𝗦𝗮𝗻𝗮𝘁𝗮𝗻𝗮 Hindu 𝗗𝗛𝗔𝗥𝗠𝗔 ಸನಾತನ ಹಿಂದೂ 🙏
10.2K subscribers
About 𝗦𝗮𝗻𝗮𝘁𝗮𝗻𝗮 Hindu 𝗗𝗛𝗔𝗥𝗠𝗔 ಸನಾತನ ಹಿಂದೂ 🙏
In This Channel We will share 🚩ನಿತ್ಯ ಪಂಚಾಂಗ 🚩ಸುಪ್ರಭಾತ-ಭಕ್ತಿಗೀತೆ 🚩ಹಿಂದೂ ದೇವಾಲಯಗಳ ಪರಿಚಯ 🚩ಆಧ್ಯಾತ್ಮಿಕ ಚಿಂತನೆ 🚩ಧಾರ್ಮಿಕ ಪ್ರವಚನ 🚩ಸಂತರ ವಾಣಿ 🚩ಮನೋರಂಜನೆ 🚩ಆರೋಗ್ಯ ಸಲಹೆ 🚩ಅಡುಗೆ ಪಾಕವಿಧಾನ 🌠Nithya Panchanga Every Day 🌐Sensational News ➕Health 😂😂Fun and entertainment 🎵Music 🔰Spiritual Messages 🎤Songs 🍚Cookery 🤔Important Events https://whatsapp.com/channel/0029Va9eH0M3bbUz1vZGVU0V
Similar Channels
Swipe to see more
Posts
🙏ಶ್ರೀಮೂಲರಾಮದೇವರ ಪೂಜೆಯ ವೈಭವ 🙏🚩 Today's Samsthana Pooje at Nava Pune ( ಪುಣೆ ನಗರ ) 17-06-2025

18-Jun-2025* Udupi Sri Puthige Sri Krishna Matha* Vishwa Gita Paryaya* - 2024-2026: Udupi Sri Krishna Darshana-Today's Alankara* -GOKULESHA - Sri Krishna* ---------------------------- 18-Jun-2025* ಉಡುಪಿ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ* ವಿಶ್ವ ಗೀತಾ ಪರ್ಯಾಯ* - 2024-2026 ಉಡುಪಿ ಶ್ರೀ ಕೃಷ್ಣ ದರ್ಶನ - * ಇಂದಿನ ಅಲಂಕಾರ - ಗೋಕುಲೇಶ - ಶ್ರೀ ಕೃಷ್ಣ* 🙏🌷🙏🌾🙏🌹🙏🌻🙏🪷🙏

ರಾಯರ ಇಂದಿನ ಬೃಂದಾವನ ದರ್ಶನ ಮತ್ತು ಶ್ರೀವಾದೀಂದ್ರ ತೀರ್ಥರ ಬೃಂದಾವನ ದರ್ಶನ....🙏🙏 *18/06/2025*

ವಿನಾಯಕನ ಮುಖ್ಯವಾದ 12 ವಿಶಿಷ್ಟ ಹೆಸರುಗಳ ಅರ್ಥ ವಿವರಣೆ.
_ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಇದು ಉತ್ತಮ ಮಂತ್ರವಾಗಿದೆ..!!_ *ಲಕ್ಷ್ಮಿ ದೇವಿಯ ಮಂತ್ರಗಳು:* || ಶ್ರೀಂ || ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಇದು ಉತ್ತಮ ಮಂತ್ರವಾಗಿದೆ. ಇದೊಂದು ಸಣ್ಣ ಪದವಾದರೂ ಕೂಡ ಅಗಾಧ ಶಕ್ತಿಯನ್ನು ಹೊಂದಿದೆ. ಮಂತ್ರಗಳಲ್ಲಿರುವ ಕ್ಲೀಂ, ಹ್ರೀಂ, ಕ್ರೀಂ ಈ ಪದಗಳಿಗಿಂತಲೂ ಶ್ರೀಂ ಎನ್ನುವ ಪದವು ಹೆಚ್ಚು ಶಕ್ತಿಶಾಲಿ ಪದವಾಗಿದೆ. *ಲಕ್ಷ್ಮಿ ಬೀಜ ಮಂತ್ರ :* || ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ || ಇದು ಶ್ರೀಂ ಎನ್ನುವ ಶಬ್ಧವನ್ನು ಬಳಸಿಕೊಂಡು ಹೇಳುವ ಸಂಪೂರ್ಣ ಬೀಜ ಮಂತ್ರವಾಗಿದೆ. *ಲಕ್ಷ್ಮಿ ಬೀಜ ಮಂತ್ರ :* || ಓಂ ಶ್ರೀಂಗ್ ಶ್ರೀಯೇ ನಮಃ || ಶಿವನ ಅಭಿಷೇಕಕ್ಕೆ ಯಾವ ದಿನ ಸೂಕ್ತ..? ಯಾವ ಅಭಿಷೇಕದಿಂದ ಏನು ಪ್ರಯೋಜನ ಇದು ಲಕ್ಷ್ಮಿಯನ್ನು ಆರಾಧಿಸುವ ಮತ್ತೊಂದು ಬೀಜ ಮಂತ್ರವಾಗಿದೆ. ಈಗಾಗಲೇ ಹೇಳಿರುವ ಬೀಜ ಮಂತ್ರಕ್ಕೂ ಈ ಬೀಜ ಮಂತ್ರಕ್ಕೂ ಇರುವ ವ್ಯತ್ಯಾಸವೇನೆಂದರೆ ಈ ಬೀಜ ಮಂತ್ರದಲ್ಲಿ ಶ್ರೀಂ ಎನ್ನುವ ಶಬ್ಧವನ್ನು ಬಳಸಲಾಗಿಲ್ಲ. *ಲಕ್ಷ್ಮಿ ಗಾಯತ್ರಿ ಮಂತ್ರ :* || ಓಂ ಹ್ರಿಂಗ್ ಶ್ರಿಂಗ್ ಕ್ರೆಂಗ್ ಶ್ರಿಂಗ್ ಕ್ಲೆಂಗ್ ಕ್ಲಿಂಗ್ ಶ್ರಿಂಗ್ ಮಹಾಲಕ್ಷ್ಮಿ ಮಾಂ ಗ್ರೀಃ ಧನಂ ಪುರ ಪೂರ್ಯ್ ಚಿಂತಾಯೈ ಡೋರೆ ಡೋರ್ಯ್ ಸ್ವಾಹಃ || ಈ ಮಂತ್ರವನ್ನು ಹೊರಗಡೆ ಹೋಗುವಾಗ, ಕೆಲಸ ಮಾಡುವ ಸ್ಥಳಕ್ಕೆ ತೆರಳುವ ಮೊದಲು ಅಥವಾ ಯಾವುದೇ ವ್ಯವಹಾರದ ಮಾತುಕತೆಗಳಿಗೆ ಹೋಗುವ ಮೊದಲು ಪಠಿಸಬೇಕು. ಈ ಮಂತ್ರವು ನಿಮ್ಮ ಚಿಂತೆಯನ್ನು ತೆಗೆದು ಹಾಕುತ್ತದೆ ಹಾಗೂ ಸಂಪತ್ತನ್ನು ಹೆಚ್ಚಿಸುತ್ತದೆ. *ಲಕ್ಷ್ಮಿ ಗಾಯತ್ರಿ ಮಂತ್ರ:* || ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಓಂ || ವಿಷ್ಣುವಿನ ಪತ್ನಿಯಾದ ಶ್ರೀ ಲಕ್ಷ್ಮಿ ದೇವಿಯ ನಾನು ನಿಮಗೆ ಶಿರಸಾ ಬಾಗಿ ನಮಸ್ಕರಿಸುತ್ತೇನೆ. ಬುದ್ದಿವಂತಿಕೆ , ಸಂಪತ್ತು ಮತ್ತು ಸಮೃದ್ಧಿಯನ್ನು ಆಶೀರ್ವಾದಿಸಿ ಎನ್ನುವುದೇ ಈ ಮಂತ್ರದ ಅರ್ಥವಾಗಿದೆ. *ಮಹಾಲಕ್ಷ್ಮಿ ಮಂತ್ರ:* || ಓಂ ಸರ್ವಾಬಾಧಾ ವಿನಿರ್ಮುಕ್ತೋ ಧನಧಾನ್ಯಾಹ ಸುತಾನ್ವಿತಾ | ಮನುಷ್ಯೋ ಮತ್ಪ್ರಸಾದೇನ್ ನ ಸನ್ಶಯ ಓಂ || ತಾಯಿ ಲಕ್ಷ್ಮಿ ದೇವಿಯ ಬಳಿ ಎಲ್ಲಾ ಸಮಸ್ಯೆಗಳಿಂದ ನನ್ನನ್ನು ಮುಕ್ತಗೊಳಿಸು. ಸಾಲದ ಭಾದೆಯಿಂದ ಕೂಡ ನನ್ನನ್ನು ಮುಕ್ತಗೊಳಿಸಿ ಧನವನ್ನು ಅಂದರೆ ಹಣವನ್ನು ಕರುಣಿಸು ಎಂದು ಬೇಡುವುದಾಗಿದೆ. *ತಾಂತ್ರಿಕ ಲಕ್ಷ್ಮಿ ಮಂತ್ರ:* || ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಐಂಗ್ ಸಾಂಗ್ ಓಂ ಹ್ರಿಂಗ್ ಕಾ ಅ ಇ ಲ ಹ್ರಿಂಗ್ ಹ ಸ ಕ ಹ ಲ ಹ್ರಿಂಗ್ ಸಕಲ್ ಹ್ರಿಂಗ್ ಸೌಂಗ್ ಐಂಗ್ ಕ್ಲಿಂಗ್ ಹ್ರಿಂಗ್ ಶ್ರಿಂಗ್ ಓಂ || ಈ ಮಂತ್ರವು ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಬಳಸಲಾಗುವ ಶಕ್ತಿಶಾಲಿ ತಾಂತ್ರಿಕ ಮಂತ್ರವಾಗಿದೆ. *ಲಕ್ಷ್ಮಿ ನರಸಿಂಹ ಮಂತ್ರ:* || ಓಂ ಹ್ರಿಂಗ್ ಕ್ಷ್ರಾಂಗ್ ಶ್ರಿಂಗ್ ಲಕ್ಷ್ಮಿ ನರಸಿಂಗೇ ನಮಃ || || ಓಂ ಕ್ಲಿಂಗ್ ಕ್ಷ್ರಾಂಗ್ ಶ್ರಿಂಗ್ ಲಕ್ಷ್ಮಿ ದೇವೈ ನಮಃ || ಈ ಮಂತ್ರದ ಮುಖಾಂತರ ನಾವು ಲಕ್ಷ್ಮಿ ದೇವಿಯೊಂದಿಗೆ ನರಸಿಂಹನನ್ನು ಕೂಡ ಆರಾಧಿಸಬಹುದಾಗಿದೆ. *ಏಕದಶಾಕ್ಷರ ಸಿದ್ಧಿ ಲಕ್ಷ್ಮಿ ಮಂತ್ರ:* || ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಶ್ರಿಂಗ್ ಸಿದ್ಧಾ ಲಕ್ಷ್ಮೈ ನಮಃ || ಈ ಲಕ್ಷ್ಮಿ ಮಂತ್ರವನ್ನು ಪಠಿಸಿದರೆ ಸಿದ್ಧವನ್ನು ತಲುಪಲು ನಿಮಗೆ ಸಹಕಾರಿಯಾಗುತ್ತದೆ. ಈ ಮೇಲಿನ ಲಕ್ಷ್ಮಿ ಮಂತ್ರಗಳನ್ನು ಪಠಿಸುವಾಗ ಕೈಯಲ್ಲಿ ಮಣಿಮಾಲೆಯನ್ನೋ ಅಥವಾ ಕಮಲದ ಬಿಜದಿಂದ ತಯಾರಿಸಿದ ಮಾಲೆಯನ್ನೋ ಹಿಡಿದು ಲಕ್ಷ್ಮಿಯನ್ನು ಆರಾಧಿಸಬೇಕು. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ನಿಮ್ಮ ಮನೆಯ ಸಿರಿ, ಸಂಪತ್ತು, ಐಶ್ವರ್ಯ ವೃದ್ಧಿಸುತ್ತದೆ. Follow the 𝗦𝗮𝗻𝗮𝘁𝗮𝗻𝗮 Hindu 𝗗𝗛𝗔𝗥𝗠𝗔 ಸನಾತನ ಹಿಂದೂ 🙏 channel on WhatsApp: https://whatsapp.com/channel/0029Va9eH0M3bbUz1vZGVU0V
