DK Suresh
13.1K subscribers
Verified ChannelAbout DK Suresh
This is the Official Channel of DK Suresh Former 3 time MP for Bangalore Rural | ಕನ್ನಡಿಗ | Congressman | Agriculturalist | Businessman
Similar Channels
Swipe to see more
Posts
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ವಿಶಿಷ್ಟವಾದ ಸ್ವರೂಪ, ಗುಣಗಳಿಂದ ಸರ್ವ ಭಕ್ತಗಣಗಳಿಂದಲೂ ಪೂಜಿಸಲ್ಪಡುವ ಮಹಾದೇವ ಜಗದ ಆದಿ, ಅನಂತತೆ ಹಾಗೂ ಅಂತ್ಯದ ಪ್ರತೀಕ. ಹಾಗಾಗಿ ಅವನಿಗೆ 1008 ಹೆಸರುಗಳಿವೆ. 'ಶಿವೋಹಂ' ಎಂದರೆ 'ನಾನು ಶಿವ' ಅಥವಾ 'ನಾನು ಶುದ್ಧ ಪ್ರಜ್ಞೆ' ಎಂದರ್ಥ. ಹಾಗಾಗಿ ಈ ಮಹಾಶಿವರಾತ್ರಿಯ ಶುಭದಿನದಂದು ಶಿವನಾಮಸ್ಮರಣೆಯೊಂದಿಗೆ, ಅವನ ಗುಣಗಳೂ ನಮ್ಮ ಜೀವನದಲ್ಲಿ ಅಡಕವಾಗಲಿ. ಸರ್ವರಿಗೂ ಜಗದೀಶ್ವರನು ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.

ಕನಕಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ನೂತನ ಬ್ಲಾಕ್ ಅಧ್ಯಕ್ಷರ ಪದಗ್ರಹಣ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು, ಮಾತನಾಡಿದ ಕ್ಷಣಗಳು. ಕಾರ್ಯಕರ್ತರು ನಮ್ಮ ಪಕ್ಷದ ಶಕ್ತಿ ಹಾಗೂ ಆಸ್ತಿ!
ಕಾಡಾನೆ ಹಾವಳಿಯಿಂದ ಬೆಳೆ ಹಾಗೂ ಪ್ರಾಣ ಹಾನಿಗಳು ಉಂಟಾಗುತ್ತಿದ್ದು, ಇದನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಕೈಗೊಳ್ಳಲು 60 ಕೋಟಿ ಅನುದಾನವನ್ನು ಈ ಹಿಂದೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ, ಅರಣ್ಯ ಸಚಿವರೊಂದಿಗೆ 15 ದಿನಗಳ ಹಿಂದೆ ನಡೆದ ಸಂವಾದ ಸಭೆಯಲ್ಲಿ ಹೆಚ್ಚುವರಿಯಾಗಿ 300 ಕೋಟಿ ಅನುದಾನ ಬಿಡುಗಡೆಗೆ ಬೇಡಿಕೆ ಇಡಲಾಗಿತ್ತು. ಅದರ ಭಾಗವಾಗಿ ಕನಕಪುರ ವಿಧಾನಸಭಾ ಕ್ಷೇತ್ರದ 8.50 ಕಿ.ಮೀ.ಗೆ 12.37 ಕೋಟಿ, ರಾಮನಗರ ವಿಧಾನಸಭಾ ಕ್ಷೇತ್ರದ 15 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿಗೆ 21.84 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದಕ್ಕಾಗಿ ಅರಣ್ಯ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರಿಗೆ ಕೃತಜ್ಞತೆ ಸಲ್ಲಿಸುವೆ. ಆನೆ- ಮಾನವ ಸಂಘರ್ಷ ತಡೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಇದರಿಂದ ರೈತರ ಜೀವಹಾನಿ ಹಾಗೂ ಬೆಳೆಹಾನಿ ಕಡಿಮೆಯಾಗುವ ವಿಶ್ವಾಸವಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಬಲ ತುಂಬಿದ ಚನ್ನಪಟ್ಟಣದ ಸ್ವಾಭಿಮಾನಿ ಮತದಾರರಿಗೆ ಧನ್ಯವಾದಗಳು! ಚನ್ನಪಟ್ಟಣದ ಜನರು ಸ್ವಾಭಿಮಾನಿ ಮತದಾರರು.ಈ ಜಿಲ್ಲೆಯ ಮಗನಿಗೆ ಅವಕಾಶ ಮಾಡಿಕೊಡಿ ಎನ್ನುವ ಮನವಿಗೆ ಸ್ಪಂದಿಸಿ ಇಡೀ ಕಾಂಗ್ರೆಸ್ ಸರ್ಕಾರಕ್ಕೆ ಬಲ ತುಂಬಿದ್ದೀರಿ. ನಮ್ಮ ಕೈ ಹಿಡಿದ ನಿಮ್ಮ ಋಣ ತೀರಿಸುತ್ತೇವೆ! #ಧನ್ಯವಾದಗಳು_ಚನ್ನಪಟ್ಟಣ