
Siddaramaiah
June 6, 2025 at 04:42 AM
ಸಾಮಾಜಿಕ, ಆರ್ಥಿಕ ಮತ್ತು ಪ್ರಾದೇಶಿಕ ನ್ಯಾಯದ ಅನುಷ್ಠಾನದ ಪ್ರಕ್ರಿಯೆಗೆ ಚಾಲನೆ ನೀಡಿ, ಸ್ವತಂತ್ರ ಭಾರತದಲ್ಲಿ ಸ್ವಾಭಿಮಾನಿ, ಸ್ವಾವಲಂಬಿ ಮತ್ತು ಸದೃಡ ಕರ್ನಾಟಕ ನಿರ್ಮಾಣಕ್ಕೆ ಭದ್ರಬುನಾದಿ ಹಾಕಿರುವ
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ನವ ಕರ್ನಾಟಕದ ಶಿಲ್ಪಿಯಾಗಿದ್ದಾರೆ.
ಇಂದು ಎಲ್ಲ ಆಡಳಿತಾರೂಢರ ಗಮನಸೆಳೆಯುತ್ತಿರುವ ಮತ್ತು ಅನುಕರಣಿಯವಾಗಿರುವ ನಮ್ಮ 'ಕರ್ನಾಟಕ ಅಭಿವೃದ್ದಿ ಮಾದರಿ'ಗೆ ಅರಸು ಅವರ ಚಿಂತನೆ ಮತ್ತು ಸಾಧನೆ ಪ್ರೇರಕ ಶಕ್ತಿಯಾಗಿದೆ.
ಡಿ.ದೇವರಾಜ ಅರಸು ಅವರ ಪುಣ್ಯಸ್ಮರಣೆಯ ದಿನವಾದ ಇಂದು ಆ ಮಹಾಚೇತನವನ್ನು ಗೌರವ ಮತ್ತು ಅಭಿಮಾನದಿಂದ ನೆನೆಯುತ್ತೇನೆ.

🙏
❤️
👍
😂
😮
85