ಗುರುಪ್ರಸಾದ್ ಆಚಾರ್ಯ ಕುಂಜೂರು
ಗುರುಪ್ರಸಾದ್ ಆಚಾರ್ಯ ಕುಂಜೂರು
February 27, 2025 at 03:32 PM
ಭೀಷ್ಮ ಧರ್ಮಜನಿಗೆ ಬ್ರಾಹ್ಮಣರ, ಕ್ಷತ್ರಿಯರ, ವೈಶ್ಯರ ಧರ್ಮಗಳನ್ನ ಉಪದೇಶ ಮಾಡಿದಂತೆ ಶೂದ್ರರ ಧರ್ಮಗಳೇನು ಅಂತಲೂ ಹೇಳುತ್ತಾನೆ... ಆದರೆ ಅದು ಬಹಳ ಸರಳವಾದುದು ಮತ್ತು ಸಂಕ್ಷಿಪ್ತವಾದುದು..ಬಹುಶಃ ಕೇವಲ ಒಂದೇ ಒಂದು ಮಾತಿನಲ್ಲಿ ಹೇಳುವುದಾದರೆ " ಶೂದ್ರನಿಗೆ ಬ್ರಹ್ಮ, ಕ್ಷಾತ್ರ, ವೈಶ್ಯ ವರ್ಣಗಳ ಸೇವೆಮಾಡುವುದೇ ಶಾಸ್ತ್ರವಿಹಿತವಾದ ಕರ್ಮವಾಗಿದೆ. ಮೂರು ವರ್ಣದವರ ಶುಶ್ರೂಷೆಮಾಡುವುದರಿಂದಲೇ ಶೂದ್ರನು ಮಹಾಸುಖವನ್ನು ಹೊಂದುತ್ತಾನೆ. " ಇದೊಂದೇ ಧರ್ಮ ಶೂದ್ರನ ಧರ್ಮ.. ಇದಕ್ಕೆ ಹೊರತಾಗಿ ಶೂದ್ರರು ಮಾಡಬಾರದ ಕೆಲಸಗಳನ್ನು ಹೇಳುತ್ತಾ... " ಶೂದ್ರನು ಧನಸಂಗ್ರಹವನ್ನು ಯಾವಾಗಲೂ ಯಾವುದೇ ಕಾರಣಕ್ಕಾದರೂ ಮಾಡಬಾರದು... ಅನ್ನುತ್ತಾರೆ, ಏಕೆಂದರೆ: ಶೂದ್ರನು ಧನವಂತನಾದರೆ ಪಾಪ ಕರ್ಮಗಳಲ್ಲಿ ಪ್ರವೃತ್ತನಾಗುತ್ತಾನೆ. ಧನಬಲದಿಂದ ತನಗಿಂತಲೂ ಶ್ರೇಷ್ಠರಾದವರನ್ನೂ ಅವನು ತನ್ನ ಅಧೀನದಲ್ಲಿಟ್ಟುಕೊಳ್ಳಬಹುದಾಗಿದೆ. ಎನ್ನುವುದು ಭೀಷ್ಮನ ಅಭಿಪ್ರಾಯ ಹಾಗೆಂದು ಅವರಿಗೆ ಧನ ಸಂಗ್ರಹದ ಅಧಿಕಾರ ಇಲ್ಲವೇ ಇಲ್ಲ ಅನ್ನುತ್ತಿಲ್ಲ ಭೀಷ್ಮ ಹೇಳುತ್ತಾನೆ.. " ಧರ್ಮಾತ್ಮನಾದ ಶೂದ್ರನು ರಾಜನ ಅನುಮತಿಯನ್ನು ಪಡೆದುಕೊಂಡು ಧನವನ್ನು ಸಂಗ್ರಹಿಸಿ ತನ್ನ ಇಚ್ಛಾನುಸಾರವಾಗಿ ಧಾರ್ಮಿಕ ಕಾರ್ಯಗಳನ್ನು ಮಾಡಬಹುದು. " ಅರ್ಥಾತ್ ತನ್ನ ಒಡೆಯನ ಅನುಮತಿ ಪಡೆದ ಮೇಲೆ ಶೂದ್ರನಿಗೂ ಧನಸಂಗ್ರಹ ಮಾಡುವ ಅವಕಾಶವಿದ್ದೇ ಇದೆ.. ಧನ ಸಂಗ್ರಹ ಮಾಡಲು ಅವಕಾಶ ಇಲ್ಲವೆಂದ ಮೇಲೆ ತನ್ನ ಜೀವನ ಸಾಗಿಸುವುದು ಹೇಗೆ...? ಎನ್ನುವ ಪ್ರಶ್ನೆಗೆ ಶಾಸ್ತ್ರದಲ್ಲೇ ಉತ್ತರವಿದೆ.. ಭೀಷ್ಮರು ಹೇಳುತ್ತಾರೆ.. " ಮೂರೂ ವರ್ಣದವರೂ ಶೂದ್ರನ ಭರಣ-ಪೋಷಣೆಗಳನ್ನು ಅತ್ಯವಶ್ಯವಾಗಿ ಮಾಡಲೇಬೇಕು. ಏಕೆಂದರೆ : ಶೂದ್ರನು ಭರಣ-ಪೋಷಣಾದಿಗಳಿಗೆ ಯೋಗ್ಯನಾಗಿರುತ್ತಾನೆ. ಪರಿಚರ್ಯೆಯನ್ನು ಮಾಡುವ ಶೂದ್ರನಿಗೆ ಉಪಯೋಗಿಸಿದ ಛತ್ರಿಯನ್ನೂ, ಶಿರೋವೇಷ್ಟನವನ್ನೂ, ಶಯನಾಸನಗಳನ್ನೂ, ಪಾದರಕ್ಷೆಗಳನ್ನೂ ಮತ್ತು ಬೀಸಣಿಗೆಗಳನ್ನೂ ಕೊಡಬೇಕು. ದ್ವಿಜರು ( ಬ್ರಾಹ್ಮಣ-ಕ್ಷತ್ರಿಯ-ವೈಶ್ಯರು ) ಧರಿಸಲು ಅಯೋಗ್ಯವಾದ ಹರಿದುಹೋಗಿರುವ ಬಟ್ಟೆಗಳನ್ನು ಶೂದ್ರನಿಗೆ ಕೊಡಬೇಕು. ಏಕೆಂದರೆ : ಅಂತಹ ಎಲ್ಲ ವಸ್ತುಗಳೂ ಧರ್ಮತಃ ಶೂದ್ರನ ಧನವಾಗಿರುತ್ತವೆ. ( ಈ ಅಂಶವು ಸ್ವಲ್ಪ ಚರ್ಚಾಸ್ಪದವೇ ಹೌದಾದರೂ ಶೂದ್ರರ ಜೀವನ ಭರಣ ಪೋಷಣ ಉಳಿದ ವರ್ಗಗಳು ಮಾಡಬೇಕೆನ್ನುವ ನಿಯಮವೂ ಇದೆ ... ಉದಾ : ದ್ವಿಜಾತೀಯರಲ್ಲಿ ಯಾರ ಸಮೀಪಕ್ಕಾದರೂ ಶೂದ್ರನು ಶುಶ್ರೂಷೆಯನ್ನು ಮಾಡುವ ಇಚ್ಛೆಯಿಂದ ಬಂದುದೇ ಆದರೆ, ಆ ದ್ವಿಜನು ಸೇವಾಕಾಂಕ್ಷಿಯಾಗಿ ಬಂದ ಶೂದ್ರನಿಗೆ ಜೀವನಕ್ಕೆ ವ್ಯವಸ್ಥೆಯನ್ನು ಮಾಡಿಯೇ ತೀರಬೇಕೆಂದು