ಸ್ಪರ್ಧಾತ್ಮಕ ಪರೀಕ್ಷಾ ತಯಾರಿ

11.8K subscribers

About ಸ್ಪರ್ಧಾತ್ಮಕ ಪರೀಕ್ಷಾ ತಯಾರಿ

ಖಚಿತ ಮಾಹಿತಿ ಉಚಿತ ವೇದಿಕೆ (Billion people's belief's) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ವಾಗುವಂತಹ ಎಲ್ಲಾ ರೀತಿಯ ಮಾಹಿತಿಗಳನ್ನು ನೀಡಲಾಗುವುದು ಪ್ರಚಲಿತ ವಿದ್ಯಮಾನಗಳು ಜಾಬ್ ನೋಟಿಫಿಕೇಶನ್ https://whatsapp.com/channel/0029VaFa0A08qIzomoVsiN0l

Similar Channels

Swipe to see more

Posts

ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
2/3/2025, 3:31:16 PM

👆🏻👆🏻👆🏻👆🏻👆🏻👆🏻👆🏻👆 *Free Coaching Started:* ✍🏻🍁✍🏻🍁✍🏻🍁✍🏻 2024 ಅಕ್ಟೋಬರ್-06 ರ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ಅಭ್ಯರ್ಥಿಗಳಿಗೆ (03-02-2025 ರಿಂದ) ಇಂದಿನಿಂದ ಬೆಂಗಳೂರಿನ ಹಜ್ ಭವನದಲ್ಲಿ 10 ತಿಂಗಳು ವಸತಿ ಸಹಿತ KAS / IAS ಪರೀಕ್ಷೆಗೆ Free Coaching Classes ಆರಂಭಗೊಂಡಿವೆ.!! ✍🏻🍁✍🏻🍁✍🏻🍁✍🏻🍁

😮 🙏 ❤️ 👍 💜 😢 🫗 17
ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
2/3/2025, 3:28:57 PM

*ಸೈನಿಕ ಶಾಲೆ ಪ್ರವೇಶ ಪರೀಕ್ಷೆ.*

❤️ 2
ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
2/3/2025, 3:05:18 PM
❤️ 🩴 💛 💪 🔥 😂 😍 😢 😮 13
ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
2/3/2025, 2:51:51 PM

*KPSC (KAS)ಪರಿಷ್ಕೃತ ಕೀ ಉತ್ತರಗಳು*

⛑️ 👍 2
ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
2/3/2025, 2:51:23 PM

*🔰ಫೆಬ್ರವರಿ 12 ರಿಂದ 14ರ ವರೆಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ.*

ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
2/3/2025, 2:50:46 PM

*_🌺ಕರ್ನಾಟಕದ ಏಕೀಕರಣದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು✍🏻_* *_ಇಂಪಾರ್ಟೆಂಟ್✍🏻_* 🍀ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಶಸ್ತ್ರಾಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದವನು? ( KAS-1999) *👉🏻 ಕಲ್ಯಾಣಸ್ವಾಮಿ* 🍀ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ? ( KAS1999) *👉🏻 ಧಾರವಾಡ* 🍀ಕರ್ನಾಟಕದ ಬಾರ್ಡೋಲಿ ಎಂದು ಜನಪ್ರಿಯವಾಗಿದ್ದ ಕೇಂದ್ರ? *👉🏻ಅಂಕೋಲಾ* 🍀ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು? ( KAS-1999) *👉🏻 ಉಪ್ಪಿನ ಸತ್ಯಾಗ್ರಹ* 🍀 ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಚಳವಳಿ ಆರಂಭವಾದದ್ದು? ( KAS-1999) *👉🏻1947ರಲ್ಲಿ* 👉🏻19 ಜಿಲ್ಲೆಗಳಿಂದ ಕೂಡಿದ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು? ( KAS-1999) *👉🏻 ನವೆಂಬರ್ 1, 1956* 🍀1946ರಲ್ಲಿ ಕರ್ನಾಟಕದ ಏಕೀಕರಣದ ಸಮಾವೇಶ ನಡೆದ ಸ್ಥಳ? ( KAS-2005) *👉🏻 ಮುಂಬೈ* 🍀ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು "ಯೂನಿಟ್ ಕಾಂಗ್ರೆಸ್" ಎಂದು ಎಕರೆಯಲಾಗಿದೆ, ಕಾಂಗ್ರೆಸ್ ಅಧಿವೇಶನದ ಜೊತೆಜೊತೆಗೆ ನಡೆದ ಅಧಿವೇಶನ ಯಾವುದು? ( KAS-2002) *👉🏻ಅಖಿಲ ಭಾರತ ಸಾಮಾಜಿಕ ಸಮ್ಮೇಳನ* 🍀 ವಸಾಹತುಶಾಹಿ ಭಾರತದಲ್ಲಿ ಅರಸರ ಶ್ರೇಣಿಯಲ್ಲಿ ಮೈಸೂರು ಸಂಸ್ಥಾನದ ಸಂಸ್ಥಾನವು ಈ ರೀತಿಯದು? ( KAS-2015) *👉🏻 21ಬಂದೂಕು ಸಲಾಮಿನ ರಾಜ್ಯ* 🍀1930ರ ಎಪ್ರಿಲ್ ನಲ್ಲಿ ಬೆಳಗಾವಿನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರು ಯಾರು? ( KAS-2017) *👉🏻ಗಂಗಾಧರರಾವ್ ದೇಶಪಾಂಡೆ* 🍀 ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ? ( KAS-2017) *👉🏻 ಮೈಲಾರ ಮಹದೇವಪ್ಪ* 🍀 ಮೈಸೂರಿನಲ್ಲಿ ಶಾಲೆಯನ್ನು ಯಾವ ಮೊದಲ ಕ್ರೈಸ್ತ ಮಿಷನರಿ ಪ್ರಾರಂಭಿಸಿತು? *👉🏻 ವೆಸ್ಲಿಯನ್* 🍀 ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲ ತಂತ್ರದಿಂದ ಬ್ರಿಟಿಷರೊಡನೆ ಹೋರಾಟ ನಡೆಸಿದ್ದ ಕರ್ನಾಟಕದ ಪ್ರಸಿದ್ಧ ಸ್ವತಂತ್ರ ಹೋರಾಟಗಾರ ಯಾರು? ( KAS-2017) *👉🏻ಸಂಗೊಳ್ಳಿ ರಾಯಣ್ಣ* 🍀 ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918ರಲ್ಲಿ ನೇಮಿಸಿದ ಸಮಿತಿ ಯಾವುದು? ( KAS-2017) *👉🏻 ಮಿಲ್ಲರ್ ಸಮಿತಿ* 🍀 1953 ರಲ್ಲಿನ ರಾಜ್ಯಗಳ ಪುನರ್ ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿಸಲಾಯಿತು? ( KAS-2017) *👉🏻 ಅಧ್ಯಕ್ಷರು= ಫಜಲ್ ಅಲಿ, ಸದಸ್ಯರು= H,N,ಕುಂಜರು, ಕೆ, ಎಂ, ಪನಿಕರ್* 🍀1928ರ ಬೆಂಗಳೂರಿನ ಗಲಭೆಗಳಲ್ಲಿ ಕಂಡು ಬಂದಿರುವಂತಹ ಗಣಪತಿ ಗಲಭೆ ಮತ್ತು ಹಿಂದೂ-ಮುಸ್ಲಿಂ ಸರಣಿ ಸಂಘರ್ಷಗಳು ಬೆಂಗಳೂರು ನಗರದಲ್ಲಿ ಶಾಲೆಯ ಆವರಣದಲ್ಲಿ ಒಂದು ಗಣೇಶ ಪ್ರತಿಮೆಯ ಮೇಲೆ ಕಮಾನುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಉಂಟಾಗಿದ್ದು ಇದನ್ನು ಮೈಸೂರಿನ ಮಹಾರಾಜರು ಖಂಡಿಸಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿತು ಈ ಸಮಿತಿಯ ಮುಖ್ಯಸ್ಥರು ಯಾರು? ( KAS-2017) *👉🏻 ಸರ್ ಎಂ ವಿಶ್ವೇಶ್ವರಯ್ಯ* 🍀 ಯಾವ ವರದಿಯನ್ನಾದರಿಸಿ 1956 ರಲ್ಲಿ ಕರ್ನಾಟಕ ರೂಪಗೊಂಡಿತು? ( PSI-2018) *👉🏻 ಫಜಲ್ ಅಲಿ ಸಮಿತಿ* 🍀 ಮೈಸೂರಿನ ಅಂಬಾವಿಲಾಸ ಅರಮನೆಯನ್ನು ವಿನ್ಯಾಸಗೊಳಿಸಿದವರು? ( PSI/ RSI-2014.2016) *👉🏻 ಹೆನ್ರಿ ಇರ್ವಿನ್* 🍀ಜಯ ಭಾರತ ಜನನಿಯ ತನುಜಾತೆ ರಚಿಸಿದವರು? ( PSI-2015) *👉🏻 ಕುವೆಂಪು* 🍀ಬೆಂಗಳೂರಿನ ಕಬ್ಬನ್ ಪಾರ್ಕ್ ನಿರ್ಮಾಪಕ? ( PSI-2015) *👉🏻 ಜಾನ್ ವೀಡ* 🍀ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟಮೊದಲ ಸಮಾಚಾರ ಪತ್ರಿಕೆ? ( PSI-2014) *👉🏻ಮಂಗಳೂರು ಸಮಾಚಾರ* 🍀 ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾದ ನಂದಿಬೆಟ್ಟ ಇರುವ ಜಿಲ್ಲೆ? ( PSI-2014) *👉🏻 ಚಿಕ್ಕಬಳ್ಳಾಪುರ* 🍀 ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ? ( PSI-2014) *🍀 ಬೆಳಗಾವಿ-1924ರಲ್ಲಿ* 🍀 ಹಿಂದೂಸ್ತಾನ ಸೇವಾದಳ ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು? ( PSI-2018) *👉🏻 ಎನ್ ಎಸ್ ಹರ್ಡೆಕರ್* 🍀ಮೈಸೂರು ಚಲೋ ಚಳುವಳಿ ನಡೆದ ವರ್ಷ? ( PSI-2013) *👉🏻 1947* 🍀 ಕನ್ನಡದ ಧ್ವಜವನ್ನು ವಿನ್ಯಾಸ ಮಾಡಿದವರು? ( PSI-2009) *👉🏻ಎಂ ರಾಮಮೂರ್ತಿ* 🍀ನಮ್ಮ ನಾಡಿನಲ್ಲಿ ಆಶ್ವಯುಜ ಮಾಸದಲ್ಲಿ ಬರುವ ಹಬ್ಬ ಅಂದರೆ? ( PSI-2009) *👉🏻 ನವರಾತ್ರಿ* 🍀 ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರು? ( PSI-2009) *👉🏻 4ನೇ ಶ್ರೀ ಕೃಷ್ಣರಾಜಒಡೆಯ* 🍀 ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ? ( PSI-2009) *👉🏻 ಮಂಡ್ಯ* 🍀ಕರ್ನಾಟಕದಲ್ಲಿ ಗಾಂಧೀಜಿ ಅತ್ಯಂತ ಹೆಚ್ಚು ಸಮಯ ತಂಗಿದ್ದ ವರ್ಷ?( PSI-2007) *👉🏻 1927- 🍀ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ? ( PSI-2006) *👉🏻ಶಿರಾ* 🍀 ಕರ್ನಾಟಕ ದಂಡಿ ಎಂದು ಕರೆಯುವರು? ( PSI-2006) *👉🏻ಅಂಕೋಲಾ* 🍀ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? ( PSI-2005) *👉🏻 ಜನಪ್ರತಿನಿಧಿ ಸರ್ಕಾರಕ್ಕೆ ಚಳುವಳಿ* 🍀 ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಈ ಕವಿತೆಯನ್ನು ರಚಿಸಿದವರು? ( PSI-2005) *👉🏻ಹುಯಿಗೋಳ್ ನಾರಾಯಣರಾವ್* 🍀 ಹೈದರಾಬಾದಿನ ನಿಜಾಮರ ನಿಯಂತ್ರಣದಲ್ಲಿದ್ದ ಹೈದ್ರಾಬಾದ-ಕರ್ನಾಟಕ ಪ್ರದೇಶವು ಭಾರತದ ಒಕ್ಕೂಟದಲ್ಲಿ ಸೇರಿದ್ದು? ( PSI-2002) *1948 ಸಪ್ಟಂಬರ್* 🍀ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ? ( PSI-2002) *👉🏻ನಂದಗಡ* 🍀1924ರ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು? ( PSI 2000) *👉🏻 ಮಹಾತ್ಮ ಗಾಂಧೀಜಿ* 🍀 ಸಂಗೊಳ್ಳಿ ರಾಯಣ್ಣನಿಗೆ ಸಂಬಂಧಿಸಿದ ಸ್ಥಳ? ( PSI-2000) *👉🏻 ಕಿತ್ತೂರು.*

