿತನದ ಕಾರಣ ಅದರ ಬಾಯಿಂದ ವಿಷಜ್ವಾಲೆ ವಿಕರಾಳ ರೂಪದಲ್ಲಿ ಹೊರಬರತೊಡಗಿತು. ದೇವದಾನವರನ್ನು ಈ ವಿಷಜ್ವಾಲೆ ಸುಡತೊಡಗಿತು. ಇದನ್ನು ಮನಗಂಡ ಮಹಾವಿಷ್ಣು ವರುಣದೇವನಿಗೆ ಅಪಾರ ಮಳೆ ಸುರಿಸಲು ಅಪ್ಪಣೆ ಮಾಡಿದ. ತತ್ಕ್ಷಣವೇ ಕಾರ್ಮೋಡಗಳು ಕವಿದುವು. ಅಪಾರ ಮಳೆ ಸುರಿಯಿತು. ವಿಷಜ್ವಾಲೆ ತಣ್ಣಗಾಯಿತು. ಮಂಥನ ಕಾರ್ಯ ಮುಂದುವರಿಯಿತು. ಈಗ ಸಮುದ್ರಮಂಥನದ ಸಮಯದಲ್ಲಿ ಕಾಲಕೂಟ ಎಂಬ ಭಯಂಕರ ವಿಷ ಉದ್ಭವಿಸಿತು. ಮತ್ತೆ ಮಂಥಿಸುತ್ತಿದ್ದ ದೇವ-ದಾನವರು ತತ್ತರಿಸಿದರು. ಈ ಬಾರಿ ಪರಶಿವನು ದೇವ-ದಾನವರ ಸಹಾಯಕ್ಕೆ ಬಂದ. ಆ ಕಾಲಕೂಟ ವಿಷದ ಪ್ರವಾಹವನ್ನು ಒಂದು ಗುಳಿಗೆಯ ರೂಪದಲ್ಲಿ ಮಾರ್ಪಡಿಸಿ ಸ್ವತಃ ನುಂಗಿದ. ನುಂಗಿದ ಗುಳಿಗೆಯನ್ನು ಉದರದೊಳಗೆ ಪ್ರವೇಶಿಸಲು ಬಿಡದೆ ತನ್ನ ಕಂಠದಲ್ಲಿಯೇ ನಿಲ್ಲಿಸಿಕೊಂಡ. ಆ ಜಾಗ ನೀಲಿ ಬಣ್ಣ ತಾಳಿತು. ಆದ್ದರಿಂದಲೇ ನೀಲಕಂಠ ಎನಿಸಿಕೊಂಡ. ಇನ್ನೂ ಮುಂದೆ ಕಡೆಯುತ್ತಿದ್ದಂತೆ ದೀರ್ಘಾಯಾಸದಿಂದ ದೇವದಾನವರು ಒದ್ದಾಡತೊಡಗಿದರು. ಅವರ ಕೈಗಳು ಸೋತು ಹೋದುವು. ಸೊಂಟವೇ ಬಿದ್ದುಹೋದಂತಾಯಿತು. ಇವರೆಲ್ಲರ ಒದ್ದಾಟವನ್ನು ಕಂಡು ಮಹಾವಿಷ್ಣು ಮರುಕದಿಂದ ಪೀತಾಂಬರಧಾರಿಯಾಗಿ ಸ್ವತಃ ಕಡೆಯತೊಡಗಿದ. ತುಂಬಾ ಕಾಲದವರೆಗೆ ಒಬ್ಬನೇ ಹೀಗೆ ತನ್ನ ಕೈಗಳಿಂದ ಕಡೆಯುತ್ತಿರುವುದನ್ನು ಕಂಡು ದೇವದಾನವರು ಬೆಕ್ಕಸಬೆರಗಾದರು. ಅವರಿಗೆ ವಿಶ್ರಾಂತಿ ಕೊಡುವ ಸಲುವಾಗಿ ಕರುಣಾಮಯನಾದ ಶ್ರೀಹರಿ ಈ ಜವಾಬ್ದಾರಿಯನ್ನು ತಾನೇ ಹೊತ್ತ. ಹೀಗೆ ಕಡೆಯುತ್ತಿರುವಾಗ ಅಗ್ನಿಹೋತ್ರಿ ಎಂಬ ಹಸು ತನ್ನ ಕರುವಿನೊಂದಿಗೆ ಕಾಣಿಸಿಕೊಂಡಿತು. ಅವನ್ನು ಋಷಿಮುನಿಗಳ ಸೌಕರ್ಯಕ್ಕಾಗಿ ಶ್ರೀಹರಿಯೇ ದಾನ ನೀಡಿದ. ಇನ್ನೂ ಮುಂದೆ ಹೀಗೆಯೇ ಮಂಥನಕಾರ್ಯ ಮುಂದುವರಿಯುತ್ತಿದ್ದಂತೆ ಉಚ್ಚೈಶ್ರವ ಎಂಬ ಕುದುರೆ, ಐರಾವತ ಎಂಬ ಆನೆ ಉದ್ಭವಿಸಿದುವು. ಅವನ್ನು ದೇವೇಂದ್ರನು ತನಗಾಗಿ ಶ್ರೀಹರಿಯ ಅನುಮತಿಯೊಂದಿಗೆ ಪಡೆದ. ಬಳಿಕ ಉದ್ಭವಿಸಿದ ಪಾರಿಜಾತ ವೃಕ್ಷವನ್ನೂ ಶ್ರೀಹರಿ ದೇವತೆಗಳಿಗೆ ನೀಡಿದ. ಹೀಗೆಯೇ ತಡೆಯುತ್ತಿದ್ದಂತೆ ಹುಟ್ಟಿದ ಚಂದ್ರನನ್ನು ಪರಶಿವನು ತನ್ನ ಶಿರಶಿಖೆಯಲ್ಲಿ ಅಲಂಕರಿಸಿಕೊಂಡ. ಚಂದ್ರನ ಉದ್ಭವದ ಹಿಂದೆಯೇ ಲಕ್ಷ್ಮಿ ಉದ್ಭವಿಸಿದಳು. ಅವಳು ಶ್ರೀಹರಿಯ ಕೊರಳಿಗೆ ವರಮಾಲೆಯನ್ನು ಹಾಕಿ, ಆತನ ವಕ್ಷಸ್ಥಳದಲ್ಲಿ ಆಸೀನಳಾದಳು. ಕಡೆಗೆ ಒಂದು ಕೈಯಲ್ಲಿ ಅಮೃತಕಲಶವನ್ನೂ, ಇನ್ನೊಂದು ಕೈಯಲ್ಲಿ ಅಳಲೆಕಾಯಿಯನ್ನೂ ಹಿಡಿದುಕೊಂಡು ಧನ್ವಂತರಿ (ವೈದ್ಯರಾಜ) ಸಾಗರದಿಂದ ಹೊರಬಂದ. ದಾನವರು ಕೂಡಲೇ ಅವನ ಕೈಲಿದ್ದ ಕಲಶವನ್ನು ಅಪಹರಿಸಿದರು. ಮತ್ತೆ ದೇವತೆಗಳು ವಿಷ್ಣುವಿನ ಮೊರೆಹೋದರು. ಮಾಯಾವಿಯಾದ ವಿಷ್ಣು ದೇವತೆಗಳ ನೆರವಿಗಾಗಿ ಮೋಹಿನಿಯ ರೂಪತಾಳಿ ದಾನವರ ಮುಂದೆ ನಿಂತ. ಮೋಹಿನಿಯ ರೂಪಕ್ಕೆ ಬೆರಗಾದ ದಾನವರು ಮೋಹಗೊಂಡರು. ಎಲ್ಲರೂ ಅವಳನ್ನು ಬಯಸಿದರು. ಅವಳ ಅಂಗೈ ಮೇಲೆ ಕುಣಿಯತೊಡಗಿದರು. ಮೋಹಿನಿಯು ಅವರಿಂದ ಅಮೃತ ಕಲಶವನ್ನು ಪಡೆದಳು. ತಾನೇ ದೇವದಾನವರೀರ್ವರಿಗೂ ಅಮೃತವನ್ನು ಕುಡಿಸುವುದಾಗಿ ತಿಳಿಸಿ, ಈರ್ವಳ ಕಡೆಯವರನ್ನೂ ಬೇರೆ ಬೇರೆ ಸಾಲಿನಲ್ಲಿ ಕುಳ್ಳಿರಿಸಿದಳು. ಮೊದಲು ದೇವತೆಗಳ ಸಾಲಿಗೆ ಬಂದು ಅವರಿಗೆ ಕಲಶದಲ್ಲಿದ್ದ ಅಮೃತವನ್ನೆಲ್ಲಾ ಕುಡಿಸಿಬಿಟ್ಟಳು. ಹೀಗೆ ಕುಡಿಸುವಾಗ ರಾಹು ಮತ್ತು ಕೇತು ಎಂಬ ದಾನವರು ದೇವತೆಗಳ ಪಂಕ್ತಿಯಲ್ಲಿ ಕುಳಿತಿದ್ದ ಅವರಿಗೆ ಮಾತ್ರ ಅಮೃತಪಾನದ ಪ್ರಾಪ್ತಿ ಆಯಿತು. ಆದರೂ ಸುದರ್ಶನ ಚಕ್ರದ ಹೊಡೆತದಿಂದ ಅವರ ಕುತ್ತಿಗೆ ಕತ್ತರಿಸಿಬಿದ್ದು ಅರೆ ದೇಹಧಾರಿ ಆದರು. ದಾನವರಿಗೆ ಕುಡಿಸುವ ಸಮಯಕ್ಕೆ ಮೋಹಿನಿ ಮಾಯವಾಗಿ ಹೋದಳು. ಹೀಗೆ ಶ್ರೀಹರಿಯ ಕೃಪೆಯಿಂದ ದೇವತೆಗಳು ಅಮೃತಪಾನ ಮಾಡಿ ಅಮೃತತ್ವವನ್ನು ಪಡೆದರು. ° ಪ್ರತಿದಿನ ಆಧ್ಯಾತ್ಮಿಕ ವಿಷಯಗಳು ಹಾಗೂ ಪೌರಾಣಿಕ ಕಥೆಗಳನ್ನ ತಿಳಿದುಕೊಳ್ಳಲು " ನಮ್ಮ WhatsApp channel follow ಮಾಡಿ "👇 https://WhatsApp.oia.link/dinakkondu-adhyatmik-kathe 🙏🙏 ಧನ್ಯವಾದಗಳು 🙏🙏
ಕಂಸವಧೆ ಕಾಳಿಂಗ ಮರ್ಧನದ ನಂತರ ಕೃಷ್ಣನ ಕೀರ್ತಿ ಬೃಂದಾವನದಲ್ಲೇ ಅಲ್ಲ, ಸುತ್ತಮುತ್ತಲ ಪ್ರದೇಶದಲ್ಲೂ ವ್ಯಾಪಿಸಿತು. ವಿಚಾರ ಮಥsÀುರೆಯ ರಾಜನಾದ ಕಂಸನ ಕಿವಿಗೂ ಬಿತ್ತು. ಅವನೇ ಅಶರೀರವಾಣಿ ಹೇಳಿದ ತನ್ನ ಶತ್ರು ಏಕೆ ಆಗಿರಬಾರದು? ಎಂಬ ಶಂಕೆಯೂ ಬಲಗೊಳ್ಳತೊಡಗಿತು. ಬಾಲಕೃಷ್ಣನ ಲೀಲೆಗಳಿಂದ ಲೋಲುಪರೆನಿಸಿದ್ದ ಗ್ವಾಲ-ಬಾಲ-ಬಾಲೆಯರಂತೂ ಅವನೊಂದಿಗೆ ಇರಲು ಸದಾ ಮುಗಿಬೀಳುತ್ತಿದ್ದರು. ಬಾಲ-ಬಾಲೆಯರೇ ಅಲ್ಲ, ಯುವಕಯುವತಿಯರೂ, ಅದರಲ್ಲೂ ವಿವಾಹಿತ ಯುವತಿಯರೂ ಕೃಷ್ಣನೊಂದಿಗೆ ವಿಹರಿಸಲು, ವಿನೋದವಾಗಿ ಕಾಲ ಕಳೆಯಲು ತುಂಬಾ ಅಪೇಕ್ಷಿಸುತ್ತಿದ್ದರು. ಕೃಷ್ಣನಿಲ್ಲದ ಅವರ ಜೀವನವೇ ಅವರೆಲ್ಲರಿಗೂ ನೀರಸವೆನಿಸಿತ್ತು. ಕಡುಬೇಸರದ ಬೇಗುದಿಯಲ್ಲಿ ಮುಳುಗಿಸುತ್ತಿತ್ತು. ಒಂದು ಬಾರಿ ನಾರದ ಮಹರ್ಷಿಗಳು ಕಂಸನ ಬಳಿಗೆ ಬಂದರು. ಅವನೊಂದಿಗೆ ಕಾಲಹರಣ ಮಾಡುತ್ತಿದ್ದ ಸಮಯದಲ್ಲಿ ಕೃಷ್ಣ ಬಲರಾಮರ ಬಗ್ಗೆಯೂ ಸಲ್ಲಾಪಿಸುತ್ತಾ, ಕೃಷ್ಣನೇ ಕಂಸನ ವೈರಿ ಹಾಗೂ ಮೃತ್ಯುವಿಗೆ ಕಾರಣಪುರುಷ ಎಂಬುದನ್ನೂ ಸೂಕ್ಷ್ಮವಾಗಿ ತಿಳಿಸಿದರು. ಈಗಂತೂ ಕಂಸನ ಮುಂದೆ ಮೃತ್ಯುದೇವತೆಯೇ ನರ್ತಿಸುತ್ತಿರುವಂತೆ ಕಂಡುಬಂತು. ಹೇಗಾದರೂ ಮಾಡಿ ಅವರೀರ್ವರನ್ನೂ ಆದಷ್ಟು ಬೇಗ ಕೊನೆಗಾಣಿಸಲು ತವಕಗೊಂಡನು. ಕಂಸನ ಬಳಿ ಕೇಶಿ ಎಂಬ ರಕ್ಕಸ ಮಿತ್ರನಿದ್ದ. ಅಸಹಾಯಶೂರ ಎಂದು ಪರಿಗಣಿಸಲ್ಪಟ್ಟಿದ್ದ. ಕಂಸನಿಗೆ ತುಂಬಾ ಆಪ್ತನೂ ಆಗಿದ್ದ. ಕೃಷ್ಣನನ್ನು ಕೊಂದು ಬರಲು ಅವನನ್ನು ಬೃಂದಾವನಕ್ಕೆ ಕಳುಹಿಸಿದ. ಹಾಗೂ ಕೃಷ್ಣ ಹತನಾಗದಿದ್ದರೆ ಮಥsÀುರೆಗೇ ಉಪಾಯಾಂತರದಿಂದ ಕೃಷ್ಣಬಲರಾಮರನ್ನು ಕರೆಯಿಸಿ, ಚಾಣೂರ-ಮುಷ್ಟಿಕರೆಂಬ ಜಗಜ್ಜಟ್ಟಿಗಳೊಡನೆ ಮಲ್ಲಯುದ್ಧ ಮಾಡಿಸಿ ಕೊನೆಗೊಳಿಸಲು ಸ್ವತಃ ಗೋಪ್ಯವಾಗಿಯೇ ಯೋಜನೆ ಹಾಕಿಕೊಂಡ. ಕೇಶಿ ರಕ್ಕಸನೂ ಕೃಷ್ಣನಿಂದ ಕೊಲ್ಲಲ್ಪಟ್ಟ ಸುದ್ದಿ, ಕಂಸನ ಕಿವಿಗಳಲ್ಲಿ ಕಾದ ಸೀಸ ಬಿದ್ದಂತೆ ಬಿತ್ತು. ಇನ್ನು ತಡಮಾಡಿದರೆ ತನ್ನ ಸರ್ವನಾಶ ಆಗುವುದೆಂದು ಪರಿಗಣಿಸಿ, ಕೂಡಲೇ ಅಕ್ರೂರ ಎಂಬುವನನ್ನು ಬೃಂದಾವನದಿಂದ ಗೋಕುಲಕ್ಕೆ ಹೇಗಾದರೂ ಮಾಡಿ ಕರೆತರಲು ಕಳುಹಿಸಿಕೊಟ್ಟ. ಅಕ್ರೂರನಿಗೆ ಮೊದಲಿಂದಲೂ ಕೃಷ್ಣನನ್ನು ಸಂದರ್ಶಿಸುವ ಮನದಾಸೆ. ಈಗ ಈ ರೀತಿ ಆದರೂ ಫಲಿಸಿದುದನ್ನು ಕಂಡು, ಆನಂದದಿಂದಲೇ ಬೃಂದಾವನಕ್ಕೆ ಹೊರಟು ನಿಂತ. ಅಕ್ರೂರ ಬ್ರಹ್ಮಜ್ಞಾನಿ. ಅವನಿಗೆ ಕೆಲವೇ ದಿನಗಳಲ್ಲಿ ಕಂಸನು ಕೃಷ್ಣನಿಂದ ಕೊಲ್ಲಲ್ಪಡುವನೆಂಬ ವಿಷಯವೂ ಅರಿವಾಗಿತ್ತು. ಕಂಸನಿಗೆ ಕೊನೆಗಾಲ ಸಮೀಪಿಸುತ್ತಿರುವುದೆಂದೇ ಬಗೆದು ಬೃಂದಾವನಕ್ಕೆ ಬಂದ. ಬೃಂದಾವನದ ಹೆಬ್ಬಾಗಿಲಿನ ಬಳಿ ಕೃಷ್ಣನ ಹೆಜ್ಜೆಗಳನ್ನು ಗುರುತಿಸಿ, ಅವನು ತನ್ನ ಕೈಗಳಿಂದ ಸ್ಪರ್ಶಿಸಿ, ಭಕ್ತಿಯಿಂದ ನಮಿಸಿದ. ನಂದಯಶೋದೆಯರ ಮನೆಯಲ್ಲಿ ಈ ಬ್ರಹ್ಮಜ್ಞಾನಿಗೆ ಅತ್ಯಪೂರ್ವ ರೀತಿಯ ಆದರದ ಸ್ವಾಗತ ಲಭಿಸಿತು. ಆತಿಥ್ಯ ಸೇವೆಯೂ ನಡೆಯಿತು. ಊಟೋಪಚಾರದ ನಂತರ ಮಥsÀುರೆಯಲ್ಲಿ ನಡೆಯಲಿರುವ ಬಿಲ್ಲುಹಬ್ಬಕ್ಕೆ ಕೃಷ್ಣ ಬಲರಾಮರನ್ನು ಕಂಸಾಸುರನು ಆಹ್ವಾನಿಸಿರುವ ವಿಷಯವನ್ನು ತಿಳಿಸಿದ. ವಿಷಯ ತಿಳಿಯುತ್ತಿದ್ದಂತೆ ನಂದ-ಯಶೋಧೆಯರಿಗೆ ಅವರ ಮೇಲೆ ಬರಸಿಡಿಲೆರಗಿದಂತೆ ಭಾಸವಾಯಿತು. ಅವರಿಗಿಂತಲೂ ಅತೀವತರದ ದುಃಖ ಗೋಪ-ಗೋಪಿಯರಿಗಾಯಿತು. ಅದರಲ್ಲೂ ಕೃಷ್ಣನ ಪ್ರೇಯಸಿ, ರಾಧಾಗಂತೂ ಸಾವೇ ಸಂಭವಿಸುತ್ತಿರುವಂತೆ ತೋರಿತು. ಅವರೆಲ್ಲರಿಗೂ ಅಕ್ರೂರ ತನ್ನ ಬ್ರಹ್ಮಜ್ಞಾನದಿಂದ ಕೃಷ್ಣನನ್ನು ಕೆಲ ದಿನಗಳವರೆಗೆ ಮರೆತಿರಲು ಸಾಧ್ಯ ಆಗುವ ರೀತಿಯಲ್ಲಿ ಏನೇನೋ ಉಪದೇಶಿಸಿದ. ಆದರೆ ಅವರ ವಿರಹ ದುಃಖವನ್ನು ಹೋಗಲಾಡಿಸಲು ಅವನಿಂದ ಸಾಧ್ಯ ಆಗಲಿಲ್ಲ. ಕಂಸನ ರಾಜಾಜ್ಞೆಯನ್ನು ಉಲ್ಲಂಘಿಸಿದರೆ ಬೃಂದಾವನದಲ್ಲಿ ಇರುವವರೆಲ್ಲರಿಗೂ ಕೇಡು ತಪ್ಪದು, ಎಂಬ ವಿಷಯವನ್ನು ಗ್ರಹಿಸಿದ್ದ ನಂದಗೋಪ ಒಲ್ಲದ ಮನದಿಂದಲೇ ಕೃಷ್ಣಬಲರಾಮರನ್ನು ಅಕ್ರೂರನೊಂದಿಗೆ ಕಳುಹಿಸಿಕೊಡಲು ಒಪ್ಪಲೇಬೇಕಾಯಿತು. ಅವರೆಲ್ಲರನ್ನೂ ತನ್ನ ಮುಗ್ಧ ಹಾಗೂ ಸಮಯೋಚಿತ ಮಾತುಗಳಿಂದ ಸಮಾಧಾನಪಡಿಸುತ್ತಾ ಕೃಷ್ಣ ಬಲರಾಮರು ಬೃಂದಾವನದಿಂದ ಮಥsÀುರೆಗೆ ಪ್ರಯಾಣ ಬೆಳೆಸಿದರು. ಕೃಷ್ಣನು ತಮ್ಮನ್ನು ಅಗಲಿ ಹೋಗುತ್ತಿರುವುದನ್ನು ಕಂಡು, ಎಲ್ಲರೂ ಕಣ್ಣೀರ ಕೋಡಿ ಹರಿಸತೊಡಗಿದರು. ಮೃತ್ಯುದೇವತೆಯಂತೆ ಈ ಅಕ್ರೂರ ಯಾಕೆ ಬಂದನೋ! ಎಂದು ಅವನನ್ನು ಮನಸಾರೆ ಬಯ್ಯತೊಡಗಿದರು. ಮತ್ತೆ ಕೃಷ್ಣನನ್ನು ಕಾಣುವ ಭಾಗ್ಯ ನಿಜಕ್ಕೂ ತಮಗಿದೆಯೇ?! ಎಂದು ಕನವರಿಸತೊಡಗಿದರು. ಅಂತೂ ರಥದಲ್ಲಿ ಕುಳ್ಳಿರಿಸಿಕೊಂಡು, ಅಕ್ರೂರ ಅವರೀರ್ವರೊಂದಿಗೆ ಮಥsÀುರಾನಗರದ ಕಡೆ ಪ್ರಯಾಣ ಬೆಳೆಸಿದ. ರಥವು ಕಣ್ಮರೆ ಆಗುವವರೆಗೂ, ರೆಪ್ಪೆ ಹೊಡೆಯದೆ, ವಿವಶರಾಗಿ ನೋಡುತ್ತಿದ್ದ. ಆನಂತರ ಭಾರದ ವ್ಯಥಿತ ಹೃದಯದೊಂದಿಗೆ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಮರಳಿದರು. ರಥ ಮಥsÀುರಾನಗರದ ಹೆಬ್ಬಾಗಿಲ ಬಳಿ ಬಂತು. ಅಕ್ರೂರನು ಕೃಷ್ಣ ಬಲರಾಮರೊಂದಿಗೆ ಇಳಿಯುತ್ತಿದ್ದಂತೆ, ಮಥsÀುರೆಯ ಪುರಜನರು ಅವರನ್ನು ಮುತ್ತಿದರು. ಜಯಘೋಷ ಮಾಡಿದರು. ಸುಮಂಗಲೆಯರು ಶುಭಸೂಚಕ ರೀತಿಯಲ್ಲಿ ಆರತಿ ಬೆಳಗಿದರು. ಜನಜಂಗುಳಿಯಲ್ಲಿ ಮುಂದೆ ಮುಂದೆ ಬರುತ್ತಿದ್ದಂತೆ ಸುಧಾಮ ಎಂಬ ಮಾಲೆಗಾರ ಅವರನ್ನು ತಮ್ಮ ಮನೆಗೆ ಕರೆದೊಯ್ದು, ಆದರದ ಆತಿಥ್ಯ ನೀಡಿದ. ಅಲ್ಲಿಗೆ ಒಬ್ಬಳು ಕುಬ್ಜೆ ಆನಂದದಿಂದ ಬಂದು, ಅವರಿಗೆ ಶ್ರದ್ಧೆ ಭಕ್ತಿಯಿಂದ ನಮಸ್ಕರಿಸಿದಳು. ಕೃಷ್ಣ ಅವಳ ಗೂನು ಬೆನ್ನಿನ ಮೇಲೆ ಕೈ ಆಡಿಸುತ್ತಿದ್ದಂತೆ ಅವಳ ಗೂನು ಮಾಯವಾಯಿತು. ಅವಳಿಗಾದ ಆನಂದ ಅಷ್ಟಿಷ್ಟಲ್ಲ. ಕೃಷ್ಣಬಲರಾಮರನ್ನು ಕಂಸನ ಆಜ್ಞೆಯಂತೆ ಒಂದು ಸುಸಜ್ಜಿತ ಬಿಡಾರದಲ್ಲಿ ಬಿಡಲಾಯಿತು. ಅಂದುರಾತ್ರಿ ಕಂಸ ಸಾಕಷ್ಟು ಮಂದಿ ಮಲ್ಲರನ್ನೂ, ಹುಡುಗರನ್ನೂ ಬಿಡಾರದೊಳಗೆ ಅಣ್ಣತಮ್ಮಂದಿರೀರ್ವರನ್ನು ಕೊನೆಗಾಣಿಸಲು ಬಿಟ್ಟ. ಆದರೇ ಕೆಲವೇ ಕ್ಷಣದಲ್ಲಿ ಅವರೆಲ್ಲರೂ ಕೃಷ್ಣಬಲರಾಮರಿಂದ ಹತರಾದ ಸುದ್ದಿ ಬಂತು. ಕಂಸನಿಗೆ ನಿದ್ದೆಯೇ ಬರಲಿಲ್ಲ. ಮರುದಿನ ಕೃಷ್ಣಬಲರಾಮರನ್ನು ತನ್ನ ಒಡ್ಡೋಲಗಕ್ಕೆ ಕರೆಸಿದ. ಅವರು ಬರುತ್ತಿದ್ದಂತೆ ಕುವಲಯಾ ಪೀಡ ಎಂಬ ಮದ್ದಾನೆಯನ್ನು ಅವರ ಮೇಲೆ ಬಿಡಿಸಿದ. ಕೃಷ್ಣ ಬಲರಾಮರು ಮಾವಟಿಗರನ್ನು ಸದೆಬಡಿದರು. ಆನೆಯ ಸೊಂಡಲನ್ನೇ ಕತ್ತರಿಸಿಹಾಕಿದರು. ಅದು ಘೀಳಿಡುತ್ತಾ ಕೆಳಗುರುಳಿ ಸತ್ತುಬಿದ್ದಿತು. ಈಗ ಕಂಸನ ಆಜ್ಞೆಯಂತೆ ಚಾಣೂರ-ಮುಷ್ಟಿಕರೆಂಬ ಮಲ್ಲರು ಈರ್ವರನ್ನೂ ಮಲ್ಲಯುದ್ಧಕ್ಕೆ ಆಹ್ವಾನಿಸಿದರು. ಒಂದೊಂದೇ ಗುದ್ದಿಗೆ ಕೃಷ್ಣಬಲರಾಮರಿಂದ ಅವರು ಬಾಯಲ್ಲಿ ರಕ್ತ ಕಾರುತ್ತಾ ಸತ್ತು ಬಿದ್ದರು. “ಅವರಿಬ್ಬರನ್ನೂ ಕೊಲ್ಲಿರಿ” ಎಂದು ಮೃತ್ಯುಭೀತಿಯಿಂದ ಕಂಸ ಅಬ್ಬರಿಸಿದ. ಕೃಷ್ಣ ಒಂದೇ ನೆಗೆತಕ್ಕೆ ಕಂಸನು ಕುಳಿತಿದ್ದ ಸಿಂಹಾಸನದ ಮೇಲೆ ಸಿಂಹದ ಮರಿಯಂತೆ ಹಾರಿದ. ಕಂಸನ ತಲೆಗೆ ಗುದ್ದಿದ. ಕಂಸ ಪ್ರಜ್ಞಾಹೀನನಾದ. ಅವನ ಕರುಳನ್ನು ಬೊಗೆದೆಸೆದ. ಅವನನ್ನು ರಕ್ಷಿಸಲು ಬಂದ ಸೋದರರನ್ನು ಬಲರಾಮ ಕೊಂದು ಹಾಕಿದ. ಸೆರೆಮನೆಯಲ್ಲಿದ್ದ ಉಗ್ರಸೇನ ಮಹಾರಾಜನನ್ನು ಬಿಡುಗಡೆ ಮಾಡಿ ಕೃಷ್ಣನೇ ಸಿಂಹಾಸನದ ಮೇಲೆ ಕುಳ್ಳಿರಿಸಿದ. ಎಲ್ಲರ ಪ್ರಶಂಸೆ ಹಾಗೂ ಹಾರೈಕೆಯ ಹರ್ಷದೊಂದಿಗೆ ಕೃಷ್ಣಬಲರಾಮರು ಬೃಂದಾವನಕ್ಕೆ ಹಿಂದಿರುಗಿದರು.
