
K SHIVANAGOUDA NAYAK
3.2K subscribers
About K SHIVANAGOUDA NAYAK
Former Minister, Government of Karnataka District- Raichur
Similar Channels
Swipe to see more
Posts

ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಚೆಂಬೆಳಕಿನ ಕವಿ’, ‘ಸಮನ್ವಯದ ಕವಿ’ ಚನ್ನವೀರ ಕಣವಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ಏಳು ದಶಕಗಳ ಕಾಲ ಶ್ರೀಯುತರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಪಾರ. #ಚನ್ನವೀರಕಣವಿ ಕೆ ಶಿ ನಾ K S N 💐🙏


ಸತ್ಯ, ಅಹಿಂಸೆ, ದಯೆ, ಕರುಣೆ, ಪ್ರಜ್ಞೆಗಳನ್ನು ಪವಿತ್ರವೆಂದು ಒಪ್ಪಿಕೊಂಡು ಯಾರು ಕರ್ತವ್ಯವನ್ನು ಮಾಡುತ್ತಾರೋ ಅವರೇ ಧರ್ಮಿಗಳು, ಆದ್ದರಿಂದ ‘ಪ್ರಕೃತಿಯೆ ಧರ್ಮ’ ಎಂದು ಸಾರಿದ ಬಂಜಾರ ಸಮುದಾಯದ ಮಹಾನ್ ಸಂತ, ಶ್ರೀ ಸೇವಾಲಾಲ್ ರವರ 286ನೇ ಜಯಂತಿಯಂದು ಅವರ ಭಕ್ತವೃಂದಕ್ಕೆ ಭಕ್ತಿಪೂರ್ವಕ ಶುಭಕಾಮನೆಗಳು. ಕೆ ಶಿ ನಾ K S N 💐🙏


ಶ್ರೇಷ್ಠ ಸಂತರು, ಅತೀಂದ್ರಿಯ ಅವತಾರಪುರುಷರು, ಭಾರತದ ಅಧ್ಯಾತ್ಮದ ಸಾರವನ್ನು ಸಾಮಾನ್ಯ ಜನರಿಗೆ ಸರಳವಾಗಿ ಅರ್ಥ ಮಾಡಿಕೊಟ್ಟ ಮಹಾನ್ ಗುರು, ಸ್ವಾಮಿ ವಿವೇಕಾನಂದರನ್ನು ಜಗತ್ತಿಗೆ ನೀಡಿದ ಮಹಾಜ್ಞಾನಿಗಳಾದ ಶ್ರೀ ರಾಮಕೃಷ್ಣ ಪರಮಹಂಸರ ಜನ್ಮಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು. ದೇಶದ ಜ್ಞಾನ ಪರಂಪರೆಗೆ ಹೊಸ ದಿಕ್ಕು ತೋರಿದ ಅವರ ಉಪದೇಶಾಮೃತಗಳು ಭಾರತೀಯ ಸಂಸ್ಕೃತಿ ಮತ್ತು ಚಿಂತನೆಗಳ ಮೇಲೆ ಗಾಢವಾದ ಪ್ರಭಾವ ಬೀರಿವೆ. #ರಾಮಕೃಷ್ಣಪರಮಹಾಸ ಕೆ ಶಿ ನಾ K S N 🙏

ಚಲನಚಿತ್ರರಂಗದ ತಾಂತ್ರಿಕತೆಯ ಆವಿಷ್ಕಾರಕ್ಕಾಗಿ ತಮ್ಮ ಜೀವನವನ್ನೇ ತೇಯ್ದ ಮಹತ್ಯಾಗಿ ಹಾಗೂ ಭಾರತೀಯ ಚಿತ್ರರಂಗದ ಪಿತಾಮಹರಾದ *ದಾದ ಸಾಹೇಬ್ ಫಾಲ್ಕೆ* ಅವರ ಪುಣ್ಯಸ್ಮರಣೆ ನನ್ನ ನಮನಗಳು. ಕೆ ಶಿ ನಾ K S N 💐🙏

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾಗಿ, ಭಾರತದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಜನ್ಮ ದಿನದಂದು ನನ್ನ ಅನಂತ ನಮನಗಳು. ಅವರ ಘನತೆ, ಸಭ್ಯತೆ ಮತ್ತು ವಾಕ್ಚಾತುರ್ಯ ನಮಗೆ ಸದಾ ಪ್ರೇರಣೆ. Remembering the former External Affairs Minister, Padma Vibhushan awardee & senior Bharatiya Janata Party (BJP) leader Smt. Sushma Swaraj ji, on her birth anniversary. Her dedication and service continue to inspire generations. ಕೆ ಶಿ ನಾ K S N 💐🙏

ಆತ್ಮೀಯರು, ವೀರಶೈವ ಸಮಾಜದ ಯುವಮುಖಂಡರಾದ ಸನ್ಮಾನ್ಯ ಶ್ರೀ ಬ್ರಿಜೇಶ್ ಪಾಟೀಲ್, ಸಿರವಾರ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು💐 ಭಗವಂತ ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ,ತುಂಬು ದಾಂಪತ್ಯ ನಿಮ್ಮದಾಗಲಿ … ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು!💐💐 ಕೆ ಶಿ ನಾ K S N 🙏

ಆತ್ಮೀಯರು, ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಮಾಜಿ ಅಧ್ಯಕ್ಷರು(TBP CADA)ಹಾಗೂ ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯರಾದ *ಶ್ರೀ ಕೊಲ್ಲಾ ಶೇಷಗಿರಿರಾವ್ ಸಿಂಧನೂರು* ಇವರಿಗೆ ಜನ್ಮದಿನದ ಶುಭಾಶಯಗಳು. ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ, ಜನಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲೆಂದು ಶುಭ ಹಾರೈಸುತ್ತೇನೆ. 💐 ಕೆ ಶಿ ನಾ K S N 💐🙏

ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಅಪ್ರತಿಮ ವೀರ, ಧೈರ್ಯ, ಸಹನೆಯ ಪ್ರತೀಕ, ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಶುಭಾಶಯಗಳು. #ShivajiMaharajJayanti2025 ಕೆ ಶಿ ನಾ K S N 💐🙏


ಶ್ರೀ ಮಹರ್ಷಿ ವಾಲ್ಮೀಕಿ ಗುರುಕುಲ ಆಶ್ರಮ ವಿದ್ಯಾಪೀಠ ಹಿರೇಮನ್ನಾಪುರ ಸಂಸ್ಥಾಪಕರು, *ಶ್ರೀ ಶ್ರೀ ಪರಮಪೂಜ್ಯ ವಾಲ್ಮೀಕಿ ಅಪ್ಪಯ್ಯ ಮಹಾಸ್ವಾಮೀಜಿಯವರ* 4 ನೇ ವರ್ಷದ ಪುಣ್ಯ ಸ್ಮರಣೋತ್ಸವ ದಿನದಂದು ಭಕ್ತಿ ಪೂರ್ವಕ ನಮನಗಳು 🙏 ಕೆ ಶಿ ನಾ K S N 💐🙏

ಆತ್ಮೀಯರು, ಬಿಜೆಪಿ ರೈತ ಮೋರ್ಚ ಸಿರವಾರ ತಾಲೂಕು ಅಧ್ಯಕ್ಷರಾದ *ಸುರೇಶ್ ಗೌಡ ನವಲಕಲ್* ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ, ಜನಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲೆಂದು ಶುಭ ಹಾರೈಸುತ್ತೇನೆ. 💐 ಕೆ ಶಿ ನಾ K S N 💐🙏