❤️ 👍 😮 4
ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
2/3/2025, 2:50:45 PM

*_🌺ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು ಮತ್ತು ಉತ್ತರಗಳು ✍🏻_* *🍁2025 ರ ಪ್ರವಾಸಿ ಭಾರತೀಯ ದಿವಸ್ ಸಮಾವೇಶವನ್ನು ಯಾವ ನಗರ ಆಯೋಜಿಸುತ್ತದೆ?* [ಎ] ಚೆನ್ನೈ [ಬಿ] ಭೋಪಾಲ್ [ಸಿ] ಭುವನೇಶ್ವರ [ಡಿ] ಹೈದರಾಬಾದ್ *Ans: C* *🍁ಯಾವ ರಾಜ್ಯ ಸರ್ಕಾರವು ಶಾಹಿದ್ ಮಾಧೋ ಸಿಂಗ್ ಹಾತ್ ಖರ್ಚಾ ಯೋಜನೆಯನ್ನು ಪ್ರಾರಂಭಿಸಿತು?* [ಎ] ಕರ್ನಾಟಕ [ಬಿ] ರಾಜಸ್ಥಾನ [ಸಿ] ಗುಜರಾತ್ [ಡಿ] ಒಡಿಶಾ *Ans: D* *🍁'ಪಂಚಾಯತ್ ಸೆ ಪಾರ್ಲಿಮೆಂಟ್ 2.0' ಕಾರ್ಯಕ್ರಮವು ಯಾವ ಬುಡಕಟ್ಟು ನಾಯಕನ 150 ನೇ ಜನ್ಮ ವಾರ್ಷಿಕೋತ್ಸವವನ್ನು ನೆನಪಿಸುತ್ತದೆ?* [ಎ] ಬಿರ್ಸಾ ಮುಂಡಾ [ಬಿ] ರಾಣಿ ದುರ್ಗಾವತಿ [ಸಿ] ತಿರೋತ್ ಸಿಂಗ್ [ಡಿ] ಲಕ್ಷ್ಮಣ್ ನಾಯಕ್ *Ans: A* *🍁ಸುದ್ದಿಯಲ್ಲಿ ಕಂಡುಬರುವ ಬನಿಹಾಲ್ ಬೈಪಾಸ್ ಯಾವ ರಾಜ್ಯ/UT ನಲ್ಲಿದೆ?* [A] ಸಿಕ್ಕಿಂ [B] ಅಸ್ಸಾಂ [C] ಜಮ್ಮು ಮತ್ತು ಕಾಶ್ಮೀರ [D] ಹಿಮಾಚಲ ಪ್ರದೇಶ *Ans: C* *🍁ಯಾವ ಸಚಿವಾಲಯವು ಸಶಕ್ತ್ ಬೇಟಿ ಮತ್ತು ಇ-ದೃಷ್ಟಿ ಉಪಕ್ರಮಗಳನ್ನು ಪ್ರಾರಂಭಿಸಿತು?* [A] ಗೃಹ ವ್ಯವಹಾರಗಳ ಸಚಿವಾಲಯ [B] ಶಿಕ್ಷಣ ಸಚಿವಾಲಯ [C] ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ [D] ರಕ್ಷಣಾ ಸಚಿವಾಲಯ *Ans: B* *🍁ಜನವರಿ 2025 ರಲ್ಲಿ ಯಾವ ದೇಶವು ಅಧಿಕೃತವಾಗಿ ಬ್ರಿಕ್ಸ್‌ಗೆ ಪೂರ್ಣ ಸದಸ್ಯರಾಗಿ ಸೇರಿಕೊಂಡಿದೆ?* [A] ಸಿಂಗಾಪುರ [B] ಮಾರಿಷಸ್ [C] ಇಂಡೋನೇಷ್ಯಾ [D] ಮಲೇಷ್ಯಾ *Ans: C* *🍁ಯಾವ ದಿನವನ್ನು ಯುದ್ಧ ಅನಾಥರ ವಿಶ್ವ ದಿನ ಎಂದು ಆಚರಿಸಲಾಗುತ್ತದೆ?* [A] ಜನವರಿ 5 [B] ಜನವರಿ 6 [C] ಜನವರಿ 7 [D] ಜನವರಿ 8 *Ans: B* *🍁ವಿಶ್ವದ ಅತಿದೊಡ್ಡ ಮೆಟ್ರೋ ಜಾಲದ ವಿಷಯದಲ್ಲಿ ಭಾರತವು ಯಾವ ಶ್ರೇಣಿಯನ್ನು ಹೊಂದಿದೆ?* [A] ಪ್ರಥಮ [B] ಎರಡನೇ [C] ಮೂರನೇ [D] ನಾಲ್ಕನೇ *Ans: C* *🍁ಮುಖ್ಯಮಂತ್ರಿ ಮೈಯಾ ಸಮ್ಮಾನ್ ಯೋಜನೆಯನ್ನು ಯಾವ ರಾಜ್ಯ ಸರ್ಕಾರವು ಪ್ರಾರಂಭಿಸಿದೆ?* [ಎ] ಒಡಿಶಾ [ಬಿ] ಜಾರ್ಖಂಡ್ [ಸಿ] ಬಿಹಾರ [ಡಿ] ಗುಜರಾತ್ *Ans: B* *🍁74 ನೇ ಸೀನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನ ಆತಿಥೇಯ ರಾಜ್ಯ ಯಾವುದು?* [ಎ] ಗುಜರಾತ್ [ಬಿ] ಉತ್ತರಾಖಂಡ [ಸಿ] ಮಧ್ಯಪ್ರದೇಶ [ಡಿ] ಒಡಿಶಾ *Ans: A*

😢 1
ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
2/3/2025, 11:05:46 AM

🔰 *ಭಾರತ ಮೂಲದ ಅಮೆರಿಕನ್ ಗಾಯಕಿ ಚಂದ್ರಿಕಾ ಟಂಡನ್‌ಗೆ ಗ್ರ್ಯಾಮಿ ಗರಿ. / Indian-origin banking whiz Chandrika Tandon wins at the 67th Grammys* 👉🏻 *ಭಾರತ ಮೂಲದ ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. ಭಾರತೀಯ ಶಾಸ್ತ್ರೀಯ ಸಂಗೀತ, ವೈದಿಕ ಪಠಣ ಮತ್ತು ಅಂತರರಾಷ್ಟ್ರೀಯ ಸಂಪ್ರದಾಯಗಳನ್ನು ಒಳಗೊಂಡ ಈ ಆಲ್ಬಮ್ 'ಬೆಸ್ಟ್ ನ್ಯೂ ಏಜ್‌' ಆಲ್ಬಂ ವಿಭಾಗದಲ್ಲಿ ಟಂಡನ್ ಅವರ 'ತ್ರಿವೇಣಿ' ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸ್ಪರ್ಧೆಯಲ್ಲಿ ಇದ್ದ ಭಾರತದ ರಿಕ್ಕಿ ಕೇಜ್ ಮೊದಲಾದವರನ್ನು ಅವರು ಹಿಂದಿಕ್ಕಿದ್ದಾರೆ.* 👉🏻 *ಲಾಸ್‌ ಏಂಜಲೀಸ್‌ನಲ್ಲಿ 67ನೇ ಅತಿ ದೊಡ್ಡ ಸಂಗೀತ ಪ್ರಶಸ್ತಿ ಕಾರ್ಯಕ್ರಮ ನಡೆಯುತ್ತಿದೆ. ಈ ಹಿಂದೆ ಟಂಡನ್‌ ಅವರು 2009ರಲ್ಲಿ 'ಸೋಲ್‌ ಕಾಲ್‌' ಎನ್ನುವ ಆಲ್ಬಂಗೆ ಮೊದಲನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದರು. 2024ರ ಆಗಸ್ಟ್‌ 30ರಂದು ತ್ರಿವೇಣಿ ಆಲ್ಬಂ ಬಿಡುಗಡೆಯಾಗಿದೆ. ಒಟ್ಟು ಏಳು ಹಾಡುಗಳ ಈ ಆಲ್ಬಂನಲ್ಲಿ, ಪ್ರತಿಯೊಂದು ಹಾಡು ಬೇರೆ ಬೇರೆ ಕಥೆಯನ್ನು ಹೇಳುತ್ತದೆ ಎಂದು ಟಂಡನ್‌ ಅವರ ತಂಡ ಹೇಳಿದೆ.*

ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
2/3/2025, 11:03:50 AM
ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
2/3/2025, 11:03:40 AM
❤️ 👍 2
Link copied to clipboard!