ಧರ್ಮಜ್ಞಪುರುಷರು ಹೇಳುತ್ತಾರೆ. ಎನ್ನುತ್ತಾರೆ ಭೀಷ್ಮರು ) ಶೂದ್ರನಿಗೆ ಅಧಿಕಾರ ಇಲ್ಲ ಎಂದು ಒಂದು ಕಡೆ ಅನಿಸಿದರೂ... ಇನ್ನೊಂದು ಕಡೆಯಲ್ಲಿ ಪಿಂಡ ಪ್ರದಾನದ ಅಧಿಕಾರವೂ ಇದೆಯೆನ್ನುತ್ತಾರೆ ಭೀಷ್ಮರು.. ಅವರು ಹೇಳುತ್ತಾರೆ.. " ಒಂದು ವೇಳೆ ಯಜಮಾನನಿಗೆ ಮಕ್ಕಳಿಲ್ಲವಾದರೆ ಶುಶ್ರೂಷೆಯನ್ನು ಮಾಡುವ ಶೂದ್ರನೇ ಅವನಿಗೆ ಪಿಂಡಪ್ರದಾನವನ್ನೂ ಮಾಡಬೇಕು. ಸ್ವಾಮಿಯು ದುರ್ಬಲನಾಗಿದ್ದರೆ ಅಥವಾ ವೃದ್ಧನಾಗಿದ್ದರೆ ಅವನ ಭರಣ-ಪೋಷಣೆಗಳನ್ನೂ ಶೂದ್ರನೇ ಮಾಡಬೇಕು. ಸ್ವಾಮಿಯು ಯಾವುದಾದರೂ ಆಪತ್ತಿನಲ್ಲಿರುವಾಗ ಸೇವಾನಿರತನಾದ ಶೂದ್ರನು ಯಾವುದೇ ಕಾರಣದಿಂದಲೂ ಅವನನ್ನು ಬಿಟ್ಟುಹೋಗಬಾರದು. ಒಂದು ವೇಳೆ ತನ್ನ ಯಜಮಾನನಲ್ಲಿದ್ದ ಹಣವು ನಾಶವಾಗಿ, ಯಜಮಾನನು ನಿರ್ಧನನಾದಲ್ಲಿ ಆಗಲೂ ಶೂದ್ರನು ಯಜಮಾನನನ್ನು ದೂರೀಕರಿಸದೇ, ತನ್ನ ಕುಟುಂಬದ ಪಾಲನೆಯಾದನಂತರ ಉಳಿಯುವ ಧನದಿಂದ ಯಜಮಾನನ ಭರಣ-ಪೋಷಣೆಗಳನ್ನು ಮಾಡಬೇಕು. ಶೂದ್ರನಿಗೆ ತನ್ನ ಧನವೆಂಬುದೇ ಇಲ್ಲ. ಅವನು ಒಡೆಯನಿಂದ ಪಡೆಯಬಹುದಾದ ಧನವುಳ್ಳವನು ಅರ್ಥಾತ್ ಶೂದ್ರನಲ್ಲಿರುವ ಹಣದ ಮೇಲಿನ ಅಧಿಕಾರವು ಅವನ ಸ್ವಾಮಿಗಿರುತ್ತದೆ. " ಇನ್ನು ಯಜ್ಞದ ಕುರಿತಾಗಿ.." ಮೂರು ವರ್ಣದವರಿಗೂ ಉಕ್ತವಾಗಿರುವ ಯಜ್ಞವನ್ನು ಶೂದ್ರನೂ ಮಾಡಬೇಕು. ಆದರೆ ಶೂದ್ರನು ಮಾಡುವ ಯಜ್ಞದಲ್ಲಿ ಸ್ವಾಹಾಕಾರ ವಷಟ್ಕಾರಗಳೂ ಮತ್ತು ವೈದಿಕಮಂತ್ರಗಳ ಪ್ರಯೋಗಗಳೂ ಇರುವುದಿಲ್ಲ. ಆದುದರಿಂದ ಶೂದ್ರನು ತಾನೇ ವ್ರತವನ್ನು ಕೈಗೊಳ್ಳದೇ ಯಜ್ಞಮಾಡಬೇಕು. ಎನ್ನುತ್ತಾರೆ ಭೀಷ್ಮರು... ಅಷ್ಟೇ ಅಲ್ಲದೆ 'ಪೈಜವನ' ಎಂಬ ಹೆಸರಿನ ಶೂದ್ರನು ಐಂದ್ರಾಗ್ನಯಜ್ಞದ ವಿಧಾನದಿಂದ ಸ್ವಾಹಾಕಾರ-ವಷಟ್ಕಾರರಹಿತವಾದ ಯಜ್ಞವನ್ನು ಮಾಡಿ ಯಜ್ಞವು ಮುಗಿದ ನಂತರ ದಕ್ಷಿಣಾರೂಪವಾಗಿ ಒಂದು ಲಕ್ಷ ಪೂರ್ಣಪಾತ್ರಗಳನ್ನು ದಾನವಾಗಿ ಕೊಟ್ಟನೆಂದು ನಾವು ಕೇಳಿದ್ದೇವೆ. ಎಂದು ಅದಕ್ಕೆ ಪೂರಕ ಆಧಾರವನ್ನೂ ಒದಗಿಸುತ್ತಾರೆ. ಹಾಗೆ ಯಜ್ಞದ ಅಧಿಕಾರದ ಬಗೆಗೆ ಹೇಳುತ್ತಾ.. " ಶೂದ್ರನು, ಬ್ರಾಹ್ಮಣ-ಕ್ಷತ್ರಿಯ-ವೈಶ್ಯರ ಸೇವೆಯಲ್ಲಿಯೇ ನಿರತನಾಗಿರುವುದರಿಂದ ಅವರು ಮಾಡುವ ಯಜ್ಞವು ಶೂದ್ರನದೂ ಆಗುತ್ತದೆ. ಅವನು ಪ್ರತ್ಯೇಕವಾಗಿ ಯಜ್ಞಮಾಡುವ ಕಾರಣವಿಲ್ಲ. ಯಜ್ಞಮಾಡುವುದರಿಂದ ಆ ಮೂರು ವರ್ಣದವರಿಗೂ ಫಲವು ಪ್ರಾಪ್ತವಾಗುವಂತೆ ಯಜ್ಞವನ್ನು ಮಾಡದಿದ್ದರೂ ಯಜ್ಞಮಾಡುವವರ ಸೇವೆಯಲ್ಲಿಯೇ ನಿರತನಾಗಿರುವುದರಿಂದ ಶೂದ್ರನಿಗೂ ಯಜ್ಞಮಾಡಿದ ಫಲವು ಲಭಿಸುತ್ತದೆ. ಎಲ್ಲ ಯಜ್ಞಗಳಿಗೂ ಮೊದಲು ಶ್ರದ್ಧಾಯಜ್ಞವೆಂಬುದೊಂದು ಯಜ್ಞವು ವಿಹಿತವಾಗಿದೆ. ಶ್ರದ್ಧೆಯೆಂಬುದು ಎಲ್ಲ ದೇವತೆಗಳಿಗಿಂತಲೂ ಮಹತ್ತಾದ ದೇವತೆ. ಯಜ್ಞ ಮಾಡುವವರಿಗೆ ಶ್ರದ್ದೆಯೇ ಪಾವಿತ್ರ್ಯವನ್ನುಂಟುಮಾಡುತ್ತದೆ. " ಇದು ಭೀಷ್ಮರು ಧರ್ಮಜನಿಗೆ ತಿಳಿಹೇಳುವ ಶೂದ್ರರ ಕುರಿತಾದ ವಿಚಾರಗಳು.. #ಮಹಾಭಾರತದ_ಉಪದೇಶಗಳು

Comments