
Siddaramaiah
119.5K subscribers
Verified ChannelAbout Siddaramaiah
Official WhatsApp Channel of Shri Siddaramaiah, Chief Minister of Karnataka
Similar Channels
Swipe to see more
Posts

ಮೈಸೂರು ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿಗಳಾಗಿ ನಾಡಿನ ಅಭಿವೃದ್ಧಿಗೆ ಭದ್ರ ಅಡಿಪಾಯವನ್ನೊದಗಿಸಿದ ದೂರದೃಷ್ಟಿಯ ದಕ್ಷ ಆಡಳಿತಗಾರ, ಪ್ರಜಾಪ್ರಭುತ್ವವಾದಿ ನಾಯಕ, ಮಾಜಿ ಮುಖ್ಯಮಂತ್ರಿ ಕೆ.ಸಿ. ರೆಡ್ಡಿಯವರಿಗೆ ನನ್ನ ನಮನಗಳು. ಕೆ.ಸಿ.ರೆಡ್ಡಿಯವರ ಜೀವನ - ಆದರ್ಶಗಳು ನಮ್ಮ ಭವಿಷ್ಯದ ಹಾದಿಗೆ ಬೆಳಕಾಗಲಿ ಎಂದು ಆಸಿಸುತ್ತೇನೆ.


ನನ್ನ ಅಧ್ಯಕ್ಷತೆಯಲ್ಲಿ ದಿನಾಂಕ 20/02/2025ರ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು ಈ ಕೆಳಕಂಡಂತಿವೆ #CabinetDecisions

ನಾಡಿನ ರೈತರ ಒಡಲಾಳದ ಕೂಗಿಗೆ ರೈತರ ಸಂಘವೆಂಬ ಒಂದು ಸಂಘಟಿತ ರೂಪಕೊಟ್ಟು, ಆಳುವ ಸರ್ಕಾರಗಳನ್ನು ರೈತರ ಬದುಕು – ಬವಣೆಗಳಿಗೆ ಕಿವಿಯಾಗಿಸಿದ ಜನಪರ ಕಾಳಜಿಯ ನಿಸ್ವಾರ್ಥ ಹೋರಾಟಗಾರ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರು ನನ್ನೂರಿನವರು ಎಂಬುದು ನನಗೆ ಹೆಮ್ಮೆ. ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕರು ಮತ್ತು ನನ್ನ ಮಾರ್ಗದರ್ಶಕರಾಗಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರನ್ನು ಅವರ ಹುಟ್ಟುಹಬ್ಬದ ದಿನ ಗೌರವ ಮತ್ತು ಕೃತಜ್ಞತಾ ಭಾವದೊಂದಿಗೆ ನೆನೆಯುತ್ತೇನೆ. ಪ್ರೊ.ಎಂಡಿಎನ್ ಅವರ ಜನಪರ ಕಾಳಜಿ, ಹೋರಾಟದ ಛಲ ಮತ್ತು ನೇರ-ನಿಷ್ಠುರ ನಡವಳಿಕೆಯಿಂದ ನಾನು ಪ್ರಭಾವಿತನಾದವನು. ನನ್ನ ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿ ಪ್ರೊ.ಎಂಡಿಎನ್ ಅವರು ನನ್ನ ಬಗ್ಗೆ ತೋರಿಸಿದ್ದ ಕಾಳಜಿ ಮತ್ತು ನೀಡಿದ್ದ ಮಾರ್ಗದರ್ಶನಕ್ಕೆ ನಾನು ಸದಾ ಋಣಿ. ರೈತ ಪಕ್ಷಪಾತಿಯಾಗಿರುವ ನನ್ನ ಆರ್ಥಿಕ ನೀತಿಗೆ ಅವರೇ ಪ್ರೇರಣೆ. ಪ್ರೊ.ಎಂಡಿಎನ್ ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲದೆ ಇದ್ದರೂ ಅವರ ಚಿಂತನೆಗಳು ನಮ್ಮನ್ನು ಸದಾ ಪ್ರೇರೇಪಿಸುತ್ತಿರುತ್ತದೆ.

ಮೈಕ್ರೋ ಫೈನಾನ್ಸ್ ಕಂಪೆನಿಗಳು ಅಥವಾ ಇತರೆ ಖಾಸಗಿ ಹಣಕಾಸು ಸಂಸ್ಥೆಗಳು / ವ್ಯಕ್ತಿಗಳು ಸಾಲ ವಸೂಲಿಯ ನೆಪದಲ್ಲಿ ನೀಡುತ್ತಿದ್ದ ಕಿರುಕುಳ, ಮಾನಸಿಕ ಹಿಂಸೆ ಮತ್ತು ದೌರ್ಜನ್ಯದಂತಹ ಅಮಾನವೀಯ, ಕಾನೂನು ಬಾಹಿರ ಕ್ರಮಗಳ ಮೇಲೆ ನಿಯಂತ್ರಣ ಹಾಗೂ ನಿರ್ಬಂಧ ಹೇರುವ ಉದ್ದೇಶದಿಂದ ನಾವು ರೂಪಿಸಿದ "ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ( ಬಲವಂತದ ಕ್ರಮಗಳ ಪ್ರತಿಬಂಧಕ ) ಅಧ್ಯಾದೇಶ - 2025" ಈ ಕ್ಷಣದಿಂದ ಕಾನೂನಾಗಿ ಜಾರಿಗೆ ಬಂದಿದೆ. ಮೈಕ್ರೋ ಫೈನಾನ್ಸ್ನಲ್ಲಿ ಸಾಲ ಪಡೆದು ಕಿರುಕುಳಕ್ಕೆ ಒಳಗಾದವರು ಪೊಲೀಸರ ಬಳಿ ದೂರು ದಾಖಲಿಸಬಹುದು, ಅಂಥವರಿಗೆ ಹೊಸ ಕಾನೂನಿನಡಿ ಹೆಚ್ಚಿನ ರಕ್ಷಣೆ ದೊರೆಯಲಿದೆ. ನಮ್ಮ ಈ ಪ್ರಯತ್ನದಿಂದ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್, ಫೈನಾನ್ಸ್ ಹಾಗೂ ಲೇವಾದೇವಿದಾರರ ಕಿರುಕುಳ, ದೌರ್ಜನ್ಯಗಳು ಕೊನೆಯಾಗಲಿದೆ ಎಂಬ ಭರವಸೆ ನನಗಿದೆ.