ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
February 22, 2025 at 11:33 AM
ಓದಿದ್ದು ಮೊದಲಿಗೆ ಕೋವಿಡ್-19 ಸಂಕ್ರಮಣವನ್ನೆದುರಿಸಲು ಭಾರತ ತನ್ನ ಮೇಲೆ ಪೂರ್ಣವಾಗಿ ಅವಲಂಬಿತವಾಗುತ್ತದೆ ಎಂದು ನಂಬಿದ್ದ ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಫೈಝರ್ ಅನ್ನು ಮೋದಿ ಸರ್ಕಾರ ದೂರವಿಟ್ಟಿತು. ತನ್ನ ಕೋವಿಡ್ ಲಸಿಕೆಗಳನ್ನು ದುಬಾರಿ ಬೆಲೆಗೆ ಮಾರುವುದಲ್ಲದೆ, ಲಸಿಕೆಗಳಿಗಾಗಿ ಆಮದುದಾರ ಸರ್ಕಾರಗಳು ತಮ್ಮ ಸ್ಥಿರಾಸ್ತಿಗಳನ್ನು ಒತ್ತೆಯಿಡಬೇಕೆಂದೂ, ಲಸಿಕೆ ವಿಫಲವಾದರೆ ಮತ್ತು ಅಡ್ಡಪರಿಣಾಮ ಬೀರಿ ಹಾನಿಯುಂಟುಮಾಡಿದರೆ ಸಂತ್ರಸ್ತರಿಗೆ ಪರಿಹಾರವನ್ನು ಆಯಾ ಸರ್ಕಾರಗಳೇ ನೀಡಬೇಕೆಂದೂ ಆ ಸಂಸ್ಥೆ ಹೇಳಿದ್ದನ್ನು ಮೋದಿ ಸರ್ಕಾರ ಒಪ್ಪಿಕೊಳ್ಳಲಿಲ್ಲ. ಅಂತಹ ಅನೀತಿಯುತ ದುರಾಸೆಯನ್ನು ತೋರದ ಬ್ರಿಟಿಷ್ ಔಷಧ ತಯಾರಿಕಾ ಸಂಸ್ಥೆ ಆಸ್ಟ್ರೋ ಝೆನೆಕಾದ ಸಹಕಾರದಿಂದ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲೇ ತಯಾರಿಸುವುದು ಕೊರೋನಾ ಸಂಕ್ರಮಣದ ವಿರುದ್ಧದ ಸಮರದಲ್ಲಿ ಮೋದಿ ಸರ್ಕಾರ ಅನುಸರಿಸಿದ ಮುಖ್ಯ ಮಾರ್ಗ. ಅದರಿಂದಾಗಿ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೂರಕ್ಕೂ ಹೆಚ್ಚಿನ ದೇಶಗಳಿಗೆ ಮುಕ್ತವಾಗಿ ಹಂಚಿ ಮೋದಿ ಸರ್ಕಾರ ಫೈಝರ್ ಮತ್ತದರ ಸಹಯೋಗಿ ಸಂಸ್ಥೆಗಳ ಅಮಾನವೀಯ ಲಾಭಕೋರತನವನ್ನು ಜಾಗತಿಕ ಮಟ್ಟದಲ್ಲಿ ಸಾಕಷ್ಟು ತಡೆಯಿತು. ಪ್ರಧಾನಮಂತ್ರಿ ಮೋದಿ ಫಾರ್ಮಾ ಲಾಬಿಯ ವಿರೋಧವನ್ನು ಕಟ್ಟಿಕೊಂಡಿದ್ದು ಹೀಗೆ. ಲೇಖಕರು : ಡಾ. ಪ್ರೇಮಶೇಖರ್ ಅಂಕಣ : ಎಚ್ಚೆತ್ತ ಭಾರತ ಸಾಗಿರುವುದೆತ್ತ..? ಪತ್ರಿಕೆ : ವಿಕ್ರಮ ವಾರ ಪತ್ರಿಕೆ
❤️ 👍 5

Comments