ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
February 9, 2025 at 08:18 AM
#ಅಂತರಾಳದಿಂದ ನಿನ್ನೆ ಸಂಜೆ ಮಂಗಳೂರು ಪುರಭವನದಲ್ಲೊಂದು ನಾಟಕದ ಪ್ರದರ್ಶನವಿತ್ತು... " ಚಾರುವಸಂತ " ಅಂತ ಶತಾವಧಾನಿ ಗಣೇಶರ ಸಂಸ್ಕೃತ ನಾಟಕಗಳ ಉಪಾನ್ಯಾಸಗಳಲ್ಲಿ ಈ ಚಾರದತ್ತ ಹಾಗೂ ವಸಂತಸೇನೆಯರ ಬಗೆಗಿನ ಕತೆಯನ್ನ ಕೇಳಿದ್ದರಿಂದ ಅದರ ಕುರಿತಾದ ಕುತೂಹಲಕ್ಕಾಗಿ ನಾಟಕ ನೋಡಲು ಹೋಗಿದ್ದೆ... ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಅಭಿನಯಿಸಿದ ನಾಟಕವದು.. " ಹಂಪನಾ " ಅವರು ರಚಿಸಿದ ಕೃತಿಗೆ ರಂಗರೂಪ ಕೊಟ್ಟದ್ದು " ಡಾ. ನಾ. ದಾಮೋದರ ಶೆಟ್ಟಿ " ನಿರ್ದೇಶನ " ಡಾ. ಜೀವನ್ ರಾಂ ಸುಳ್ಯ " ಅವರದ್ದು... ನಾಟಕದ ಸಕಾರಾತ್ಮಕ ಅಂಶಗಳು.. ಒಳ್ಳೆಯ ನಿರ್ದೇಶನ ಮತ್ತು ಇಡಿಯ ತಂಡದ ಉತ್ತಮ ಅಭಿನಯ.. ನಾನು ಕೇಳಿದ ಕತೆಗಿಂತ ಭಿನ್ನವಾದ ಕತೆ.. ನಾಟಕದಲ್ಲೊಂದು ಪುಷ್ಪಕ ವಿಮಾನ ಬರುವ ದೃಶ್ಯ ಸೊಗಸಾಗಿತ್ತು.. ನಾಯಕ ಬಾವಿಯೊಳಗೆ ಬೀಳುವ ದೃಶ್ಯ ಸಂಯೋಜನೆ ಒಳ್ಳೆಯದಾಗಿತ್ತು.. ಸಂಗೀತ, ಹಾಡು ಬೆಳಕಿನ ಉಪಯೋಗ ಸೊಗಸಾಗಿತ್ತು... ಆದರೆ ನಕಾರಾತ್ಮಕ ವಾಗಿ ಕಾಣಿಸಿದ ಒಂದಂಶವೆಂದರೆ ಆರಂಭದಲ್ಲಿ ನಾಯಕ ತಂದೆಯ ಪಾತ್ರದ ಗುಣವರ್ಧನೆ ಮಾಡಲು ಉಪಯೋಗಿಸಿದ ಒಂದು ಅಂಶ.. ಮಲಹೊರುವ ಪದ್ಧತಿಯ ಜನರನ್ನ ಆ ಮಲಹೊರುವಿಕೆಯಿಂದ ಮುಕ್ತರನ್ನಾಗಿಸುವ ದೃಶ್ಯ... ನಾಟಕದ ಕಾಲವಾದರೂ ಯಾವಗದ್ದು..? ಯಕ್ಷರು ಭೂಮಿಗೆ ಬಂದು ಅವರ ಜತೆ ಸಾಮಾನ್ಯ ಮಾನವರಾದ ನಾಯಕ ಸಂವಹನ ಮಾಡುವಂತಹಾ ಕಾಲಘಟ್ಟ... ಆ ಕಾಲದಲ್ಲಿ ಮಲಹೊರುವ ಪದ್ಧತಿ ಇತ್ತಾ...?? ಇದನ್ನ ಯೋಚಿಸಿ ಈ ದೃಶ್ಯ ಸೇರ್ಪಡೆಗೊಳಿಸಿದ್ದರೆ ಚೆಲುವಾಗಿರುತ್ತಿತ್ತು... ಅಂದರೆ ಯಾವುದೋ ಒಂದು ಸಾಮಾಜಿಕ ಪಿಡುಗನ್ನ ನಾಟಕದಲ್ಲಿ ಕತೆ ಕವನದಲ್ಲಿ ಸೂಚಿಸುವುದು ತಪ್ಪೆಂದಲ್ಲ... ಆದರೆ ಕಾಲಧರ್ಮಕ್ಕನುಸಾರವಾಗಿ ಯಾವುದನ್ನ ಸೇರಿಸಬಹುದು ಯಾವುದನ್ನ ಸೇರಿಸಲಾಗದು ಎನ್ನುವ ಪ್ರಜ್ಞೆ ಅಗತ್ಯವಲ್ಲವೆ.. ಮತ್ತೆ ಅದೇ ನಾಟಕದ ಒಂದು ಕಡೆ ಪರಿಸರ ಪ್ರಜ್ಞೆಯ ಮಾತನ್ನಾಡುತ್ತಾ ಆಮ್ಲಜನಕ ಎನ್ನುವ ಪದಪ್ರಯೋಗವಾಗಿತ್ತು.. ಆ ಪದ ಆ ಕಾಲದಲ್ಲಿ ಪ್ರಯೋಗದಲ್ಲಿತ್ತಾ ಅನ್ನುವ ಅನುಮಾನವೂ ಕಾಡಿತು.. ಒಟ್ಟಂದದಲ್ಲಿ ನೋಡಬಹುದಾದ ನಾಟಕ..
😢 2

Comments