ಸನಾತನ ಹಿಂದೂ ಧರ್ಮ🚩
February 16, 2025 at 12:24 AM
14. ಗುರುಪ್ರಸಾದಲಾಭ ಪ್ರಕರಣ                ಚಿಂತನೆ - 1    ಗುರುಪ್ರಸಾದಲಾಭವೆಂಬ ಈ ಪ್ರಕರಣಕ್ಕೆ ಮಧುವಿದ್ಯಾ ಉಪಾಸನೆ ಎಂದೂ ಹೆಸರುಂಟು. ಈ ಉಪಾಸನೆಯ ಫಲವನ್ನು ಮೊದಲು ತಿಳಿಸಿ ನಂತರ ವಿಷಯವನ್ನು ಪ್ರಸ್ತಾಪಿಸುತ್ತಾರೆ.    ಈ ಉಪಾಸನೆಯನ್ನು ಮಾಡುವವರು ಮುಕ್ತಿಯೋಗ್ಯರಾದ ದೇವತೆಗಳು, ಅವರಲ್ಲಿ ಎರಡು ವಿಧದವರು ಇರುವರು. (1) ಪದಯೋಗ್ಯರು - ವಸು, ರುದ್ರ, ಆದಿತ್ಯ ಮೊದಲಾದವು ಪದವಿಗಳು (positions) ಆ ಪದ ಯೋಗ್ಯರು ಹಾಗೂ (2) ಪದ ಅಯೋಗ್ಯರು - ಯಾವ ಪದವಿಗಳಿಗೆ ಬರದೆ ಇರುವ ದೇವತೆಗಳು.        ನಂತರ ಪದಯೋಗ್ಯರಲ್ಲಿ ಎರಡು ವಿಧವಿದೆ (1) ಪ್ರಾಪ್ತಪದರು (2) ಅಪ್ರಾಪ್ತ ಪದರು ಎಂದು    ಈಗಾಗಲೇ ಪದಗಳಲ್ಲಿ ಇರುವವರು ಪ್ರಾಪ್ತಪದರು. ಪದಕ್ಕೆ ಯೋಗ್ಯರಾದ ಮುಂದೆಪದಗಳಿಗೆ ಬರುವವರು ಅಪ್ರಾಪ್ತಪದರು. ಇಲ್ಲಿ ಹೇಳಿರುವ ಉಪಾಸನೆಯಿಂದ ಪದಗಳಲ್ಲಿರುವ ದೇವತೆಗಳಿಗೆ ಭಗವಂತನ ವಿಶೇಷ ಜ್ಞಾನ ಮತ್ತು ಮೋಕ್ಷದಲ್ಲಿ ಅತಿಶಯವಾದ ಸುಖ ಬರುವುದೇ ಫಲವಾಗಿದೆ. ಅಪ್ರಾಪ್ತ ಪದರಿಗೆ ಈ ಉಪಾಸನೆಯಿಂದ ಅಪರೋಕ್ಷ ಜ್ಞಾನಪ್ರಾಪ್ತಿ ಹಾಗೂ ಅವರಿಗೆ ಯೋಗ್ಯವಾದ ಪದಗಳ ಪ್ರಾಪ್ತಿಯಾಗುವುದೇ ಫಲವಾಗಿದೆ.       ಮನುಷ್ಯಾದಿಗಳಿಗೆ ಈ ಉಪಾಸನೆಗೆ ಅಧಿಕಾರವೇ ಇಲ್ಲ. ಆದರೆ ವಸುಗಳೇ ಮೊದಲಾದವರು ಈ ರೀತಿ ಉಪಾಸನೆಯನ್ನು ಮಾಡಿ ಫಲಗಳನ್ನು ಪಡೆಯುವರು ಎಂಬ ಜ್ಞಾನಕ್ಕೆ ಮಾತ್ರ ಅರ್ಹರು. ಅವರು ಈ ಜ್ಞಾನದಿಂದಲೇ ಅವರವರ ಯೋಗ್ಯ ಫಲಗಳನ್ನು ಪಡೆಯುವರು.    ಈ ಮಧುವಿದ್ಯಾ ಉಪಾಸನೆಯು ಹೆಸರೇ ತಿಳಿಸುವಂತೆ ಮಧು ಅಂದರೆ ಜೇನು, ನಾವು ಸಾಮಾನ್ಯವಾಗಿ ಮರದ ಕೊಂಬೆ ಅಥವಾ ಒಂದು ಆಧಾರಕ್ಕೆ ಜೇನುಗೂಡು ಇದ್ದು ಆ ಗೂಡಿನ ರಂದ್ರಗಳಲ್ಲಿ ಜೇನಿನ ಹುಳಗಳು ಹೂವಿನ ಪರಾಗದಿಂದ ತಂದಿರುವ ಮಕರಂದವನ್ನು ಶೇಖರಿಸುವುದನ್ನು ಕಂಡಿದ್ದೇವೆ. ಆ ಗೂಡಿನಲ್ಲಿರುವ ಮಕರಂದವು ಸೂರ್ಯರಶ್ಮಿಗಳಿಂದ ಪಾಕಗೊಂಡು ಮಧುವು ತಯಾರಾಗುತ್ತದೆ.     ಮಧುವಿದ್ಯಾದಲ್ಲಿ ಆದಿತ್ಯಾಂತರ್ಗತ ಭಗವಂತನ ಅನುಸಂಧಾನವು ಇದೇರೀತಿಯಾಗಿರುವುದು. ಆಕಾಶವು ಜೇನುಗೂಡಿಗೆ ಆಧಾರವಾಗಿರುವ ಅಡ್ಡತೊಲೆ ಅಥವಾ ತಿರೋವಂಶ ಎಂದೆನಿಸಿದೆ. ಆಕಾಶದಲ್ಲಿರುವ ದ್ಯು ನಾಮಕಳಾದ ಲಕ್ಷ್ಮೀ ದೇವಿಯು ಭಗವಂತನಿಗೆ ವಿನಯದಿಂದ ಬಾಗಿ ಅವನನ್ನು ವಶೀಕರಿಸಿಕೊಂಡ ಕಾರಣ ತಿರೋವಂಶಳೆಂದು ಕರೆಸಿದ್ದಾಳೆ.  ಸೂರ್ಯಮಂಡಲವೇ ಜೇನುಗೂಡು ಎನಿಸಿದೆ. ಜೇನುಗೂಡು ಮಧು ಶೇಕರಣೆಗಾಗಿ ಛಿದ್ರಗಳಿಂದ ಕೂಡಿ ಅಪೂಪದಂತಿದ್ದು ಅದರಲ್ಲಿ ಅಪೂಪ ಎಂದು ಕರೆಸಿದ ವಾಯುದೇವರು ಇರುತ್ತಾರೆ. ಭಗವಂತನು ಯಾರ ಸಮೀಪದಲ್ಲಿ ಇರುವನೊ ಅವನು ಅಪೂಪ, ಅದು ವಾಯುದೇವರೇ ಆಗಿದ್ದಾರೆ. ಅಲ್ಲಿ ಮಧುವೆನಿಸಿ ಭಗವಂತನು ಪ್ರಕಟನಾಗಿ ಉಪಾಸಕರಿಗೆ ಫಲವನ್ನು ಕೊಡುವವನಾಗಿದ್ದಾನೆ. ಸನಾತನ ಹಿಂದೂ ಧರ್ಮ https://whatsapp.com/channel/0029Va9eH0M3bbUz1vZGVU0V ಮುಂದುವರೆಯಲಿದೆ                             ಬಿಂಬಾರ್ಪಣಮಸ್ತು
🙏 👍 3

Comments