ಗುರುಪ್ರಸಾದ್ ಆಚಾರ್ಯ ಕುಂಜೂರು WhatsApp Channel

ಗುರುಪ್ರಸಾದ್ ಆಚಾರ್ಯ ಕುಂಜೂರು

197 subscribers

About ಗುರುಪ್ರಸಾದ್ ಆಚಾರ್ಯ ಕುಂಜೂರು

ಓದಲು ಸಿಕ್ಕ ವಿಷಯಗಳು, ಕೇಳಲು ಸಿಕ್ಕ ವಿಷಯಗಳು ಮತ್ತು ಯಾವುದೇ ವಿಚಾರದ ಬಗೆಗಿನ ನನ್ನನಿಸಿಕೆಗಳು..

Similar Channels

Swipe to see more

Posts

ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
2/28/2025, 10:59:14 AM

ಭೀಷ್ಮನ ಉಪದೇಶದೊಳಗೆ ಸಿಗುವ ಆಶ್ರಮಧರ್ಮಗಳ ವರ್ಣನೆಯಲ್ಲಿ ಬ್ರಹ್ಮಚರ್ಯ ವರ್ಣಾಶ್ರಮ ಧರ್ಮದ ಕೆಲವು ವಿಚಾರಗಳು .. ೧. ಬ್ರಹ್ಮಚಾರಿಯು ಏಕಾಕಿಯಾಗಿ ವೇದಮಂತ್ರಗಳನ್ನು ಚಿಂತಿಸುತ್ತಿರಬೇಕು. ೨. ಏಕಾಕಿಯಾಗಿ ಕುಳಿತು ಗಾಯತ್ರಿಮಂತ್ರವನ್ನು ಜಪಿಸಬೇಕು. ೩. ತನ್ನ ಎಲ್ಲ ಕಾರ್ಯಗಳನ್ನೂ ತಾನೇ ಮಾಡಿಕೊಳ್ಳಬೇಕು. ೪. ಒಬ್ಬನೇ ಒಬ್ಬನನ್ನು ಆಚಾರ್ಯನನ್ನಾಗಿ ಮಾಡಿಕೊಂಡು ಅವನ ಶುಶ್ರೂಷೆಯಲ್ಲಿಯೇ ಸರ್ವದಾ ನಿರತನಾಗಿರಬೇಕು. ೫. ಬ್ರಹ್ಮಚಾರಿಯು ನಿತ್ಯನಿರಂತರವಾಗಿ ಮನಸ್ಸನ್ನೂ, ಇಂದ್ರಿಯಗಳನ್ನೂ ಸ್ವಾಧೀನದಲ್ಲಿಟ್ಟುಕೊಳ್ಳಬೇಕು. ೬. ವ್ರತನಿಷ್ಠನಾಗಿರಬೇಕು. ೭. ಕೆಲವು ಸಮಯಗಳಲ್ಲಿ ದೀಕ್ಷಾಬದ್ದನಾಗಿರಬೇಕು. ೮. ವೇದಾಧ್ಯಯನವನ್ನು ಸದಾ ಕಾಲದಲ್ಲಿಯೂ ಮಾಡುತ್ತಾ, ಕರ್ತವ್ಯಕರ್ಮಗಳನ್ನು ಮಾಡುತ್ತಾ, ಗುರುವಿನ ಮನೆಯಲ್ಲಿಯೇ ವಾಸಮಾಡಬೇಕು. ೯. ಗುರುಗಳನ್ನು ಅಭಿವಾದನಪೂರ್ವಕವಾಗಿ ನಮಸ್ಕರಿಸಬೇಕು. ೧೦. ಯಜನ-ಯಾಜನ, ಅಧ್ಯಯನ-ಅಧ್ಯಾಪನ, ದಾನ-ಪ್ರತಿಗ್ರಹಗಳೆಂಬ ಬ್ರಾಹ್ಮಣನಿಗೆ ವಿಹಿತವಾಗಿರುವ ಷಟ್ಕರ್ಮಗಳನ್ನು ಬಿಡಬಾರದು. ೧೧. ಸದಾ ಅವುಗಳಲ್ಲಿ ತೊಡಗಿರಲೂಬಾರದು, ಎಂದರೆ ಗುರುಶುಶ್ರೂಷೆಗೆ ವಿರೋಧವಾಗದಂತೆ ಅವುಗಳನ್ನು ಇಟ್ಟುಕೊಳ್ಳಬೇಕು. ಉದಾಹರಣೆಗಾಗಿ ಯಾಜನ ಪ್ರತಿಗ್ರಹಗಳನ್ನು ತನಗೋಸ್ಕರ ಇಟ್ಟುಕೊಳ್ಳಬಾರದು. ಗುರುಗಳ ಅಪ್ಪಣೆಯಂತೆ ಅವರ ಸೇವೆಗಾಗಿ ಇಟ್ಟುಕೊಳ್ಳಬೇಕು. ಗುರುಶುಶ್ರೂಷೆಗೆ ಧಕ್ಕೆ ಬರುವಂತಿದ್ದರೆ ಅವುಗಳನ್ನು ಬಿಡಬೇಕು. ಷಟ್ಕರ್ಮಗಳಲ್ಲಿ ಸಂಕೋಚವಾದರೂ ಗುರುಶುಶ್ರೂಷೆಯಲ್ಲಿ ಸಂಕೋಚವಾಗಬಾರದು ಎಂದರ್ಥ. ಏಕೆಂದರೆ, ಗುರುಶುಶ್ರೂಷೆಯೇ ಬ್ರಹ್ಮಚಾರಿಯ ಪ್ರಧಾನಕರ್ತವ್ಯ. ೧೨. ಬ್ರಹ್ಮಚಾರಿಯಾದವನು ನಿಗ್ರಹಾನುಗ್ರಹಗಳನ್ನು ಮಾಡಲು ಹೋಗಬಾರದು. ೧೩. ದ್ವೇಷಮಾಡುವವರ ಸಹವಾಸವನ್ನು ಮಾಡಬಾರದು. ಬ್ರಹ್ಮಚಾರಿಗಳಿಗೆ ಈ ಆಶ್ರಮಧರ್ಮವು ಹೇಳಲ್ಪಟ್ಟಿದೆ.” #ಮಹಾಭಾರತದ_ಉಪದೇಶಗಳು

🙏 1
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
2/27/2025, 11:22:24 AM

#ಅಂತರಾಳದಿಂದ ಈ ವ್ಯಕ್ತಿ ಬಿಜೆಪಿ ಪಕ್ಷಕ್ಕೆ ಬರಲಿ ಅನ್ನೋ ಆಸೆ ನನಗೆ ಎಳ್ಳಷ್ಟೂ ಇಲ್ಲ... ಕಾರಣ ಆ ಪಕ್ಷದ ನಾಯಕನಿಗಿರಬೇಕಾದ ಗುಣ ಸ್ವಭಾವಗಳಲ್ಲಿ ಹೆಚ್ಚಿನದು ಇಲ್ಲವೇ ಅನ್ನಬಹುದು.. ಭ್ರಷ್ಟತೆ, ದೇಶ ನಿಷ್ಠತೆಗಿಂತಲೂ ಕುಟುಂಬ ನಿಷ್ಠತೆಯ ಗುಣ.. ಇದೇ ನನಗೆ ಇಷ್ಟವಾಗದ ಗುಣ ( ಹಾಗೆಂದು ಈಗ ಕರ್ನಾಟಕದ ಬಿಜೆಪಿಯ ಅನೇಕ ನಾಯಕರಲ್ಲೂ ಆ ಗುಣಗಳಿವೆ.. ) ಆದರೆ ಅದರ ಹೊರತಾಗಿ ಇತ್ತೀಚಿನ ಎರಡು ಘಟನೆಯಲ್ಲಿನ ಈ ವ್ಯಕ್ತಿಯ ನಿಲುವು ನಿಜಕ್ಕೂ ಮೆಚ್ಚ ತಕ್ಕದ್ದೇ... ಮೊದಲನೆಯದಾಗಿ ಸ್ವತಃ ಕಾಂಗ್ರೆಸ್ ಅಧ್ಯಕ್ಷರು ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಬಡತನ ನಿವಾರಣೆ ಆಗುತ್ತಾ ಎಂದು ಹೇಳಿಕೆ ಕೊಟ್ಟು, ಆ ಪುಣ್ಯಸ್ನಾನವನ್ನೇ ಅಪಹಾಸ್ಯ ಮಾಡಿದ ಹೊರತಾಗಿಯೂ ತಾನು ಪುಣ್ಯಸ್ನಾನ ಮಾಡಿ ಅಲ್ಲಿನ ವ್ಯವಸ್ಥೆಯನ್ನ ಮನಸಾರೆ ಹೊಗಳಿದ್ದು... ಮತ್ತು ಶಿವರಾತ್ರಿಯ ಪರ್ವವನ್ನ ಕೊಯಮುತ್ತೂರಿನ ಈಶಾ ಫೌಂಡೇಶನ್ನಿನ ಆದಿಯೋಗಿಯ ಸ್ಥಳದಲ್ಲಿ ಆಚರಿಸಿಕೊಂಡದ್ದು... ಮತ್ತು ಪ್ರಧಾನವಾಗಿ ನಾನೊಬ್ಬ ಹೆಮ್ಮೆಯ ಹಿಂದು ಹಾಗೂ ಹೆಮ್ಮೆಯ ಹಿಂದೂವಾಗೇ ಸಾಯುತ್ತೇನೆ ಎಂದು ಕೊಟ್ಟ ಹೇಳಿಕೆ... ಹಾಗಂತ ಈ ಹೇಳಿಕೆ ಮನಸಾರೆ ಬಂದಿರುವ ಹೇಳಿಕೆ ಅಂತಲೂ ನಂಬಲು ಸಾಧ್ಯವಿಲ್ಲ.. ತನ್ನ ಈ ಹಿಂದೂ ಪರವಾದ ಹೇಳಿಕೆಗಳನ್ನ ಕಾಂಗ್ರೆಸ್ ಹೈಕಮಾಂಡ್ ಗಮನಿಸಿ ಎಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡುತ್ತಾರೋ ಅನ್ನುವ ಭಯಕ್ಕಾದರೂ ಮುಖ್ಯಮಂತ್ರಿ ಪಟ್ಟ ಕೊಡಲಿ ಎನ್ನುವ ದೂರಾಲೋಚನೆ ಇದ್ದರೂ ಇರಬಹುದೇನೋ... ಹಾಗಾಗಿ ಇವರ ಹೇಳಿಕೆ ನನಗೆ ಖುಷಿ ಕೊಡಲು ಕಾರಣ... ತನ್ನ ಹೈಕಮಾಂಡ್ ಗೆ ಯಾವುದು ಒಗ್ಗದು ಅನ್ನುವ ವಿಚಾರ ಗೊತ್ತಿದ್ದೂ ನಾನು ಹೆಮ್ಮೆಯ ಹಿಂದೂ ಎನ್ನುವ ಹೇಳಿಕೆ ಕೊಡಲು ತೋರಿದ ಧೈರ್ಯ ಖುಷಿ ಕೊಟ್ಟದ್ದೇ ಹೊರತು ಇದು ಸ್ತ್ಯವಚನ ಅನ್ನುವ ಭರವಸೆ ಮೂಡಿದ ಖುಷಿ ಅಲ್ಲ... ಇಂತಹಾ ಕಾಂಗ್ರೆಸ್ ನ ಅಗ್ರ ಪಂಕ್ತಿಯ ನಾಯಕ ಈ ರೀತಿ ಹೇಳಿಕೆ ಕೊಟ್ಟಾಗ ಮುಂದಿನ ಕೆಲವು ಕಾಂಗ್ರೆಸ್ ನಾಯಕರಾದರೂ ಈ ರೀತಿಯ ಧೈರ್ಯ ಮಾಡಿಯಾರು ಅನ್ನುವ ಆಶಾಭಾವ... ಎಷ್ಟು ಸಾಧ್ಯ ಗೊತ್ತಿಲ್ಲ... ಅಧಿಕಾರಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಹಾಕಿಕೊಟ್ಟ ಅಲ್ಪಸಂಖ್ಯಾತ ತುಷ್ಟೀಕರಣದ ರಾಜಕೀಯಕ್ಕೆ ಗಂಟು ಬಿದ್ದು... ಹಿಂದೂ ಭಾವ ಅಲ್ಲಿನ ಶ್ರೇಷ್ಠ ಆಚರಣೆ ನಂಬಿಕೆಗಳ ಬಗ್ಗೆ ಮನಸ್ಸಿನ ಆಳದ ಒಅಲವನ್ನ ತೋರಿಸದೆ ಬದುಕುವ ಗುಲಾಮೀ ಮನಸ್ಥಿತಿಯಿಂದ ಕಾಂಗ್ರೆಸ್ಸಿನ ಅನೇಕರು ಇನ್ನಾದರೂ ಹೊರಬರುವಂತಾಗಲಿ... ಅಲ್ವೇ

