
ಗುರುಪ್ರಸಾದ್ ಆಚಾರ್ಯ ಕುಂಜೂರು
February 27, 2025 at 11:22 AM
#ಅಂತರಾಳದಿಂದ
ಈ ವ್ಯಕ್ತಿ ಬಿಜೆಪಿ ಪಕ್ಷಕ್ಕೆ ಬರಲಿ ಅನ್ನೋ ಆಸೆ ನನಗೆ ಎಳ್ಳಷ್ಟೂ ಇಲ್ಲ... ಕಾರಣ ಆ ಪಕ್ಷದ ನಾಯಕನಿಗಿರಬೇಕಾದ ಗುಣ ಸ್ವಭಾವಗಳಲ್ಲಿ ಹೆಚ್ಚಿನದು ಇಲ್ಲವೇ ಅನ್ನಬಹುದು.. ಭ್ರಷ್ಟತೆ, ದೇಶ ನಿಷ್ಠತೆಗಿಂತಲೂ ಕುಟುಂಬ ನಿಷ್ಠತೆಯ ಗುಣ.. ಇದೇ ನನಗೆ ಇಷ್ಟವಾಗದ ಗುಣ ( ಹಾಗೆಂದು ಈಗ ಕರ್ನಾಟಕದ ಬಿಜೆಪಿಯ ಅನೇಕ ನಾಯಕರಲ್ಲೂ ಆ ಗುಣಗಳಿವೆ.. ) ಆದರೆ ಅದರ ಹೊರತಾಗಿ ಇತ್ತೀಚಿನ ಎರಡು ಘಟನೆಯಲ್ಲಿನ ಈ ವ್ಯಕ್ತಿಯ ನಿಲುವು ನಿಜಕ್ಕೂ ಮೆಚ್ಚ ತಕ್ಕದ್ದೇ... ಮೊದಲನೆಯದಾಗಿ ಸ್ವತಃ ಕಾಂಗ್ರೆಸ್ ಅಧ್ಯಕ್ಷರು ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಬಡತನ ನಿವಾರಣೆ ಆಗುತ್ತಾ ಎಂದು ಹೇಳಿಕೆ ಕೊಟ್ಟು, ಆ ಪುಣ್ಯಸ್ನಾನವನ್ನೇ ಅಪಹಾಸ್ಯ ಮಾಡಿದ ಹೊರತಾಗಿಯೂ ತಾನು ಪುಣ್ಯಸ್ನಾನ ಮಾಡಿ ಅಲ್ಲಿನ ವ್ಯವಸ್ಥೆಯನ್ನ ಮನಸಾರೆ ಹೊಗಳಿದ್ದು... ಮತ್ತು ಶಿವರಾತ್ರಿಯ ಪರ್ವವನ್ನ ಕೊಯಮುತ್ತೂರಿನ ಈಶಾ ಫೌಂಡೇಶನ್ನಿನ ಆದಿಯೋಗಿಯ ಸ್ಥಳದಲ್ಲಿ ಆಚರಿಸಿಕೊಂಡದ್ದು... ಮತ್ತು ಪ್ರಧಾನವಾಗಿ ನಾನೊಬ್ಬ ಹೆಮ್ಮೆಯ ಹಿಂದು ಹಾಗೂ ಹೆಮ್ಮೆಯ ಹಿಂದೂವಾಗೇ ಸಾಯುತ್ತೇನೆ ಎಂದು ಕೊಟ್ಟ ಹೇಳಿಕೆ... ಹಾಗಂತ ಈ ಹೇಳಿಕೆ ಮನಸಾರೆ ಬಂದಿರುವ ಹೇಳಿಕೆ ಅಂತಲೂ ನಂಬಲು ಸಾಧ್ಯವಿಲ್ಲ.. ತನ್ನ ಈ ಹಿಂದೂ ಪರವಾದ ಹೇಳಿಕೆಗಳನ್ನ ಕಾಂಗ್ರೆಸ್ ಹೈಕಮಾಂಡ್ ಗಮನಿಸಿ ಎಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡುತ್ತಾರೋ ಅನ್ನುವ ಭಯಕ್ಕಾದರೂ ಮುಖ್ಯಮಂತ್ರಿ ಪಟ್ಟ ಕೊಡಲಿ ಎನ್ನುವ ದೂರಾಲೋಚನೆ ಇದ್ದರೂ ಇರಬಹುದೇನೋ... ಹಾಗಾಗಿ ಇವರ ಹೇಳಿಕೆ ನನಗೆ ಖುಷಿ ಕೊಡಲು ಕಾರಣ... ತನ್ನ ಹೈಕಮಾಂಡ್ ಗೆ ಯಾವುದು ಒಗ್ಗದು ಅನ್ನುವ ವಿಚಾರ ಗೊತ್ತಿದ್ದೂ ನಾನು ಹೆಮ್ಮೆಯ ಹಿಂದೂ ಎನ್ನುವ ಹೇಳಿಕೆ ಕೊಡಲು ತೋರಿದ ಧೈರ್ಯ ಖುಷಿ ಕೊಟ್ಟದ್ದೇ ಹೊರತು ಇದು ಸ್ತ್ಯವಚನ ಅನ್ನುವ ಭರವಸೆ ಮೂಡಿದ ಖುಷಿ ಅಲ್ಲ... ಇಂತಹಾ ಕಾಂಗ್ರೆಸ್ ನ ಅಗ್ರ ಪಂಕ್ತಿಯ ನಾಯಕ ಈ ರೀತಿ ಹೇಳಿಕೆ ಕೊಟ್ಟಾಗ ಮುಂದಿನ ಕೆಲವು ಕಾಂಗ್ರೆಸ್ ನಾಯಕರಾದರೂ ಈ ರೀತಿಯ ಧೈರ್ಯ ಮಾಡಿಯಾರು ಅನ್ನುವ ಆಶಾಭಾವ... ಎಷ್ಟು ಸಾಧ್ಯ ಗೊತ್ತಿಲ್ಲ... ಅಧಿಕಾರಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಹಾಕಿಕೊಟ್ಟ ಅಲ್ಪಸಂಖ್ಯಾತ ತುಷ್ಟೀಕರಣದ ರಾಜಕೀಯಕ್ಕೆ ಗಂಟು ಬಿದ್ದು... ಹಿಂದೂ ಭಾವ ಅಲ್ಲಿನ ಶ್ರೇಷ್ಠ ಆಚರಣೆ ನಂಬಿಕೆಗಳ ಬಗ್ಗೆ ಮನಸ್ಸಿನ ಆಳದ ಒಅಲವನ್ನ ತೋರಿಸದೆ ಬದುಕುವ ಗುಲಾಮೀ ಮನಸ್ಥಿತಿಯಿಂದ ಕಾಂಗ್ರೆಸ್ಸಿನ ಅನೇಕರು ಇನ್ನಾದರೂ ಹೊರಬರುವಂತಾಗಲಿ... ಅಲ್ವೇ
👍
2