
Dr. Dhananjaya Sarji
February 18, 2025 at 09:39 AM
"ವಿಶೇಷ ಚೇತನ ಮಕ್ಕಳು ದೇವರಿದ್ದಂತೆ, ಆ ದೇವರ ಸೇವೆ ಮಾಡುವವರೆಲ್ಲ ದೇವರೇ ಆದಂತೆ"
ಶಾಲಾ ಶಿಕ್ಷಣ ಇಲಾಖೆ, ತೀರ್ಥಹಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ತೀರ್ಥಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ತೀರ್ಥಹಳ್ಳಿಯ ಶ್ರೀ ಶಾಂತವೇರಿ ಗೋಪಾಲ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ "ವಿಶೇಷ ಚೇತನ ಮಕ್ಕಳಲ್ಲಿ ಒಂದು ವಿಶೇಷತೆ" ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಲವಾರು ವರ್ಷಗಳಿಂದ ವಿಶೇಷ ಚೇತನ ಮಕ್ಕಳ ಆರೈಕೆ ಮಾಡುತ್ತ ಬಂದಿರುವ ಕುಮಾರ್, ರಂಗನಾಯಕಿ, ದಿವಾಕರ್ ಅವರಿಗೆ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿ, ಮಾತನಾಡಲಾಯಿತು.
ಈ ವೇಳೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಆರ್.ಎಂ.ಮಂಜುನಾಥಗೌಡ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷರಾದ ಶ್ರೀಮತಿ ಗೀತಾ ರಮೇಶ್, ಪ್ರಮುಖರಾದ ಶ್ರೀ ಶಚೀಂದ್ರ ಹೆಗಡೆ, ಶ್ರೀ ಜಿ. ಗಣಪತಿ, ಶ್ರೀ ಸೊಪ್ಪುಗುಡ್ಡೆ ರಾಘವೇಂದ್ರ, ಡಾ. ರಾಹುಲ್ ದೇವರಾಜ್, ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಘಟಕದ ಅಧ್ಯಕ್ಷರಾದ ಶ್ರೀ ಎಸ್ ರಾಘವೇಂದ್ರ, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು
https://www.facebook.com/share/p/14qcGEZa1nY/