👍 2
Image
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
2/27/2025, 3:32:11 PM

ಭೀಷ್ಮ ಧರ್ಮಜನಿಗೆ ಬ್ರಾಹ್ಮಣರ, ಕ್ಷತ್ರಿಯರ, ವೈಶ್ಯರ ಧರ್ಮಗಳನ್ನ ಉಪದೇಶ ಮಾಡಿದಂತೆ ಶೂದ್ರರ ಧರ್ಮಗಳೇನು ಅಂತಲೂ ಹೇಳುತ್ತಾನೆ... ಆದರೆ ಅದು ಬಹಳ ಸರಳವಾದುದು ಮತ್ತು ಸಂಕ್ಷಿಪ್ತವಾದುದು..ಬಹುಶಃ ಕೇವಲ ಒಂದೇ ಒಂದು ಮಾತಿನಲ್ಲಿ ಹೇಳುವುದಾದರೆ " ಶೂದ್ರನಿಗೆ ಬ್ರಹ್ಮ, ಕ್ಷಾತ್ರ, ವೈಶ್ಯ ವರ್ಣಗಳ ಸೇವೆಮಾಡುವುದೇ ಶಾಸ್ತ್ರವಿಹಿತವಾದ ಕರ್ಮವಾಗಿದೆ. ಮೂರು ವರ್ಣದವರ ಶುಶ್ರೂಷೆಮಾಡುವುದರಿಂದಲೇ ಶೂದ್ರನು ಮಹಾಸುಖವನ್ನು ಹೊಂದುತ್ತಾನೆ. " ಇದೊಂದೇ ಧರ್ಮ ಶೂದ್ರನ ಧರ್ಮ.. ಇದಕ್ಕೆ ಹೊರತಾಗಿ ಶೂದ್ರರು ಮಾಡಬಾರದ ಕೆಲಸಗಳನ್ನು ಹೇಳುತ್ತಾ... " ಶೂದ್ರನು ಧನಸಂಗ್ರಹವನ್ನು ಯಾವಾಗಲೂ ಯಾವುದೇ ಕಾರಣಕ್ಕಾದರೂ ಮಾಡಬಾರದು... ಅನ್ನುತ್ತಾರೆ, ಏಕೆಂದರೆ: ಶೂದ್ರನು ಧನವಂತನಾದರೆ ಪಾಪ ಕರ್ಮಗಳಲ್ಲಿ ಪ್ರವೃತ್ತನಾಗುತ್ತಾನೆ. ಧನಬಲದಿಂದ ತನಗಿಂತಲೂ ಶ್ರೇಷ್ಠರಾದವರನ್ನೂ ಅವನು ತನ್ನ ಅಧೀನದಲ್ಲಿಟ್ಟುಕೊಳ್ಳಬಹುದಾಗಿದೆ. ಎನ್ನುವುದು ಭೀಷ್ಮನ ಅಭಿಪ್ರಾಯ ಹಾಗೆಂದು ಅವರಿಗೆ ಧನ ಸಂಗ್ರಹದ ಅಧಿಕಾರ ಇಲ್ಲವೇ ಇಲ್ಲ ಅನ್ನುತ್ತಿಲ್ಲ ಭೀಷ್ಮ ಹೇಳುತ್ತಾನೆ.. " ಧರ್ಮಾತ್ಮನಾದ ಶೂದ್ರನು ರಾಜನ ಅನುಮತಿಯನ್ನು ಪಡೆದುಕೊಂಡು ಧನವನ್ನು ಸಂಗ್ರಹಿಸಿ ತನ್ನ ಇಚ್ಛಾನುಸಾರವಾಗಿ ಧಾರ್ಮಿಕ ಕಾರ್ಯಗಳನ್ನು ಮಾಡಬಹುದು. " ಅರ್ಥಾತ್ ತನ್ನ ಒಡೆಯನ ಅನುಮತಿ ಪಡೆದ ಮೇಲೆ ಶೂದ್ರನಿಗೂ ಧನಸಂಗ್ರಹ ಮಾಡುವ ಅವಕಾಶವಿದ್ದೇ ಇದೆ.. ಧನ ಸಂಗ್ರಹ ಮಾಡಲು ಅವಕಾಶ ಇಲ್ಲವೆಂದ ಮೇಲೆ ತನ್ನ ಜೀವನ ಸಾಗಿಸುವುದು ಹೇಗೆ...? ಎನ್ನುವ ಪ್ರಶ್ನೆಗೆ ಶಾಸ್ತ್ರದಲ್ಲೇ ಉತ್ತರವಿದೆ.. ಭೀಷ್ಮರು ಹೇಳುತ್ತಾರೆ.. " ಮೂರೂ ವರ್ಣದವರೂ ಶೂದ್ರನ ಭರಣ-ಪೋಷಣೆಗಳನ್ನು ಅತ್ಯವಶ್ಯವಾಗಿ ಮಾಡಲೇಬೇಕು. ಏಕೆಂದರೆ : ಶೂದ್ರನು ಭರಣ-ಪೋಷಣಾದಿಗಳಿಗೆ ಯೋಗ್ಯನಾಗಿರುತ್ತಾನೆ. ಪರಿಚರ್ಯೆಯನ್ನು ಮಾಡುವ ಶೂದ್ರನಿಗೆ ಉಪಯೋಗಿಸಿದ ಛತ್ರಿಯನ್ನೂ, ಶಿರೋವೇಷ್ಟನವನ್ನೂ, ಶಯನಾಸನಗಳನ್ನೂ, ಪಾದರಕ್ಷೆಗಳನ್ನೂ ಮತ್ತು ಬೀಸಣಿಗೆಗಳನ್ನೂ ಕೊಡಬೇಕು. ದ್ವಿಜರು ( ಬ್ರಾಹ್ಮಣ-ಕ್ಷತ್ರಿಯ-ವೈಶ್ಯರು ) ಧರಿಸಲು ಅಯೋಗ್ಯವಾದ ಹರಿದುಹೋಗಿರುವ ಬಟ್ಟೆಗಳನ್ನು ಶೂದ್ರನಿಗೆ ಕೊಡಬೇಕು. ಏಕೆಂದರೆ : ಅಂತಹ ಎಲ್ಲ ವಸ್ತುಗಳೂ ಧರ್ಮತಃ ಶೂದ್ರನ ಧನವಾಗಿರುತ್ತವೆ. ( ಈ ಅಂಶವು ಸ್ವಲ್ಪ ಚರ್ಚಾಸ್ಪದವೇ ಹೌದಾದರೂ ಶೂದ್ರರ ಜೀವನ ಭರಣ ಪೋಷಣ ಉಳಿದ ವರ್ಗಗಳು ಮಾಡಬೇಕೆನ್ನುವ ನಿಯಮವೂ ಇದೆ ... ಉದಾ : ದ್ವಿಜಾತೀಯರಲ್ಲಿ ಯಾರ ಸಮೀಪಕ್ಕಾದರೂ ಶೂದ್ರನು ಶುಶ್ರೂಷೆಯನ್ನು ಮಾಡುವ ಇಚ್ಛೆಯಿಂದ ಬಂದುದೇ ಆದರೆ, ಆ ದ್ವಿಜನು ಸೇವಾಕಾಂಕ್ಷಿಯಾಗಿ ಬಂದ ಶೂದ್ರನಿಗೆ ಜೀವನಕ್ಕೆ ವ್ಯವಸ್ಥೆಯನ್ನು ಮಾಡಿಯೇ ತೀರಬೇಕೆಂದು ಧರ್ಮಜ್ಞಪುರುಷರು ಹೇಳುತ್ತಾರೆ. ಎನ್ನುತ್ತಾರೆ ಭೀಷ್ಮರು ) ಶೂದ್ರನಿಗೆ ಅಧಿಕಾರ ಇಲ್ಲ ಎಂದು ಒಂದು ಕಡೆ ಅನಿಸಿದರೂ... ಇನ್ನೊಂದು ಕಡೆಯಲ್ಲಿ ಪಿಂಡ ಪ್ರದಾನದ ಅಧಿಕಾರವೂ ಇದೆಯೆನ್ನುತ್ತಾರೆ ಭೀಷ್ಮರು.. ಅವರು ಹೇಳುತ್ತಾರೆ.. " ಒಂದು ವೇಳೆ ಯಜಮಾನನಿಗೆ ಮಕ್ಕಳಿಲ್ಲವಾದರೆ ಶುಶ್ರೂಷೆಯನ್ನು ಮಾಡುವ ಶೂದ್ರನೇ ಅವನಿಗೆ ಪಿಂಡಪ್ರದಾನವನ್ನೂ ಮಾಡಬೇಕು. ಸ್ವಾಮಿಯು ದುರ್ಬಲನಾಗಿದ್ದರೆ ಅಥವಾ ವೃದ್ಧನಾಗಿದ್ದರೆ ಅವನ ಭರಣ-ಪೋಷಣೆಗಳನ್ನೂ ಶೂದ್ರನೇ ಮಾಡಬೇಕು. ಸ್ವಾಮಿಯು ಯಾವುದಾದರೂ ಆಪತ್ತಿನಲ್ಲಿರುವಾಗ ಸೇವಾನಿರತನಾದ ಶೂದ್ರನು ಯಾವುದೇ ಕಾರಣದಿಂದಲೂ ಅವನನ್ನು ಬಿಟ್ಟುಹೋಗಬಾರದು. ಒಂದು ವೇಳೆ ತನ್ನ ಯಜಮಾನನಲ್ಲಿದ್ದ ಹಣವು ನಾಶವಾಗಿ, ಯಜಮಾನನು ನಿರ್ಧನನಾದಲ್ಲಿ ಆಗಲೂ ಶೂದ್ರನು ಯಜಮಾನನನ್ನು ದೂರೀಕರಿಸದೇ, ತನ್ನ ಕುಟುಂಬದ ಪಾಲನೆಯಾದನಂತರ ಉಳಿಯುವ ಧನದಿಂದ ಯಜಮಾನನ ಭರಣ-ಪೋಷಣೆಗಳನ್ನು ಮಾಡಬೇಕು. ಶೂದ್ರನಿಗೆ ತನ್ನ ಧನವೆಂಬುದೇ ಇಲ್ಲ. ಅವನು ಒಡೆಯನಿಂದ ಪಡೆಯಬಹುದಾದ ಧನವುಳ್ಳವನು ಅರ್ಥಾತ್ ಶೂದ್ರನಲ್ಲಿರುವ ಹಣದ ಮೇಲಿನ ಅಧಿಕಾರವು ಅವನ ಸ್ವಾಮಿಗಿರುತ್ತದೆ. " ಇನ್ನು ಯಜ್ಞದ ಕುರಿತಾಗಿ.." ಮೂರು ವರ್ಣದವರಿಗೂ ಉಕ್ತವಾಗಿರುವ ಯಜ್ಞವನ್ನು ಶೂದ್ರನೂ ಮಾಡಬೇಕು. ಆದರೆ ಶೂದ್ರನು ಮಾಡುವ ಯಜ್ಞದಲ್ಲಿ ಸ್ವಾಹಾಕಾರ ವಷಟ್ಕಾರಗಳೂ ಮತ್ತು ವೈದಿಕಮಂತ್ರಗಳ ಪ್ರಯೋಗಗಳೂ ಇರುವುದಿಲ್ಲ. ಆದುದರಿಂದ ಶೂದ್ರನು ತಾನೇ ವ್ರತವನ್ನು ಕೈಗೊಳ್ಳದೇ ಯಜ್ಞಮಾಡಬೇಕು. ಎನ್ನುತ್ತಾರೆ ಭೀಷ್ಮರು... ಅಷ್ಟೇ ಅಲ್ಲದೆ 'ಪೈಜವನ' ಎಂಬ ಹೆಸರಿನ ಶೂದ್ರನು ಐಂದ್ರಾಗ್ನಯಜ್ಞದ ವಿಧಾನದಿಂದ ಸ್ವಾಹಾಕಾರ-ವಷಟ್ಕಾರರಹಿತವಾದ ಯಜ್ಞವನ್ನು ಮಾಡಿ ಯಜ್ಞವು ಮುಗಿದ ನಂತರ ದಕ್ಷಿಣಾರೂಪವಾಗಿ ಒಂದು ಲಕ್ಷ ಪೂರ್ಣಪಾತ್ರಗಳನ್ನು ದಾನವಾಗಿ ಕೊಟ್ಟನೆಂದು ನಾವು ಕೇಳಿದ್ದೇವೆ. ಎಂದು ಅದಕ್ಕೆ ಪೂರಕ ಆಧಾರವನ್ನೂ ಒದಗಿಸುತ್ತಾರೆ. ಹಾಗೆ ಯಜ್ಞದ ಅಧಿಕಾರದ ಬಗೆಗೆ ಹೇಳುತ್ತಾ.. " ಶೂದ್ರನು, ಬ್ರಾಹ್ಮಣ-ಕ್ಷತ್ರಿಯ-ವೈಶ್ಯರ ಸೇವೆಯಲ್ಲಿಯೇ ನಿರತನಾಗಿರುವುದರಿಂದ ಅವರು ಮಾಡುವ ಯಜ್ಞವು ಶೂದ್ರನದೂ ಆಗುತ್ತದೆ. ಅವನು ಪ್ರತ್ಯೇಕವಾಗಿ ಯಜ್ಞಮಾಡುವ ಕಾರಣವಿಲ್ಲ. ಯಜ್ಞಮಾಡುವುದರಿಂದ ಆ ಮೂರು ವರ್ಣದವರಿಗೂ ಫಲವು ಪ್ರಾಪ್ತವಾಗುವಂತೆ ಯಜ್ಞವನ್ನು ಮಾಡದಿದ್ದರೂ ಯಜ್ಞಮಾಡುವವರ ಸೇವೆಯಲ್ಲಿಯೇ ನಿರತನಾಗಿರುವುದರಿಂದ ಶೂದ್ರನಿಗೂ ಯಜ್ಞಮಾಡಿದ ಫಲವು ಲಭಿಸುತ್ತದೆ. ಎಲ್ಲ ಯಜ್ಞಗಳಿಗೂ ಮೊದಲು ಶ್ರದ್ಧಾಯಜ್ಞವೆಂಬುದೊಂದು ಯಜ್ಞವು ವಿಹಿತವಾಗಿದೆ. ಶ್ರದ್ಧೆಯೆಂಬುದು ಎಲ್ಲ ದೇವತೆಗಳಿಗಿಂತಲೂ ಮಹತ್ತಾದ ದೇವತೆ. ಯಜ್ಞ ಮಾಡುವವರಿಗೆ ಶ್ರದ್ದೆಯೇ ಪಾವಿತ್ರ್ಯವನ್ನುಂಟುಮಾಡುತ್ತದೆ. " ಇದು ಭೀಷ್ಮರು ಧರ್ಮಜನಿಗೆ ತಿಳಿಹೇಳುವ ಶೂದ್ರರ ಕುರಿತಾದ ವಿಚಾರಗಳು.. #ಮಹಾಭಾರತದ_ಉಪದೇಶಗಳು

ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
2/27/2025, 8:14:41 AM

ಕೇಳಿದ್ದು ಪ್ರಸಂಗ : ಸುಗ್ರೀವ ಸಖ್ಯ.. ಸುಗ್ರೀವನ ಜತೆ ಮೈತ್ರಿ ಏರ್ಪಡುವ ಹೊತ್ತಿಗೆ ವಾಲಿಯ ಧನುರ್ವಿದ್ಯೆಯ ಬಗೆಗೆ ವಿವರಿಸುತ್ತಾ ಸುಗ್ರೀವನು ರಾಮನಿಗೆ ಹೇಳುವ ಮಾತು ಸುಗ್ರೀವ : ರಾಮ, ಅಗೋ ಎದುರಲ್ಲಿ ಕಾಣುತ್ತಿದೆಯಲ್ಲಾ ಅರ್ಧ ‌ವರ್ತುಲಾಕಾರದಲ್ಲಿರುವ ಸಪ್ತ ತಾಲ ವೃಕ್ಷಗಳು.. ಅದರ ಒಂದೊಂದು ರೆಂಬೆಯನ್ನ ವಾಲಿಯು ಒಂದೇ ಬಾಣದಿಂದ ಕಡಿದು ಹಾಕುತ್ತಿದ್ದು ಅವು ಮತ್ತೆ ಚಿಗುರುತ್ತಿತ್ತು ಮತ್ತೆ ಆತ ಅದನ್ನು ಕಡಿಯುತ್ತಿದ್ದನು.. ಇದು ಆತನ ಧನುರ್ ಕೌಶಲ. ರಾಮ : ಕೋದಂಡವನ್ನು ಎತ್ತಿ ಬಾಣ ಪ್ರಯೋಗಿಸಲೋಸುಗ ಪಾದವನ್ನು ಒತ್ತಿದಾಗ ವರ್ತುಲಾಕಾರದಲ್ಲಿದ್ದ ಸಪ್ತ ತಾಲ ವೃಕ್ಷಗಳು ಸರಳ ರೇಖೆಗೆ ಬಂದವು.. ಕಾರಣ ಏನು ಗೊತ್ತ..? ಈ ಸಪ್ತತಾಲ ವೃಕ್ಷ ಬೆಳೆದಿದ್ದ ಭೂಭಾಗದ ಕೆಳಗೆ ರಾಕ್ಷಸನೋರ್ವನಿದ್ದ ಅಹಿದಾನವ ಅಂತ. ಅಹಿರೂಪದಲ್ಲಿದ್ದ ಅವನ ಬಾಲವನ್ನು ನಾನು ಮೆಟ್ಟಿದ್ದು.. ನಾನು ಆ ರೀತಿ ಮಾಡಿದಾಗ ಅವನು ಸಟೆದು ನಿಂತ ಆಗ ಈ ಸಪ್ತ ತಾಲ ವೃಕ್ಷಗಳು ಸರಳರೇಖೆಗೆ ಬಂದವು ಆಗ ನನ್ನ ಬಾಣ ಪ್ರಯೋಗದಿಂದ ಬರಿಯ ರೆಂಬೆಯಲ್ಲ ಸಪ್ತ ತಾಳ ವೃಕ್ಷಗಳೇ ಬುಡ ಸಮೇತ ನಾಶವಾಗುವ ಮೂಲಕ ರಾಕ್ಷಸನ ನಾಶವಾಗಿ ಹೋಯಿತು.. ಈ ಮಾತನ್ನು ಹೇಳಿದ ಬಳಿ ರಾಮ ಪಾತ್ರಧಾರಿಯಾದ ಪವನ್ ಕಿರಣ್ಕೆರೆಯವರು ಬಲು ಸೊಗಸಾದ ಅಂಶವನ್ನು ಹೇಳುತ್ತಾರೆ.. " ಯಾಕೆಂದರೆ ರಾಮನ ಬಾಣ ಪ್ರಯೋಗವಾಗುವುದು ರಾಕ್ಷಸರ ನಾಶಕ್ಕಾಗಿ ಮಾತ್ರವೇ ಹೊರತು ಪ್ರಕೃತಿನಾಶಕ್ಕಲ್ಲ.. " ಎಂತಹ ಸೊಗಸಾದ ವಿವರಣೆ ಅಲ್ವಾ.. #ತಾಳಮದ್ದಳೆ

👍 🙏 2
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
2/22/2025, 11:33:39 AM

ಓದಿದ್ದು ಮೊದಲಿಗೆ ಕೋವಿಡ್-19 ಸಂಕ್ರಮಣವನ್ನೆದುರಿಸಲು ಭಾರತ ತನ್ನ ಮೇಲೆ ಪೂರ್ಣವಾಗಿ ಅವಲಂಬಿತವಾಗುತ್ತದೆ ಎಂದು ನಂಬಿದ್ದ ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಫೈಝರ್ ಅನ್ನು ಮೋದಿ ಸರ್ಕಾರ ದೂರವಿಟ್ಟಿತು. ತನ್ನ ಕೋವಿಡ್ ಲಸಿಕೆಗಳನ್ನು ದುಬಾರಿ ಬೆಲೆಗೆ ಮಾರುವುದಲ್ಲದೆ, ಲಸಿಕೆಗಳಿಗಾಗಿ ಆಮದುದಾರ ಸರ್ಕಾರಗಳು ತಮ್ಮ ಸ್ಥಿರಾಸ್ತಿಗಳನ್ನು ಒತ್ತೆಯಿಡಬೇಕೆಂದೂ, ಲಸಿಕೆ ವಿಫಲವಾದರೆ ಮತ್ತು ಅಡ್ಡಪರಿಣಾಮ ಬೀರಿ ಹಾನಿಯುಂಟುಮಾಡಿದರೆ ಸಂತ್ರಸ್ತರಿಗೆ ಪರಿಹಾರವನ್ನು ಆಯಾ ಸರ್ಕಾರಗಳೇ ನೀಡಬೇಕೆಂದೂ ಆ ಸಂಸ್ಥೆ ಹೇಳಿದ್ದನ್ನು ಮೋದಿ ಸರ್ಕಾರ ಒಪ್ಪಿಕೊಳ್ಳಲಿಲ್ಲ. ಅಂತಹ ಅನೀತಿಯುತ ದುರಾಸೆಯನ್ನು ತೋರದ ಬ್ರಿಟಿಷ್ ಔಷಧ ತಯಾರಿಕಾ ಸಂಸ್ಥೆ ಆಸ್ಟ್ರೋ ಝೆನೆಕಾದ ಸಹಕಾರದಿಂದ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲೇ ತಯಾರಿಸುವುದು ಕೊರೋನಾ ಸಂಕ್ರಮಣದ ವಿರುದ್ಧದ ಸಮರದಲ್ಲಿ ಮೋದಿ ಸರ್ಕಾರ ಅನುಸರಿಸಿದ ಮುಖ್ಯ ಮಾರ್ಗ. ಅದರಿಂದಾಗಿ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೂರಕ್ಕೂ ಹೆಚ್ಚಿನ ದೇಶಗಳಿಗೆ ಮುಕ್ತವಾಗಿ ಹಂಚಿ ಮೋದಿ ಸರ್ಕಾರ ಫೈಝರ್ ಮತ್ತದರ ಸಹಯೋಗಿ ಸಂಸ್ಥೆಗಳ ಅಮಾನವೀಯ ಲಾಭಕೋರತನವನ್ನು ಜಾಗತಿಕ ಮಟ್ಟದಲ್ಲಿ ಸಾಕಷ್ಟು ತಡೆಯಿತು. ಪ್ರಧಾನಮಂತ್ರಿ ಮೋದಿ ಫಾರ್ಮಾ ಲಾಬಿಯ ವಿರೋಧವನ್ನು ಕಟ್ಟಿಕೊಂಡಿದ್ದು ಹೀಗೆ. ಲೇಖಕರು : ಡಾ. ಪ್ರೇಮಶೇಖರ್ ಅಂಕಣ : ಎಚ್ಚೆತ್ತ ಭಾರತ ಸಾಗಿರುವುದೆತ್ತ..? ಪತ್ರಿಕೆ : ವಿಕ್ರಮ ವಾರ ಪತ್ರಿಕೆ

❤️ 👍 5
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
2/22/2025, 10:06:20 AM

