
Panchajanya IAS UPSC - IAS in Kannada
February 16, 2025 at 03:02 AM
💫ಕನ್ನಡವನು ಕೊಲ್ಲದಿರುವ ಬಗೆ ಎಂತು?
ದಿನಬೆಳಗಾದರೆ,
ಹೊಸ್ತಿಲ ಅಕ್ಕ-ಪಕ್ಕದಲ್ಲಿ ಮಿನುಗುವ ಕನ್ನಡ ದಿನಪತ್ರಿಕೆಯನ್ನು ಎತ್ತಿಕೊಂಡು ಚಹಾನೋ ಕಾಫೀನೋ ಕುಡಿಯುತ್ತಾ,
ಸವಿಯಬೇಕು ಅನ್ನೋವಷ್ಟರಲ್ಲಿ,
1."You don't get this opportunity"
ಇದ್ದದ್ದು,
"ಸಿಗಲ್ಲ ಈ ಅವಕಾಶ ನಿಮಗೆ ಮತ್ತೆ"
2. "Start new year"
ಇದು
"ಮಾಡಿ ಹೊಸ ವರ್ಷದ ಪ್ರಾರಂಭವನ್ನು"
3. "New forever"
ಇದ್ದದ್ದು
"ಹೊಚ್ಚ ಹೊಸ ಎಂದೆಂದಿಗೂ"
ಹೀಗೆ ಬರುವ ಅನುವಾದದ ವಾಕ್ಯಗಳು ತಲೆ ತಿರುಗುವಂತೆ ಮಾಡುತ್ತವೆ.
ಮೇಲಿನ ಅನುವಾದಗಳನ್ನು Neat ಆಗಿ ಇನ್ನೊಮ್ಮೆ ಬರೀತೀನಿ ಓದಿ.
1. ನಿಮಗೆ ಈ ಅವಕಾಶ ಮತ್ತೆ ಸಿಗಲ್ಲ
2. ಹೊಸವರ್ಷದ ಪ್ರಾರಂಭ ಮಾಡಿ
3. ಎಂದೆಂದಿಗೂ ಹೊಚ್ಚಹೊಸದು.
ಈಗ ಹೇಗೆ ಅನ್ನಿಸಿತು?
ಮೇಲಿನ ಅನುವಾದಗಳಿಗೆ ಈ ಅನುವಾದಗಳಿಗೂ ವ್ಯತ್ಯಾಸ ಇದೆಯಾ?
ಪದ ಬಳಕೆ ಅದೇ ಆದರೂ ವಾಕ್ಯ ರಚನೆಯಲ್ಲಿ ಬದಲಾವಣೆ ಮಾಡಿದಾಗ ಕನ್ನಡ ಓದಲು Relaxed feel ಆಗುತ್ತದೆ ಅಲ್ಲವಾ?
ಬೇಕಾದರೆ, ನೀವೆ ಇನ್ನೊಮ್ಮೆ ಓದಿ ನೋಡಿ.
See,
ಕನ್ನಡ ಭಾಷೆ ದ್ರಾವಿಡ ಪರಿವಾರಕ್ಕೆ ಸೇರಿದ್ದು.
ತಮಿಳು,
ಮಲಯಾಳಂ,
ತೆಲುಗು,
ಇವುಗಳ ವಾಕ್ಯರಚನೆ ಮತ್ತು ನಮ್ಮ ಕನ್ನಡಕ್ಕೂ ತುಂಬಾ ಸಾಮ್ಯತೆ ಇದೆ.
Even ಮರಾಠಿಗೂ ಕೂಡ.
ಆದರೆ,
ವಾಕ್ಯ ರಚನೆಯಲ್ಲಿ
English, ಸಂಸ್ಕೃತ, ಹಿಂದಿಗಳಿಗೂ ಮತ್ತು ಕನ್ನಡಕ್ಕೂ ಪಕ್ಕಾ Opposite ಲಕ್ಷಣಗಳಿವೆ.
ಬೇಕಾದರೆ ಹಿಂದಿ/English ಸಿನಿಮಾ ಕನ್ನಡ ಡಬ್ಬಿಂಗ್ Version ನೋಡಿ.
ವಾಕ್ಯರಚನೆ ಸರಿಯಿಲ್ಲದಿದ್ದರೆ
ಸುಸ್ತಾಗುತ್ತದೆ.
ಆದರೆ,
ತೆಲುಗುವಿನ "ಪುಷ್ಪ" ಸಿನಿಮಾ ಕನ್ನಡ ಡಬ್ಬಿಂಗ್ ನೋಡಿ. ಅಲ್ಲು ಅರ್ಜುನ್ ನಮ್ಮ ಪಕ್ಕದ ಮನೆ ಹುಡಗಾ ಏನೋ ಅನ್ನೋವಷ್ಟು ಹತ್ತಿರವಾಗ್ತಾನೆ.
ಇದು ಭಾಷಾ ಗಮ್ಮತ್ತು.
