
ಗುರುಪ್ರಸಾದ್ ಆಚಾರ್ಯ ಕುಂಜೂರು
February 28, 2025 at 10:59 AM
ಭೀಷ್ಮನ ಉಪದೇಶದೊಳಗೆ ಸಿಗುವ ಆಶ್ರಮಧರ್ಮಗಳ ವರ್ಣನೆಯಲ್ಲಿ ಬ್ರಹ್ಮಚರ್ಯ ವರ್ಣಾಶ್ರಮ ಧರ್ಮದ ಕೆಲವು ವಿಚಾರಗಳು ..
೧. ಬ್ರಹ್ಮಚಾರಿಯು ಏಕಾಕಿಯಾಗಿ ವೇದಮಂತ್ರಗಳನ್ನು ಚಿಂತಿಸುತ್ತಿರಬೇಕು.
೨. ಏಕಾಕಿಯಾಗಿ ಕುಳಿತು ಗಾಯತ್ರಿಮಂತ್ರವನ್ನು ಜಪಿಸಬೇಕು.
೩. ತನ್ನ ಎಲ್ಲ ಕಾರ್ಯಗಳನ್ನೂ ತಾನೇ ಮಾಡಿಕೊಳ್ಳಬೇಕು.
೪. ಒಬ್ಬನೇ ಒಬ್ಬನನ್ನು ಆಚಾರ್ಯನನ್ನಾಗಿ ಮಾಡಿಕೊಂಡು ಅವನ ಶುಶ್ರೂಷೆಯಲ್ಲಿಯೇ ಸರ್ವದಾ ನಿರತನಾಗಿರಬೇಕು.
೫. ಬ್ರಹ್ಮಚಾರಿಯು ನಿತ್ಯನಿರಂತರವಾಗಿ ಮನಸ್ಸನ್ನೂ, ಇಂದ್ರಿಯಗಳನ್ನೂ ಸ್ವಾಧೀನದಲ್ಲಿಟ್ಟುಕೊಳ್ಳಬೇಕು.
೬. ವ್ರತನಿಷ್ಠನಾಗಿರಬೇಕು.
೭. ಕೆಲವು ಸಮಯಗಳಲ್ಲಿ ದೀಕ್ಷಾಬದ್ದನಾಗಿರಬೇಕು. ೮. ವೇದಾಧ್ಯಯನವನ್ನು ಸದಾ ಕಾಲದಲ್ಲಿಯೂ ಮಾಡುತ್ತಾ, ಕರ್ತವ್ಯಕರ್ಮಗಳನ್ನು ಮಾಡುತ್ತಾ, ಗುರುವಿನ ಮನೆಯಲ್ಲಿಯೇ ವಾಸಮಾಡಬೇಕು.
೯. ಗುರುಗಳನ್ನು ಅಭಿವಾದನಪೂರ್ವಕವಾಗಿ ನಮಸ್ಕರಿಸಬೇಕು.
೧೦. ಯಜನ-ಯಾಜನ, ಅಧ್ಯಯನ-ಅಧ್ಯಾಪನ, ದಾನ-ಪ್ರತಿಗ್ರಹಗಳೆಂಬ ಬ್ರಾಹ್ಮಣನಿಗೆ ವಿಹಿತವಾಗಿರುವ ಷಟ್ಕರ್ಮಗಳನ್ನು ಬಿಡಬಾರದು.
೧೧. ಸದಾ ಅವುಗಳಲ್ಲಿ ತೊಡಗಿರಲೂಬಾರದು, ಎಂದರೆ ಗುರುಶುಶ್ರೂಷೆಗೆ ವಿರೋಧವಾಗದಂತೆ ಅವುಗಳನ್ನು ಇಟ್ಟುಕೊಳ್ಳಬೇಕು. ಉದಾಹರಣೆಗಾಗಿ ಯಾಜನ ಪ್ರತಿಗ್ರಹಗಳನ್ನು ತನಗೋಸ್ಕರ ಇಟ್ಟುಕೊಳ್ಳಬಾರದು. ಗುರುಗಳ ಅಪ್ಪಣೆಯಂತೆ ಅವರ ಸೇವೆಗಾಗಿ ಇಟ್ಟುಕೊಳ್ಳಬೇಕು. ಗುರುಶುಶ್ರೂಷೆಗೆ ಧಕ್ಕೆ ಬರುವಂತಿದ್ದರೆ ಅವುಗಳನ್ನು ಬಿಡಬೇಕು. ಷಟ್ಕರ್ಮಗಳಲ್ಲಿ ಸಂಕೋಚವಾದರೂ ಗುರುಶುಶ್ರೂಷೆಯಲ್ಲಿ ಸಂಕೋಚವಾಗಬಾರದು ಎಂದರ್ಥ. ಏಕೆಂದರೆ, ಗುರುಶುಶ್ರೂಷೆಯೇ ಬ್ರಹ್ಮಚಾರಿಯ ಪ್ರಧಾನಕರ್ತವ್ಯ.
೧೨. ಬ್ರಹ್ಮಚಾರಿಯಾದವನು ನಿಗ್ರಹಾನುಗ್ರಹಗಳನ್ನು ಮಾಡಲು ಹೋಗಬಾರದು.
೧೩. ದ್ವೇಷಮಾಡುವವರ ಸಹವಾಸವನ್ನು ಮಾಡಬಾರದು. ಬ್ರಹ್ಮಚಾರಿಗಳಿಗೆ ಈ ಆಶ್ರಮಧರ್ಮವು ಹೇಳಲ್ಪಟ್ಟಿದೆ.”
#ಮಹಾಭಾರತದ_ಉಪದೇಶಗಳು
🙏
1