ಭೀಷ್ಮ ಯುಧಿಷ್ಠಿರನ ಬಳಿ ಹೇಳಿದ, ವೈಶ್ಯರು ಅನುಸರಿಸಬೇಕಾದ ಧರ್ಮಗಳು... ೧. ದಾನ, ಅಧ್ಯಯನ, ಯಜ್ಞಗಳನ್ನು ಮಾಡುವುದು ಮತ್ತು ಶುದ್ಧ ಮಾರ್ಗದಿಂದ ಹಣವನ್ನು ಸಂಗ್ರಹಿಸುವುದು-ಇವು ವೈಶ್ಯನ ಕರ್ಮಗಳಾಗಿರುತ್ತವೆ. ೨. ವೈಶ್ಯನು ಸರ್ವದಾ ಉದ್ಯೋಗಶೀಲನಾಗಿದ್ದು ತಂದೆಯಾದವನು ಮಕ್ಕಳನ್ನು ಪೋಷಿಸುವಂತೆ ಎಲ್ಲ ವಿಧವಾದ ಪಶುಗಳನ್ನೂ ಅಕ್ಕರೆಯಿಂದಲೂ ಮತ್ತು ಜಾಗರೂಕತೆಯಿಂದಲೂ ಪಾಲನೆಮಾಡಬೇಕು. ೩. ಪಶುಪಾಲನಕರ್ಮವನ್ನು ಬಿಟ್ಟು ವೈಶ್ಯನು ಬೇರೆ ಯಾವುದೇ ಕರ್ಮವನ್ನು ಮಾಡಿದರೂ ಅದು ವಿಕರ್ಮವೇ ಆಗುತ್ತದೆ. ( ಸ್ವಕರ್ಮವನ್ನು ಮಾಡಿ ದಂತಾಗುವುದಿಲ್ಲ. ) ೪. ವೈಶ್ಯನು ರಾಜನಿಂದ ಅಥವಾ ಪ್ರಜೆಗಳಿಂದ ಆರು ಹಸುಗಳನ್ನು ಪಡೆದುಕೊಂಡು ಅವುಗಳನ್ನು ಸಾಕುತ್ತಿದ್ದರೆ ಆ ಆರು ಹಸುಗಳಲ್ಲಿ ಒಂದು ಹಸುವಿನ ಹಾಲನ್ನು ತನ್ನ ಜೀವನಕ್ಕಾಗಿ ಉಪಯೋಗಿಸಿಕೊಳ್ಳಬಹುದು. ನೂರು ಹಸುಗಳನ್ನು ಸಾಕುತ್ತಿದ್ದರೆ ಒಂದು ಹಸುವನ್ನೂ ಮತ್ತು ಒಂದು ಎತ್ತನ್ನೂ ತನ್ನ ಜೀವನಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಅಥವಾ ನೂರು ಹಸುಗಳ ಹಾಲು, ತುಪ್ಪ-ಇತ್ಯಾದಿಗಳಿಂದ ಲಭ್ಯವಾಗುವ ಒಟ್ಟು ಮೌಲ್ಯದಲ್ಲಿ ಏಳನೆಯ ಒಂದು ಭಾಗವನ್ನು ವೈಶ್ಯನು ತನ್ನ ಜೀವನಕ್ಕಾಗಿ ಇಟ್ಟುಕೊಳ್ಳಬಹುದು. ೫. ಸತ್ತುಹೋದ ಹಸುಗಳ ಕೊಂಬುಗಳ ಮಾರಾಟದಿಂದ ಬರುವ ಹಣದಲ್ಲಿ ಏಳನೆಯ ಒಂದು ಭಾಗವನ್ನೂ, ಗೊರಸುಗಳ ಮಾರಾಟದಿಂದ ಬರುವ ಹಣದಲ್ಲಿ ಹದಿನಾರನೆಯ ಒಂದು ಭಾಗವನ್ನೂ ವೈಶ್ಯನು ತನ್ನ ಜೀವಿಕೆಗಾಗಿ ಇಟ್ಟುಕೊಳ್ಳಬಹುದು. ೬. ವೈಶ್ಯನು ಬೆಳೆಯುವ ಸಕಲ ವಿಧವಾದ ಆಹಾರಧಾನ್ಯಗಳಲ್ಲಿಯೂ ಈ ವಿಧವಾದ ಹದಿನಾರನೆಯ ಒಂದು ಭಾಗವನ್ನೇ ಅವನು ಪಡೆದುಕೊಳ್ಳಬೇಕು. ಇದು ಅವನ ವಾರ್ಷಿಕವೇತನವಾಗಿರುತ್ತದೆ. ೭. ವೈಶ್ಯನೆಂದಿಗೂ ಪಶುಗಳನ್ನು ರಕ್ಷಣೆ ಮಾಡುವುದಿಲ್ಲವೆಂಬ ಆಶಯವನ್ನು ಹೊಂದಲೇಬಾರದು. ಎಲ್ಲಿಯವರೆಗೆ ವೈಶ್ಯನು ಪಶುಗಳನ್ನು ಸಾಕಲು ಇಚ್ಛೆಪಡುವನೋ- ಅಲ್ಲಿಯವರೆಗೂ ಪಶುಗಳ ರಕ್ಷಣಾಕಾರ್ಯವನ್ನು ಬೇರೆಯವರಿಗೆ ಯಾವುದೇ ಕಾರಣದಿಂದಲೂ ವಹಿಸಿಕೊಡಬಾರದು. #ಮಹಾಭಾರತದ_ಉಪದೇಶಗಳು

👍 1
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
2/9/2025, 8:18:18 AM

#ಅಂತರಾಳದಿಂದ ನಿನ್ನೆ ಸಂಜೆ ಮಂಗಳೂರು ಪುರಭವನದಲ್ಲೊಂದು ನಾಟಕದ ಪ್ರದರ್ಶನವಿತ್ತು... " ಚಾರುವಸಂತ " ಅಂತ ಶತಾವಧಾನಿ ಗಣೇಶರ ಸಂಸ್ಕೃತ ನಾಟಕಗಳ ಉಪಾನ್ಯಾಸಗಳಲ್ಲಿ ಈ ಚಾರದತ್ತ ಹಾಗೂ ವಸಂತಸೇನೆಯರ ಬಗೆಗಿನ ಕತೆಯನ್ನ ಕೇಳಿದ್ದರಿಂದ ಅದರ ಕುರಿತಾದ ಕುತೂಹಲಕ್ಕಾಗಿ ನಾಟಕ ನೋಡಲು ಹೋಗಿದ್ದೆ... ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಅಭಿನಯಿಸಿದ ನಾಟಕವದು.. " ಹಂಪನಾ " ಅವರು ರಚಿಸಿದ ಕೃತಿಗೆ ರಂಗರೂಪ ಕೊಟ್ಟದ್ದು " ಡಾ. ನಾ. ದಾಮೋದರ ಶೆಟ್ಟಿ " ನಿರ್ದೇಶನ " ಡಾ. ಜೀವನ್ ರಾಂ ಸುಳ್ಯ " ಅವರದ್ದು... ನಾಟಕದ ಸಕಾರಾತ್ಮಕ ಅಂಶಗಳು.. ಒಳ್ಳೆಯ ನಿರ್ದೇಶನ ಮತ್ತು ಇಡಿಯ ತಂಡದ ಉತ್ತಮ ಅಭಿನಯ.. ನಾನು ಕೇಳಿದ ಕತೆಗಿಂತ ಭಿನ್ನವಾದ ಕತೆ.. ನಾಟಕದಲ್ಲೊಂದು ಪುಷ್ಪಕ ವಿಮಾನ ಬರುವ ದೃಶ್ಯ ಸೊಗಸಾಗಿತ್ತು.. ನಾಯಕ ಬಾವಿಯೊಳಗೆ ಬೀಳುವ ದೃಶ್ಯ ಸಂಯೋಜನೆ ಒಳ್ಳೆಯದಾಗಿತ್ತು.. ಸಂಗೀತ, ಹಾಡು ಬೆಳಕಿನ ಉಪಯೋಗ ಸೊಗಸಾಗಿತ್ತು... ಆದರೆ ನಕಾರಾತ್ಮಕ ವಾಗಿ ಕಾಣಿಸಿದ ಒಂದಂಶವೆಂದರೆ ಆರಂಭದಲ್ಲಿ ನಾಯಕ ತಂದೆಯ ಪಾತ್ರದ ಗುಣವರ್ಧನೆ ಮಾಡಲು ಉಪಯೋಗಿಸಿದ ಒಂದು ಅಂಶ.. ಮಲಹೊರುವ ಪದ್ಧತಿಯ ಜನರನ್ನ ಆ ಮಲಹೊರುವಿಕೆಯಿಂದ ಮುಕ್ತರನ್ನಾಗಿಸುವ ದೃಶ್ಯ... ನಾಟಕದ ಕಾಲವಾದರೂ ಯಾವಗದ್ದು..? ಯಕ್ಷರು ಭೂಮಿಗೆ ಬಂದು ಅವರ ಜತೆ ಸಾಮಾನ್ಯ ಮಾನವರಾದ ನಾಯಕ ಸಂವಹನ ಮಾಡುವಂತಹಾ ಕಾಲಘಟ್ಟ... ಆ ಕಾಲದಲ್ಲಿ ಮಲಹೊರುವ ಪದ್ಧತಿ ಇತ್ತಾ...?? ಇದನ್ನ ಯೋಚಿಸಿ ಈ ದೃಶ್ಯ ಸೇರ್ಪಡೆಗೊಳಿಸಿದ್ದರೆ ಚೆಲುವಾಗಿರುತ್ತಿತ್ತು... ಅಂದರೆ ಯಾವುದೋ ಒಂದು ಸಾಮಾಜಿಕ ಪಿಡುಗನ್ನ ನಾಟಕದಲ್ಲಿ ಕತೆ ಕವನದಲ್ಲಿ ಸೂಚಿಸುವುದು ತಪ್ಪೆಂದಲ್ಲ... ಆದರೆ ಕಾಲಧರ್ಮಕ್ಕನುಸಾರವಾಗಿ ಯಾವುದನ್ನ ಸೇರಿಸಬಹುದು ಯಾವುದನ್ನ ಸೇರಿಸಲಾಗದು ಎನ್ನುವ ಪ್ರಜ್ಞೆ ಅಗತ್ಯವಲ್ಲವೆ.. ಮತ್ತೆ ಅದೇ ನಾಟಕದ ಒಂದು ಕಡೆ ಪರಿಸರ ಪ್ರಜ್ಞೆಯ ಮಾತನ್ನಾಡುತ್ತಾ ಆಮ್ಲಜನಕ ಎನ್ನುವ ಪದಪ್ರಯೋಗವಾಗಿತ್ತು.. ಆ ಪದ ಆ ಕಾಲದಲ್ಲಿ ಪ್ರಯೋಗದಲ್ಲಿತ್ತಾ ಅನ್ನುವ ಅನುಮಾನವೂ ಕಾಡಿತು.. ಒಟ್ಟಂದದಲ್ಲಿ ನೋಡಬಹುದಾದ ನಾಟಕ..

😢 2
ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
2/4/2025, 11:09:35 AM

#ಅಂತರಾಳದಿಂದ ಮಹಾಭಾರತ ಯುದ್ಧ ನಡೆದ ಬಳಿಕ ಶರಶಯ್ಯೆಯಲ್ಲಿದ್ದ ಭೀಷ್ಮ ಧರ್ಮರಾಯನಿಗೆ ರಾಜನೀತಿ ಬೋಧನೆ ಮಾಡುತ್ತಾನೆ... ಅದರಲ್ಲೊಂದು ಅಂಶ ಈ ಕೆಳಗಿನಂತಿದೆ.. " ರಾಜನಾದವನು ತೆರಿಗೆದಾರರಿಗೆ ಸ್ವಲ್ಪವೂ ತೊಂದರೆಯಾಗದಂತೆ, ಹೂವಿನಿಂದ ದುಂಬಿಯು ಮಧುವನ್ನು ಹೀರುವಂತೆ ಅರ್ಥಾತ್ ಹೂವಿನ ಮೇಲೆ ದುಂಬಿಯು ಕುಳಿತು ಮಧುವನ್ನು ಹೀರಿಕೊಂಡರೂ ಹೇಗೆ ಹೂವು ಬಾಡುವುದಿಲ್ಲವೋ. ಸುವಾಸನೆಯನ್ನೂ ಕಳೆದುಕೊಳ್ಳುವುದಿಲ್ಲವೋ ಅದೇ ರೀತಿ ರಾಜನು ಜನರಿಂದ ತೆರಿಗೆಯನ್ನು ಉಪಾಯದಿಂದ ತೆಗೆದುಕೊಳ್ಳಬೇಕು. ಜನರಿಗೆ ಅಪ್ರಿಯವಾಗುವ ರೀತಿಯಲ್ಲಿ ತೆರಿಗೆಯನ್ನು ತೆಗೆದುಕೊಳ್ಳಬಾರದು. " ಬಹುಶಃ ಈ ಸಾಲುಗಳನ್ನ ಓದಿದೊಡನೆ ಅನೇಕ ಜನರು ಸರಕಾರದ ಕಿವಿಹಿಂಡುತ್ತಾ ಈ ಸಾಲುಗಳನ್ನ ಪುನರುಚ್ಚರಿಸಿಯಾರು.. ಇದು ಸೂಕ್ತವಾದ ತೆರಿಗೆ ವಿಧಾನ ಅಂತ ಒಪ್ಪಿಕೊಳ್ಳುವವರೂ ಕೂಡಾ ಆತ್ಮಾವಲೋಕನ ಮಾಡಿಕೊಳ್ಳಬೇಕು.. ಮಹಾಭಾರತದಲ್ಲಿ ತೆರಿಗೆ ಹೇಗೆ ವಸೂಲಿ ಮಾಡಬೇಕೆನ್ನುವ ವಿಧಿ ಇದೆಯೇ ಹೊರತು ತೆರಿಗೆಯಿಂದ ಜನಸಾಮಾನ್ಯರು ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವ ವಿಚಾರವೇ ಇಲ್ಲ ಅಂದರೆ ಇಲ್ಲಿ ಮಹಾಭಾರತ ಹೇಳಿರುವ ವ್ಯವಸ್ಥೆ ಸೊಗಸಾದದ್ದೇ ಪಡೆಯುವ ರಾಜನೂ ಕೊಡುವ ಪ್ರಜೆಗಳೂ ಮನಃ ಪೂರ್ವಕವಾಗಿ ಆ ನಿಯಮಗಳಿಗೆ ಬದ್ಧರಾಗಬೇಕು ಆಗ ವ್ಯವಸ್ಥೆ ಸರಿಯಾದೀತು ಅಲ್ವೇ..ಯಾಕೆಂದರೆ ಕೀಳುವವರೂ ಅತಿಯಾಗಿ ಕೀಳುತ್ತಾರೆ... ಅದರಿಂದ ತಪ್ಪಿಸಿಕೊಳ್ಳೋಕೆ ನಾನಾಬಗೆಯ ಕಸರತ್ತನ್ನ ಜನರೂ ಮಾಡುತ್ತಾರೆ..

ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
2/10/2025, 10:38:23 AM

ಈ ಹಿಂದೆ ಬ್ರಹ್ಮನು ನೀತಿಶಾಸ್ತ್ರ ಒಂದನ್ನ ರಚಿಸಿದ್ದ ಬಗ್ಗೆ ಹೇಳಿದ್ದೆ.. ಆ ನೀತಿ ಶಾಸ್ತ್ರದ ವಿಶೇಷತೆ ಏನೆಂದರೆ.. ಆ ನೀತಿಶಾಸ್ತ್ರದಲ್ಲಿ ಧರ್ಮಾರ್ಥಕಾಮಗಳ ಸಂಪೂರ್ಣವಾದ ವಿವರಣೆಯಿದ್ದಿತು. ( ಧರ್ಮ-ಕಾಮಾರ್ಥಗಳೆಂಬ ಮೂರು ಪ್ರಕರಣಗಳನ್ನೂ ಬ್ರಹ್ಮನು ತನ್ನ ನೀತಿಶಾಸ್ತ್ರದಲ್ಲಿ ವಿವರಿಸಿದ್ದ ಕಾರಣ ಧರ್ಮಾರ್ಥ ಕಾಮಗಳ ಸಮೂಹವು `ತ್ರಿವರ್ಗ' ಎಂದೇ ವಿಖ್ಯಾತವಾಯಿತು. ನಾಲ್ಕನೆಯದು ಮೋಕ್ಷಪ್ರಕರಣ. ಅದರ ಪ್ರಯೋಜನವೂ ಮತ್ತು ಗುಣಗಳೂ ತ್ರಿವರ್ಗದಿಂದ ಭಿನ್ನವಾಗಿವೆ. ಮೋಕ್ಷಸಂಬಂಧವಾದ ಮತ್ತೊಂದು ತ್ರಿವರ್ಗವಿದೆ. ಆ ತ್ರಿವರ್ಗದಲ್ಲಿ ಸತ್ವರಜಸ್ತಮೋಗುಣಗಳು ಸೇರಿವೆ. ದಂಡಜನಿತವಾದ ತ್ರಿವರ್ಗವು ಮತ್ತೊಂದು. ಸ್ಥಾನ, ವೃದ್ಧಿ, ಕ್ಷಯ-ಈ ಮೂರು ದಂಡದಿಂದ ಹುಟ್ಟಿದ ತ್ರಿವರ್ಗವಾಗಿದೆ. ) ಬ್ರಹ್ಮನ ನೀತಿಶಾಸ್ತ್ರದಲ್ಲಿ ಯಾವ ಯಾವ ವಿಚಾರಗಳ ವಿವರಣೆ ಇದೆ...? ಬ್ರಹ್ಮನು ರಚಿಸಿರುವ ನೀತಿಶಾಸ್ತ್ರದಲ್ಲಿ ೧.ಆತ್ಮಾ, ದೇಶ, ಕಾಲ, ಉಪಾಯಗಳು, ಕಾರ್ಯ ಮತ್ತು ಸಹಾಯಕರು ಈ ಷಡ್ವರ್ಗದ ವರ್ಣನೆಯಿದೆ. ೨. ತ್ರಯೀ ( ಕರ್ಮಕಾಂಡ ), ಆನ್ವೀಕ್ಷಿಕೀ ವಿದ್ಯೆ (ಜ್ಞಾನಕಾಂಡ ), ವಾರ್ತೆ ( ಕೃಷಿ, ಗೋರಕ್ಷಣೆ ಮತ್ತು ವಾಣಿಜ್ಯ ) ಮತ್ತು ದಂಡನೀತಿ-ಈ ವಿಭಾಗಗಳಲ್ಲಿ ವಿಪುಲವಾದ ವಿದ್ಯೆಗಳ ನಿರೂಪಣೆಯಿದೆ. ೩. ಮಂತ್ರಿಗಳ ರಕ್ಷಣೆ, ರಾಜದೂತನ (ರಾಯಭಾರಿಯ ) ಮತ್ತು ರಾಜಪುತ್ರನ ಲಕ್ಷಣಗಳು, ಗುಪ್ತಚಾರ ಮತ್ತು ಅವರು ಕೈಗೊಳ್ಳಬೇಕಾದ ವಿವಿಧೋಪಾಯಗಳು, ವಿಭಿನ್ನಸ್ಥಾನಗಳಲ್ಲಿ ಆಯಾಸ್ಥಾನಗಳಿಗೆ ಅನುಸಾರವಾಗಿ ವಿಭಿನ್ನರಾದ ಗುಪ್ತಚಾರರನ್ನಿಡುವುದು. ಸಾಮ, ದಾನ, ಭೇದ, ದಂಡ ಮತ್ತು ಉಪೇಕ್ಷಾ-ಈ ಐದು ಉಪಾಯಗಳು- ಈ ಎಲ್ಲದರ ವಿಷಯವಾಗಿಯೂ ವಿಸ್ತಾರವಾದ ವರ್ಣನೆಯಿದೆ. ೪. ಸಕಲವಿಧವಾದ ಮಂತ್ರಾಲೋಚನೆಗಳು, ಭೇದನೀತಿ ಪ್ರಯೋಗದ ಪ್ರಯೋಜನ, ರಹಸ್ಯವಾದ ಮಂತ್ರಾಲೋಚನೆಗಳು ಬಹಿರಂಗವಾಗುವುದರಿಂದ ಪ್ರಾಪ್ತವಾಗಬಹುದಾದ ಭಯ, ಮಂತ್ರಾಲೋಚನೆಯು ಸಿದ್ದಿಸಿದರೆ ಪ್ರಾಪ್ತವಾಗಬಹುದಾದ ಫಲಗಳು, ಸಿದ್ಧಿಸದಿದ್ದರೆ ಆಗುವ ದುಷ್ಪಲಗಳ ವರ್ಣನೆಯಿದೆ. ೫. ಸಂಧಿಯಲ್ಲಿ ಉತ್ತಮ, ಮಧ್ಯಮ ಮತ್ತು ಅಧಮಗಳೆಂಬ ಮೂರು ಭೇದಗಳಿವೆ. ಅವುಗಳಿಗೆ ಅನುಕ್ರಮವಾಗಿ ವಿತ್ತಸಂಧಿ, ಸತ್ಕಾರಸಂಧಿ ಮತ್ತು ಭಯಸಂಧಿಗಳೆಂಬ ಸಂಜ್ಞೆಗಳಿವೆ. ಅಪಾರವಾಗಿ ಧನವನ್ನು ತೆಗೆದುಕೊಂಡು ಸಂಧಿಮಾಡಿಕೊಳ್ಳುವುದು ಉತ್ತಮಸಂಧಿ. ಸತ್ಕಾರವನ್ನು ಪಡೆದುಕೊಂಡು ಸಂಧಿಮಾಡಿಕೊಳ್ಳುವುದು ಮಧ್ಯಮಸಂಧಿ, ಭಯದಿಂದ ಸಂಧಿಮಾಡಿಕೊಳ್ಳುವುದು ಅಧಮಸಂಧಿ, ಈ ಮೂರು ಸಂಧಿಗಳ ಸಂಪೂರ್ಣವಾದ ವರ್ಣನೆಯಿದೆ. ೬. ಯಾನ ಅಥವಾ ಯಾತ್ರೆ ಎಂದರೆ ಶತ್ರುವಿನ ಮೇಲೆ ಯುದ್ಧಕ್ಕೆ ಹೋಗುವುದು. ಇದಕ್ಕೆ ನಾಲ್ಕು ಕಾಲವಿಶೇಷಗಳಿವೆ. ತನ್ನ ಮಿತ್ರರ ವೃದ್ಧಿ, ತನ್ನ ರಾಜ್ಯದ ಬೊಕ್ಕಸದ ತುಂಬಿರುವಿಕೆ, ಶತ್ರುವಿನ ಮಿತ್ರರನಾಶ, ಶತ್ರುಗಳ ಬೊಕ್ಕಸದ ನಾಶ-ಇವು ದಂಡಯಾತ್ರೆಯ ಕಾಲಗಳು, ವಿಜಯಕ್ಕೆ ಸಂಬಂಧಿಸಿದಂತೆ ಧರ್ಮವಿಜಯ, ಅರ್ಥವಿಜಯ ಮತ್ತು ಆಸುರವಿಜಯ ಎಂಬ ತ್ರಿವರ್ಗಗಳನ್ನು ವಿಸ್ತಾರವಾದ ವಿವರಣೆಯಿದೆ. ೭. ಮಂತ್ರಿ, ರಾಷ್ಟ್ರ, ದುರ್ಗ, ಸೈನ್ಯ ಮತ್ತು ಕೋಶ-ಎಂಬ ಪಂಚವರ್ಗದ ಲಕ್ಷಣಗಳೂ, ಆ ಪಂಚವರ್ಗದಲ್ಲಿ ಉತ್ತಮ-ಮಧ್ಯಮಾಧಮಗಳೆಂಬ ಮೂರು ವಿಧಾನಗಳ ವರ್ಣನೆಯಿದೆ. ೮. ದಂಡದಲ್ಲಿ ( ಸೈನ್ಯದಲ್ಲಿ) ಪ್ರಕಾಶ ಮತ್ತು ಗುಪ್ತಗಳೆಂಬ ಎರಡು ಪ್ರಭೇದಗಳಿವೆ. ಪ್ರತ್ಯಕ್ಷವಾದ ಸೈನ್ಯದಲ್ಲಿ ಎಂಟು ಭೇದಗಳಿವೆ. ಗುಪ್ತಸೇನೆಯ ಬಹುವಿಸ್ತಾರವಾದ ವರ್ಣನೆಯಿದೆ. ೯. ರಥಗಳು, ಆನೆಗಳು, ಕುದುರೆಗಳು, ಪದಾತಿಗಳು, ಭಾರವನ್ನು ಹೊರುವವರು, ನಾವಿಕರು, ಗೂಢಚಾರರು ಮತ್ತು ಕಾಲಕಾಲಕ್ಕೆ ಮಾಡಬೇಕಾದ ಕರ್ತವ್ಯಗಳನ್ನು ತಿಳಿಯ ಹೇಳುವ ಆಚಾರ್ಯರು-ಇವುಗಳೇ ಪ್ರತ್ಯಕ್ಷಸೈನ್ಯದ ಅಷ್ಟಾಂಗಗಳು.ಜಂಗಮಗಳೆಂದರೆ ಚಲಿಸುವ ಸರ್ಪಾದಿಗಳಿಂದ ಉತ್ಪನ್ನವಾದ ವಿಷಾದಿಚೂರ್ಣಯೋಗಗಳು, ಅಜಂಗಮ ಅಥವಾ ಸ್ಥಾವರಗಳೆಂದರೆ ಮರ-ಗಿಡ-ಬಳ್ಳಿಗಳಿಂದ ಉತ್ಪನ್ನವಾದ ವಿಷ-ಚೂರ್ಣಾದಿಗಳು. ಇವು ಸೈನ್ಯದ ಗುಪ್ತಾಂಗಗಳು. ಗುಪ್ತಸಾಧನವಾದ ವಿಷಾದಿಗಳನ್ನು ಆಯುಧಗಳ ಮೂಲಕ ಅಥವಾ ವಸ್ತ್ರಾದಿಗಳ ಮೂಲಕ ಶತ್ರುವಿಗೆ ಸ್ಪರ್ಶವಾಗುವಂತೆ ಮಾಡವುದು. ಶತ್ರುಗಳ ಭೋಜನಾದಿಗಳಲ್ಲಿ ವಿಷವು ಬೆರೆಯುವಂತೆ ಮಾಡುವುದು. ಶತ್ರುನಾಶಕವಾದ ಅನೇಕಮಂತ್ರಗಳನ್ನು ಜಪಿಸುವುದು. ಇಷ್ಟೇ ಅಲ್ಲದೇ ಅರಿ, ಮಿತ್ರ ಮತ್ತು ಉದಾಸೀನರ ಬಗ್ಗೆಯೂ ವಿವರವಾದ ವರ್ಣನೆಯಿದೆ. ೧೦. ಸಮಸ್ತವಾದ ಗ್ರಹ-ನಕ್ಷತ್ರಮಾರ್ಗಗುಣಗಳು ( ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುವುದರಿಂದ ಉಂಟಾಗುವ ಮಾರ್ಪಾಡುಗಳು ; ನಕ್ಷತ್ರಗಳ ಉದಯಾಸ್ತಗಳಿಂದ ಆಗುವ ಪರಿಣಾಮಗಳು. ) ಎಂಬತ್ತುನಾಲ್ಕು ಭೂಮಿಯ ಗುಣಗಳು ಅಥವಾ ಬಲಗಳು. ಮಂತ್ರ-ಯಂತ್ರಾದಿಗಳಿಂದ ಮಾಡಿಕೊಳ್ಳಬೇಕಾದ ಆತ್ಮರಕ್ಷಣೆ, ಆಶ್ವಾಸನೆ, ರಥಾದಿಗಳ ನಿರ್ಮಾಣ ಮತ್ತು ಅವುಗಳ ನಿರೀಕ್ಷೆ ಇವುಗಳ ವರ್ಣನೆಯಿದೆ. ೧೧. ಸೈನ್ಯವನ್ನು ಪುಷ್ಟಿಗೊಳಿಸಲು ಕೈಗೊಳ್ಳಬೇಕಾದ ನಾನಾವಿಧವಾದ ಉಪಾಯಗಳು, ಆನೆ, ಕುದುರೆ, ರಥ, ಕಾಲಾಳುಗಳ ಮೂಲಕವಾಗಿ ರಚಿಸಬಹುದಾದ ನಾನಾವಿಧವಾದ ವ್ಯೂಹರಚನೆಗಳು. ನಾನಾಪ್ರಕಾರವಾದ ಮತ್ತು ವಿಚಿತ್ರವಾದ ಯುದ್ಧಕೌಶಲ, ದ್ವಂದ್ವಯುದ್ಧಮಾಡುವಾಗ ಮೇಲಕ್ಕೆ ಹಾರುವುದು, ತಪ್ಪಿಸಿಕೊಳ್ಳುವ ಸಲುವಾಗಿ ಕೆಳಕ್ಕೆ ಬೀಳುವುದು, ಎದುರಿಗೆ ನಿಂತು ಧರ್ಮಾನುಸಾರವಾಗಿ ಯುದ್ಧಮಾಡುವುದು, ಶತ್ರುವಿಗೆ ಬಲವಾದ ಪೆಟ್ಟುಕೊಟ್ಟು ಪಲಾಯನ ಮಾಡುವುದು, (ಯುದ್ಧತಂತ್ರವನ್ನು ಅನುಸರಿಸಿ ಹಿಮ್ಮೆಟ್ಟುವುದು,) ಇವುಗಳ ವಿವರಣೆಯಿದೆ. ೧೨. ಉತ್ಪಾತಃ- ಗ್ರಹಯುದ್ಧ ; ಧೂಮಕೇತು ದರ್ಶನಗಳು, ನಿಪಾತಃ -ಉಲ್ಕಾಪಾತ ಭೂ-ಕಂಪನಾದಿಗಳು ಯಾವಾಗ ಸಂಭವಿಸುವುವೆಂಬುದರ ವಿವರಣೆ,ಶಸ್ತ್ರಗಳನ್ನು ಹರಿತಗೊಳಿಸುವ ವಿಧಾನ ಅವುಗಳ ಸಂರಕ್ಷಣೆ ಮತ್ತು ಪ್ರಯೋಗಗಳ ವಿವರಣೆಯಿದೆ. ೧೩. ಸೈನ್ಯಕ್ಕೆ ಒದಗುವ ವ್ಯಸನಗಳು (ತೊಂದರೆಗಳು), ಸೈನಿಕರನ್ನು ಹರ್ಷಗೊಳಿಸುವ ಮತ್ತು ಪ್ರೋತ್ಸಾಹಗೊಳಿಸುವ ಬಗೆ, ಶತ್ರುಪೀಡೆ, ರಾಜಧಾನಿಯನ್ನು ಬಿಟ್ಟು ಬೇರೆ ಕಡೆಯಲ್ಲಿ ಇರಬೇಕಾದ ಕಾಲ, ಪದಾತಿಸೈನಿಕರ ಸ್ವಾಮಿನಿಷ್ಠೆಯ ಪರೀಕ್ಷಾವಿಧಾನ-ಇವುಗಳ ವಿವರವಿದೆ. ೧೪. ದುರ್ಗದ ನಾಲ್ಕು ಕಡೆಗಳಲ್ಲಿಯೂ ಕಂದಕಗಳನ್ನು ತೋಡುವ ಕ್ರಮ, ಚತುರಂಗಸೈನ್ಯಗಳನ್ನೂ ಯುದ್ಧಕ್ಕಾಗಿ ಸಜ್ಜುಗೊಳಿಸುವುದು, ರಣಯಾತ್ರೆ, ಭಯಂಕರರಾದ ಕಾಡುಜನರ ಮತ್ತು ಕಳ್ಳ-ಕಾಕರ ಮೂಲಕವಾಗಿ ಶತ್ರುಗಳ ರಾಜ್ಯಕ್ಕೆ ಪೀಡೆಯನ್ನುಂಟುಮಾಡುವುದು, ಬೆಂಕಿಯಿಡುವುದರಿಂದಲೂ ವಿಷಹಾಕುವುದರಿಂದಲೂ ಕೃತ್ರಿಮ ಪತ್ರಗಳ ಸೃಷ್ಟಿಕರ್ತರಿಂದಲೂ ಶತ್ರುಪಕ್ಷದ ಪ್ರಮುಖರಿಗೆ ಹಾನಿಯನ್ನುಂಟುಮಾಡುವುದು, ಮಂತ್ರಿ-ಸೇನಾಪತಿಗಳ ವೇಷಧಾರಿಗಳನ್ನು ಕಳುಹಿಸಿ ಶತ್ರುಗಳನ್ನು ಮೋಸಗೊಳಿಸುವುದು, ಶತ್ರು ಸೇನಾದಳಗಳ ಮುಖ್ಯರಿಗೆ ಪರಸ್ಪರವಾಗಿ ಭಿನ್ನಾಭಿಪ್ರಾಯವುಂಟಾಗುವಂತೆ ಮಾಡುವುದು, ಬೆಳೆದು ನಿಂತಿರುವ ಫಸಲನ್ನು ಕತ್ತರಿಸಿ ಹಾಕುವುದು, ಶತ್ರುಪಕ್ಷದ ಆನೆಗಳನ್ನು ರೇಗಿಸುವುದು, ಶತ್ರುರಾಜ್ಯದ ಪ್ರಜೆಗಳಿಗೆ ಆತಂಕವನ್ನುಂಟುಮಾಡುವುದು, ಶತ್ರುಪಕ್ಷದಲ್ಲಿಯೇ ಅನುರಕ್ತನಾದ ಮತ್ತು ಶತ್ರು ಪಕ್ಷದಲ್ಲಿ ಅತ್ಯಂತಮುಖ್ಯನಾದವನನ್ನು ವಿಶೇಷವಾಗಿ ಪುರಸ್ಕರಿಸುವುದರ ಮೂಲಕ ತನ್ನ ಕಡೆಗೆ ಒಲಿಸಿಕೊಳ್ಳುವುದು-ಈ ಎಲ್ಲ ವಿಷಯಗಳ ವಿಸ್ತಾರವಾದ ವಿವರಣೆಯಿದೆ. ೧೫. ಸಪ್ತಾಂಗಯುಕ್ತವಾದ ರಾಜ್ಯದ ಕ್ಷಯ, ವೃದ್ಧಿ ಮತ್ತು ಸಮತ್ವಗಳ ವರ್ಣನೆಯೂ, ದೂತನ ಸಾಮರ್ಥ್ಯದ ಸಹಯೋಗದಿಂದ ತನ್ನನ್ನೂ ಮತ್ತು ರಾಷ್ಟ್ರವನ್ನೂ ವೃದ್ಧಿಗೊಳಿಸಿಕೊಳ್ಳುವ ವಿಧಿ-ವಿಧಾನಗಳ ವಿವರಣೆಯಿದೆ. ೧೬. ಅರಿ, ಮಧ್ಯಸ್ಥ ಮತ್ತು ಮಿತ್ರರ ವಿಸ್ತಾರವಾದ ವಿವೇಚನೆ, ಬಲಿಷ್ಠರಾದ ಶತ್ರುಗಳನ್ನು ಉಪಾಯಾಂತರಗಳಿಂದ ನಾಶಪಡಿಸುವುದು, ಸಮಯವು ಒದಗಿಬಂದಾಗ ಶತ್ರುಗಳ ಉಪಾಯಗಳನ್ನು ಭಂಗ ಗೊಳಿಸುವುದು-ಇವುಗಳ ವಿಧಾನಗಳ ವಿವರಣೆಯಿದೆ. ೧೬. ಶಾಸನ ಸಂಬಂಧವಾದ ಅತಿಸೂಕ್ಷ್ಮವಾದ ವ್ಯವಹಾರ, ಕಂಟಕಶೋಧನ (ರಾಜ್ಯವ್ಯವಹಾರದಲ್ಲಿ ವಿಘ್ನವನ್ನುಂಟುಮಾಡುವವರನ್ನು ಕಂಡುಹಿಡಿದು ಧ್ವಂಸಮಾಡುವುದು), ವ್ಯಾಯಾಮಯೋಗ (ಆಯುಧಗಳ ಪ್ರಯೋಗಾಭ್ಯಾಸಗಳು), ಪರಿಶ್ರಮ (ಮಲ್ಲಕ್ರೀಡೆ ಮುಂತಾದುವುಗಳು), ಧನದ ತ್ಯಾಗ ಮತ್ತು ಧನದ ಸಂಗ್ರಹ-ಈ ವಿಷಯಗಳ ವಿವರಣೆಯಿದೆ. ೧೭. ರಾಜ್ಯದಲ್ಲಿ ಯಾರ ಭರಣ-ಪೋಷಣೆಗಳು ಆಗುತ್ತಿಲ್ಲವೋ, ಯಾರು ಕೆಲಸಮಾಡಲು ಅಶಕ್ತರಾಗಿರುವರೋ, ನಿರ್ಗತಿಕರಾಗಿರುವರೋ, ಅಂತಹವರ ಭರಣ-ಪೋಷಣೆಗಳನ್ನು ರಾಜನೇ ನೋಡಿಕೊಳ್ಳಬೇಕು. ರಾಜ್ಯವು ಯಾರಿಗೆ ಭರಣ-ಪೋಷಣಗಳ ವ್ಯವಸ್ಥೆಯನ್ನು ಮಾಡಿರುವುದೋ ಅಂತಹವರ ನಡೆ, ನುಡಿ, ಕಾರ್ಯಗಳ ಬಗೆಗೆ ದೃಷ್ಟಿಯನ್ನಿಟ್ಟುಕೊಳ್ಳಬೇಕಾದ ಬಗೆಗೆ ವಿವರಣೆಯಿದೆ. ೧೮. ರಾಜನ ಗುಣಗಳು, ಸೇನಾಪತಿಯ ಗುಣಗಳು, ತ್ರಿವರ್ಗಾನುಷ್ಠಾನದ ಕಾರಣಗಳು ಮತ್ತು ಗುಣದೋಷಗಳು ಇವುಗಳ ವಿವರಣೆಯಿದೆ. ೧೯. ನಾನಾವಿಧವಾದ ದುಶ್ಚೇಷ್ಟಿತಗಳು (ದುರ್ವ್ಯವಹಾರಗಳು ), ತನ್ನನ್ನೇ ಅನುಸರಿಸಿ ಇರತಕ್ಕವರಿಗೆ ವಹಿಸಿಕೊಡಬಹುದಾದ ಕಾರ್ಯಭಾರಗಳು, ಎಲ್ಲರ ವಿಷಯದಲ್ಲಿಯೂ ಸಂದೇಹಿಸುವುದು, ಕರ್ತವ್ಯದಲ್ಲಿ ಅಲಕ್ಷವನ್ನು ಅಕರ್ತವ್ಯದಲ್ಲಿ ಆಸಕ್ತಿಯನ್ನು ವಿಸರ್ಜಿಸುವುದು, ಲಭಿಸದೇ ಇರುವ ವಸ್ತುವನ್ನು ಪಡೆದುಕೊಳ್ಳುವುದು, ಪಡೆದುಕೊಂಡ ವಸ್ತುವನ್ನು ರಕ್ಷಿಸುವುದು ಮತ್ತು ಅದನ್ನು ವೃದ್ಧಿಸುವುದು, ಹಾಗೆ ವೃದ್ಧಿಸಿದ ವಸ್ತುವನ್ನು (ಐಶ್ವರ್ಯವನ್ನು) ಸತ್ಪಾತ್ರರಿಗೆ ವಿಧಿವತ್ತಾಗಿ ಹಂಚಿಕೊಡುವುದು, ವೃದ್ದಿಸಿದ ಐಶ್ವರ್ಯವನ್ನು ಧರ್ಮಾರ್ಥವಾಗಿ ತ್ಯಾಗಮಾಡುವುದು, ಕಾಮೋಪಭೋಗಗಳಿಗಾಗಿ ವ್ಯಯಿಸುವುದು, ಯಾವುದಾದರೂ ಸಂಕಟವು ಒದಗಿದಲ್ಲಿ ಅದರ ನಿವಾರಣೆಗಾಗಿ ಸಂಚಿತವಾದ ಐಶ್ವರ್ಯವನ್ನು ವ್ಯಯಿಸುವುದು-ಹೀಗೆ ಕೂಡಿಹಾಕಿ ವೃದ್ಧಿಪಡಿಸಿದ ಐಶ್ವರ್ಯವನ್ನು ವ್ಯಯಿಸಲು ಇರುವ ನಾಲ್ಕು ಮಾರ್ಗಗಳ ವಿವರಣೆಯಿದೆ. ೨೦. ಕಾಮ-ಕ್ರೋಧಗಳಿಂದ ಹುಟ್ಟುವ ಹತ್ತು ವಿಧವಾದ ಭಯಂಕರ ವ್ಯಸನಗಳ ವಿವರಣೆಯಿದೆ. (ಬೇಟೆಯಾಡುವುದು, ಜೂಜಾಡುವುದು, ಮದ್ಯಪಾನಮಾಡುವುದು ಮತ್ತು ಸರ್ವದಾ ಸ್ತ್ರೀಯರಲ್ಲಿಯೇ ಆಸಕ್ತನಾಗಿರುವುದು-ಇವುಗಳನ್ನು ಕಾಮಜನ್ಯವಾದ ವ್ಯಸನಗಳೆಂದು ಹೇಳುತ್ತಾರೆ. ಮಾತಿನಲ್ಲಿ ಕಾಠಿಣ್ಯ, ಉಗ್ರತೆ, ಉಗ್ರವಾಗಿ ದಂಡಿಸುವುದು, ತನ್ನ ಶರೀರವನ್ನೇ ದಂಡಿಸಿಕೊಳ್ಳುವುದು, ಬಂಧು-ಬಳಗದವರನ್ನು ಕೋಪಾವೇಶದಿಂದ ಕಾರಣವಿಲ್ಲದೇ ತ್ಯಾಗಮಾಡುವುದು, ಅರ್ಥದೂಷಣ-ಅರ್ಥಹಾನಿ (ಕೋಪವಶನಾಗಿ ಕೈಗೆ ಸಿಕ್ಕಿದ ವಸ್ತುಗಳನ್ನು ಒಡೆದುಹಾಕುವುದು )-ಇವು ಆರೂ ಕ್ರೋಧಜನ್ಯವಾದ ವ್ಯಸನಗಳೆನ್ನುತ್ತಾರೆ. ೨೧. ನಾನಾವಿಧವಾದ ಯಂತ್ರಗಳೂ ಮತ್ತು ಆ ಯಂತ್ರಗಳ ಮೂಲಕವಾಗಿ ಆಗುವ ವಿಧವಿಧವಾದ ಕಾರ್ಯಗಳ ವರ್ಣನೆಯಿದೆ. ೨೨. ಶತ್ರುಗಳ ರಾಷ್ಟ್ರವನ್ನು ಧ್ವಂಸಗೊಳಿಸುವುದು, ಶತ್ರುಗಳ ಸೈನ್ಯಕ್ಕೆ ಆಘಾತವನ್ನುಂಟುಮಾಡುವುದು, ಶತ್ರುಗಳ ರಾಜಧಾನಿಗಳಲ್ಲಿರುವ ಮನೆ-ಮಠಗಳನ್ನು ನಿರ್ನಾಮಗೊಳಿಸುವುದು. ಶತ್ರುಗಳ ರಾಜಧಾನಿಯಲ್ಲಿರುವ ಚೈತ್ಯವೃಕ್ಷಗಳನ್ನು ( ಅಶ್ವತ್ಥವೇ ಮೊದಲಾದ ದೊಡ್ಡ ದೊಡ್ಡ ವೃಕ್ಷಗಳನ್ನು ) ಧ್ವಂಸಮಾಡುವುದು, ಶತ್ರುವಿನ ಅರಮನೆಯನ್ನು ಅಥವಾ ರಾಜಧಾನಿಯನ್ನು ನಾಲ್ಕು ದಿಕ್ಕುಗಳಿಂದಲೂ ಮುತ್ತಿಗೆಹಾಕುವುದು-ಇವುಗಳಿಗೆ ಸಂಬಂಧಿಸಿದ ಉಪಾಯಗಳ ವಿವರಣೆಯಿದೆ. ೨೩. ಕೃಷಿ, ಶಿಲ್ಪ-ಇವುಗಳೇ ಮೊದಲಾದುವನ್ನು ಹೇಗೆ ಮಾಡಬೇಕೆಂಬ ವಿವರ, ರಥದ ಅಂಗಗಳ ನಿರ್ಮಾಣ, ಗ್ರಾಮಗಳಲ್ಲಿ ಮತ್ತು ನಗರಗಳಲ್ಲಿ ಗೃಹನಿರ್ಮಾಣ ವಿಧಿ, ಜೀವನನಿರ್ವಹಣೆಗೆ ಇರುವ ಅನೇಕೋಪಾಯಗಳ ವಿವರಣೆಯಿದೆ. ೨೪. ಮದ್ದಳೆ, ನಗಾರಿ, ಶಂಖ, ಭೇರೀ-ಇವೇ ಮೊದಲಾದ ರಣವಾದ್ಯಗಳನ್ನು ಬಾರಿಸುವ ಕ್ರಮ ; ಮಣಿ, ಪಶು, ಪೃಥ್ವಿ, ವಸ್ತ್ರ, ದಾಸ- ದಾಸಿಯರು ಮತ್ತು ಸುವರ್ಣ-ಇವುಗಳನ್ನು ಸಂಪಾದಿಸುವ ವಿಧಾನ ; ಶತ್ರುಪಕ್ಷದಲ್ಲಿರುವ ಇವೇ ಆರು ವಸ್ತುಗಳನ್ನು ವಿಧ್ವಂಸಮಾಡುವ ವಿಧಾನಗಳ ವಿವರಣೆಯಿದೆ. ೨೫. ತನ್ನ ಅಧೀನಕ್ಕೊಳಪಟ್ಟಿರುವ ದೇಶದಲ್ಲಿ ಶಾಂತಿಯನ್ನು ಸ್ಥಾಪಿಸುವುದು, ಸತ್ಪುರುಷರನ್ನು ಸತ್ಕರಿಸುವುದು, ವಿದ್ವಾಂಸರೊಡನೆ ನಿಕಟವಾದ ಸಂಬಂಧವನ್ನಿಟ್ಟುಕೊಳ್ಳುವುದು, ದಾನ ಮತ್ತು ಹೋಮಗಳ ವಿಧಿಯನ್ನು ತಿಳಿದುಕೊಳ್ಳುವುದು, ಮಂಗಲವಸ್ತುಗಳನ್ನು ಸ್ಪರ್ಶಿಸುವುದು, ಶರೀರವನ್ನು ವಸ್ತ್ರದಿಂದಲೂ ಮತ್ತು ಆಭರಣಗಳಿಂದಲೂ ಸಿಂಗರಿಸಿಕೊಳ್ಳುವ ರೀತಿ, ಭೋಜನದ ವ್ಯವಸ್ಥೆ, ಸರ್ವದಾ ಆಸ್ತಿಕ ಬುದ್ಧಿಯಿಂದಲೇ ಇರುವುದರ ಬಗೆಗಿನ ವಿವರಣೆಯಿದೆ. ೨೬. ರಾಜನು ಏಕಾಕಿಯಾಗಿದ್ದರೂ ಉನ್ನತಸ್ಥಿತಿಗೆ ಬರುವ ವಿಧಾನಗಳು, ಸತ್ಯನಿಷ್ಠೆ, ಉತ್ಸವಾದಿಗಳಲ್ಲಿ ಮತ್ತು ಸಮಾಜದಲ್ಲಿ ಹೇಳಬೇಕಾದ ಮಧುರವಾದ ಮಾತುಗಳು, ಮಾಡಬೇಕಾದ ಕೆಲಸಗಳು ಮತ್ತು ಗೃಹಕೃತ್ಯಗಳಿಗೆ ಸಂಬಂಧಿಸಿದ ವಿಷಯಗಳ ವಿವರಣೆಯಿದೆ. ೨೭. ದೇಶದ ಎಲ್ಲ ನ್ಯಾಯಾಲಯಗಳಲ್ಲಿಯೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಯಾವ ವ್ಯವಹಾರಗಳು ನಡೆಯುತ್ತಿರುತ್ತವೆಯೋ ಮತ್ತು ಅಲ್ಲಿನ ನ್ಯಾಯಾಧೀಶರು ಯಾವ ವಿಧವಾದ ವ್ಯವಹಾರಗಳನ್ನು ಇಟ್ಟುಕೊಂಡಿರುತ್ತಾರೆಯೋ ಆ ಎಲ್ಲ ವಿಷಯಗಳನ್ನೂ ರಾಜನಾದವನು ಪ್ರತ್ಯಕ್ಷವಾಗಿ ಅಥವಾ ಚಾರರ ಮೂಲಕವಾಗಿ ಗಮನಿಸುತ್ತಲೇ ಇರಬೇಕು. ಅವುಗಳ ಬಗೆಗಿನ ವಿವರಣೆಯಿದೆ. ೨೮. ಬ್ರಾಹ್ಮಣರನ್ನು ಶಾರೀರಕವಾಗಿ ಶಿಕ್ಷಿಸದಿರುವುದು, ಅಪರಾಧಿಗಳಿಗೆ ಯುಕ್ತಿಪೂರ್ವಕವಾಗಿ ದಂಡವನ್ನು ವಿಧಿಸುವುದು, ಮತ್ತು ತನ್ನ ಅನುಯಾಯಿಗಳಿಗೂ, ಜ್ಞಾತಿಬಾಂಧವರಿಗೂ ಗುಣವಂತರಿಗೂ, ಹೇಗೆ ಅನುಕೂಲ ಮಾಡಿಕೊಡಬೇಕೆಂಬುದರ ವಿವರಣೆಯಿದೆ. ೨೯. ಪಟ್ಟಣಿಗರ ರಕ್ಷಣೆ, ರಾಷ್ಟ್ರದ ವೃದ್ಧಿ, ಮಂಡಲಸ್ಥರಾದ ಹನ್ನೆರಡು ಬಗೆಯ ರಾಜರ [ ನಾಲ್ಕು ದಿಕ್ಕುಗಳಲ್ಲಿಯೂ ಇರುವ ನಾಲ್ವರು ಶತ್ರುರಾಜರು, ನಾಲ್ವರು ಮಿತ್ರರಾಜರು, ನಾಲ್ವರು ಉದಾಸೀನರಾಜರು-ಒಟ್ಟು ಹನ್ನೆರಡು ] ಸಂಬಂಧವಾದ ಚಿಂತೆ-ಇವುಗಳೆಲ್ಲದರ ವಿವರಣೆಯಿದೆ. ೩೦. ವೈದ್ಯಶಾಸ್ತ್ರಾನುಸಾರವಾಗಿ ಶರೀರಕ್ಕೆ ನಡೆಸುವ ಎಪ್ಪತ್ತೆರಡು ವಿಧವಾದ ಚಿಕಿತ್ಸೆಗಳು, ದೇಶ, ಜಾತಿ ಮತ್ತು ಕುಲಗಳ ಧರ್ಮಗಳ ವಿವರಣೆಯಿದೆ. ೨೧. ಆ ಮಹಾಗ್ರಂಥದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಪ್ರಾಪ್ತೋಪಾಯಗಳ ಬಗೆಗೂ ನಾನಾಪ್ರಕಾರವಾದ ಧನಾಭಿಲಾಷೆಗಳ ಬಗೆಗೂ ವಿವರಣೆಯಿದೆ. ೩೨. ಕೋಶವನ್ನು ವೃದ್ಧಿಗೊಳಿಸುವ ಮೂಲಕರ್ಮಗಳಾದ ಕೃಷಿ-ವಾಣಿಜ್ಯಾದಿಗಳನ್ನು ಹೇಗೆ ಮಾಡಬೇಕೆಂಬುದರ ವಿವರ, ಮಾಯಾ ಪ್ರಯೋಗವನ್ನು ಯಾವ ಸಮಯದಲ್ಲಿ ಹೇಗೆ ಮಾಡಬೇಕೆಂಬುದರ ವಿವರ, ಹರಿಯುವ ಮತ್ತು ನಿಂತಿರುವ ನೀರಿನ ದೂಷಣವಿಧಾನ (ಕೆಡಿಸುವ ರೀತಿ)ಗಳ ವಿವರಣೆಯೂ ಇದೆ. ೩೩. ಯಾವ ಯಾವ ಉಪಾಯಗಳಿಂದ ಈ ಜಗತ್ತು ಸನ್ಮಾರ್ಗದಿಂದ ವಿಚಲಿತವಾಗುವುದಿಲ್ಲವೋ-ಆ ಎಲ್ಲ ಉಪಾಯಗಳ ವಿವರಣೆಯಿದೆ.

ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
2/7/2025, 10:52:15 AM

ಮಹಾಭಾರತ ಯುದ್ಧ ಮುಗಿದ ಬಳಿಕ ಧರ್ಮರಾಯನಿಗೆ ಭೀಷ್ಮನಿಂದ ರಾಜಧರ್ಮದ ಉಪದೇಶವಾಗುತ್ತದೆ.. ಈ ಉಪದೇಶ ಆರಂಭದಲ್ಲಿ ಧರ್ಮರಾಯ ಕೇಳುವ ಪ್ರಶ್ನೆ ಈ ಜಗತ್ತಿನಲ್ಲಿ ರಾಜನ ಆವಶ್ಯಕತೆ ಹೇಗೆ ಬಂತು..? ಅಂತ.. ಎಂತಹಾ ಸೊಗಸಾದ ಪ್ರಶ್ನೆ... ರಾಜ ಧರ್ಮಕ್ಕೂ ಮುನ್ನ ರಾಜನ ಆವಶ್ಯಕತೆ ಏನು. ಅನ್ನುವಲ್ಲಿಂದ ಸಂಶಯ ಪರಿಹಾರ.. ಬಹುಶಃ ಒಬ್ಬ ಚತುರ ವಿದ್ಯಾರ್ಥಿ ನಡೆ ಇದು.. ಮೂಲದಿಂದಲೇ ಗೊಂದಲ ಪರಿಹಾರ.. ಧರ್ಮರಾಯನ ಪ್ರಶ್ನೆಗೆ ಭೀಷ್ಮನ ಉತ್ತರ... ಹೀಗಿದೆ.. ಹಿಂದೆ ರಾಜ್ಯವೆಂಬುದೂ ಇರಲಿಲ್ಲ ; ರಾಜನೆಂಬುವನೂ ಇರಲಿಲ್ಲ. ದಂಡವೂ ಇರಲಿಲ್ಲ ; ದಂಡಿಸುವುದೂ ಇರಲಿಲ್ಲ. ಎಲ್ಲ ಪ್ರಜೆಗಳೂ ಧರ್ಮ ಮಾರ್ಗದಿಂದಲೇ ಪರಸ್ಪರವಾಗಿ ರಕ್ಷಣೆಯನ್ನು ಮಾಡಿಕೊಳ್ಳುತ್ತಿದ್ದರು. ಎಲ್ಲ ಮನುಷ್ಯರೂ ಧರ್ಮದಿಂದಲೇ ಪಾಲನೆ-ಪೋಷಣೆಗಳನ್ನು ಅನ್ನೋನ್ಯ ಸಹಾಯದಿಂದಲೇ ಮಾಡಿಕೊಳ್ಳುತ್ತಿದ್ದರು. ಕೆಲವು ಕಾಲಾನಂತರದಲ್ಲಿ ಅವರೆಲ್ಲರೂ ಮೋಹವಶರಾಗತೊಡಗಿದರು. ಆಗ ಅವರಲ್ಲಿ ಕರ್ತವ್ಯಾಕರ್ತವ್ಯ ಪ್ರಜ್ಞೆಯು ಶೂನ್ಯವಾಯಿತು. ಕರ್ತವ್ಯ ಪ್ರಜ್ಞೆಯ ಶೂನ್ಯತೆಯಿಂದಾಗಿ ಅವರಲ್ಲಿ ಧರ್ಮಾಚರಣೆಯೂ ಅಳಿದು ಹೋಯಿತು. ಅವರೆಲ್ಲರೂ ಲೋಭಾಭಿಭೂತರಾದರು. ಸಿಕ್ಕದೇ ಇರುವ ವಸ್ತುವನ್ನೂ ಪಡೆದುಕೊಳ್ಳುವ ಸಲುವಾಗಿ ಪ್ರಯತ್ನಗಳನ್ನು ಮಾಡತೊಡಗಿದರು. ಆಗ ಅವರ ಮನಸ್ಸನ್ನು 'ಕಾಮ'ವು ಆಕ್ರಮಿಸತೊಡಗಿತು. ಕಾಮವಶರಾದ ಆ ಜನರನ್ನು 'ರಾಗ'ವೂ ಕಾಡತೊಡಗಿತು. ರಾಗಕ್ಕೆ ವಶೀಭೂತರಾದ ಆ ಜನರು ಕಾರ್ಯಾಕಾರ್ಯಗಳನ್ನೂ ವಿವೇಚಿಸುತ್ತಲೇ ಇರಲಿಲ್ಲ. ಸಮಾಗಮ ಮಾಡಲು ಅನರ್ಹರೊಡನೆ ಸಮಾಗಮ ಮಾಡುತ್ತಿದ್ದರು. ಮಾತನಾಡಲು ಯೋಗ್ಯವಾದುದು ; ಮಾತನಾಡಲು ಅಯೋಗ್ಯವಾದುದು, ಭಕ್ಷಿಸಲು ಯೋಗ್ಯವಾದುದು ; ಭಕ್ಷಿಸಲು ಅಯೋಗ್ಯವಾದುದು, ದೋಯುಕ್ತವಾದುದು ; ದೋಷವಿಲ್ಲದುದು ಇವುಗಳಲ್ಲಿ ಯಾವುದನ್ನೂ ಅವರು ಪರಿತ್ಯಜಿಸುತ್ತಿರಲಿಲ್ಲ. ಹೀಗೆ ಮನುಷ್ಯಲೋಕದಲ್ಲಿ ಕ್ಷೋಭೆಯುಂಟಾಗಲಾಗಿ, ವೇದಗಳ ಅಧ್ಯಯನವೂ ನಿಂತುಹೋಯಿತು. ವೇದಗಳು ನಶಿಸಿಹೋದನಂತರ ಯಜ್ಞ-ಯಾಗಾದಿ ಸಮಸ್ತ ಧಾರ್ಮಿಕ ಕ್ರಿಯೆಗಳೂ ನಾಶಹೊಂದಿದುವು. ವೇದವೂ ಮತ್ತು ಧರ್ಮವೂ ನಾಶವಾಗಲಾಗಿ ದೇವತೆಗಳ ಮನಸ್ಸನ್ನು ಭಯವು ಆವರಿಸಿತು. ಭಯಪೀಡಿತರಾದ ದೇವತೆಗಳು ಬ್ರಹ್ಮನನ್ನು ಶರಣು ಹೊಂದಿದರು. ದುಃಖದ ಆವೇಗದಿಂದ ಪೀಡಿತರಾಗಿದ್ದ ದೇವತೆಗಳು ಚತುರ್ಮುಖ ಬ್ರಹ್ಮನನ್ನು ಸ್ತೋತ್ರಾದಿಗಳಿಂದ ಪ್ರಸನ್ನಗೊಳಿಸಿ ಬದ್ಧಾಂಜಲಿಗಳಾಗಿ ಪ್ರಾರ್ಥಿಸಿದರು : “ ನರಲೋಕವು ಲೋಭ-ಮೋಹಾದಿ ದುಷ್ಟಭಾವನೆಗಳಿಂದ ಪೀಡಿತವಾಗಿದೆ. ಈ ಕಾರಣದಿಂದ ಸನಾತನವಾದ ವೇದ-ಯಜ್ಞಾದಿಗಳು ಲುಪ್ತವಾಗಿ ಹೋಗಿವೆ. ಆದುದರಿಂದ ನಮ್ಮನ್ನು ಭಯವು ಆವರಿಸಿದೆ. ವೈದಿಕ ಜ್ಞಾನದ ವಿನಾಶದಿಂದಾಗಿ ಯಜ್ಞಧರ್ಮವೂ ವಿನಾಶಹೊಂದಿತು. ಈ ಕಾರಣದಿಂದ ನಾವು ಮನುಷ್ಯರಿಗೆ ಸಮಾನರಾಗಿಬಿಟ್ಟಿದ್ದೇವೆ. ಮನುಷ್ಯರು ಯಜ್ಞಾದಿಗಳ ಮೂಲಕವಾಗಿ ನಮಗೆ ಬೇಕಾದ ಆಹುತಿಗಳನ್ನು ಊರ್ಧ್ವಮುಖವಾಗಿ ಸುರಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ನಾವು ಮನುಷ್ಯರಿಗೆ ಬೇಕಾದ ಆಹಾರಧಾನ್ಯಗಳನ್ನು ಬೆಳೆಸುವ ಸಲುವಾಗಿ ಅಧೋಮುಖವಾಗಿ ಮಳೆಗರೆಯುತ್ತಿದ್ದೆವು. ಅವರೀಗ ಯಜ್ಞಕ್ರಿಯೆಗಳನ್ನೇ ನಿಲ್ಲಿಸಿಬಿಟ್ಟಿರುವುದರಿಂದ ನಮ್ಮ ಜೀವನವೇ ಸಂಶಯಗ್ರಸ್ತವಾಗಿದೆ. ನೀನೇ ದಾರಿ ತೋರಿಸಬೇಕು.. ಅಂತ ಕೇಳಿಕೊಂಡಾಗ ಬ್ರಹ್ಮ ದೇವತೆಗಳನ್ನು ಸಮಾಧಾನಗೊಳಿಸಿ... ರಾಜನ ಸೃಷ್ಟಿ ಮಾಡುವುದಿಲ್ಲ..ಬದಲಾಗಿ ತನ್ನ ಬುದ್ಧಿಬಲದಿಂದ ಒಂದು ಲಕ್ಷ ಅಧ್ಯಾಯಗಳುಳ್ಳ ನೀತಿಶಾಸ್ತ್ರವನ್ನು ರಚಿಸಿದನು. ಅಂದರೆ ರಾಜನ ಸೃಷ್ಟಿಗೂ ಮುನ್ನ ನೀತಿಶಾಸ್ತ್ರದ ಸೃಷ್ಟಿಯಾಯಿತು.. ಆ ನೀತಿಶಾಸ್ತ್ರದಲ್ಲಿ ಏನೇನಿತ್ತು..? ಇನ್ನೊಮ್ಮೆ ನೋಡೋಣ..

Link copied to clipboard!