Vedanta Bharati
Vedanta Bharati
February 16, 2025 at 08:15 AM
ನಮಸ್ತೆ ಮಾನ್ಯರೇ, ಪರಮಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳವರು ಉತ್ತರ ಮತ್ತು ಪೂರ್ವ ಭಾರತದಲ್ಲಿ ಶಂಕರ ಭಗವತ್ಪಾದರ ಉಪದೇಶವನ್ನು ಪ್ರಚಾರ ಮಾಡುವ ಯಾತ್ರೆಯನ್ನು ಮುಗಿಸಿ ಶ್ರೀ ಮಠಕ್ಕೆ (ಕೃಷ್ಣರಾಜನಗರಕ್ಕೆ) ನಾಳೆ ಸೋಮವಾರ ಫೆಬ್ರವರಿ 17ರಂದು ಸಂಜೆ ಸುಮಾರು 5:30 ಗಂಟೆಗೆ ಆಗಮಿಸಲಿದ್ದಾರೆ. ಪರಮಪೂಜ್ಯ ಶ್ರೀ ಶ್ರೀಗಳವರ ಆಗಮನದ ನಂತರ ಧೂಳಿ ಪಾದಪೂಜೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಎಲ್ಲಾ ಭಕ್ತಾದಿಗಳು ಗುರುಗಳ ಅನುಗ್ರಹ ಆಶೀರ್ವಚನವನ್ನು ಪಡೆಯಬೇಕೆಂದು ಕೋರಿಕೆ. ಕಾರ್ಯಕ್ರಮದ ನಂತರ ಭೋಜನ ಪ್ರಸಾದದ ವ್ಯವಸ್ಥೆಯು ಇರಲಿದೆ. ಅನ್ಯ ಸ್ಥಳಗಳಿಂದ ಬಂದು ಉಳಿಯುವವರು ಕೆಳಗಿನ ದೂರವಾಣಿಗೆ ತಿಳಿಸಬೇಕೆಂದು ಕೋರಿಕೆ. ಶ್ರೀ ನಾಗೇಶ್ 94482 91262 ಆಡಳಿತ ಅಧಿಕಾರಿಗಳು ಶ್ರೀ ಮಠ
🙏 10

Comments