ಇತ್ತೀಚೆಗೆ ತಂತ್ರಜ್ಞಾನ ಬಂದು ಅನುವಾದವನ್ನು ಮತ್ತಷ್ಟು ಸರಳಗೊಳಿಸಿದೆ.
ಆದರೆ,
ಯಂತ್ರಕ್ಕೆ ಭಾವನೆಯ ಬೆಲೆ ಗೊತ್ತಿರಲು ಸಾಧ್ಯವೆ?
Google translate ಬಂದು ನಮ್ಮ ಕನ್ನಡ ಉಸಿರುಗಟ್ಟುತ್ತಿದೆ.
ಗಡಿಬಿಡಿಯಲ್ಲಿ ಪುಸ್ತಕ ಪ್ರಕಟಿಸಿಬಿಡುವ ಹುಚ್ಚಿನಲ್ಲಿ ದೊಡ್ಡ ದೊಡ್ಡ ಪ್ರಕಾಶಕರು ಸಿಕ್ಕ ಸಿಕ್ಕ ಹಾಗೆ ಅನುವಾದ ಮಾಡಿಸಿ ಕನ್ನಡವನ್ನು ಕೊಲ್ಲುತ್ತಿದ್ದಾರೆ.
1.The Magic of thinking big by David J Schwartz
2. The power of Positive thinking by Norman Vincent Peale
3. Business 360 by Suresh Padmanabh
4.The power of Subconscious mind by Joseph Murphy
ಹೀಗೆ ಕೆಲ ಪುಸ್ತಕಗಳನ್ನು ಕಳೆದೆರಡು ವರ್ಷಗಳಲ್ಲಿ ಓದಲು ಪ್ರಯತ್ನಿಸಿದ್ದೆ.
ಯಪ್ಪಾ, It was a hell!
ಶುದ್ಧ ನರಕ ಯಾತನೆ.
ಕೆಲ ತಿಂಗಳ ಹಿಂದೆ,
ದೇಶದ ಅತೀ ದೊಡ್ಡ ಸಂಸ್ಥೆಯೊಂದು ಅತ್ಯಂತ ಜನಪ್ರಿಯ Polity ಪುಸ್ತಕವನ್ನು ಕನ್ನಡಕ್ಕೆ ತಂದು ಮಹದುಪಕಾರ ಮಾಡಿತೆಂದು ಕೈಮುಗಿದು ಓದಲು ಕುಳಿತರೆ,
ಛೇ,
ಅದೊಂದು ಅನುವಾದವೆ?
ಏನ್ ಸರ್?
ಯಾಕೆ ಹೀಗೆಲ್ಲಾ ಬೈತಿದೀರಿ?
ಕನ್ನಡಕ್ಕೆ ಪುಸ್ತಕಗಳು ಅನುವಾದ ಆಗೋದೇ ಹೆಚ್ಚು ಅಂತದ್ರಲ್ಲಿ ಹೀಗಂದ್ರೆ ಹೇಗೆ?
ಇದು ಯಾಕೊ ಅತೀ ಆಯ್ತು.
ಅಂತಾ ಬೈಬೇಡಿ Wait.
See,
ಕಳೆದ ವರ್ಷ
Why I am A Hindu?
ಅನ್ನೋ ಶಶಿ ತರೂರ ಪುಸ್ತಕವನ್ನು
ಕನ್ನಡದಲ್ಲಿ
"ನಾನು ಯಾಕೆ ಹಿಂದೂ?"
ಎಂದು ಅನುವಾದಿಸಿದ್ದ ಪ್ರೊ ಕೆ ಈ ರಾಧಾಕೃಷ್ಣರ Book ಕೊಂಡು ಓದಿದೆ.
(ಪ್ರಕಾಶಕರು: ಮನೋಹರ ಗ್ರಂಥಮಾಲಾ, ಧಾರವಾಡ)
ಈ ಪುಸ್ತಕ ಅನುವಾದಕ್ಕೊಂದು ಮಾದರಿ ಅನ್ನೊಹಾಗಿದೆ. Thanks to them.
ಜೊತೆಗೆ ಪೂರ್ಣ ಚಂದ್ರ ತೇಜಸ್ವಿಯವರ
ಬೆಳ್ಳಂದೂರಿನ ನರಭಕ್ಷಕ ಸೇರಿದಂತೆ ಒಂದೆರಡು ಪುಸ್ತಕಗಳನ್ನೂ ತರಿಸಿ ಓದಿದ್ದೇನೆ. Actually ಅವು ಕೂಡ English to kannada ಅನುವಾದಗಳೇ. ಸಖತ್ತಾಗಿವೆ.
ತೇಜಸ್ವಿರೀ ಅವ್ರು.
ಅಷ್ಟೇ ಯಾಕೆ,
ವಾಸನ್ ಪಬ್ಲಿಕೇಶನ್ ರವರ
1.ಟಿ. ಎಸ್. ರಾವ್ ಅನುವಾದಿಸಿದ We can win
2. ಜಯಕೃಷ್ಣ ಟಿ ಎನ್ ಅನುವಾದಿಸಿದ
The leader in your by Dale Carnegie - ಸಮರ್ಥ ನಾಯಕ ನೀವೂ ಆಗಬಲ್ಲಿರಿ
ಪುಸ್ತಕಗಳನ್ನು ಓದಿದ್ದೇನೆ.
ಅದ್ಭುತವಾಗಿವೆ.
See,
ಸರ್ಕಾರವೇನೋ 60% ಕನ್ನಡ Board ಹಾಕಿ ಅಂತಾ Order ಮಾಡಬಹುದು.
ಆದರೆ,
ಭಾವನೆ ಇಲ್ಲದ ಒಣ ಅಕ್ಷರಗಳಿಂದ
ಭಾಷೆ ಬೆಳೆಯಬಲ್ಲುದೆ?
ಉಳಿಯಬಲ್ಲುದೆ?
ನಳನಳಿಸಬಲ್ಲುದೆ?
ಅನುವಾದಕರ ಕೊರತೆ ಅಥವಾ ವೈಫಲ್ಯದಿಂದ ಈಗಾಗಲೇ,
ಕೆಲ YouTuber ಗಳ ಕನ್ನಡ ವಾಕ್ಯರಚನೆ ದಿಕ್ಕಾಪಾಲಾಗಿದೆ.
ಹೀಗೇ ಆದರೆ,
ಸರಿಯಾಗಿ ಕನ್ನಡ ಮಾತಾಡುವವರನ್ನು ಅಲ್ಪಸಂಖ್ಯಾತರೆಂದು ಘೋಷಿಸಿ ಅನುಮಾನದಿಂದ ನೋಡಬೇಕಾದೀತು.
ರೀ ಅನುವಾದ ತುಂಬಾ ಸರಳ.
ಯಾವಾಗ ಗೊತ್ತಾ?
ಅಕ್ಷರವನ್ನಲ್ಲಾ,
ಭಾವವನ್ನು ಅನುವಾದಿಸಿದಾಗ
ಆತ್ಮೀಯರೇ,
ಕನ್ನಡ ತುಂಬಾ ಚೆನ್ನಾಗಿದೆ.
ಸರಳವೂ ಹೌದು,
ಸುಲಲಿತವೂ ಹೌದು.
ನಾವ ಅದನ್ನ ಉಳಿಸಬೇಕು.
ಬೆಳಸಬೇಕು.
English ಪದ ಬಳಕೆ ತಪ್ಪಲ್ಲ.
ಆದರೆ,
ಕನ್ನಡ ವಾಕ್ಯಗಳು ಇಂಗ್ಲಿಷಿನ ವಾಕ್ಯದಂತಾದರೆ ಅದು ಖಂಡಿತ ಆತ್ಮದ್ರೋಹ.
ಬಹು ದಶಕಗಳಿಂದ ಕನ್ನಡದ "ಪ್ರಜಾವಾಣಿ" ಪತ್ರಿಕೆಯೊಂದು ಅಮೂಲ್ಯವಾದ ಆಸ್ತಿಯಂತೆ ಕನ್ನಡತನವನ್ನು ಬಿತ್ತುತ್ತಿದೆ.
ಅದನ್ನು ಪ್ರತಿದಿನವೂ ಓದುವುದರಿಂದಲೂ ನಾವು ಕನ್ನಡವನ್ನು ಬಹುಪಾಲು ಬೆಳಗಬಲ್ಲೆವು.
ಕನ್ನಡದಲ್ಲಿ ಅಪಾರ ಜ್ಞಾನಪೀಠ ಪುರಸ್ಕೃತರು ಆಗಿ ಹೋಗಿದ್ದಾರೆ.
ಅಂತಹ ಮಹನೀಯರ ಕನಿಷ್ಠ ಒಂದು ಕೃತಿಗಳನ್ನಾದರೂ ಓದೋಣ.
2000 ವರ್ಷಗಳ ಇತಿಹಾಸದ ಭಾಷೆಯನ್ನು 2024 ರ ಈ 21 ನೇ ಶತಮಾನದಲ್ಲಿ ಉಳಿಸೋಣ.
ಕನ್ನಡ ಕಲಿಯೋಣ.
ಕನ್ನಡಿಸಲು ಕಲಿಯೋಣ.
ಈ ನಿಟ್ಟಿನಲ್ಲಿ ಯೋಚಿಸಿ.
ಯಾವುದೋ ಒಂದು ವಾಕ್ಯ ಓದಿದಾಗ ಹೃದಯಕ್ಕೆ "Touch" ಆಗುತ್ತದೋ ಇಲ್ಲವೋ ನೋಡಿ. ಆದ್ರೆ, ಅದು ಸೂಕ್ತ ಅನುವಾದ,
Otherwise no.
ಶುಭಂ. 💐
-
ಪ್ರವೀಣ ಎಂ ಮಗದುಮ್ಮ