ಬಾಲಕೃಷ್ಣನ ಅದ್ಭುತ ಲೀಲೆಗಳು ಕಂಸನಿಗೆ ಈಗ ತನ್ನ ಮೃತ್ಯುಪ್ರಾಯ ಶತ್ರುವಿನ ಭಯ ಹೆಚ್ಚಿತು. ಆ ಶತ್ರುವನ್ನು ಎಲ್ಲಿದ್ದರೂ ಹುಡುಕಿ, ಹಿಡಿದು ತರಲು ತನ್ನ ಮಂತ್ರಿಗಳು, ಸೇನಾಧಿಪತಿಗಳು ಎಲ್ಲರಿಗೂ ಕಟ್ಟಾಜ್ಞೆ ನೀಡಿದ. ಇದೇ ಸಂದರ್ಭದಲ್ಲಿ ಗೋಕುಲದಲ್ಲಿ ನಂದಗೋಪನ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಗೋಪಗೋಪಿಯರೆಲ್ಲರೂ ಯಶೋದೆ ಹಡೆದ ಮುದ್ದು ಮಗುವನ್ನು ಕಂಡು ಅಲೌಕಿಕ ಆನಂದ. ನಂದಕಟ್ಟಳೆಯಂತೆ ಪುತ್ರೋತ್ಸವದ ಸಂದರ್ಭದಲ್ಲಿ ಮಥsÀುರೆಗೆ ತೆರಳಿ, ವಿಷಯವನ್ನು ತಿಳಿಸಿ, ಕಂಸರಾಜನಿಗೆ ಕಾಣಿಕೆಗಳನ್ನು ಮಾಮೂಲಿನಂತೆ ಕೊಟ್ಟು ಬಂದ. ನಂದನ ಬಗ್ಗೆ ಕಂಸನಿಗೆ ಅನುಮಾನ ಮೊದಲೇ ಇತ್ತು. ಅವನ ಮನೆಯಲ್ಲಿ ಬೆಳೆಯುತ್ತಿರುವ ಮಗುವಿನ ಬಗ್ಗೆ ಗೋಕುಲವಾಸಿಗಳೆಲ್ಲರೂ ಆನಂದಿಸುತ್ತಿರುವ ವಿಷಯವೂ ಕಿವಿಗೆ ಬಿದ್ದಿತ್ತು. ಆ ಮಗುವೇ ಆಶರೀರವಾಣಿಯಂತೆ ತನ್ನ ಮೃತ್ಯು ಏಕಿರಬಾರದು? ಎಂಬ ಶಂಕೆ ಹೆಚ್ಚತೊಡಗಿತು. ನಂದನು ಮಥುರೆಗೆ ಬಂದಿರುವ ಸಮಯದಲ್ಲಿ ಪೂತನಿ ಎಂಬ ರಕ್ಕಸಿಯನ್ನು ಪ್ರೇರೇಪಿಸಿ, ಮಗುವನ್ನು ಉಪಾಯಾಂತರದಿಂದ ಕೊಂದು ಬರಲು ಕಳುಹಿಸಿಕೊಟ್ಟ. ಪೂತನಿಯೂ ಕಾರ್ಯನಿರತಳಾಗಿ ಗೋಕುಲಕ್ಕೆ ಬಂದಳು. ರಕ್ಕಸಿ ಆಗಿದ್ದವಳು ಗೊಲ್ಲತಿಯ ರೂಪ ತಾಳಿದಳು. ಯಶೋದೆಯ ಪ್ರೀತ್ಯಾದರವನ್ನೂ ತನ್ನ ಚಾಕಚಕ್ಯತೆಯಿಂದ ಸಂಪಾದಿಸಿದಳು. ಅವಳಿಲ್ಲದಿರುವ ಸಮಯದಲ್ಲಿ ಮಗುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು, ಮೊಲೆ ಹಾಲು ಉಣಿಸತೊಡಗಿದಳು. ಇದೇ ಸಂದರ್ಭದಲ್ಲಿ ಮಗು ಹಾಲು ಕುಡಿಯುತ್ತಿದ್ದಂತೆ ಅದರ ಕುತ್ತಿಗೆಯನ್ನು ನಿಧಾನವಾಗಿ ಕಿವುಚತೊಡಗಿದಳು. ಇದೇನು ಸಾಮಾನ್ಯ ಮಗುವೇ? ವಿಷ್ಣುವಿನ ಅವತಾರ! ಅವಳು ಹಾಗೆ ಕಿವುಚಲು ಯತ್ನಿಸುತ್ತಿದ್ದಂತೆ ತಾನೂ ಸಹ ಅವಳ ಮೊಲೆಯ ಭಾಗವನ್ನು ಹಾಲು ಕುಡಿಯುತ್ತಿರುವಂತೆ ನಟಿಸುತ್ತಾ, ತನ್ನ ಕೋಮಲ ಕೈಗಳಿಂದ ಜೋರಾಗಿ ಕಿವುಚತೊಡಗಿತು. ನೋವನ್ನು ತಾಳಲಾರದೆ ಆ ಸುಂದರಿರೂಪದ ಗೊಲ್ಲತಿ ದೈತ್ಯಾಕಾರದಲ್ಲಿ ಸತ್ತುಬಿದ್ದಳು. ಅದೇ ವೇಳೆಗೆ ಯಶೋದ ಬಂದಳು. ಪೂತನಿಯ ಕೊನೆ ಗಳಿಗೆಯ ಚೀತ್ಕಾರವನ್ನು ಕೇಳಿದ ಗೊಲ್ಲ-ಗೊಲ್ಲತಿಯರೆಲ್ಲರೂ ಬಂದರು. ನಂದನೂ ಬಂದ. ನಡೆದಿರುವುದನ್ನು ಕಂಡು ಎಲ್ಲರೂ ಮೂಕರಂತಾದರು. ಇನ್ನೊಮ್ಮೆ ಕಂಸನಿಂದಲೇ ಪ್ರೇರಿತನಾದ ತೃಣಾವರ್ತನೆಂಬ ರಾಕ್ಷಸನು ಮಗು ರೂಪದ ಕೃಷ್ಣನನ್ನು ತನ್ನ ಮಾಯೆಯಿಂದ ರಭಸದ ಗಾಳಿಯ ರೂಪದಲ್ಲಿ ಬಂದು, ಆಕಾಶಕ್ಕೆ ಹಾರಿಸಿಕೊಂಡು ಹೋದ. ಕೃಷ್ಣನು ಅವನ ಕೊರಳನ್ನೇ ಬಿಗಿಯಾಗಿ ಅದುಮಿ ಸಾಯಿಸಿದ. ರಾಕ್ಷಸ ತನ್ನ ನಿಜರೂಪದಲ್ಲಿ ದೊಡ್ಡ ಮರ ಉರುಳಿ ಬೀಳುವಂತೆ ಸತ್ತುಬಿದ್ದ. ಮಗು ಕೃಷ್ಣನೂ ಅವನ ಎದೆಯ ಮೇಲೆ ನಲಿದಾಡುತ್ತಿತ್ತು. ಇದೆಲ್ಲವನ್ನೂ ಕಂಡ ಗೋಕುಲವಾಸಿಗಳು ದಿಗ್ಬ್ರಾಂತರಾದರು. ನಂದ-ಯಶೋದೆಯರಿಗಂತೂ ಮಗುವಿನ ಬಗ್ಗೆ ಕಳವಳ ಹೆಚ್ಚತೊಡಗಿತು. ಕೃಷ್ಣ ಈಗ ಆರೇಳು ವರ್ಷದ ಹುಡುಗ. ತುಂಬಾ ತುಂಟನಾಗಿದ್ದ. ಅವನ ತುಂಟತನವನ್ನು ತಾಳಲಾರದೆ, ಯಶೋದ ಒಂದು ದಿನ ಅವನನ್ನು ಮನೆಯ ಮುಂದೆಯೇ ಗಾಡಿಯ ಚಕ್ರಕ್ಕೆ ಕಟ್ಟಿ ಮನೆಗೆಲಸದಲ್ಲಿ ನಿರತಳಾಗಿದ್ದಳು. ಗಾಡಿ ಇದ್ದಕ್ಕಿದ್ದಂತೆ ಯಾರ ನೆರವೂ ಇಲ್ಲದೆ ಮುಂದೆ ಮುಂದೆ ಹೋಗತೊಡಗಿತು. ಉರುಳುತ್ತಿದ್ದ ಚಕ್ರವನ್ನು ಹಿಡಿದು ಕೃಷ್ಣ ತಾನೂ ಓಡೋಡಿ ಹೋಗತೊಡಗಿದ. ಇದನ್ನು ಕಂಡ ಗೊಲ್ಲಬಾಲರು ವಿಷಯವನ್ನು ನಂದ ಯಶೋದೆಯರಿಗೆ ತಿಳಿಸಿದರು. ಬಾಲಕೃಷ್ಣ ಈಗ ಗಾಡಿಯ ಮೇಲೇರಿದ್ದಾನೆ. ಗಾಡಿ ವೇಗವಾಗಿ ಮುಂದೆ ಮುಂದೆ ಸಾಗುತ್ತಲೇ ಇದೆ! ಎಲ್ಲರೂ ಇದೇನು ಗಂಡಾಂತರವೋ! ಎಂದು ಬೇಗಬೇಗ ಹೆಜ್ಜೆ ಹಾಕುತ್ತಾ ಬರುತ್ತಿದ್ದಂತೆ ಒಂದೆಡೆ ಗಾಡಿ ನಿಂತಿತು. ಸಿಡಿಲಿನ ಶಬ್ದವಾಯಿತು. ಗಾಡಿ ಕಾಣಲಿಲ್ಲ. ಗಾಡಿಯ ಜಾಗವೂ ಕಂಸನಿಂದ ಪ್ರೇರಿತನಾಗಿ ಬಂದಿದ್ದ ಶಕಟ (ಗಾಡಿ) ಎಂಬ ಅಸುರ ತನ್ನ ನಿಜರೂಪದಲ್ಲಿ ಕೆಳಗೆ ಸತ್ತುಬಿದ್ದಿದ್ದ. ಅವನ ಎದೆಯ ಮೇಲೆ ಕೃಷ್ಣ ಕುಣಿದಾಡುತ್ತಿದ್ದ. ಎಲ್ಲರಿಗೂ ಏಕಕಾಲದಲ್ಲಿ ಆನಂದಾಶ್ಚರ್ಯ ಉಂಟಾಯಿತು. ಯಶೋದ ಮಗನನ್ನು ಬರಸೆಳೆದು ಮನೆಗೆ ಕರೆದೊಯ್ದಳು. ದೃಷ್ಟಿ ತೆಗೆದಳು. ಹೀಗೆ ಕಂಸನ ಕಡೆಯ ರಾಕ್ಷಸರು ಮೇಲಿಂದ ಮೇಲೆ ಬಂದು ಕೃಷ್ಣನಿಗೆ ಹಿಂಸೆ ಕೊಡುವುದನ್ನು ಕಂಡು, ನಂದಗೋಪ ತನ್ನ ಕುಟುಂಬ ಹಾಗೂ ರೋಹಿಣಿ ಮತ್ತು ಪರಿಜನರೊಡನೆ ಬೃಂದಾವನಕ್ಕೆ ವಲಸೆ ಬಂದ. ಬೃಂದಾವನ ಜಲಸಮೃದ್ಧಿಯ ಜಾಗ. ಪ್ರಕೃತಿಯ ಪ್ರಫುಲ್ಲ ಪ್ರಾಂಗಣ. ಯಮುನಾ ನದಿಯ ತೀರದಲ್ಲಿ ಕಂಗೊಳಿಸುತ್ತಿತ್ತು. ಅಲ್ಲಿಯೇ ಇದ್ದ ಗೋವರ್ಧನಗಿರಿ ಕೃಷ್ಣನಿಗೆ ಗೊಲ್ಲರೊಂದಿಗೆ ಆಟ ಆಡಲು ಒಳ್ಳೆಯ ಗುಡ್ಡ ಆಗಿತ್ತು. ಅಲೌಕಿಕ ಆನಂದ ನೀಡುತ್ತಿದ್ದ. ಅವರೊಂದಿಗೆ ಯಮುನಾ ನದಿಯಲ್ಲಿ ಜಲಕ್ರೀಡೆ ಆಡುವುದೆಂದರೆ ಅವನಿಗೆ ತುಂಬಾ ಒಲವು. ಅಲ್ಲೊಂದು ಮಡು ಇತ್ತು. ಅದರಲ್ಲಿ ನೀರೂ ತುಂಬಿತ್ತು. ಅದರ ಬಳಿಗೆ ಯಾರೊಬ್ಬರೂ ಹೋಗುತ್ತಿರಲಿಲ್ಲ. ಮಕ್ಕಳನ್ನಂತೂ ಹಿರಿಯರು ಯಾರೂ ಅಲ್ಲಿಗೆ ಹೋಗಗೊಡುತ್ತಿರಲಿಲ್ಲ. ಕಾರಣ ಆ ಮಡುವಿನಲ್ಲಿ ಕಾಳಿಂಗ ಎಂಬ ಕರಾಳ ಕಪ್ಪು ಸರ್ಪ ಸದಾ ಹೆಡೆ ಎತ್ತಿಕೊಂಡಿರುತ್ತಿತ್ತು. ಒಂದು ದಿನ ಬಾಲಕೃಷ್ಣ ತನ್ನ ಗೆಳೆಯರೊಂದಿಗೆ ಆಟಆಡುತ್ತಾ ಆ ಮಡುವಿನ ಬಳಿ ಬಂದ. “ಕೃಷ್ಣ, ಬೇಡವೋ ಅಲ್ಲಿಗೆ ಹೋಗಬೇಡವೋ. ಮಡುವಿನ ನೀರಿನಲ್ಲಿ ಕಾಳಿಂಗಸರ್ಪ ಇದೆ!” ಅಂದರು ಸಂಗಾತಿಗಳೆಲ್ಲರೂ ಗಾಬರಿಯ ಕಣ್ಣುಬಿಡುತ್ತಾ. “ಹೌದಾ!” ಅನ್ನುತ್ತಾ ಕೃಷ್ಣ ಮಡುವಿನೊಳಗೆ ಧುಮುಕಿಯೇ ಬಿಟ್ಟ. “ಅಯ್ಯೋ! ಕೃಷ್ಣ ಸತ್ತ, ಸತ್ತೇ ಹೋದ!” ಅನ್ನುತ್ತಾ ಎಲ್ಲರೂ ವಿಷಯವನ್ನು ತಿಳಿಸಲು ಬೃಂದಾವನದ ತಮ್ಮ ತಮ್ಮ ಮನೆಗಳಿಗೆ ಬಂದರು. ಇನ್ನು ಅವರೆಲ್ಲರ ಗಾಬರಿ ಕೇಳಬೇಕೇ? ಒಂದೇ ಉಸುರಿಗೆ ನಂದ ಯಶೋದೆಯರೊಂದಿಗೆ ಸ್ಥಳಕ್ಕೆ ಧಾವಿಸಿದರು. ಮಡುವಿನಲ್ಲಿ ನೋಡಿದರು. ಕೃಷ್ಣ ಕಾಳಿಂಗ ಹೆÀಡೆಯನ್ನು ಎಡಗೈಯಲ್ಲಿ ಬಲವಾಗಿ ಹಿಸುಕಿ ಹಿಡಿದು ಅದರ ದೇಹಭಾಗವನ್ನೂ ಎರಡೂ ಪಾದಗಳಿಂದ ಹಿಸುಕಿ ಹಾಕುತ್ತಿದ್ದಾನೆ. ಅದರ ಬಾಯಿಂದ ರಕ್ತ ಸುರಿದು ಬರುತ್ತಿದೆ. “ಕೃಷ್ಣಾ! ಕೃಷ್ಣಾ!” ಎಂದು ಕೂಗುತ್ತಿದ್ದಂತೆ, ಅದ್ಯಾವುದರ ಕಡೆಗೂ ಗಮನ ಕೊಡದೆ ಕಾಳಿಂಗ ಮರ್ದನ ಮಾಡಿ ಮುಗಿಸಿ ನಗುಮೊಗದಿಂದಲೇ ಧೈರ್ಯವಾಗಿ ಹೊರಬಂದ. ಎಲ್ಲರೂ ಬಾಲಕೃಷ್ಣನ ಸಾಹಸವನ್ನು ಕಂಡು ಬೆರಗಾದರು. ಅವರೆಲ್ಲರಿಗೂ ಈಗ ಹೋದ ಪ್ರಾಣ ಬಂದಂತಾಗಿತ್ತು. ° ಪ್ರತಿದಿನ ಆಧ್ಯಾತ್ಮಿಕ ವಿಷಯಗಳು ಹಾಗೂ ಪೌರಾಣಿಕ ಕಥೆಗಳನ್ನ ತಿಳಿದುಕೊಳ್ಳಲು " ನಮ್ಮ WhatsApp channel follow ಮಾಡಿ "👇 https://WhatsApp.oia.link/dinakkondu-adhyatmik-kathe 🙏🙏 ಧನ್ಯವಾದಗಳು 🙏🙏
ಅಜಾಮಿಳ ಉತ್ತರ ಭಾರತದಲ್ಲಿ ಕನ್ಯಾಕುಬ್ಜ ಹಿಂದೊಮ್ಮೆ ಇಂದಿಗಿಂತಲೂ ಶಿಕ್ಷಣ, ಸಂಸ್ಕøತಿಯ ವಿಚಾರದಲ್ಲಿ ವಿಖ್ಯಾತವೆನಿಸಿತ್ತು. ಅಲ್ಲೊಬ್ಬ ಬ್ರಾಹ್ಮಣ. ತುಂಬಾ ಜ್ಞಾನಿ. ವೇದಶಾಸ್ತ್ರ ವಿಚಾರದಲ್ಲಿ ಪರಿಣತ. ಬ್ರಾಹ್ಮಣ ಧರ್ಮಕ್ಕೆ ಒಂದಿಷ್ಟೂ ಲೋಪ ಬಾರದ ರೀತಿಯಲ್ಲಿ ಆಚರಿಸುತ್ತಾ, ತನ್ನ ಹೆಂಡತಿ ಮಕ್ಕಳೊಂದಿಗೆ ಕಾಲಹರಣ ಮಾಡುತ್ತಿದ್ದ. ಇವನ ಹೆಸರೇ ಅಜಾಮಿಳ. ಒಂದು ಬಾರಿ ದರ್ಭೆ ಹುಲ್ಲುಗಳನ್ನು ತರಲು ಕಾಡಿಗೆ ಹೋದ. ಅಲ್ಲೊಂದು ಬೇಟೆಗಾರರ ತಂಡ. ಅವರಲ್ಲಿ ಒಬ್ಬ ಬೇಟೆಗಾತಿ, ತುಂಬಾ ಸುಂದರ ಸ್ವರೂಪಿಣಿಯಂತೆ ಈ ಅಜಾಮಿಳನಿಗೆ ಕಂಡುಬಂದಳು. ಅವಳ ದೇಹ-ಸೌಂದರ್ಯವನ್ನುಕಂಡ ಅಜಾಮಿಳ ಮಾರುಹೋದ, ಮೋಹಗೊಂಡ, ಅವಳೊಂದಿಗೇ ಕಾಡಿನಲ್ಲಿ ವಾಸಿಸತೊಡಗಿದ. ತನ್ನ ಹೆಂಡತಿ ಮಕ್ಕಳ ನೆನಪೇ ಈಗ ಇವನಿಗೆ ಇಲ್ಲದಂತಾಯಿತು. ಬ್ರಾಹ್ಮಣ ಧರ್ಮವೇ ಮರೆತುಹೋಯಿತು. ಕಾಮಾಂಧನಾಗಿ ಅವಳೊಂದಿಗೆ ಜೀವಿಸತೊಡಗಿದ. ಮಾಂಸಾಹಾರ, ಮದ್ಯಪಾನ ಇವನ ಅನುದಿನದ ಆಹಾರ-ಪಾನೀಯಗಳಾದುವು. ಈ ಬೇಟೆಗಾತಿಯು ಅಜಾಮಿಳನ ಕಾಮುಕತೆಯ ಸಂಪರ್ಕದಲ್ಲಿ ಮುಳುಗಿ, ಹತ್ತು ಗಂಡು ಮಕ್ಕಳಿಗೆ ಜನ್ಮ ನೀಡಿದಳು. ಇವರಲ್ಲಿ ಕಡೆಯವನೇ ನಾರಾಯಣ ಎಂಬ ಹುಡುಗ. ಅಜಾಮಿಳನಿಗೆ ಈ ಹುಡುಗನ ಬಗ್ಗೆ ತುಂಬಾ ಪ್ರೀತಿ, ವಾತ್ಸಲ್ಯ. ಸದಾ ಅವನನ್ನು ತನ್ನ ಬಳಿಯೇ ಇರಿಸಿಕೊಂಡಿರುತ್ತಿದ್ದ. ಅವನ ಆಟೋಟಗಳನ್ನು ಕಂಡು ನಲಿಯುತ್ತಾ, ಮೈ ಮರೆಯುತ್ತಿದ್ದ. ಹೀಗೆಯೇ ದಿನಗಳುರುಳಿದುವು. ಅಜಾಮಿಳನಿಗೆ ಮುಪ್ಪು ಅಡರಿತು. ದೇಹಶಕ್ತಿ ಕುಂದಿತು. ಆಗಲೂ ಅವನಿಗೆ ದೇವರ ಧ್ಯಾನದ ಬಗ್ಗೆ ಗಮನವೇ ಬರಲಿಲ್ಲ. ಅವನ ಸಕಲ ಸಂಪತ್ತೂ ಈ ಕಿರಿಯ ಪೋರ, ನಾರಾಯಣನೇ ಆಗಿಹೋಗಿದ್ದ. ಸಾಯುವ ಸಮಯ ಬಂತು. ಮರಣಶಯ್ಯೆಯಲ್ಲಿ ತೂಗಾಡುತ್ತಿದ್ದಾಗ, ಅವನ ಕಣ್ಣು ಮುಂದೆ ಯಮದೂತರು ಕಾಣಿಸಿಕೊಂಡರು. ಅವನಿಗೆ ಮರಣದ ಭೀತಿ ಇರಲಿಲ್ಲ. ತನ್ನ ಪ್ರೀತಿಯ ಮುದ್ದು ಮಗನಾದ ನಾರಾಯಣನ ಬಗ್ಗೆ ಚಿಂತೆ ಕಾಡತೊಡಗಿತು. “ನಾನು ಸತ್ತ ಬಳಿಕ, ಏನೂ ಅರಿಯದ ಈ ಕಂದನಿಗೆ ದಿಕ್ಕು ಯಾರು? ಇವನ ಮುಂದಿನ ಗತಿ ಏನು?” ಎಂದು ಹಲುಬುತ್ತಾ, “ನಾರಾಯಣಾ” ಎಂದು ಅವನನ್ನು ಕರೆಯತೊಡಗಿದ. ಯಮದೂತರು ತಮ್ಮ ಕರ್ತವ್ಯ ಧರ್ಮದಂತೆ, ಅವನ ಕೊರಳಿಗೆ ಪಾಶ ಬಿಗಿದರು. ಇನ್ನೇನು ಅವನನ್ನು ಎಳೆದುಕೊಂಡು ತಮ್ಮ ಲೋಕಕ್ಕೆ ಹೋಗಬೇಕು! ಅನ್ನುವಷ್ಟರಲ್ಲಿ ವಿಷ್ಣುದೂತರೂ ಸಹ ದೈವಿಕ ವಿಮಾನದಲ್ಲಿ ಅದೇ ಜಾಗದಲ್ಲಿ ಬಂದಿಳಿದರು. ಯಮದೂತರನ್ನು ತಡೆದು, ಹೇಳಿದರು : “ಅಜಾಮಿಳ ವಿಷ್ಣು ಭಗವಂತನ ಕೃಪೆಗೆ ಪಾತ್ರನಾಗಿದ್ದಾನೆ. ಅವನನ್ನು ಬಿಟ್ಟುಬಿಡಿ. ನಾವು ಅವನನ್ನು ವಿಷ್ಣುಲೋಕಕ್ಕೆ ಕರೆದೊಯ್ಯಲು ಬಂದಿದ್ದೇವೆ.” ಯಮದೂತರು ಆಶ್ಚರ್ಯದಿಂದ ಕೇಳಿದರು: “ಇದೆಂತಹ ಸೋಜಿಗದ ಸಂಗತಿ! ಅಜಾಮಿಳ ಧರ್ಮಭ್ರಷ್ಟ. ಬ್ರಾಹ್ಮಣ ಜನ್ಮದಲ್ಲಿ ಹುಟ್ಟಿದ್ದರೂ, ಮಾಡಬಾರದ ಅಧರ್ಮದ ಕಾರ್ಯಗಳೆಲ್ಲವನ್ನೂ ಮಾಡಿದ್ದಾನೆ. ಅವನಿಗೆ ನರಕಸುಖವೇ ಸಲ್ಲುವಂತಹುದು.” ವಿಷ್ಣುದೂತರೂ ವಾದಿಸಿದರು: “ಅವನೆಷ್ಟೇ ಅಧರ್ಮಿ ಎನಿಸಿದ್ದರೂ, ಕಾಮುಕತೆಯಲ್ಲಿ ಲೋಲುಪನೆನಿಸಿದ್ದರೂ, ಸಾಯುವ ಸಮಯದಲ್ಲಿ ಶ್ರೀಮನ್ನಾರಾಯಣನ ಸ್ಮರಣೆ ಮಾಡಿದ್ದಾನೆ. ದೇವರ ನಾಮಸ್ಮರಣೆ ಅವನನ್ನು ಸಕಲ ಪಾಪಗಳಿಂದಲೂ ಮುಕ್ತಗೊಳಿಸಿದೆ. ಆದ್ದರಿಂದ ಅವನ ಕೊರಳಿಗೆ ನೀವು ಹಾಕಿರುವ ಪಾಶವನ್ನು ಹಿಂದೆಗೆದುಕೊಳ್ಳಿ.” ಯಮದೂತರಿಗೆ ವಿಷ್ಣುದೂತರ ಮಾತು ಸಮಂಜಸ ಎನಿಸಲಿಲ್ಲ. ಈರ್ವರಲ್ಲೂ ವಾದ-ವಿವಾದಗಳು ತುಂಬಾ ಕಾಲ ನಡೆದುವು. ತಮ್ಮ ವಾದವನ್ನು ಸಮರ್ಥಿಸುತ್ತಾ, ಯಮದೂತರು ಹೇಳಿದರು: “ಅವನು ತನ್ನ ಜೀವನದ ಕೊನೆ ಘಳಿಗೆಯಲ್ಲಿ ಸ್ಮರಣೆ ಮಾಡಿಕೊಂಡದ್ದು, ಶ್ರೀಮನ್ನಾರಾಯಣನನ್ನಲ್ಲ. ತನ್ನ ಕಿರಿಯ ಮಗನಾದ ನಾರಾಯಣನನ್ನು. ಅವನೊಬ್ಬ ಕಾಮುಕ, ಕಡುಪಾಪಿ. ಅವನಿಗೆ ವೈಕುಂಠವಾಸವಾಗಲಿ, ಸ್ವರ್ಗಸುಖವಾಗಲಿ ಸಲ್ಲ. ನೀವು ವಿಷ್ಣುಭಕ್ತರಾಗಿದ್ದೂ, ಹೀಗೆಲ್ಲಾ ವಾದಿಸುವುದು ಸರಿಯೇ?” ವಿಷ್ಣುದೂತರು ಸಮಾಧಾನದಿಂದಲೇ ಹೇಳಿದರು: “ಅವನೆಂತಹ ಕಡುಪಾಪಿ ಆದರೂ, ಕಾಮಾಂಧನೆನಿಸಿದ್ದರೂ, ಸಾಯುವ ಸಮಯದಲ್ಲಿ ಅವನ ಬಾಯಿಂದ ದೇವರ ನಾಮಸ್ಮರಣೆ ಹೊರಬಂದಿದೆ. ದೇವರ ನಾಮದ ಮಹಿಮೆ ಅಪಾರ. ಅದು ಪಾಪಿ ಆದವನ ಪಾಪ ದೋಷಗಳೆಲ್ಲವನ್ನೂ ನಿವಾರಣೆ ಮಾಡುತ್ತದೆ. ಆದ್ದರಿಂದ ನಮ್ಮ ವಾದವೇ ಸರಿ. ಬೇಕಾದರೆ ನಿಮ್ಮ ಒಡೆಯನಾದ ಯಮಧರ್ಮರಾಜನ ಬಳಿಗೇ ಹೋಗಿ, ಈ ಧರ್ಮ ರಹಸ್ಯದ ಬಗ್ಗೆ ವಿಚಾರಿಸಿ” ಅನ್ನುತ್ತಾ ಅಜಾಮಿಳನ ಕೊರಳಿಗೆ ಬಿಗಿದಿದ್ದ ಪಾಶವನ್ನು ಸಡಿಲಿಸಿ, ಹೊರತೆಗೆದರು. ಅವನನ್ನು ದೈವಿಕ ವಿಮಾನದಲ್ಲಿ ಕುಳ್ಳಿರಿಸಿಕೊಂಡು, ವಿಷ್ಣು ಲೋಕದತ್ತ ನಡೆದರು. ಇವರೀರ್ವರ ವಾದ-ವಿವಾದವನ್ನು ಕೇಳುತ್ತಿದ್ದ ಅಜಾಮಿಳನಿಗೆ ಈಗ ಜ್ಞಾನೋದಯವಾಯಿತು. ತಾನು ಗೈದಿರುವ ಪಾಪಕರ್ಮಗಳ ಬಗ್ಗೆ ತನಗೇ ನಾಚಿಕೆ ಉಂಟಾಯಿತು. ದೈವಭಕ್ತಿಯ ಬಗ್ಗೆ ಹೃದಯಾಂತರಾಳದಿಂದ ಹೊರಚಿಮ್ಮಿತು. ಭಕ್ತಿಯ ಪರಾಕಾಷ್ಠತೆಯಲ್ಲಿ ಪರಮಾತ್ಮನನ್ನು ಪರಿತಾಪದೊಂದಿಗೆ ಭಜಿಸತೊಡಗಿದ್ದ. ಪರಿಶುದ್ಧ ವಿಷ್ಣುಭಕ್ತನೇ ಆಗಿಹೋದ. ಇತ್ತ ಯಮದೂತರೂ ಧರ್ಮರಾಜನೆನಿಸಿದ್ದ ತಮ್ಮ ಒಡೆಯ ಯಮನ ಬಳಿಗೆ ಬಂದರು. ಕೈ ಜೋಡಿಸಿಕೊಂಡು ವಿಧೇಯತೆಯೊಂದಿಗೆ ನಡೆದುದೆಲ್ಲವನ್ನೂ ಆಮೂಲಾಗ್ರವಾಗಿ ತಿಳಿಸಿದರು. ಯಮಧರ್ಮರಾಜ ತನ್ನ ದೂತರ ಅವಿವೇಕವನ್ನು ಕಂಡು, ನಸುನಗುತ್ತಾ ಹೇಳಿದ: “ದೂತರೇ, ವಿಷ್ಣುದೂತರ ಮಾತು ಸತ್ಯ. ಹರಿನಾಮದ ಬಲ ಅಮೋಘ. ಅದು ಭವರೋಗ ನಿವಾರಣೆಗೆ ದಿವ್ಯೌಷಧಿ. ಅಂತಹವರಿಗೆ ಯಾವುದೇ ಪಾಪದ ಸೋಂಕೂ ಅಂಟದು. ಇನ್ನು ಮುಂದೆ ಹರಿಭಕ್ತರು ಹಾಗೂ ವಿಷ್ಣುದೂತರೊಂದಿಗೆ ಹಾಗೆಲ್ಲ ಅವಿವೇಕದ ವಾದ ಮಾಡಲು ಹೋಗಬೇಡಿ” ಎಂದು ಬುದ್ಧಿಮಾತು ಹೇಳಿದ.
ಭರತ ಚಕ್ರವರ್ತಿ ನಾಡು ಭಾರತ ವಿವಿಶ್ವಾಮಿತ್ರನ ತಪಸ್ಸು ಮಿತಿ ಮೀರಿತು. ಯಾರಾದರೂ ನಮಗಿಂತ ಮೇಲೆ ಹೋಗುವವರನ್ನು ದೇವತೆಗಳು ಸಹಿಸುವುದಿಲ್ಲ. ಅದಕ್ಕಾಗಿ ವಿಶ್ವಾಮಿತ್ರನ ತಪಸ್ಸನ್ನು ಭಂಗ ಮಾಡಲು ಮೇನಕೆ ದೇವಲೋಕದ ಅಪ್ಸರೆಯನ್ನು ಕಳಿಸಿದರು. ಆಕೆಯ ಹಾವಭಾವಕ್ಕೆ ವಿಶ್ವಾಮಿತ್ರನ ತಪಸ್ಸು ಭಂಗವಾಯಿತು. ಇಬ್ಬರೂ ಲಗ್ನವಾದರು. ಸಂಸಾರದಿಂದ ಆದ ಪ್ರಯೋಜನ ಒಂದು ಹೆಣ್ಣು ಮಗು. ಕೂಡಲೇ ಮೇನಕೆ ಆ ಮಗುವನ್ನು ವಿಶ್ವಾಮಿತ್ರನಿಗೆ ಕೊಟ್ಟು ದೇವಲೋಕಕ್ಕೆ ಹೋದಳು. ಆ ಮಗುವನ್ನು ಎಲೆಯ ಮೇಲೆ ಮಲಗಿಸಿ ವಿಶ್ವಾಮಿತ್ರನೂ ಬೇರೆ ಕಡೆ ತಪಸ್ಸಿಗೆ ಹೋದನು. ಆ ಮಗು ಮತ್ತೊಬ್ಬ ಋಷಿಯ ಕೈಗೆ ಸಿಕ್ಕಿತು. ಅವರೇ ಕಣ್ವ ಋಷಿ. ಆ ಕಣ್ವ ಋಷಿಯೇ ಮಗುವನ್ನು ಸಾಕಿದರು. ದೊಡ್ಡವಳಾಗಿ ವಯಸ್ಸಿಗೆ ಬಂದಳು. ಒಂದು ಸಾರಿ ಆ ದೇಶದ ರಾಜ ದುಷ್ಯಂತ ಮಹಾರಾಜ ಆ ತಪೋವನಕ್ಕೆ ಬಂದ. ಈ ಶಕುಂತಲೆಯನ್ನು ನೋಡಿ ಮೋಹಿಸಿ ಗಂಧರ್ವ ವಿವಾಹವಾದ. ಅವಳಿಗೆ ಗುರುತಿಗಾಗಿ ಮುದ್ರೆ ಉಂಗುರ ಕೊಟ್ಟು. ತನ್ನ ರಾಜ್ಯಕ್ಕೆ ಹೋದ. ಶಕುಂತಲೆ ಗರ್ಭಿಣಿ ಆಗಿದ್ದಾಳೆ. ಕಣ್ವ ಋಷಿ ಗರ್ಭಿಣಿಯಾದ ಶಕುಂತಲೆಯನ್ನು ಅವಳ ಪತಿಯ ಗೃಹಕ್ಕೆ ಕಳಿಸಬೇಕು. ಶಕುಂತಲೆ ಸದಾ ತನ್ನ ರಾಜ ದುಷ್ಯಂತ ಕರೆ ಕಳುಹಿಸುತ್ತಾನೆಂದು ಕಾಯುತ್ತಿದ್ದಳು. ಒಂದು ಸಾರಿ ದೂರ್ವಾಸ ಮುನಿ ಬಂದು ಆಶ್ರಮದಲ್ಲಿ ನಿಂತಿದ್ದಾರೆ. ಇವಳಿಗೆ ದುಷ್ಯಂತನ ಚಿಂತೆಯೇ ಆಗಿದೆ. ಆಗ ದೂರ್ವಾಸರು ‘ನೀನು ಯಾರನ್ನು ಚಿಂತಿಸುತ್ತಿರುವೆಯೋ ಅವರು ನಿನ್ನನ್ನು ಮರೆಯಲಿ’ ಎಂದು ಶಾಪ ಕೊಡುತ್ತಾರೆ. ಆಗ ಶಕುಂತಲೆಯ ಸ್ನೇಹಿತರು ಅವಳ ವೃತ್ತಾಂತವನ್ನೆಲ್ಲಾ ದುರ್ವಾಸಮುನಿಗೆ ಹೇಳಿ ಶಾಪವಿಮೋಚನೆಗೆ ದಾರಿ ಕೇಳಿದಾಗ, ಯಾವುದಾದರೂ ಗುರುತಿನ ವಸ್ತುವನ್ನು ತೋರಿಸಿದರೆ ನೆನಪು ಬರುವುದು ಎಂದರು. ಕಣ್ವ ಋಷಿಗಳು ಶಕುಂತಲೆಯನ್ನು ದುಶ್ಯಂತನ ಹತ್ತಿರ ಬಿಡುವುದಕ್ಕೆ ತಮ್ಮ ಶಿಷ್ಯಂದಿರನ್ನು ಕಳುಹಿಸಿಕೊಟ್ಟು ದಾರಿಯಲ್ಲಿ ನದಿಯನ್ನು ದೋಣಿಯಲ್ಲಿ ದಾಟುತ್ತಿರುವಾಗ ಶಕುಂತಲೆಯ ಕೈಯಲ್ಲಿದ್ದ ಉಂಗುರ ಅಕಸ್ಮಾತ್ತಾಗಿ ನೀರಿನಲ್ಲಿ ಬಿತ್ತು. ಅದನ್ನು ಒಂದು ಮೀನು ಅದನ್ನು ನುಂಗಿತು. ದುಶ್ಯಂತನ ಅರಮನೆಗೆ ಹೋದಾಗ ಋಷಿಯ ಶಾಪದಿಂದಾಗಿ ಶಕುಂತಲೆಯನ್ನು ಪತ್ನಿಯನ್ನಾಗಿ ಸ್ವೀಕರಿಸಲು ನಿರಾಕರಿಸಿದಾಗ, ಅವಳು ತನ್ನ ಅಮ್ಮನನ್ನು ನೆನೆಯಿಸಿ, ಅವಳ ಜೊತೆಗೆ ಹೋದಳು. ಸ್ವಲ್ಪ ದಿನ ತರುವಾಯ ಒಬ್ಬ ಬೆಸ್ತ ರಾಜ ಉಂಗುರವನ್ನು ತಂದುಕೊಟ್ಟಾಗ ದುಶ್ಯಂತನಿಗೆ ಹಳೆಯದೆಲ್ಲಾ ನೆನಪು ಬಂದು ಗೋಳಾಡಿದ. ಹೀಗೆ ಒಂದು ಸಾರಿ ಬೇಟೆಗೆಂದು ಕಾಡಿಗೆ ಹೋದಾಗ ದುಷ್ಯಂತನು ವಿಶ್ರಾಂತಿಗಾಗಿ ಕುಳಿತಿರುತ್ತಾರೆ. ಆಗ ಅಲ್ಲಿಗೆ ಒಬ್ಬ ಸ್ಫುರದ್ರೂಪಿ ಹುಡುಗ ಬಂದು ಸಿಂಹದ ಜೊತೆಯಲ್ಲಿ ಆಟ ಆಡುತ್ತಿರುತ್ತಾನೆ. ಆಟವನ್ನು ದುಷ್ಯಂತ ನೋಡುತ್ತಾನೆ. ಆ ಮಗುವಿನ ಮೇಲೆ ಬಹಳ ಪ್ರೇಮ ಬರುತ್ತದೆ. ಆಟ ಆಡುವಾಗ ಆ ಮಗುವಿನ ಕೊರಳಲ್ಲಿರುವ ತಾಯತ ಅಕಸ್ಮಾತ್ ಕೆಳಗೆ ಬಿದ್ದಿತು. ತಕ್ಷಣ ದುಷ್ಯಂತ ಅದನ್ನು ಕಟ್ಟುತ್ತಾನೆ. ತಂದೆ ಅಲ್ಲದೆ ಯಾರೂ ಆ ತಾಯತ ಕಟ್ಟುವಂತಿಲ್ಲ. ಆ ತಾಯತ ಹಾವಾಗಿ ಕಡಿಯುತ್ತದೆ. ಕೂಡಲೇ ಶಕುಂತಲೆ ಒಳಗಿನಿಂದ ಬರುತ್ತಾಳೆ. ಆಗ ಶಕುಂತಲೆ ಆಶ್ಚರ್ಯಪಟ್ಟು ನೋಡುತ್ತಾಳೆ. ದುಷ್ಯಂತನನ್ನು ಶಕುಂತಲೆ ನೋಡುತ್ತಾಳೆ. ಶಕುಂತಲೆಯನ್ನು ದುಷ್ಯಂತ ನೋಡುತ್ತಾನೆ. ಆಗ ಆ ಮಗುವೇ ತನ್ನ ಮಗ ಭರತ ಎಂದು ತಿಳಿದು ದುಷ್ಯಂತ ಕರೆದುಕೊಂಡು ಹೋಗುತ್ತಾನೆ. ಆ ಭರತನು ಆಳಿದ ನಾಡೇ ಭಾರತ ಎಂದು. ಈ ನಾಡಿಗೆ ಭಾರತ ಎಂಬ ಹೆಸರು ಬಂದದ್ದು ಹೀಗೆ. ಇದನ್ನು ಕವಿರತ್ನ ಕಾಳಿದಾಸ ತನ್ನ ಸುಂದರವಾದ ಅಭಿಜ್ಞಾನ ಶಾಕುಂತಲೆ ಎಂಬ ಕಾವ್ಯದಲ್ಲಿ ರಸವತ್ತಾಗಿ ವರ್ಣಿಸಿದ್ದಾನೆ.
ಚಾಮುಂಡೇಶ್ವರಿ ವರ್ಧಂತಿಯ ವಿಶೇಷ ಬೆಟ್ಟದಲ್ಲಿ ಚಾಮುಂಡೇಶ್ವರಿ ನೆಲೆಸಿದ ಕಥೆ ಚಾಮುಂಡಿ ಬೆಟ್ಟವು ಮೈಸೂರಿನ ಪೂರ್ವ ಭಾಗದಲ್ಲಿದ್ದು . ಸಾವಿರಾರು ವರ್ಷಗಳ ಹಿಂದೆ ಮಹಿಷಾಸುರ ಎಂಬ ರಾಕ್ಷಸ ದೇವಲೋಕ ಹಾಗೂ ಭೂಲೋಕದಲ್ಲಿ ಎಲ್ಲರಿಗೂ ಸಮಸ್ಯೆ ಉಂಟು ಮಾಡುತ್ತಿದ್ದ. ನನ್ನ ರಕ್ತ ನೆಲದ ಮೇಲೆ ಬಿದ್ದರೆ ನನ್ನಂಥ ನೂರು ರಾಕ್ಷಸರು ಹುಟ್ಟಬೇಕು ಎಂದು ತಪಸ್ಸು ಮಾಡಿ ಬ್ರಹ್ಮನಿಂದ ವರ ಪಡೆದಿರುತ್ತಾನೆ. ಆತನನ್ನು ಹೇಗಾದರೂ ಸಂಹಾರ ಮಾಡಬೇಕೆಂದು ದೇವತೆಗಳು ಬ್ರಹ್ಮ, ವಿಷ್ಣು, ಶಿವನ ಮೊರೆ ಹೋದರು. ಆಗ ತ್ರಿಮೂರ್ತಿಗಳು ತಾಯಿ ಪಾರ್ವತಿಗೆ ಹೆಚ್ಚಿನ ಶಕ್ತಿ ನೀಡುತ್ತಾರೆ. ಪ್ರತಿ ಮೆಟ್ಟಿಲಿಗೂ ಪೂಜೆ ಮಾಡುವ ಭಕ್ತರು ಚಾಮುಂಡೇಶ್ವರಿಯು ಪಾರ್ವತಿಯ ಪ್ರತಿರೂಪ. ಬೆಟ್ಟದಲ್ಲಿ ಮಹಿಷಾಸುರನೊಂದಿಗೆ ಹೋರಾಡಿ ಆತನನ್ನು ಸಂಹರಿಸಿ ಜನರನ್ನು , ದೇವತೆಗಳನ್ನು ಕಾಪಾಡುತ್ತಾಳೆ. ಮಹಿಷಾಸುರನ ರಕ್ತ ನೆಲದ ಮೇಲೆ ಬೀಳದಂತೆ ಚಾಮುಂಡೇಶ್ವರಿಯ ಸಹೋದರಿ ಜ್ವಾಲಾಮುಖಿ ತ್ರಿಪುರ ಸುಂದರಿ ತನ್ನ ನಾಲಿಗೆ ಚಾಚುತ್ತಾಳೆ. ಮಹಿಷಾಸುರನನ್ನು ಕೊಂದಿದ್ದಕ್ಕೆ ಚಾಮುಂಡಿಗೆ ಮಹಿಷಾಸುರ ಮರ್ದಿನಿ ಎಂಬ ಹೆಸರು ಬಂದಿದ್ದಾಗಿ ಕಥೆ ಇದೆ. ಈಗಲೂ ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನದ ಎದುರು ಮಹಿಷಾಸುರನ ಮೂರ್ತಿ ಇದೆ. ಹಾಗೇ ಬೆಟ್ಟದ ಸ್ವಲ್ಪ ದೂರದಲ್ಲಿ ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ ಇದೆ. ಈಕೆಯು ಮೈಸೂರಿನ ಅಧಿದೇವತೆ, ಸಪ್ತಮಾತೃಕೆಯರಲ್ಲಿ ಏಳನೆಯವಳು. ಹಿಂದೂ ಧರ್ಮದಲ್ಲಿ, ಚಾಮುಂಡೇಶ್ವರಿ ಪ್ರಬಲವಾದ ದೇವತೆ. "ಚಾಮುಂಡಿ" ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ-ಶಿಷ್ಟರಕ್ಷಕಿಯಾಗಿ ಮಹಿಷೂರಿನ ಮಹಿಷನನ್ನು ಕೊಂದು, ಲೋಕ ಕಂಟಕರಾಗಿದ್ದ ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ 'ಚಾಮುಂಡಿ'ಯಾಗಿದ್ದಾಳೆಂಬುದು ತಿಳಿಯುತ್ತದೆ. ಈಕೆ- ಷೋಡಶಿ, ಅಂಬೆ, ಈಶ್ವರಿ, ಚಂಡಿ, ಕಾಳಿ, ಭಗವತೀ, ಮಹೇಶ್ವರಿ, ಮಹಾದೇವಿ, ತ್ರಿಪುರ ಸುಂದರಿ, ದುರ್ಗೆ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಚಾಮುಂಡಿ ಮಹಿಷಮಂಡಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮಹಾಬಲಗಿರಿಯ ಮೇಲೆ ನೆಲೆಗೊಂಡಿ ದ್ದಾಳೆ. ಚಾಮುಂಡಿ ಬೆಟ್ಟವು ಸಮುದ್ರಮಟ್ಟಕ್ಕಿಂತ ಸುಮಾರು-೩೪೮೯ಅಡಿ ಎತ್ತರದಲ್ಲಿದೆ. ಮೈಸೂರಿನ ದೊಡ್ಡದೇವರಾಜ ಒಡೆಯರ್ ಅವರು ಬೆಟ್ಟವನ್ನೇರಲು ಬರುವ ಭಕ್ತಾದಿಗಳಿಗೆ ಅನುಕೂಲ ವಾಗಲೆಂದು ೧೧೦೧ ಮೆಟ್ಟಿಲುಗಳನ್ನು ಕಟ್ಟಿಸಿ, ೭೦೦ನೇ ಮೆಟ್ಟಿಲ ಬಳಿ ಬೃಹತ್ ನಂದಿ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಆಶ್ವಯುಜ ಶುಕ್ಲಪಕ್ಷದ ನವರಾತ್ರಿಯ ಸಮಯದಲ್ಲಿ ಭಾರತಾದಾದ್ಯಂತ ಚಾಮುಂಡಿ ಆರಾಧನೆ "ದುರ್ಗೆ"ಯ ಹೆಸರಿನಲ್ಲಿ ಬಹಳ ವೈಭವಯುತವಾಗಿ ನಡೆಯುತ್ತದೆ. ನವರಾತ್ರಿ ದಿನಗಳಲ್ಲಿ ಅಷ್ಟಲಕ್ಷ್ಮೀಯರ, ಅಷ್ಟದುರ್ಗೆಯರ ಆರಾಧನೆಯನ್ನು ಚಾಮುಂಡಿ ಬೆಟ್ಟದಲ್ಲಿರುವ ದೇಗುಲದಲ್ಲಿ ಮಾಡಲಾಗುತ್ತದೆ. ನವ ದಿನವು ದೇವಿಗೆ ವಿಶಿಷ್ಟವಾದ ಅಲಂಕಾರಗಳನ್ನು, ಉಡುಗೆ-ತೊಡುಗೆ, ಆಭರಣಗಳಿಂದ ಚಾಮುಂಡೇಶ್ವರಿಯನ್ನು ಸಿಂಗರಿಸಿ ಭಕ್ತವೃಂದಕ್ಕೆ ಸಂತಸವನ್ನು ನೀಡುತ್ತಾರೆ. ಪುರಾಣವೊಂದರ ಪ್ರಕಾರ-ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ "ಮಹಿಷಾಸುರ"ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರವಿನಿಂದ ಮಹಿಷನನ್ನು ಶಕ್ತಿ ಮತ್ತು ಯುಕ್ತಿಯಿಂದ ಕೊಲ್ಲುತ್ತಾಳೆ. ಆದುದರಿಂದಲೇ ಹತ್ತನೇಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ. ಮಹಿಷನನ್ನು ಕೊಂದ ನಂತರ ಚಾಮುಂಡಿ ಯುದ್ದದಿಂದಾದ ಶರೀರದ ಆಯಾಸವನ್ನು ನೀಗಿಸಿ ಕೊಳ್ಳಲು, ನಂಜನಗೂಡಿನ ಕಪಿಲಾ ನದಿ ತಟಕ್ಕೆ ಬಂದು, ಮಧ್ಯರಾತ್ರಿಯಲ್ಲಿ ಸ್ನಾನ ಮಾಡಿ, ತನ್ನ ತಲೆಗೂದಲನ್ನು ಹರವಿ ಒಣಗಿಸುತ್ತಾ ಇರಬೇಕಾದರೆ, ರಾತ್ರಿ ಸಂಚಾರಕ್ಕೆ ಬಂದ ಶಿವನಂಜುಂಡೇಶ್ವರ, ಈಕೆಯಲ್ಲಿ ಅನುರಕ್ತನಾಗುತ್ತಾನೆ. ಶಿವನಿಗೆ ವಿವಾಹವಾಗಿರುವುದರ ಅರಿವಿರದ ಚಾಮುಂಡಿ ತಾನೂ ಕೂಡ ಶಿವನಲ್ಲಿ ಅನುರಕ್ತಳಾಗುತ್ತಾಳೆ. ತದ ನಂತರ ಈ ಸುದ್ದಿ ಶಿವನ ಧರ್ಮಪತ್ನೀಯಾದ ಪಾರ್ವತಿಗೆ ಗೊತ್ತಾಗಿ ಅವಳು ಚಾಮುಂಡಿಯೊಂದಿಗೆ ಜಗಳವಾಡುತ್ತಾಳೆ. ಚಾಮುಂಡಿ-ಗೌರಿಯರ ಜಗಳ ಜನಪದ ಸಾಹಿತ್ಯದಲ್ಲಿ ನಿಚ್ಚಳವಾಗಿ ದಾಖಲಾಗಿದೆ. ಪಾರ್ವತಿಯ ಮಾತಿನಿಂದ ಮುಖಭಂಗಗೊಂಡ ಚಾಮುಂಡಿ ಮೈಸೂರಿಗೆ ಬರುವ ಹಾದಿಯಲ್ಲಿ ಆಕಸ್ಮಿಕವಾಗಿ ಸುತ್ತೂರಿನೆಡೆಗೆ ಸಾಗುತ್ತಿದ್ದ ಮಹದೇಶ್ವರನ ಬಳಿ ಹೋಗಿ ಪ್ರೇಮಭಿಕ್ಷೆ ಬೇಡುತ್ತಾಳೆ. ಇದರಿಂದ ಕಂಗಾಲಾದಮಹದೇಶ್ವರ ಏನೊಂದು ಮಾತನಾಡದೆ ಚಾಮುಂಡಿಯಿಂದ ತಪ್ಪಿಸಿಕೊಳ್ಳಲು ಬಿರ ಬಿರನೆ ನಡೆದು ಹೋಗುತ್ತಾನೆ. ಪಟ್ಟು ಬಿಡದ ಚಾಮುಂಡಿಯು ಆತನನ್ನು ಹಿಂಬಾಲಿಸಿದಾಗ, ಮಹದೇಶ್ವರ ಆಕೆಯಿಂದ ತಪ್ಪಿಸಿಕೊಳ್ಳಲು ಎಪ್ಪತ್ತೇಳು ಮಲೆಯಲ್ಲಿ ನೆಲೆಸಿದನಂತೆ. ನಂತರ ಚಾಮುಂಡಿ ಬೆಟ್ಟದ ಮೇಲೆ ನೆಲೆಸಿದಳಂತೆ. ಇವಳನ್ನು ಸಿಂಹವಾಹಿನಿಯೆಂದು ಪುರಾಣಗಳಲ್ಲಿ ಬಣ್ಣಿಸಲಾಗಿದೆ. ಜನಪದ ಕಥೆಯ ಪ್ರಕಾರ ಚಾಮುಂಡಿ ಉಜ್ಜಯಿನಿ ದೇಶದ ಬಿಜ್ಜಳರಾಯನ ಕಿರಿಯ ಮಗಳು. ಚಾಮುಂಡಿಯ ಅಕ್ಕ ಉರಿಮಸಣಿ ಸೇರಿದಂತೆ ಒಟ್ಟು ಏಳುಜನ ಅಕ್ಕ-ತಂಗಿಯರು. ಇವರು ಕಾರಣಾಂತರಗಳಿಂದ ಪರಸ್ಪರ ಜಗಳ ಕಾದು, ಮನೆಬಿಟ್ಟು ಪರಿತ್ಯಕ್ತೆಯರಾಗುತ್ತಾರೆ. ಇವರೆಲ್ಲ ಉತ್ತರ ಪ್ರದೇಶದಿಂದ ಹೊರಟು, ದಕ್ಷಿಣ ಪ್ರಾಂತ್ಯದ ಭಿನ್ನ ಭಿನ್ನ ಸ್ಥಳಗಳಲ್ಲಿ ನೆಲೆ ಕಂಡು ಕೊಳ್ಳುತ್ತಾರೆ. ಚಾಮುಂಡಿಯ ಹಿನ್ನೆಲೆಗೆ ಸಂಬಂಧಿಸಿದಂತೆ ಹಲವಾರು ಪಾಠಾಂತರಗಳು ಇರುವುದನ್ನು ಕಾಣಬಹುದಾಗಿದೆ. ಮತ್ತೊಂದು ಕಥೆಯ ಪ್ರಕಾರ ಚಾಮುಂಡಿ ಚಾಮರಾಯನ ಮಗಳು. ಈಕೆಗೆ ಕಿಚುಕುಚು ಮಾರಿ ಎಂಬ ಸೋದರಿ, ಮಹದೇಶ್ವರ ಮತ್ತು ಬ್ರಹ್ಮೇಶ್ವರ ಎಂಬ ಸೋದರರಿರುತ್ತಾರೆ. ಅನ್ಯ ಕಾರಣ ನಿಮಿತ್ತ ಈ ನಾಲ್ವರು ಮನೆ ಬಿಟ್ಟು ಹೊರಬರುವಾಗ, ಮಾರ್ಟಳ್ಳಿಯ ಹತ್ತಿರವಿರುವ ಸುಳ್ವಾಡಿ ಎಂಬ ಊರಲ್ಲಿ ಲಂಬಾಣಿ ಜನಾಂಗದವರು ಮಾಂಸದಡುಗೆ ಮಾಡುತ್ತಿರುವುದನ್ನು ಕಂಡ ಕಿಚುಕುಚು ಮಾರಿಯ ಬಾಯಲ್ಲಿ ನೀರೂರಿ ಬಿಡುತ್ತದೆ. ಆಗ ಆಕೆ ತನ್ನ ಅಕ್ಕ ಮತ್ತು ಅಣ್ಣಂದಿರಿಗೆ ತಾನಿಲ್ಲೆ ಉಳಿಯುವುದಾಗಿ ಹೇಳುತ್ತಾಳೆ. ಅದಕ್ಕವರು ಸಮ್ಮತಿಸುತ್ತಾರೆ. ಸುಮಾರು ಒಂದು ಮೈಲಿ ದೂರ ಬಂದಾಗ ಮಹದೇಶ್ವರ, ತಮ್ಮನಾದ ಬ್ರಹ್ಮೇಶ್ವರನಿಗೆ ನೀನು ತಂಗಿಯ ರಕ್ಷಣೆಗಾಗಿ ಇಲ್ಲೇ ಉಳಿವಂತೆ ಆದೇಶಿಸುತ್ತಾನೆ. ನಂತರ ತಾನು ಮಹದೇಶ್ವರ ಬೆಟ್ಟದೆಡೆಗೆ ಸಾಗಿ ಏಳುಮಲೆಯಲ್ಲಿ ನೆಲೆಸುತ್ತಾನೆ. ಚಾಮುಂಡಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ರಕ್ಷಣಾ ದೇವತೆಯಾಗಿ ನೆಲೆ ನಿಲ್ಲುತ್ತಾಳೆ. ಪುರಾಣಗಳು ಜಾನಪದ ಏನೇ ಹೇಳಿದರೂ ಚಾಮುಂಡಿ ದೇವಿ ನಮ್ಮೆಲ್ಲರ ನಾಡ ದೇವತೆಯಾಗಿ ನಮ್ಮ ರಕ್ಷಣೆಗಾಗಿ ನಿಂತಿದ್ದಾಳೆ. ಹಾಗಾಗಿ ಈಕೆಯ ವರ್ಧಂತಿಯ ಪ್ರಯುಕ್ತ ದೇವಿಯ ಬಳಿ ನಮ್ಮನ್ನು ಕಾಪಾಡು ತಾಯಿ ಎಂದು ಕೇಳುತ್ತಾ ಆಕೆಯನ್ನ ನಮಿಸೋಣ ವಂದನೆಗಳೊಂದಿಗೆ ಸೌಮ್ಯ ಕೋಠಿ ಮೈಸೂರು
https://youtube.com/@kathaamruta?si=lC02hlLjVf7QPIj-
ಮಹರ್ಷಿ ಉತತ್ಥ ಅಸುರರೊಂದಿಗೆ ಸುರರ ಸಂಗ್ರಾಮ ಬಿರುಸಿನಿಂದ ಸಾಗಿತ್ತು. ಅಸುರರ ಪೈಕಿ ರಾಹು ಸೂರ್ಯ-ಚಂದ್ರರೀರ್ವರನ್ನೂ ಬಾಣಗಳಿಂದ ತೀವ್ರವಾಗಿ ಗಾಯಗೊಳಿಸಿದ. ಮೂರೂ ಲೋಕಗಳಲ್ಲೂ ಕತ್ತಲು ಕವಿಯಿತು. ಅಸುರರಿಗೆ ಸುರರೆನಿಸಿದ ದೇವತೆಗಳ ಮೇಲೆ ಧಾಳಿ ನಡೆಸಲು ಇನ್ನೂ ಅನುಕೂಲ ಆಯಿತು. ದೇವತೆಗಳೆಲ್ಲರೂ ದಿಗ್ಭ್ರಾಂತರಾಗಿ ಅತ್ರಿ ಮಹರ್ಷಿಗಳ ಬಳಿಗೆ ಬಂದರು. ಅವರಲ್ಲಿ ಮೊರೆ ಇಟ್ಟರು: “ಮಹರ್ಷಿಗಳೇ, ಸೂರ್ಯ-ಚಂದ್ರರು ಅಸುರರಿಂದ ತೀವ್ರ ರೀತಿಯಲ್ಲಿ ಗಾಯಗೊಂಡಿದ್ದಾರೆ. ಮೂರೂ ಲೋಕಗಳಲ್ಲೂ ಕತ್ತಲು ಕವಿದೆದೆ. ನಮ್ಮನ್ನು ಕಂಡರೆ ಸಾಕು, ಅಸುರರು ಬೆಚ್ಚುವಂತೆ ಸದೆ ಬಡಿಯುತ್ತಿದ್ದಾರೆ. ದಯವಿಟ್ಟು ನಮ್ಮನ್ನು ಕಾಪಾಡಿ. ದಯಾರ್ದ್ರದೃಷ್ಟಿಯಿಂದ ದೇವತೆಗಳ ಕಡೆ ನೋಡುತ್ತಾ ಅತ್ರಿ ಮಹರ್ಷಿ ಕೇಳಿದರು: “ನನ್ನಿಂದ ನಿಮಗೆ ಯಾವ ರೀತಿಯ ಸಹಾಯ ಆಗಬೇಕು?” ದೇವತೆಗಳು ದೀನರಂತೆ ಮಹರ್ಷಿಯ ಕಡೆಯೇ ನೋಡತೋಡಗಿದರು. ಕಂಗೆಟ್ಟ ಕಣ್ಣುಗಳೊಂದಿಗೆ ಹೇಳಿದರು: “ಮಹರ್ಷಿಗಳೇ ಈಗ ತಾವೇ ಸೂರ್ಯ-ಚಂದ್ರರಾಗಿ ಮೂರೂ ಲೋಕಗಳಲ್ಲೂ ಬೆಳಕು ಚೆಲ್ಲಬೇಕು.” ದೇವತೆಗಳ ಆರ್ತನಾದವನ್ನು ಕೇಳಿ, ಕನಿಕರಿಸಿದ ಅತ್ರಿಮುನಿ ಚಂದ್ರನ ರೂಪ ತಾಳಿದರು. ತಮ್ಮ ತಪಶ್ಶಕ್ತಿಯಿಂದ ಗಾಯಗೊಂಡು ನಿಶ್ಶಕ್ತರಾಗಿದ್ದ ಸೂರ್ಯ-ಚಂದ್ರರಲ್ಲಿ ಬೆಳಕನ್ನು ತುಂಬಿದರು. ಮೂರೂ ಲೋಕಗಳಲ್ಲಿ ಕವಿದಿದ್ದ ಕತ್ತಲೆಯ ಕಾರ್ಮೋಡವನ್ನು ಚದುರಿಸಿದರು. ಸ್ವತ: ತಮ್ಮ ತಪೋಬಲದಿಂದ ದಾನವರನ್ನು ಸುಟ್ಟು, ಬೂದಿ ಮಾಡುತ್ತಾ ಬಂದರು, ದೇವತೆಗಳಿಗೂ ಈಗ ಶಕ್ತಿ ವೃದ್ಧಿಸಿತು. ಅವರೂ ಈಗ ಅಸುರರನ್ನು ಹಿಂದಟ್ಟುತ್ತಾ ಹೋದರು. ದಾನವರೆಲ್ಲರೂ ನಿರ್ಮೂಲನದ ನಂತರ ಅತ್ರಿಮುನಿಗಳು ತಮ್ಮ ಆಶ್ರಮಕ್ಕೆ ಹಿಂದಿರುಗಿದರು. ಆಯಾಸದಿಂದ ದಣಿದು ಬಂದಿದ್ದ ಮಹರ್ಷಿಗೆ ಮುದ್ದುಮಗಳು ನಿರ್ಮಲವಾದ ಲೋಟದಲ್ಲಿ ಶುದ್ಧವಾದ ನೀರು ತಂದುಕೊಟ್ಟಳು. ಅದೇ ವೇಳೆಗೆ ತ್ರಿಲೋಕ ಸಂಚಾರಿ ಆದ ನಾರದ ಮಹರ್ಷಿ ಅಲ್ಲಿಗೆ ಬಂದರು. ಅತ್ರಿಮಹರ್ಷಿಯ ಮುದ್ದು ಮಗಳು ಭಯ-ಭಕ್ತಿಯಿಂದ ಅವರ ಪಾದಗಳಿಗೆ ಎರಗಿದಳು. ಅತ್ರಿಮಹರ್ಷಿಯೂ ನಾರದರಿಗೆ ವಂದಿಸಿ, ಸತ್ಕರಿಸುತ್ತಾ ಹೇಳಿದರು: “ಮಹರ್ಷಿಗಳೇ, ನನ್ನ ಮಗಳು ಈಗ ವಿವಾಹ ವಯಸ್ಕಳಾಗಿದ್ದಾಳೆ. ನೀವೇ ಎಲ್ಲಾದರೂ ಯೋಗ್ಯ ವರನನ್ನು ಹುಡುಕಿ, ಹೇಳಬಾರದೇ?” ಹಾಗೆಯೇ ಯೋಚಿಸುತ್ತಾ ನಾರದರು ಹೇಳಿದರು: “ಮುನಿವರ್ಯರೇ, ರೂಪವತಿಯೂ, ಗುಣವತಿಯೂ ಆದ ನಿಮ್ಮ ಮಗಳಿಗೆ ಯೋಗ್ಯನಾದ ವರ ಅಂದರೆ ಕ್ಷಾತ್ರ ತೇಜಸ್ಸಿನಿಂದ ಕೂಡಿದ ಉತತ್ಥ ಮಹಾಮುನಿ, ಆದರೆ ಅಂತಹ ಸುಯೋಗ್ಯ ವರನನ್ನು ಪಡೆಯಲು ನಿಮ್ಮ ಮಗಳು ಕೆಲಕಾಲ ತಪಸ್ಸು ಮಾಡಬೇಕು.” ನಾರದರ ನಿರ್ಗಮನದ ನಂತರ ಅತ್ರಿಮಹರ್ಷಿ ಮಗಳೊಂದಿಗೆ ಉತತ್ಥ ಮಹರ್ಷಿಯ ಬಗ್ಗೆ ಪರ್ಯಾಲೋಚಿಸಿದರು. ಅವಳೂ ಸಹ ಒಪ್ಪಿ, ತಪಸ್ಸಿಗೆ ಕುಳಿತಳು. ನಾರದರು ಉತತ್ಥ ಮಹರ್ಷಿಯ ಬಳಿಗೆ ಬಂದರು, ಗೃಹಸ್ಥಧರ್ಮವನ್ನು ಪರಿಪಾಲಿಸಲು ಉಪದೇಶಿಸಿದರು. ಅತ್ರಿಮಹರ್ಷಿಯ ಮಗಳ ಬಗ್ಗೆಯೂ ತಿಳಿಸಿದರು. ಉತತ್ಥ ಮಹರ್ಷಿಯೂ ನಾರದರ ಮಾತಿಗೆ ಮನ್ನಣೆ ನೀಡಿದರು. ಮದುವೆ ಸಂಭ್ರಮದೊಂದಿಗೆ ನಡೆದು ಹೋಯಿತು. ಅತ್ರಿಮಹರ್ಷಿಯ ಮಗಳನ್ನು ನೀರಿನ ಅಧಿದೇವತೆ ಎನಿಸಿದ ವರುಣ ವರಿಸಲು ಅಪೇಕ್ಷಿಸಿದ್ದ. ಅವನಿಗೆ ವಿಷಯ ತಿಳಿದ ಕೂಡಲೇ ಮನಸ್ಸಿಗೆ ತುಂಬಾ ನೋವಾಯಿತು. ಅಷ್ಟೇ ದ್ವೇಷವೂ ಉದ್ಭವಿಸಿತು. ಹೇಗಾದರೂ ಅವಳನ್ನು ತನ್ನ ಲೋಕಕ್ಕೆ ಅಪಹರಿಸಿ, ತರಲು ಬಯಸಿದ. ಕೊನೆಗೊಂದು ದಿನ ಅವಳು ತನ್ನ ಸಖಿಯರೊಂದಿಗೆ ನೀರು ತರಲು ನದಿಯ ತೀರಕ್ಕೆ ಬಂದಿದ್ದಾಗ ಸಮಯ ಸಾಧಿಸಿ ಅಪಹರಿಸಿಕೊಂಡು ಹೋರಟೇಹೋದ. ನಾರದರು ಈ ದೃಶ್ಯವನ್ನು ಕಣ್ಣಾರೆ ಕಂಡುಬಿಟ್ಟರು. ಅವರು ಕೂಡಲೇ ಉತತ್ಥ ಮಹರ್ಷಿಯ ಬಳಿಗೆ ಹೋಗಿ, ವಿಚಾರವನ್ನು ತಿಳಿಸಿದರು. ಉತತ್ಥ ಮಹರ್ಷಿ ಸ್ವಭಾವತ: ಸಂಯಮಿ ಕೋಪೋದ್ರೇಕದಿಂದ ಮನೋವಿಕಾರಗೊಳಿಸಿಕೊಳ್ಳಲು ಬಯಸುವವನಲ್ಲ. ಮನಸ್ಸನ್ನು ನಿಗ್ರಹಿಸುತ್ತಾ ಹೇಳಿದ: “ನಾರದರೇ, ದಯವಿಟ್ಟು ವರುಣದೇವನ ಬಳಿಗೆ ಹೋಗಿ, ನನ್ನ ಹೆಂಡತಿಯನ್ನು ಹಿಂದಿರುಗಿಸಲು ತಿಳಿಸಿ, ನಾವು ಋಷಿಗಳಾಗಿ ಕೋಪ-ತಾಪಗಳಿಗೆ ಎಡೆ ನೀಡುವುದು ತರವಲ್ಲ, ವರುಣದೇವ ತನ್ನ ತಪ್ಪನ್ನು ತಾನೇ ಅರಿತು ನಡೆದರೆ, ಉಭಯತ್ರರಿಗೂ ಮಂಗಳದಾಯಕವೇ.” ನಾರದರಿಗೂ ಉತತ್ಥ ಮುನಿಯ ಮಾತು ಹಿಡಿಸಿತು. ವರುಣನ ಬಳಿಗೆ ಹೋಗಿ, ವಿನಮ್ರತೆಯಿಂದಲೇ ವಿಚಾರ ತಿಳಿಸಿದರು. ವರುಣನಿಗೆ ಇನ್ನೂ ರೇಗಿಹೋಯಿತು. ಉತತ್ಥ ಮುನಿಯ ಮಾತಿಗೆ ಮನ್ನಣೆ ನೀಡುವುದಂತಿರಲಿ, ನಾರದರನ್ನೂ ಅಸಡ್ಡೆಯಿಂದಲೇ ಕಂಡ. ನಾರದರೂ ಕುಪಿತರಾಗಲಿಲ್ಲ. ಉತತ್ಥ ಮುನಿಗಳ ಬಳಿಗೆ ಹಿಂದಿರುಗಿ ಬಂದರು. ನಡೆದುದೆಲ್ಲವನ್ನೂ ತಿಳಿಸಿದರು. ದುರಹಂಕಾರಿ ಆದ ವರುಣನಿಂದ ಅವಮಾನ ಆಯಿತಲ್ಲಾ! ಎಂದು ಉತತ್ಥರಿಗೆ ತುಂಬಾ ನೋವಾಯಿತು. ಈಗ ವರುಣದೇವನಿಗೆ ಸರಿಯಾದ ಬುದ್ಧಿ ಕಲಿಸಬೇಕೆಂದು ಬಯಸಿದರು. ಉತತ್ಥ ಮಹರ್ಷಿಗಳು ಲೋಕದ ನದಿಗಳ ನೀರನ್ನೆಲ್ಲಾ ತಮ್ಮ ತಪಶ್ಶಕ್ತಿಯಿಂದ ಸ್ವಾಹ ಮಾಡಲು ಪ್ರಾರಂಭಿಸಿದರು. ಲೋಕದ ನೀರಿನ ಭಾಗವೆಲ್ಲಾ ಬತ್ತಿ ಹೋಗಲಾರಂಭಿಸಿತು. ಎಲ್ಲೆಲ್ಲೂ ನೀರಿಗಾಗಿ ಕೂಗೆದ್ದಿತು. ನೀರಿಲ್ಲದೆ ಜನ-ಜಾನುವಾರುಗಳು ಸಾಯತೊಡಗಿದವು. ದೇವತೆಗಳೂ ನೀರಿಗಾಗಿ ಸಂತ್ರಸ್ತರಾದರು. ದೇವತೆಗಳೆಲ್ಲರೂ ವರುಣನ ಬಳಿಗೆ ಬಂದು ಗೋಗರೆದರು: “ವರುಣದೇವಾ, ಪರನಾರಿಯರನ್ನು ಅಪಹರಿಸಿ, ತರುವುದಕ್ಕಿಂತಲೂ ಮಿಗಿಲಾದ ಪಾಪ ಬೇರೊಂದಿಲ್ಲ. ನೀನು ದಯವಿಟ್ಟು ಆಕೆಯನ್ನು ಮಹರ್ಷಿಯ ಕೈಗೆ ಒಪ್ಪಿಸಿ ಬಾ ಎಂದರು. ಆದರೆ ವರುಣನ ಅಹಂಕಾರದ ಸೊಕ್ಕು ಇಳಿಯಲಿಲ್ಲ. ಹೇಡಿಯಂತೆ ತನ್ನ ನಗರದ ಮೂಲೆಯಲ್ಲಿ ಹುದುಗಿ ಕುಳಿತ. ಉತತ್ಥ ಮಹರ್ಷಿಗಳು ವರುಣನನ್ನು ಹುಡುಕುತ್ತಾ ಬಂದರು. ಮೂರೂ ಲೋಕಗಳಲ್ಲಿ ಎಲ್ಲಿಯೂ ನೀರೇ ಇಲ್ಲದಂತೆ ಶೋಷಿಸುತ್ತಾ ಬಂದರು. ಈಗ ವರುಣ ವಿಧಿ ಇಲ್ಲದೆ ಶರಣಾಗಬೇಕಾಯಿತು. ಪ್ರಾಣಕ್ಕೆ ಸಂಚು ಉಂಟಾಗುತ್ತಿರುವುದನ್ನು ಕಂಡು, ಭಯದಿಂದ ಏದುಸಿರು ಬಿಡುತ್ತಾ ಬಂದ ವರುಣ ಉತತ್ಥ ಮಹರ್ಷಿಗಳ ಪಾದಗಳ ಮೇಲೆ ಬಿದ್ದು ಪ್ರಾರ್ಥಿಸಿದ: “ಮಹರ್ಷಿಗಳೇ, ನಿಮ್ಮಲ್ಲಿ ಶರಣಾಗಿ ಬಂದಿರುವ ನನ್ನನ್ನು ಕಾಪಾಡಿ. ನನ್ನ ಮನೋವಿಕಾರತೆಯೇ ನನ್ನನ್ನು ಈ ಹೀನಸ್ಥಿತಿಗೆ ತಂದಿತ್ತು” ಅನ್ನುತ್ತಾ ಅವರ ಪತ್ನಿಯನ್ನು ಭಕ್ತಿಯಿಂದ ಅವರಿಗೇ ಒಪ್ಪಿಸಿದ. ಉತತ್ಥ ಮಹರ್ಷಿಗಳಿಗೂ ಈಗ ಮನಸ್ಸಮಾಧಾನ ಆಯಿತು. ವರುಣನನ್ನು ತನ್ನ ಮಗನಂತೆ ಮೇಲೆತ್ತಿ ಲಗುಬಗೆಯಿಂದಲೇ ಹೇಳಿದರು: “ವರುಣಾ, ಶರಣಾಗತರಾದವರನ್ನು ರಕ್ಷಿಸುವುದು ನಮ್ಮಂತಹ ಕ್ಷಾತ್ರವೀರರ ಕರ್ತವ್ಯ. ನಾನು ನಿನ್ನನ್ನು ಕ್ಷಮಿಸಿದ್ದೇನೆ. ನಿನ್ನ ಲೋಕಕ್ಕೆ ಹೋಗು” ಅನ್ನುತ್ತಿದ್ದಂತೆ ಎಲ್ಲೆಲ್ಲೂ ಮತ್ತೆ ನೀರು ತುಂಬಿ ಹರಿಯಿತು. ಜನರೆಲ್ಲರ ಹಾಹಾಕಾರ ಅಡಗಿತು.