ದಿನಕ್ಕೊಂದು ಪೌರಾಣಿಕ ಕಥೆ 𝗙𝗼𝗹𝗹𝗼𝘄
February 28, 2025 at 04:17 PM
ನಾಲ್ಕು ಬಗೆಯ ಮೂರ್ಖರು :- ಕೈಲಾಸದಲ್ಲಿದ್ದ ಒಬ್ಬ ಶಿವಭಕ್ತನಿಗೆ ಮೂರ್ಖತನ ಎಂದರೆ ಏನು? ಯಾರು ಯಾರಿಗೆ ಮಾಡುತ್ತಾರೆ? ಇಂಥ ಪ್ರಶ್ನೆ ಉದ್ಭವಿಸಿತು. ಆತ ನೇರವಾಗಿ ಶಿವನ ಬಳಿ ಹೋಗಿ ಕೇಳಿದ ಮುಗುಳ್ನಕ್ಕ ಶಿವನು, ಭಕ್ತ ಕೇಳು “ಅಧ್ಯಯನದ ಜ್ಞಾನಕ್ಕಿಂತ ಅನುಭವ ಜ್ಞಾನ ದೊಡ್ಡದು” ಆದ್ದರಿಂದ ಇದರ ಅರ್ಥವನ್ನು ಅನುಭವದ ಮೂಲಕವೇ ತಿಳಿದುಕೋ ಎಂದು ಶಿವನು ತನ್ನ ಭಕ್ತನನ್ನು ಒಂದು ಪಾರಿವಾಳ ವನ್ನಾಗಿ ಮಾಡಿದ. ಆಶ್ಚರ್ಯಗೊಂಡ ಭಕ್ತನಿಗೆ ಬೇಸರವಾಗಿ ನಾನು ಕೇಳಬಾರದ ಪ್ರಶ್ನೆ ಏನು ಕೇಳಿದೆ ಪ್ರಭು ಎಂದು ಕೇಳಿದ. ಶಿವ ಹೇಳಿದ ನೀನು ಕೇಳಿದ್ದು ಒಳ್ಳೆಯ ಪ್ರಶ್ನೆ ನೀನು ಬೋಲೋಕಕ್ಕೆ ಹೋಗಿ ನಿನ್ನ ಪ್ರಶ್ನೆಗೆ ಉತ್ತರವನ್ನು ಅನುಭವದಿಂದ ತಿಳಿದುಕೋ ಮತ್ತೆ ಇಲ್ಲಿಗೆ ಕರೆಸಿಕೊಳ್ಳುವೆ ಎಂದನು. ಶಿವಭಕ್ತ ನಾದ ಪಾರಿವಾಳ ಬೋಲೋಗಕ್ಕೆ ಬಂದು ದೊಡ್ಡ ಅರಣ್ಯದ ಒಂದು ಮರದಲ್ಲಿ ನೆಲೆಯೂರಿತು. ಹಣ್ಣು ಹಂಪಲು ತಿಂದುಕೊಂಡು ಕಾಡೆಲ್ಲ ಅಡ್ಡಾಡಿ ಕೊಂಡು ಹಾಯಾಗಿಯೇ ಕೆಲ ದಿನ ಕಳೆಯಿತು. ಹೀಗಿರುವಾಗ ಒಮ್ಮೆ ಬೇಟೆಗಾರ ಕಾಡಿಗೆ ಬಂದ. ಆತನ ಕಣ್ಣಿಗೆ ಈ ಚಂದದ ಪಾರಿವಾಳ ಬಿದ್ದಿತು. ನೋಡುತ್ತಾನೆ. ಅದೆಂಥ ಚಮತ್ಕಾರ, ಏಕೆಂದರೆ ಆ ಪಾರಿವಾಳದ ಬಾಯಿಂದ ಎಂಜಲು ತೊಟ್ಟಿಕ್ಕಿ ಅದು ಚಿನ್ನವಾಗುದನ್ನು ನೋಡಿದ. ಚಿನ್ನ ಎಂದರೆ ಯಾರಿಗೆ ಆಸೆ ಇಲ್ಲ ಸಹಜವಾಗಿ ಆ ಪಾರಿವಾಳವನ್ನು ಹಿಡಿಯಬೇಕೆಂದು, ಬೇಡ ಒಂದು ಜಾಲವನ್ನು ಬಿಸಿ ಅದರ ಮೇಲೆ ಕಾಡಿನಲ್ಲಿ ನಾನಾ ತರದ ಹಣ್ಣುಗಳನ್ನೆಲ್ಲ ತಂದು ಅದರಲ್ಲಿಟ್ಟು ಮುದ್ದು ಮುದ್ದಾಗಿ, ಏ ಪಾರಿವಾಳ ಆವ್ ಫೇಲ್ ಕಾವೋ, ಆವೋ ಜಲ್ದಿ ಆವೋ ಹಣ್ಣು ತಿನ್ನು ಎಂದು ಕರೆದ. ಪಾರಿವಾಳಕ್ಕೂ ಹೊಸದು, ಪಾಪ ಎಷ್ಟು ಒಳ್ಳೆಯವನು ಹಣ್ಣು ಕೊಡುತ್ತಿದ್ದಾನೆ ಎಂದು ಹಾರಿ ಬಂದು ಬಲೆಯಲ್ಲಿ ಸಿಕ್ಕಿಬಿದ್ದಿತು. ಬೇಡ ಪಾರಿವಾಳವನ್ನು ಮನೆಗೆ ಒಯ್ದು ಒಂದು ಪಂಜರದಲ್ಲಿಟ್ಟು, ಹಣ್ಣು ಹಂಪಲು ಕೊಟ್ಟು ಸಾಕುತ್ತಿದ್ದನು. ಪಾರಿವಾಳದ ಎಂಜಲಿಂದ ನಿತ್ಯವೂ ಸಾಕಷ್ಟು ಬಂಗಾರ ಸಿಗುತ್ತಿತ್ತು. ಬೇಟೆಗಾರ ಬಂಗಾರ ಮಾಡಿ ತನಗೆ ಬೇಕಾದಂತ ಮನೆ, ಕಾರು, ಆಸ್ತಿ ಮಾಡಿ ಕೊಂಡನು. ಕೆಲವೇ ದಿನಗಳಲ್ಲಿ ಊರಿಗೆ ಶ್ರೀಮಂತನಾದ. ಇದ್ದಕ್ಕಿದ್ದಂತೆ ಬೇಡನಿಗೆ ಯೋಚನೆ ಬಂದಿತು. ನನ್ನ ಸ್ಥಿತಿ ಹೇಗಿತ್ತು? ಈಗ ಹೇಗಾಗಿದ್ದೇನೆ. ಈಗಾ ಗಲೇ ಎಷ್ಟೋ ಜನಕ್ಕೆ ಅನುಮಾನ ಬಂದಿದೆ. ಎಲ್ಲಾ ಸೇರಿ ರಾಜನಿಗೆ ದೂರು ಕೊಟ್ಟ ರೆ ರಾಜನ ನನ್ನನ್ನು ಕರೆಸಿ ತನಿಕೆ ಮಾಡಿ ವಿಷಯ ತಿಳಿದ ಮೇಲೆ ನನಗೆ ಕಠಿಣ ಶಿಕ್ಷೆಗೆ ಒಳಪಡಿಸುತ್ತಾನೆ ಎಂದು ಹೆದರಿದ. ಎರಡು ದಿನ ಯೋಚಿಸಿ, ಮೂರನೇ ದಿನ ಹೀಗೆ ಯೋಚಿಸಿದ ಊರಿನ ಜನರೆಲ್ಲ ದೂರು ಕೊಡುವ ಮೊದಲೇ ನಾನೇ ರಾಜನ ಬಳಿ ಹೋಗಿ ಇರುವ ಸಂಗತಿ ಹೇಳಿ ಈ ಪಾರಿವಾಳವನ್ನು ರಾಜರಿಗೆ ಉಡುಗೊರೆ ಕೊಡುತ್ತೇನೆ ರಾಜನಿಗೆ ಖುಷಿಯಾಗಿ ಸನ್ಮಾನ ಮಾಡಿ ಕೊಡುಗೆಗಳನ್ನು ಕೊಡುತ್ತಾನೆ ಮರುದಿನ ಪಂಜರದ ಸಮೇತ ಪಾರಿವಾಳದ, ಅರಮನೆಯ ಸಭೆಗೆ ಬಂದನು. ರಾಜನಿಗೆ ಹೇಳಿದ, ಪ್ರಭು ನೆನ್ನೆ ಬೇಟೆಯಾಡಲು ಹೋದಾಗ ನನಗೆ ಈ ಪಾರಿವಾಳ ಸಿಕ್ಕಿತು. ಇದು ಎಂಜಲು ಉಗಿದರೆ ಅದು ಚಿನ್ನವಾಗುತ್ತದೆ ಇಂಥ ಅಪರೂಪದ ವಸ್ತು ಅರಮನೆಯಲ್ಲಿ ಇರುವುದೇ ಕ್ಷೇಮ ಎಂದು ನಿಮಗೆ ಉಡುಗೊರೆ ಕೊಡಲು ಬಂದಿದ್ದೇನೆ ಎಂದನು. ಸಭಿಕರಿಗೆ ಮತ್ತು ರಾಜನಿಗೆ ಬೇಡನ ಮಾತನ್ನು ಕೇಳಿ ಅವನ ಕೈಯಲ್ಲಿದ್ದ ಪಂಜರ ಮತ್ತು ಪಾರಿವಾಳವನ್ನು ನೋಡಿ ಆಶ್ಚರ್ಯವಾಯಿತು. ರಾಜ ನಂತೂ ಖುಷಿಯಿಂದ ಪಂಜರವನ್ನು ತೆಗೆದುಕೊಳ್ಳಲು ಬೇಡನ ಬಳಿ ಬಂದನು. ಆ ಹೊತ್ತಿಗೆ ಬುದ್ಧಿವಂತ ಮಂತ್ರಿ ಹೇಳಿದ. ಪ್ರಭು ಪಂಜರವನ್ನು ಮುಟ್ಟಬೇಡಿ ಈ ಬೇಡನು ಅಜ್ಞಾನಿ. ನಿಮ್ಮನ್ನು ಆಕರ್ಷಿಸಲು ಹೀಗೆ ತಂತ್ರ ಹೊಡಿದ್ದಾನೆ. ಮೊದಲು ಆ ಪಂಜರದಲ್ಲಿರುವ ಪಕ್ಷಿಯನ್ನು ಬಿಡುಗಡೆಗೊಳಿಸಿ ಎಂದನು. ಪಾರಿವಾಳ ತೆಗೆದುಕೊಳ್ಳಲು ಮುಂದೆ ಬಂದ ರಾಜ ಹಿಂದೆ ಸರಿದು, ಏಯ್ ಬೇಡನೆ ನನ್ನನ್ನೇ ಮೂರ್ಖನನ್ನಾಗಿ ಮಾಡುವೆಯಾ? ಎಂದು ಸಿಡಿ ಮಿಡಿ ಗುಟ್ಟಿ ಆ ಪಂಜರ ವನ್ನು ತೆಗೆದುಕೊಂಡು ಪಕ್ಷಿಯನ್ನು ಬಿಡುಗಡೆ ಮಾಡುವಂತೆ ಮಂತ್ರಿಗಳಿಗೆ ಹೇಳಿದ. ಕೂಡಲೇ ಮಂತ್ರಿಗಳು ಬೇಡನಿಂದ ಪಂಜರ ತೆಗೆದುಕೊಂಡು ಅದರ ಬಾಗಿಲು ತೆಗೆದು ಪಾರಿವಾಳವನ್ನು ಹಾರಿಬಿಟ್ಟನು. ಪಾರಿವಾಳ ಹಾರುವಾಗ ಎರಡು ಹನಿ ಎಂಜಲನ್ನು ರಾಜನ ಸಮೀಪ ಹಾಕಿ ಹಾರಿ ಹೋಯಿತು. ಅವರೆಲ್ಲರೂ ನೋಡುತ್ತಿ ದ್ದಂತೆ ಆ ಎಂಜಲು ಬಂಗಾರವಾಯಿತು. ಇದನ್ನು ಕಂಡು ಸಭಿಕರಿಗೆ ಆಶ್ಚರ್ಯ ವಾಯಿತು. ರಾಜನಿಗೆ ಆತಂಕವಾಯಿತು. ಮಂತ್ರಿಯು ಬೆಪ್ಪನಾದ, ಬೇಡನು ನಿರಾಸೆಗೊಂಡನು. ಬಿಡುಗಡೆ ಹೊಂದಿದ ಪಾರಿವಾಳ ಹಾರಿ ಕೈಲಾಸಕ್ಕೆ ಹೋಗಿ ಶಿವನ ಬಳಿ ನಿಂತಿತು. ಶಿವನಿಗೆ ಎಲ್ಲವೂ ಅರ್ಥವಾಗಿತ್ತು. ಪಾರಿವಾಳವನ್ನು ಹಿಂದಿನಂತೆ ಶಿವಭಕ್ತನನ್ನಾಗಿ ಪರಿವರ್ತಿಸಿದನು. ಶಿವನು ಈ ವಿಚಾರ ಎಲ್ಲರಿಗೂ ತಿಳಿಯಲೆಂದು, ಮೂರ್ಖತನ ಎಂದರೇನು? ಯಾರೆಲ್ಲ ಮೂರ್ಖರು ಎಂಬುದು ನಿನಗೆ ತಿಳಿಯಿತೇ ಎಲ್ಲವನ್ನು ಹೇಳು ಎಂದನು. ಶಿವ ಭಕ್ತ ಹೇಳಿದ ಪ್ರಭು ಭೂಲೋಕದಲ್ಲಿ ನಾನು ನಾಲ್ಕು ಜನ ಮೂರ್ಖರನ್ನು ಕಂಡೆನು. ನಮ್ಮ ಎದುರಿಗೆ ಪ್ರೀತಿಯಿಂದ ಮಾತಡಿ ಕರುಣೆಯಿಂದ ನೋಡಿ, ನಮ್ಮನ್ನು ಕಂಡರೆ ಇಷ್ಟಪಡುತ್ತಾರೆ ನಮಗೆ ಒಳ್ಳೆಯದನ್ನೇ ಬಯಸುತ್ತಾರೆ ಅಂತ ನಂಬಿ ಹೋಗುವವರು ಮೂರ್ಖರು. ಅ ಮೂರ್ಖ ನಾನಾಗಿದ್ದು ಬೇಟೆಗಾರ ಪ್ರೀತಿಯಿಂದ ಹಣ್ಣು ಕೊಡುತ್ತಿದ್ದಾನೆ ಎಂದು ತಿನ್ನಲು ಹೋಗಿ ಬಲೆಯಲ್ಲಿ ಸಿಕ್ಕಿಬಿದ್ದೆ. ಎರಡನೆಯ ಮೂರ್ಖ ಬೇಟೆಗಾರ’ ಅನಗತ್ಯವಾಗಿ ಭಯಪಟ್ಟುಕೊಂಡು, ತನಗೆ ದೊರಕಿದ ಸಂಪತ್ತನ್ನು ಕಳೆದುಕೊಂಡ. ಮೂರನೆಯವನು ಮಂತ್ರಿ ತಮ್ಮನ್ನು ತಾವೇ ಬುದ್ಧಿವಂತ ತನಗೆ ಎಲ್ಲಾ ಗೊತ್ತು, ಅವಿದ್ಯಾವಂತನಿಗೆ ಏನು ಗೊತ್ತಿರುವುದಿಲ್ಲ ಅಂತ ತಿಳಿದುಕೊಂಡಿದ್ದು ಮಂತ್ರಿಯ ಮೂರ್ಖತನ. ನಾಲ್ಕನೇದಾಗಿ ಸ್ವತಃ ರಾಜನೆ ಆಗಿದ್ದ. ಮಂತ್ರಿ ಹೇಳಿದ ಮಾತನ್ನು ಪರಿಶೀಲಿಸದೆ, ವಿಚಾರಣೆ ಮಾಡದೆ, ಸಭಿಕರ ಜೊತೆ ಸಮಾಲೋಚಿಸದೆ, ತಾನು ಯೋಚಿಸದೆ ಹಾಗೂ ಈ ಸ್ವಲ್ಪವೂ ಅವಕಾಶ ಕೊಡದೆ, ಮಂತ್ರಿ ಹೇಳಿದ ಮಾತನ್ನು ಪರಿಶೀಲಿಸದೆ, ಸಭಿಕರನ್ನು ಕೇಳದೆ, ಬೇಡನನ್ನು ಸರಿಯಾಗಿ ವಿಚಾರಣೆ ಮಾಡದೆ ಪಂಜರದ ಬಾಗಿಲನ್ನು ತೆಗೆದು ಪಕ್ಷಿಯನ್ನು ಹೊರಗೆ ಬಿಡಲು ಅವಕಾಶ ಮಾಡಿಕೊಟ್ಟ ರಾಜನು ಮೂರ್ಖ. ಭಗವಂತ ಮೂರ್ಖತನದ ಪ್ರಶ್ನೆ ಕೇಳಿ ನಿನ್ನಿಂದ ದೊಡ್ಡ ಪಾಠ ಕಲಿತೆ. ಮೂರ್ಖ ಜನರ ಜೊತೆ ಏಗುವುದಕ್ಕಿಂತ ಲೋಕದ ಉಸಾಬರಿ ಬಿಟ್ಟು, ಶಿವನಾಮ ಸ್ಮರಣೆ ಮಾಡುತ್ತಾ ನಿನ್ನ ಸಾನಿಧ್ಯದಲ್ಲಿರುವ ಸೌಭಾಗ್ಯಕ್ಕಿಂತ ಶ್ರೇಷ್ಠವಾದ್ದು ಯಾವುದು ಇಲ್ಲ ಎಂದ ಶಿವಭಕ್ತನು ಭಕ್ತಿಯಿಂದ ಕೈ ಮುಗಿದು ಪ್ರಾರ್ಥಿಸಿ ಶಿವನಿಗೆ ನಮಸ್ಕರಿಸಿದನು. ಶಿವಂ ಶಾಂತಂ ಜಗನ್ನಾಥಂ ಲೋಕಾನು ಗ್ರಹಕಾರಕಂ ! ಶಿವ ಮೇಕಪದಂ ನಿತ್ಯಂ ಶಿಖಾರಾಯ ನಮೋ ನಮಃ ಬರಹ:- ಆಶಾ ನಾಗಭೂಷಣ.
🙏 ❤️ 14

Comments