
K SHIVANAGOUDA NAYAK
March 1, 2025 at 11:10 AM
ಇಂದು #ಮಾನ್ವಿ ಪಟ್ಟಣದಲ್ಲಿ ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್(ರಿ)ಮಾನ್ವಿ ಬಡವರ ಸೇವಾ ಕೇಂದ್ರ ವತಿಯಿಂದ ಜರುಗಿದ *ಶುದ್ಧ ಕುಡಿಯುವ ನೀರಿನ ಅರವಟಿಗೆಯ ಕೇಂದ್ರದ* ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆನು. ಶುದ್ಧ ಕುಡಿಯುವ ನೀರಿನ ಅರವಟಿಗೆ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಷ॥ಬ್ರ॥ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಮುಕ್ತಾಗುಚ್ಛ ಬೃಹನ್ಮಠ ಕಲ್ಮಠ ಇವರ ಉಪಸ್ಥಿತಿಯಲ್ಲಿ ಶುದ್ಧ ಕುಡಿಯುವ ನೀರಿನ ಉದ್ಘಾಟನೆಯನ್ನು ಮಾಡಲಾಯಿತು. ಶುದ್ಧ ಕುಡಿಯುವ ನೀರಿನ ಅರವಟಿಗೆ ಆಯೋಜಕರು, ಸಮಾಜಸೇವಕರು ಹಾಗೂಸರ್ವಧರ್ಮ ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಹನುಮಂತ ಕೋಟೆ ಕಳೆದ ಹಲವಾರು ವರ್ಷಗಳಿಂದ ಬಡವರಿಗಾಗಿ ಮಾನವಿ ಪಟ್ಟಣದಲ್ಲಿ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ನಿಜಕ್ಕೂ ಶ್ಲಾಘನೀಯ ನಿಮ್ಮ ಸಮಾಜ ಸೇವೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದೆನು.
ಈ ಸಂದರ್ಭದಲ್ಲಿ ಮಾನ್ವಿ ಮುಸ್ಲಿಂ ಧರ್ಮ ಗುರುಗಳಾದ ಎ.ಕೆ ಜಾಗೀರ್ದಾರ್, ಹಿರಿಯ ಮುಖಂಡರಾದ ಶ್ರೀ ಖಾಲಿದ್ ಗುರುಗಳು, ಶ್ರೀ ನಜೀರುದ್ದೀನ್ ಖಾದ್ರಿ ಮಾನ್ವಿ ಮಾಜಿ ಪುರಸಭೆ ಅಧ್ಯಕ್ಷರು, ಡಾ॥ಶರಣಪ್ಪ ಮಕ್ಕಳ ತಜ್ಞರು, ಡಾ॥ನೂರುಲ್ಲಾಖಾನ್, ಶ್ರೀ ತಿಮ್ಮಾರೆಡ್ಡಿ ಗೌಡ ಭೋಗಾವತಿ, ಶ್ರೀ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಶ್ರೀ ಅಯ್ಯಪ್ಪ ನಾಯಕ ಮ್ಯಾಕಲ್, ಶಿವುಕುಮಾರ ಪೊಲೀಸ್ ಪಾಟೀಲ್ ಯರ್ಮರಸ್, ಜಾನೆಕಲ್ ಶರಣಬಸವ ನಾಯಕ,ಉಮಾಕಾಂತ್ ಸಾಹುಕಾರ ಸೀಕಲ್, ಮಲ್ಲನಗೌಡ ಪಾಟೀಲ್, ವಿರೇಶ್ ನಾಯಕ ಬೆಟ್ಟದೂರು, ಮೌಲಾಸಾಬ್ ಗಣದಿನ್ನಿ,ರಾಹುಲ್ ಕಲ್ಲಂಗೇರ, ನವೀನ್ ಕುಮಾರ್, ಚಂದ್ರು ಮಾನವಿ, ಸದ್ದಾಂ ಹುಸೇನಿ ಸೇರಿದಂತೆ ಮುಖಂಡರು,ಹಿರಿಯರು ಸಾರ್ವಜನಿಕರು ಉಪಸ್ಥಿತರಿದ್ದರು.
#manvi Sirwar, Karnataka, India
🙏
5