Priyank Kharge 🇮🇳
17.6K subscribers
Verified ChannelAbout Priyank Kharge 🇮🇳
Minister for Electronics, IT & BT and Rural Development & Panchayat Raj, Govt of Karnataka MLA, Chittapur Communication Chairman, KPCC
Similar Channels
Swipe to see more
Posts
“ಶಿಕ್ಷಣವೇ ಶಕ್ತಿ“ ಶ್ರದ್ದೆ ಮತ್ತು ಶ್ರಮದಿಂದ ಶಿಕ್ಷಣವನ್ನು ಪಡೆದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಮೇರು ಸ್ಥಾನಕ್ಕೇರಬಹುದು. ಇದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕೇ ಸ್ಫೂರ್ತಿ ಮತ್ತು ನಿದರ್ಶನ. ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಿಂದ 17 ಸ್ವರ್ಣ ಪದಕ ಪಡೆದ ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಸಹನಾ ಮತ್ತು 16 ಸ್ವರ್ಣ ಪದಕ ಪಡೆದಿರುವ ಕೊಪ್ಪಳ ಜಿಲ್ಲೆ ತಳಕಲ್ನ ಭೀಮವ್ವ ಅದೆಷ್ಟೋ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ. ಅವರ ಮುಂದಿನ ಬದುಕು ಹಸನಾಗಿರಲಿ ಎಂದು ಹಾರೈಸುತ್ತೇನೆ. ಕಷ್ಟದ ಪರಿಸ್ಥಿತಿಗಳನ್ನು ಮೆಟ್ಟಿನಿಂತ ಇವರ ಶೈಕ್ಷಣಿಕ ಸಾಧನೆಯು ಅಭಿನಂದನಾರ್ಹ. ಸಮಾಜದ ಪ್ರಗತಿಯನ್ನು ಮಹಿಳೆಯರ ಶಿಕ್ಷಣದಿಂದ ಅಳೆಯಬೇಕು ಎಂದಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮ ಸಮಾಜದ ನಿರ್ಮಾಣಕ್ಕೆ ಮಹಿಳೆಯರ ಶಿಕ್ಷಣವೂ ಪ್ರಮುಖವೆಂದು ಪ್ರತಿಪಾದಿಸಿದ್ದರು. ಅಂಬೇಡ್ಕರ್ ಅವರ ಆಶಯಕ್ಕೆ ಈ ಹೆಣ್ಣುಮಕ್ಕಳು ಅಪೂರ್ವ ಕೊಡುಗೆ ನೀಡಿದ್ದಾರೆ.

ಕಲಬುರಗಿ ನಗರದ ಎಲ್ಲ ಕೆರೆಗಳ ಪುನರುಜ್ಜೀವನದ ಕುರಿತು ನಾವು ಇತ್ತೀಚೆಗೆ ಕೂಲಂಕಷವಾದ ಚರ್ಚೆ ನಡೆಸಿದೆವು. ಈ ಯೋಜನೆಗೆ ನೆರವಾಗಲು ನಾವು ಬೆಂಗಳೂರಿನ ಕೆರೆ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ. ಮುಂದಿನ ಒಂದೆರಡು ತಿಂಗಳಲ್ಲಿ ಕೆಲಸ ಪ್ರಾರಂಭವಾಗಲಿದೆ. ಸಂಚಾರ, ಒಳಚರಂಡಿ ವ್ಯವಸ್ಥೆಗಳು, ಘನತ್ಯಾಜ್ಯ ನಿರ್ವಹಣೆ, ಬೂದು ನೀರಿನ ಸಂಸ್ಕರಣೆ ವ್ಯವಸ್ಥೆಗಳನ್ನು ಸುಧಾರಿಸುವುದು ಮತ್ತು ಹಸಿರು ಹಾಗೂ ನೀಲಿ ಹೊದಿಕೆಯನ್ನು ವೃದ್ಧಿಸುವುದು ಈ ವರ್ಷದ ನಮ್ಮ ಪ್ರಮುಖ ಆದ್ಯತೆಯ ಕ್ಷೇತ್ರಗಳಲ್ಲಿ ಸೇರಿವೆ.

MHP ಇಂಡಿಯಾ (ಪೋರ್ಷೆ ಕಂಪನಿ) ಬೆಂಗಳೂರಿನಲ್ಲಿ ತನ್ನ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಪ್ರಾರಂಭಿಸಿದಾಗ ನಾವು ಕೈಗೊಳ್ಳಬಹುದಾದ ಸಹಯೋಗದ ಸಂಭಾವ್ಯ ಕ್ಷೇತ್ರಗಳ ಕುರಿತು ಚರ್ಚಿಸಲು ಕಂಪೆನಿಯ ಸಿಇಒ ಅವರೊಂದಿಗೆ ಫಲಪ್ರದ ಮಾತುಕತೆ ನಡೆಸಲಾಯಿತು. ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳು ಮತ್ತು ಶ್ರೇಷ್ಠತಾ ಕೇಂದ್ರಗಳೊಂದಿಗೆ ಪಾಲುದಾರಿಕೆಗಳನ್ನು ನಾವು ಅನ್ವೇಷಿಸಿದ್ದೇವೆ. ಅಭಿವೃದ್ಧಿ ಹೊಂದುತ್ತಿರುವ ನಾವೀನ್ಯ ಇಕೋ ಸಿಸ್ಟಂಗಳಿಗೆ ಹೆಸರುವಾಸಿಯಾಗಿರುವ ಎರಡು ನಗರಗಳಾದ ಬೆಂಗಳೂರು ಮತ್ತು ರೊಮೇನಿಯಾದ ಕ್ಲೂಷ್-ನಪೋಕಾ ನಡುವೆ ತಾಂತ್ರಿಕ ಸಹಯೋಗವನ್ನು ಅನ್ವೇಷಿಸುವ MHP ಇಂಡಿಯಾದ ಉದ್ದೇಶದ ಕುರಿತು ನಾವು ಚರ್ಚಿಸಿದ್ದೇವೆ. ಈ ಬೆಳವಣಿಗೆಗಳು, ಅರ್ಥಪೂರ್ಣ ಜಾಗತಿಕ ಪಾಲುದಾರಿಕೆಗಳನ್ನು ನಿರ್ಮಿಸುವ ಮತ್ತು ಜಾಗತಿಕ ತಂತ್ರಜ್ಞಾನದ ಮುಂಚೂಣಿಯಲ್ಲಿ ಬೆಂಗಳೂರನ್ನು ಇರಿಸಿಕೊಳ್ಳುವ ನಮ್ಮ ವಿಸ್ತೃತ ಪ್ರಯತ್ನಗಳ ಭಾಗವಾಗಿದೆ.
