
Chief Minister Of Karnataka
January 25, 2025 at 12:36 PM
ನಾಳೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕರ್ನಾಟಕದ ಐತಿಹಾಸಿಕ ಹಾಗೂ ಪಾರಂಪರಿಕ ತಾಣಗಳಲ್ಲಿ ಒಂದಾದ ಗದಗದ ಲಕ್ಕುಂಡಿಯ “ಲಕ್ಕುಂಡಿ – ಶಿಲ್ಪಕಲೆಯ ತೊಟ್ಟಿಲು ಸ್ತಬ್ಧಚಿತ್ರ” ಭಾಗಿಯಾಗುತ್ತಿದ್ದು, ಇದು ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಜನವರಿ 23ರಂದು ನಡೆದ ಸ್ತಬ್ಧಚಿತ್ರ ಪೂರ್ವಾಭ್ಯಾಸದ ಸಂದರ್ಭದಲ್ಲಿ ಕರುನಾಡಿನ ಈ ಸ್ತಬ್ಧಚಿತ್ರವು ನೋಡುಗರ ಮನಸೂರೆಗೊಂಡು, ಮೆಚ್ಚುಗೆಗೆ ಪಾತ್ರವಾಗಿದೆ.
ನುರಿತ ಕಲಾವಿದರ ಕೈಚಳಕ, ರಾಜ್ಯ ಸರ್ಕಾರದ ವಾರ್ತಾ ಇಲಾಖೆಯ ಅಧಿಕಾರಿಗಳ ಶ್ರದ್ಧೆಯಿಂದಾಗಿ ಸಾಕ್ಷಾತ್ ಲಕ್ಕುಂಡಿಯ ಮಂದಿರದ ಸೌಂದರ್ಯವನ್ನೇ ಮೈದಳೆದು ನಿಂತಿರುವ ಈ ಅತ್ಯಾಕರ್ಷಕ ಸ್ತಬ್ಧಚಿತ್ರವು ಪ್ರಶಸ್ತಿ ಗೆಲ್ಲುವ ಮೂಲಕ ಎಲ್ಲರ ಶ್ರಮವನ್ನು ಸಾರ್ಥಕವಾಗಿಸಲಿ, ಆ ಮೂಲಕ ನಾಡಿನ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಕೋರುತ್ತೇನೆ.
- ಮುಖ್ಯಮಂತ್ರಿ ಸಿದ್ದರಾಮಯ್ಯ
#republicday2025 #republicdayparade2025
❤️
👍
🙏
😮
😂
😢
144