
Vedanta Bharati
2.6K subscribers
Similar Channels
Swipe to see more
Posts

ವೇದಾಂತಭಾರತಿಯು ಹಮ್ಮಿಕೊಂಡಿರುವ ಶಾಂಕರಜ್ಯೋತಿಪ್ರಕಾಶ ಕಾರ್ಯಯೋಜನೆಯ ಅಂಗವಾಗಿ ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು 9-6-2025ರಂದು ಬೆಳಿಗ್ಗೆ ಕಡಬ ಪಟ್ಟಣದ ಸಮೀಪದಲ್ಲಿರುವ ಶ್ರೀ ಶಂಕರಾಚಾರ್ಯರ ಭೇಟಿಯ ಕುರಿತಾದ ಪ್ರತೀತಿಯನ್ನು ಹೊಂದಿದ ಶ್ರೀಕಂಠ ಮಹಾಗಣಪತಿ ದೇವಸ್ಥಾನ ಹಾಗೂ ಶಂಕರನಾರಾಯಣ ದೇವಸ್ಥಾನಕ್ಕೆ ಭೇಟಿನೀಡಿ ಅಲ್ಲಿಯ ಸದಸ್ಯರೊಂದಿಗೆ ಅಲ್ಲಿನ ಐತಿಹ್ಯದ ಕುರಿತಾಗಿ ಸಮಾಲೋಚನೆಯನ್ನು ನಡೆಸಿದರು. ಪ್ರಸಿದ್ಧ ತಂತ್ರಿಗಳೂ ವಿದ್ವಾಂಸರೂ ಆದ ಪ್ರತಾಪ ಶರ್ಮಾರವರು ಈ ಸ್ಥಳಗಳ ಕುರಿತು ಅನೇಕ ಐತಿಹಾಸಿಕ ವಿಷಯಗಳನ್ನು ತಿಳಿಸಿಕೊಟ್ಟರು.

ವೇದಾಂತಭಾರತಿಯು ಹಮ್ಮಿಕೊಂಡಿರುವ ಶಾಂಕರಜ್ಯೋತಿಪ್ರಕಾಶ ಕಾರ್ಯಯೋಜನೆಯ ಅಂಗವಾಗಿ 8-6-2025ರಂದು ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ಸುಪ್ರಸಿದ್ಧ ಕುಕ್ಕೆಸುಬ್ರಹ್ಮಣ್ಯಕ್ಷೇತ್ರಕ್ಕೆ ಭೇಟಿನೀಡಿದರು. ದೇವಸ್ಥಾನದ ಆಡಳಿತಮಂಡಳಿಯವರು ಪರಮಪೂಜ್ಯ ಶ್ರೀಶ್ರೀಗಳವರನ್ನು ಶ್ರದ್ಧಾಭಕ್ತಿಪುರಸ್ಸರವಾಗಿ ಸ್ವಾಗತಿಸಿದ್ದು, ದೇವರ ದರ್ಶನ ಪಡೆದ ನಂತರ ಅಲ್ಲಿಯ ಸದಸ್ಯರೊಂದಿಗೆ ಸಮಾಲೋಚನೆಯನ್ನು ನಡೆಸಲಾಯಿತು.

https://www.youtube.com/live/IuHNhRxpBP8?feature=shared