Priyank Kharge 🇮🇳
June 11, 2025 at 08:27 AM
“ಶಿಕ್ಷಣವೇ ಶಕ್ತಿ“
ಶ್ರದ್ದೆ ಮತ್ತು ಶ್ರಮದಿಂದ ಶಿಕ್ಷಣವನ್ನು ಪಡೆದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಮೇರು ಸ್ಥಾನಕ್ಕೇರಬಹುದು. ಇದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕೇ ಸ್ಫೂರ್ತಿ ಮತ್ತು ನಿದರ್ಶನ.
ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಿಂದ 17 ಸ್ವರ್ಣ ಪದಕ ಪಡೆದ ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಸಹನಾ ಮತ್ತು 16 ಸ್ವರ್ಣ ಪದಕ ಪಡೆದಿರುವ ಕೊಪ್ಪಳ ಜಿಲ್ಲೆ ತಳಕಲ್ನ ಭೀಮವ್ವ ಅದೆಷ್ಟೋ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ. ಅವರ ಮುಂದಿನ ಬದುಕು ಹಸನಾಗಿರಲಿ ಎಂದು ಹಾರೈಸುತ್ತೇನೆ. ಕಷ್ಟದ ಪರಿಸ್ಥಿತಿಗಳನ್ನು ಮೆಟ್ಟಿನಿಂತ ಇವರ ಶೈಕ್ಷಣಿಕ ಸಾಧನೆಯು ಅಭಿನಂದನಾರ್ಹ.
ಸಮಾಜದ ಪ್ರಗತಿಯನ್ನು ಮಹಿಳೆಯರ ಶಿಕ್ಷಣದಿಂದ ಅಳೆಯಬೇಕು ಎಂದಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮ ಸಮಾಜದ ನಿರ್ಮಾಣಕ್ಕೆ ಮಹಿಳೆಯರ ಶಿಕ್ಷಣವೂ ಪ್ರಮುಖವೆಂದು ಪ್ರತಿಪಾದಿಸಿದ್ದರು. ಅಂಬೇಡ್ಕರ್ ಅವರ ಆಶಯಕ್ಕೆ ಈ ಹೆಣ್ಣುಮಕ್ಕಳು ಅಪೂರ್ವ ಕೊಡುಗೆ ನೀಡಿದ್ದಾರೆ.

❤️
🙏
👍
15