ಕರ್ನಾಟಕ ರಾಜ್ಯ(6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ(ರಿ), ಬೆಂಗಳೂರು
February 9, 2025 at 06:17 AM
*ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ರಿ.) ಬೆಂಗಳೂರು* 🌟🌟🌟🌟🌟🌟🌟🌟 *ಆತ್ಮೀಯ ಪದಾಧಿಕಾರಿಗಳೇ ಹಾಗೂ ರಾಜ್ಯದ ಸಮಸ್ತ GPT ಶಿಕ್ಷಕ ಬಂಧುಗಳೇ........* *ಈ ದಿನ ನಮ್ಮ ಹೆಮ್ಮೆಯ ರಾಜ್ಯ ಘಟಕದ ವತಿಯಿಂದ ನಮ್ಮ GPT ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ನಮ್ಮ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ನಮ್ಮ GPT ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಲಾಯಿತು.* *👉ನೂತನ ಶಿಕ್ಷಕರ ವೇತನ ಸಂರಕ್ಷಣೆ ಕಡತ ಮತ್ತು ಹಿಂಬಾಕಿ ವೇತನ ಕಡತಗಳನ್ನು ಫಾಲೋ ಅಪ್ ಮಾಡಿ ಈ ದಿನ ಮಾನ್ಯ ಸರ್ಕಾರದ ಉಪ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಶೀಘ್ರವಾಗಿ ನೂತನ ಶಿಕ್ಷಕರ ವೇತನ ಸಂರಕ್ಷಣೆ ಕುರಿತು ಸೂಕ್ತ ಆದೇಶವನ್ನು ಮಾಡಿ ಅವರ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಲಾಯಿತು* *ವೇತನ ಸಂರಕ್ಷಣೆ ವಿಚಾರದಲ್ಲಿ ರಾಜ್ಯ ಘಟಕ ಅತ್ಯಂತ ಬದ್ಧತೆಯನ್ನು ಹೊಂದಿದ್ದು ಅತೀ ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂಬ ವಿಚಾರವನ್ನು ತಮ್ಮೆಲ್ಲರ ಗಮನಕ್ಕೆ ತರುತ್ತೇವೆ.* *👉 ಆಂಗ್ಲ ಭಾಷಾ ಶಿಕ್ಷಕರ ಸಮಸ್ಯೆ ಮತ್ತು ಆಂಗ್ಲ ಭಾಷಾ ಶಿಕ್ಷಕರಿಗೆ ವರ್ಗಾವಣೆ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಮಾನ್ಯ ಶಿಕ್ಷಣ ಸಚಿವರಾದ ಶ್ರೀಯುತ ಮಧು ಬಂಗಾರಪ್ಪ ಸರ್ ರವರನ್ನು ಈ ಹಿಂದೆ ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು ಈ ದಿನ ಮಾನ್ಯ ಶಿಕ್ಷಣ ಸಚಿವರ ಕಾರ್ಯಾಲಯಕ್ಕೆ ಭೇಟಿ ನೀಡಿ ಹಾಗೂ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಶೀಘ್ರವಾಗಿ ನಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿ ಈ ಹಿಂದೆ ನೀಡಿದ್ದ ಮನವಿ ಪತ್ರವನ್ನು ಫಾಲೋ ಆಫ್ ಮಾಡಲಾಯಿತು.* *👉 ವೃಂದ ಮತ್ತು ನೇಮಕಾತಿ ನಿಯಮಗಳ ಬಗ್ಗೆ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಾನೂನು ಇಲಾಖೆ ಮತ್ತು ಮಾನ್ಯ ಅಪರ ಕಾರ್ಯದರ್ಶಿಗಳು ಆರ್ಥಿಕ ಇಲಾಖೆ ಹಾಗೂ ಮಾನ್ಯ ಸರ್ಕಾರದ ಕಾರ್ಯದರ್ಶಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು) ರವರುಗಳಿಗೆ ನಮ್ಮ ಸಂಘದ ವತಿಯಿಂದ ಸಲ್ಲಿಸಿರುವ ಮನವಿಯನ್ನು ಈ ದಿನ ಮತ್ತೊಮ್ಮೆ Follow up ಮಾಡಲಾಯಿತು.* *👉 2022-23 ನೇ ಸಾಲಿನ ಸಾಮಾನ್ಯ ವರ್ಗದಡಿ ನೇಮಕವಾದ ಶಿಕ್ಷಕರಿಗೆ ವಿನಾಯ್ತಿ ನೀಡುವ ಬಗ್ಗೆ ಸರ್ಕಾರಿ ಆದೇಶದಂತೆ ಶೀಘ್ರವಾಗಿ ನೇಮಕಾತಿ ಆದೇಶ ನೀಡಲು ಮನವಿ ಸಲ್ಲಿಸಲಾಯಿತು*. *ಜೊತೆಗೆ GPT ಶಿಕ್ಷಕರ HRMS ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಹಲವಾರು ವಿಚಾರಗಳನ್ನು ಫಾಲೋ ಆಫ್ ಮಾಡಲಾಯಿತು.* *ಈ ಸಂದರ್ಭದಲ್ಲಿ ನಮ್ಮ ಜೊತೆ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್ ಸರ್* *ಶ್ರೀ ಶಂಕರ ಸರ್* *ವಿಜಯಪುರ ಜಿಲ್ಲಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ಹಕಾರಿ ಸರ್* *ಸಂಜೀವ್ ಮಾಂಗ್ ಸರ್* *ಹಾಗೂ ಇನ್ನು ಅನೇಕ ಪದಾಧಿಕಾರಿಗಳು ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ GPT ಶಿಕ್ಷಕ ಮಿತ್ರರು ಹಾಜರಿದ್ದು ಸಂಘದ ಸೇವೆಗೆ ಪಾತ್ರರಾದರು.* 🙏🙏🙏🙏🙏🙏🙏🙏 *✊GPT ಶಿಕ್ಷಕರ ಹಿತರಕ್ಷಣೆಯೇ ನಮ್ಮ ಸಂಘದ ಪರಮೋಚ್ಚ ಗುರಿ✊* 💫💫💫💫💫💫💫💫 *ಮುರಳೀಧರ್.ಪಿ.* *ರಾಜ್ಯಾಧ್ಯಕ್ಷರು* *ನರಸಿಂಹಮೂರ್ತಿ.ಕೆ.ಆರ್* *ರಾಜ್ಯ ಪ್ರಧಾನ ಕಾರ್ಯದರ್ಶಿ* *ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ರಿ.)* *ಬೆಂಗಳೂರು.* 💚🧡💚🧡💚💛💚🧡
🙏 1

Comments