
Siddaramaiah
May 20, 2025 at 06:35 AM
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಮೇಲೆ ಭರವಸೆಯನ್ನಿಟ್ಟು ಮತನೀಡಿ ಹರಸಿದ ಏಳು ಕೋಟಿ ಕನ್ನಡಿಗರ ನಂಬಿಕೆ - ವಿಶ್ವಾಸವನ್ನು ಉಳಿಸಿಕೊಂಡು, ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳ ಜೊತೆ ಅಭಿವೃದ್ಧಿ ಕಾರ್ಯವನ್ನು ಜಾರಿಮಾಡಿದ್ದೇವೆ. ಸಾಮಾಜಿಕ ನ್ಯಾಯ, ಸಹಬಾಳ್ವೆ, ಸಮಸ್ತ ಕರ್ನಾಟಕದ ಅಭಿವೃದ್ಧಿಯ ಮುನ್ನೋಟದೊಂದಿಗೆ ಆರಂಭಿಸಿದ ಕರ್ನಾಟಕ ಅಭಿವೃದ್ಧಿ ಮಾದರಿಯ ಈ ಪಯಣಕ್ಕಿಂದು ಎರಡು ವರ್ಷಗಳ ಸಂಭ್ರಮ.
ಸದೃಢ, ಸಶಕ್ತ, ಸ್ವಾವಲಂಬಿ, ಸೌಹಾರ್ದ ಕರ್ನಾಟಕದ ಮರುನಿರ್ಮಾಣ ಕಾರ್ಯದಲ್ಲಿ ನಮ್ಮ ಜೊತೆಯಾಗಿರುವ ನಾಡಿನ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು.
ನಿಮ್ಮ ಬೆಂಬಲವೇ ನಮ್ಮ ಬಲ. ಮುಂದೆಯೂ ನಿಮ್ಮ ಸಹಕಾರ ಹೀಗೆಯೇ ಇರಲೆಂದು ಆಶಿಸುತ್ತೇನೆ.
#ಪ್ರಗತಿಯತ್ತ_ಕರ್ನಾಟಕ
#2yearsofguaranteesarkara

❤️
🙏
👍
😮
😂
169