
Chief Minister Of Karnataka
February 18, 2025 at 06:37 AM
ಭಾರತೀಯರಿಗೆ ಸ್ವಾತಂತ್ರ್ಯದಷ್ಟೇ ಸಮತೆಯ ಸಮಾಜವು ಮುಖ್ಯ ಎಂಬುದನ್ನು ಅರಿತಿದ್ದ ಹರ್ಡೇಕರ್ ಮಂಜಪ್ಪನವರು ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರನ್ನು, ಸಾಮಾಜಿಕ ಬದುಕಿನಲ್ಲಿ ಬಸವಣ್ಣನವರನ್ನು ಅನುಸರಿಸಿ, ನಿಜಾರ್ಥದಲ್ಲಿ ಸಂತರಾದವರು.
ದೇಶಕ್ಕಾಗಿ ಬದುಕು ಸವೆಸಿದ ನಿಸ್ವಾರ್ಥ ಚೇತನ, ಕನ್ನಡ ನೆಲದ ಧೀಮಂತ ನಾಯಕ ಹರ್ಡೀಕರ್ ಮಂಜಪ್ಪನವರ ಜಯಂತಿಯ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳು.
- ಮುಖ್ಯಮಂತ್ರಿ ಸಿದ್ದರಾಮಯ್ಯ

👍
❤️
🙏
😮
😂
😢
137