
Dr. Dhananjaya Sarji
248 subscribers
About Dr. Dhananjaya Sarji
ಜನಪರ - ಜೀವಪರ MLC for South West Graduates Constituency Karnataka | Vice President BJP Shivamogga | Chairman, Sarji Group of Hospitals |
Similar Channels
Swipe to see more
Posts

ಉದ್ಯಮಿಗಳು ಹಾಗೂ ಆತ್ಮೀಯ ಸ್ನೇಹಿತರಾದ ಶ್ರೀ ಹರ್ಷ ಕಾಮತ್ ಮತ್ತು ಅವರ ಸಹೋದರರಾದ ಶ್ರೀ ವಿಶ್ವಾಸ್ ಕಾಮತ್ ಅವರ ಮಕ್ಕಳಾದ ಚಿ, ನಿರ್ಭಯ್ ಹಾಗೂ ಚಿ, ಅಥರ್ವ ಅವರ ಬ್ರಹ್ಮೋಪದೇಶ ಸಮಾರಂಭದಲ್ಲಿ ಪಾಲ್ಗೊಂಡು, ಶುಭ ಹಾರೈಸಲಾಯಿತು. https://www.facebook.com/share/p/1EYbB9pSSf/

ಶಿವಮೊಗ್ಗದ ಪುರಲೆಯಲ್ಲಿ ನಿರ್ಮಿಸಿರುವ ಬಿ.ಜೆ.ಪಿ ಮುಖಂಡರಾದ ಶ್ರೀ ಪುರಲೆ ನಾಗರಾಜ್ ಅವರ ನೂತನ ಮನೆ "ವಿಜಯ ನಿವಾಸ" ಗೃಹ ಪ್ರವೇಶಕ್ಕೆ ತೆರಳಿ ಶುಭ ಹಾರೈಸಲಾಯಿತು ಈ ವೇಳೆ ಆತ್ಮೀಯ ಸ್ನೇಹಿತರಾದ ಶ್ರೀ ಬಾಳೆಕಾಯಿ ಮೋಹನ್, ಬಿಜೆಪಿ ಮುಖಂಡರಾದ ಶ್ರೀ ಅನಿಲ್ ಕುಮಾರ್ ಅವರು ಜೊತೆಗಿದ್ದರು https://www.facebook.com/share/p/15uukbooxd/

ಆನಂದ್ ಕುಂಪಲ ನಿರ್ಮಾಣದಲ್ಲಿ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ 'ಮಿಡಲ್ ಕ್ಲಾಸ್ ಫ್ಯಾಮಿಲಿ' ತುಳು ಸಿನಿಮಾ ಜನವರಿ 31 ಅಂದರೆ ಇಂದು ಕರಾವಳಿಯಾದ್ಯಂತ ತೆರೆ ಕಂಡಿದ್ದು, ಮಂಗಳೂರಿನ ಭಾರತ್ ಸಿನಿಮಾಸ್ ನಲ್ಲಿ ಶುಕ್ರವಾರ ನಡೆದ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಚಿತ್ರ ಯಶಸ್ಸು ಕಾಣಲೆಂದು ಶುಭಹಾರೈಸಲಾಯಿತು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಕ್ರಿಯಾಶೀಲ ಅಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ಮಂಗಳೂರೂ ದಕ್ಷಿಣ ವಿಧಾಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ. ವೇದವ್ಯಾಸ್ ಕಾಮತ್, ಮಾಜಿ ಸಚಿವರಾದ ಶ್ರೀ ನಾಗರಾಜ್ ನಾಯಕ್, ವಿಧಾನ ಪರಿಷತ್ ಶಾಸಕರಾದ ಶ್ರೀ ಐವಾನ್ ಡಿಸೋಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. https://www.facebook.com/share/p/14PyheGtsy/

ಶಿವಮೊಗ್ಗ ನಗರದ ವಿವಿಧ ಕಡೆಗಳಲ್ಲಿ ನಡೆದ ವಿವಾಹ ಹಾಗೂ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿರುವ ನೂತನ ವಧು-ವರರಿಗೆ ಶುಭ ಹಾರೈಸಲಾಯಿತು. https://www.facebook.com/share/p/18WdaXfRG9/

ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಹಾಗೂ ಉಡುಪಿ ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ (ರಿ) ಅಧ್ಯಕ್ಷರಾದ ಪೂಜ್ಯ ಡಾ.ಡಿ.ವೀರೇಂದ್ರ ಹೆಗಡೆ ಅವರ ಅದ್ಯಕ್ಷತೆಯಲ್ಲಿ ಶುಕ್ರವಾರ ಉಡುಪಿಯ ಕುತ್ಪಾಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನೂತನ ಕಟ್ಟಡದ ಉದ್ಘಾಟನ ಸಮಾರಂಭದಲ್ಲಿ ಪಾಲ್ಗೊಂಡು, ಪರಮಪೂಜ್ಯರ ದಿವ್ಯಾಶೀರ್ವಾದ ಪಡೆದು ಲೋಕಾರ್ಪಣೆಗೊಳಿಸಲಾಯಿತು. ಈ ವೇಳೆ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ, ಆಯುರ್ವೇದ ಮಂಡಳಿಯ ಅಧ್ಯಕ್ಷರಾದ ಡಾ.ಶ್ರೀನಿವಾಸ್ ಪ್ರಸಾದ್, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಎಸ್.ಡಿ.ಎಂ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಸುರೇಂದ್ರ ಕುಮಾರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. https://www.facebook.com/share/p/1E1LcKKxLb/

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾಗಿ ಮರುಆಯ್ಕೆಗೊಂಡ ಶ್ರೀ ಸತೀಶ್ ಕುಂಪಲ ಅವರನ್ನು ಇಂದು ಮಂಗಳೂರಿನಲ್ಲಿ ಭೇಟಿ ಮಾಡಿ ಅಭಿನಂದಿಸಲಾಯಿತು. ಈ ವೇಳೆ ಮಂಗಳೂರೂ ದಕ್ಷಿಣ ವಿಧಾಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ. ವೇದವ್ಯಾಸ್ ಕಾಮತ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. https://www.facebook.com/share/p/1Az4PeoPno/

ಆದಿ ಜಗದ್ಗುರು ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತಿರುವ ಮೈಸೂರಿನ ಶ್ರೀ ಕ್ಷೇತ್ರ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪರಮಾಪೂಜ್ಯರುಗಳ ಆಶೀರ್ವಾದ ಪಡೆದು, ಮಾತನಾಡಲಾಯಿತು. ಕನಕಪುರ, ಶ್ರೀ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು, ಗುಳೇದಗುಡ್ಡ ಶ್ರೀ ಗುರುಸಿದ್ದೇಶ್ವರ ಬೃಹನ್ಮಠದ ಜಗದ್ಗುರು ಶ್ರೀ ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ, ವಿಧಾನ ಪರಿಷತ್ ಶಾಸಕರಾದ ಶ್ರೀ ಕೆ.ಎಸ್. ನವೀನ್, ಪ್ರಮುಖರಾದ ಡಾ. ಪುಷ್ಪ ಅಮರನಾಥ್, ಶ್ರೀ ಶಿವನಗೌಡ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. https://www.facebook.com/share/p/15JYRxDmoB/

ಮೈಸೂರಿನಲ್ಲಿ ಬೇಲೂರಿನ ಪುಷ್ಪಗಿರಿ ಮಠದ ಪರಮಪೂಜ್ಯ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. https://www.facebook.com/share/p/1Z7giWzJSv/

ಶಿವಮೊಗ್ಗ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವಂತಹ ಶ್ರೀ ಎನ್ .ಕೆ ಜಗದೀಶ್ ಅವರನ್ನು ಇಂದು ಭೇಟಿಯಾಗಿ, ನೇತೃತ್ವದಲ್ಲಿ ಪಕ್ಷ ಮತ್ತಷ್ಟು ಬಲಗೊಳ್ಳಲಿ ಎಂದು ಶುಭಹಾರೈಸಿ ಅಭಿನಂದಿಸಲಾಯಿತು. https://www.facebook.com/share/p/1B2zyYqK5F/