"*ನಾನಿಲ್ಲಿ ಇಲ್ಲದಿದ್ದರೆ*... ಅನ್ನುವ ಪದ ಎಲ್ಲರಲ್ಲಿಯೂ ಬಂದೆ ಬರುತ್ತದೆ ಜೀವನದಲ್ಲಿ. *ನನ್ನಿಂದ ನನ್ನ ಸಂಸಾರ ,ಮಡದಿ, ಮಕ್ಕಳು*, ಕೆಲಸ ಕಾಯ೯ ಅನ್ನುವ ಭ್ರಮೆಯಲ್ಲಿ ಭಗವಂತನನ್ನು ಮರೆತು ಬಿಡುತ್ತೆವೆ. ಹೀಗೆ ಸುಂದರಕಾಂಡದಲ್ಲಿ *ಹನುಮಂತ* ದೇವರ ಒಂದು ಸುಂದರ ಪ್ರಸಂಗ ಓದಿ. ****ಲಂಕಾ ದಹನ**** ಅಶೋಕ ವನದಲ್ಲಿ *ರಾವಣ... ಸೀತಮ್ಮ* ಅವರ ಮೇಲೆ ಕೋಪಗೊಂಡು, ಕತ್ತಿಯಿಂದ ಅವಳನ್ನು ಕೊಲ್ಲಲು ಮುಂದಾದಾಗ.... ಹನುಮಂತನಿಗೆ ನಾನು ಯಾರಿಂದಾದರೂ ಖಡ್ಗವನ್ನು ತೆಗೆದುಕೊಂಡು ರಾವಣಾಸುರನ ಶಿರಚ್ಛೇದ ಮಾಡಬೇಕು’ ಎಂದುಕೊಂಡನು. ಆದರೆ ಮರು ಕ್ಷಣದಲ್ಲಿ *ಮಂಡೋದರಿ*... ರಾವಣನ ಕೈ ಹಿಡಿದು ನಿಲ್ಲಿಸುವುದನ್ನು ಕಂಡನು! ಅವನಿಗೆ ಆಶ್ಚರ್ಯವಾಯಿತು. *ಹನುಮಂತ* ಯೋಚಿಸಿದ, "ನಾನಿಲ್ಲಿ ಇಲ್ಲದಿದ್ದರೆ... *ಸೀತಮ್ಮನನ್ನು* ಕಾಪಾಡುವವರಾರು.ಎಂದುಕೊಂಡಿದ್ದೆ.. ಬಹುಶಃ ಇದು ನನ್ನ ಭ್ರಮೆ!" ಭಗವಂತ ಮಾತ್ರ ಸೀತಾಮಾತೆಯನ್ನು ರಕ್ಷಿಸುವ ಕೆಲಸವನ್ನು ರಾವಣನ ಹೆಂಡತಿಗೆ ವಹಿಸಿದನು. ಆಗ ಹನುಮಂತನಿಗೆ ಅರ್ಥವಾಯಿತು, ‘*ಯಾರಿಂದ ಯಾವ ಕೆಲಸ ಆಗಬೇಕು... ಅವರ ಮೂಲಕ ಭಗವಂತ ಮಾಡುತ್ತಾನೆ*’ ಎಂದು. ಮುಂದೆ ಹೋಗುತ್ತಾ *ತ್ರಿಜಟಾ* - ನೀನು ಲಂಕೆಗೆ ಬಂದು ಲಂಕೆಯನ್ನು ಸುಡುವ ಕನಸನ್ನು ಕಂಡೆ ಎಂದು ಹನುಮಂತನಿಗೆ ಹೇಳಿದಳು. ಆದರೆ ಇದು ಹನುಮಂತನಿಗೆ ಅತಿ ಆಶ್ಚರ್ಯವೆನಿಸಿತು. ಏಕೆಂದರೆ ಭಗವಂತನು ಸೀತೆಯನ್ನು ನೋಡಲು ಮಾತ್ರ ಹೇಳಿದ್ದನು ಮತ್ತು ಲಂಕೆಯನ್ನು ಸುಡುವಂತೆ ಹೇಳಿರಲಿಲ್ಲ. ಲಂಕೆಯನ್ನು ಸುಡಲು ತನ್ನಿಂದ ಹೇಗೆ ಸಾಧ್ಯ.. ಎಂದು ಯೋಚಿಸಿದನು ಆದರೆ ಇದನ್ನು ತನ್ನ ಕನಸಿನಲ್ಲಿ ಕಂಡೆ ಎಂದು *ತ್ರಿಜಟಾ* ಹೇಳಿದ್ದಾಳೆ. ಧರ್ಮ ಮೀಮಾಂಸೆಗೆ ಬಿದ್ದ ಹನುಮಂತ... ಈಗ ಏನು ಮಾಡಬೇಕು? ಸರಿ, ಭಗವಂತನ ಇಚ್ಛೆಯಂತೆ ಆಗಲಿ.... ಎಂದುಕೊಂಡನು. ರಾವಣನ ಸೈನಿಕರು ಹನುಮಂತನನ್ನು ಕೊಲ್ಲಲು ಓಡೋಡಿ ಬಂದಾಗ... ಹನುಮಂತ ಏನೂ ಮಾಡಲಿಲ್ಲ. ಅವನು ಹಾಗೆಯೇ ಸುಮ್ಮನೆ ನಿಂತನು. ಆದರೆ ಆ ವೇಳೆಗೆ *ವಿಭೀಷಣ* ಬಂದ,ಆ ಸೈನಿಕರಿಗೆ ದೂತನನ್ನು ಕೊಲ್ಲುವುದು ಸರಿಯಲ್ಲ ಎಂದನು ಆಗ ಹನುಮಂತನಿಗೆ ಭಗವಂತ ತನ್ನನ್ನು ರಕ್ಷಿಸುವ ಹೊಣೆಯನ್ನು *ವಿಭೀಷಣನ* ಮೇಲಿರಿಸಿದ್ದಾನೆಂದು ಅರಿವಾಯಿತು. ಅಚ್ಚರಿಯ ಪರಾಕಾಷ್ಠೆ. ಎಂದರೆ ವಿಭೀಷಣ ಹೇಳಿದಾಗ...ರಾವಣನು ಒಪ್ಪಿ 'ಕೋತಿಯನ್ನು ಕೊಲ್ಲಬೇಡ. ಮಂಗಗಳು ತಮ್ಮ ಬಾಲವನ್ನು ಹೆಚ್ಚಾಗಿ ಪ್ರೀತಿಸುತ್ತವೆ. ಬಾಲಕ್ಕೆ ಬೆಂಕಿ ಹಚ್ಚಿರಿ ಎಂದಾಗ. ಆಗ ತ್ರಿಜಟಾಳ ಕನಸು ನನಸಾಗಲಿದೆ ಎಂದು ಹನುಮಂತನಿಗೆ ಹೆಚ್ಚು ಮನದಟ್ಟಾಯಿತು. ಒಂದು ವೇಳೆ ಭಗವಂತ ನನಗೆ ಹೇಳಿದ್ದರೆ ... ನಾನು ಎಣ್ಣೆಯನ್ನು ಎಲ್ಲಿ ತರಬೇಕು, ಬಟ್ಟೆ ಎಲ್ಲಿ ಪಡೆಯಬೇಕು, ಬೆಂಕಿಯನ್ನು ಎಲ್ಲಿಂದ ತರುವುದು, ಲಂಕೆಯನ್ನು ಸುಡುವುದು ಯಾವಾಗ! "ಆಲೋಚನೆಗಳ ಕೋಲಾಹಲದಲ್ಲಿ ಅವನು ಆಶ್ಚರ್ಯದಿಂದ ಮುಳುಗಿದನು. ವಿಸ್ಮಯಕಾರಿ ಸಂಗತಿಯೆಂದರೆ ಎಲ್ಲಾ ವ್ಯವಸ್ಥೆಗಳನ್ನು ರಾವಣನೇ ಮಾಡಿದನು. ರಾವಣನೊಂದಿಗೂ ಸಹ ತನ್ನ ಕೆಲಸ ಮಾಡಿಸಬಲ್ಲ ಅವನ ಒಡೆಯ ರಾಮನು "*ಲಂಕೆಯನ್ನು ನೋಡಿ ಬಾ*" ಎಂದು ಮಾತ್ರ ಅಪ್ಪಣೆ ಕೊಟ್ಟದ್ದು ಆಶ್ಚರ್ಯವೇ ಸರಿ! ಅದಕ್ಕಾಗಿಯೇ ಆತ್ಮೀಯ ಸ್ನೇಹಿತರೇ! ಒಂದನ್ನು ನೆನಪಿಟ್ಟುಕೊಳ್ಳಿ. ಜಗತ್ತಿನಲ್ಲಿ ನಡೆಯುವ ಎಲ್ಲವೂ ದೇವರ ಪ್ರಕಾರ ಅವನ ಆಣತಿಯಂತೆ ಮಾತ್ರ ನಡೆಯುತ್ತದೆ. ನಾವೆಲ್ಲರು ಅದಕ್ಕೆ ತಕ್ಕಂತೆ ನಡೆಯುತ್ತೇವೆ. ನಾವೆಲ್ಲರೂ ಕೇವಲ ನಿಮಿತ್ತ ಮಾತ್ರ.
Daily darshan from ISKCON Bangalore temple - June 18, 2025.🙏🏻
